Madhya Pradesh: ಅದೃಷ್ಟ ಚೆನ್ನಾಗಿತ್ತು…ಚಿರತೆಗೆ ತಮಾಷೆ-ಮೂವರ ಮೇಲೆ ದಾಳಿ!
ಜನರು ಕಾಡಿನೊಳಗೆ ಸುತ್ತಾಟ ನಡೆಸಲು ಹೋಗಬಾರದು...
Team Udayavani, Oct 22, 2024, 3:11 PM IST
ಶಾದೋಲ್(ಮಧ್ಯಪ್ರದೇಶ): ಸಫಾರಿ ವೇಳೆ ಪ್ರವಾಸಿಗರ ಹುಚ್ಚಾಟದಿಂದ ಪ್ರಾಣಿಗಳು ಅಟ್ಟಾಡಿಸುವ, ವಾಹನವನ್ನು ಏರಿ ತನ್ನ ಆಕ್ರೋಶವನ್ನು ಹೊರಹಾಕುವ ಹಲವು ಘಟನೆಗಳು ನಡೆದಿವೆ. ಇದೀಗ ಮಧ್ಯಪ್ರದೇಶದ ಶಾದೋಲ್ ಪ್ರದೇಶದ ಅರಣ್ಯ ವಿಭಾಗದಲ್ಲಿ ಚಿರತೆಯೊಂದು ಮೂವರ ಮೇಲೆ ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ಭಾನುವಾರ (ಅ.20) ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಶಾದೋಲ್ ವಲಯದ ಖಿತೌಲಿ ಬೀಟ್ ನ ಸೋನ್ ನದಿ ಪಾತ್ರದ ಬಳಿ ಗುಂಪೊಂದು ಪಿಕ್ ನಿಕ್ ಗೆ ಆಗಮಿಸಿದ್ದ ವೇಳೆ ಈ ಘಟನೆ ನಡೆದಿರುವುದಾಗಿ ವರದಿ ತಿಳಿಸಿದೆ. ಚಿರತೆಯ ದಾಳಿಯಿಂದ ಗಾಯಗೊಂಡ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಾಯಗೊಂಡ ಯುವಕನೊಬ್ಬ ಚಿತ್ರೀಕರಿಸಿದ್ದ 30 ಸೆಕೆಂಡ್ ಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚಿರತೆಗೆ ತಮಾಷೆ ಮಾಡುತ್ತ ವಿಡಿಯೋ ಚಿತ್ರೀಕರಣ ಮಾಡಿರುವುದು ದೃಶ್ಯದಲ್ಲಿದೆ.
ದುರುಗುಟ್ಟಿ ನೋಡುತ್ತಿದ್ದ ಚಿರತೆಯನ್ನು ಗುಂಪು ಬಾ, ಬಾ ಎಂದು ಕರೆಯುತ್ತಿದ್ದು, ಅದನ್ನು ಯುವಕನೊಬ್ಬ ತನ್ನ ಮೊಬೈಲ್ ನಲ್ಲಿ ಸೆರೆಹಿಡಿಯುತ್ತಿದ್ದ. ಆದರೆ ಈ ತಮಾಷೆ ಹೆಚ್ಚು ಹೊತ್ತು ಮುಂದುವರಿಯಲಿಲ್ಲ…ದಿಢೀರನೆ ವೇಗವಾಗಿ ಬಂದ ಚಿರತೆ ಯುವಕನ ಮೇಲೆ ದಾಳಿ ನಡೆಸಿ ಗಾಯಗೊಳಿಸಿಬಿಟ್ಟಿತ್ತು!
ಇಬ್ಬರು ಯುವಕರ ಮೇಲೆ ದಾಳಿ ನಡೆಸಿದ್ದ ಚಿರತೆ, ಮತ್ತೊಬ್ಬನನ್ನು ನೆಲದ ಮೇಲೆ ಹಾಕಿ ಕಚ್ಚಿ ಎಳೆದಾಡಿದ ದೃಶ್ಯ ವಿಡಿಯೋದಲ್ಲಿದೆ. ಚಿರತೆಯ ದಾಳಿಯಿಂದ ಕಂಗೆಟ್ಟ ಯುವಕರು ಬೊಬ್ಬೆ ಹೊಡೆಯುತ್ತ…ಓಡಿ, ಓಡಿ ಎಂದು ಹೇಳುತ್ತಿದ್ದು…ಚಿರತೆ ದಾಳಿ ನಡೆಸಿ ಓಡಿ ಹೋಗುವ ಮೊದಲು ವಿಡಿಯೋ ದೃಶ್ಯ ಕಟ್ ಆಫ್ ಆಗಿರುವುದಾಗಿ ವರದಿ ತಿಳಿಸಿದೆ.
ಕೆಲವು ದಿನಗಳ ಹಿಂದಷ್ಟೇ ಈ ಪ್ರದೇಶದಲ್ಲಿ ಹುಲಿಯೊಂದು ದಾಳಿ ನಡೆಸಿದ್ದ ಘಟನೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ಜನರು ಕಾಡಿನೊಳಗೆ ಸುತ್ತಾಟ ನಡೆಸಲು ಹೋಗಬಾರದು ಎಂದು ಉಪ ವಿಭಾಗೀಯ ಅರಣ್ಯಾಧಿಕಾರಿ ಬಾದ್ ಷಾ ರಾವತ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ನಾಯಿ ಓಡಿಸಲು ಹೋಗಿ 3ನೇ ಮಹಡಿಯಿಂದ ಬಿದ್ದು ಮೃತಪಟ್ಟ ಯುವಕ…
Jewellery: ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನಾಭರಣ ದರೋಡೆ; ಮಾಲೀಕನಿಂದ ಗುಂಡಿನ ದಾಳಿ!
Viral: ಕ್ಯಾಬ್ನಲ್ಲಿ ರೊಮ್ಯಾನ್ಸ್ ಸಲ್ಲದು: ಹೈದರಾಬಾದ್ ಚಾಲಕನ ನೋಟಿಸ್!
Video: ನಿಮಗೆ ಮತ ಹಾಕಿದ್ದೇನೆ, ನನಗೊಂದು ಮದುವೆ ಮಾಡಿಸಿ.. ಶಾಸಕರ ಬಳಿ ಮನವಿ ಮಾಡಿದ ವ್ಯಕ್ತಿ
ಕಚ್ಚಿದ ಕನ್ನಡಿ ಹಾವನ್ನೇ ಕೈಯಲ್ಲಿ ಹಿಡಿದು ಆಸ್ಪತ್ರೆಗೆ ಬಂದ ವ್ಯಕ್ತಿ… ಕಂಗಾಲಾದ ವೈದ್ಯರು
MUST WATCH
ಹೊಸ ಸೇರ್ಪಡೆ
Davanagere: ಭೈರತಿ ಸುರೇಶ್ ವಿರುದ್ದ ಮಾನನಷ್ಟ ಮೊಕದ್ದಮೆ ಎಚ್ಚರಿಕೆ ನೀಡಿದ ರೇಣುಕಾಚಾರ್ಯ
Manipal: ಮಲ್ಪೆಯ ಮರಳು ಭೂಮಿಯಲ್ಲೊಂದು ಸುಂದರ ಉದ್ಯಾನ!
Cyclone: ಮುಂದಿನ 48 ಗಂಟೆಗಳಲ್ಲಿ ಒಡಿಶಾ, ಪ.ಬಂಗಾಳಕ್ಕೆ ಅಪ್ಪಳಿಸಲಿದೆ ʼಡಾನಾʼ ಚಂಡಮಾರುತ!
Belagavi: ಕಿತ್ತೂರು ಉತ್ಸವ ಹಿನ್ನೆಲೆಯಲ್ಲಿ 2 ತಾಲೂಕಿನ ಶಾಲೆಗಳಿಗೆ 3 ದಿನ ರಜೆ ಘೋಷಣೆ
Mangaluru: ಪಟಾಕಿ ಮಾರಾಟಕ್ಕೆ 13 ಸ್ಥಳ ನಿಗದಿ; ಬೆಳಕಿನ ಹಬ್ಬಕ್ಕೆ ಭರದ ಸಿದ್ಧತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.