Surathkal: ಬೀದಿದೀಪಗಳಿಗೇ ಇನ್ನೂ ಸಿಕ್ಕಿಲ್ಲ ವಿದ್ಯುತ್‌ ಸಂಪರ್ಕ

ಕಾನ ಬಾಳ ರಸ್ತೆ: ದೀಪ ಉರಿಯದೇ ವರುಷ ಒಂದು!

Team Udayavani, Oct 22, 2024, 3:45 PM IST

5

 

ಸುರತ್ಕಲ್‌: ಸುರತ್ಕಲ್‌ ಕಾನ ಬಾಳ ಎಂಆರ್‌ಪಿಎಲ್‌ ಕಾರ್ಗೊಗೇಟ್‌ ವರೆಗೆ ಡಿವೈಡರ್‌ ಮಧ್ಯೆ ಬೀದಿ ದೀಪ ಅಳವಡಿಸುವ ಪ್ರಕ್ರಿಯೆ ಕಳೆದ ಜನವರಿಯಲ್ಲಿ ಆರಂಭಗೊಂಡಿದ್ದರೂ ವಿದ್ಯುತ್‌ ಸಂಪರ್ಕ ಸಿಗದೆ ಒಂದು ವರ್ಷ ಸಮೀಪಿಸುತ್ತಿದೆ. ಹಾಕಲಾಗಿರುವ ಕಂಬಗಳು ವಾಹನ ಸವಾರರನ್ನು ಅಣಕಿಸುವಂತಿದೆ.

ಮೊದಲ ಹಂತವಾಗಿ ಸುರತ್ಕಲ್‌ ಕಟ್ಲ ಜಂಕ್ಷನ್‌ನಿಂದ ಕಟ್ಲ ಸಿರಿ ಆಲಡೆಗೆ ತೆರಳುವ ಕ್ರಾಸ್‌ ವರೆಗೆ ವಿದ್ಯುತ್‌ ವ್ಯವಸ್ಥೆಗೆ ಕಂಬ ಅಳವಡಿಸಲಾಗಿದೆ. ಎಲ್‌ಇಡಿ ಬಲ್ಬ್ ಕೊರತೆ ಎಂದು ಪಾಲಿಕೆಯಿಂದ ಉತ್ತರ ದೊರಕಿತ್ತಾದರೂ ಒಂದು ವರ್ಷ ಸಮೀಪಿಸಿದರೂ ಪಾಲಿಕೆ ಇತ್ತ ತಲೆ ಹಾಕಿಲ್ಲ.

ಮುಂದಿನ ಹಂತವಾಗಿ ಕಾರ್ಗೋ ಗೇಟ್‌ ಹಾಗೂ ಸುತ್ತಮುತ್ತ ಎಂಆರ್‌ಪಿಎಲ್‌ ಗೆ ಬೀದಿ ದೀಪದ ಸೌಲಭ್ಯ ಕುರಿತಂತೆ ಮನವಿ ಮಾಡಲಾಗಿತ್ತು. ಸಿಎಸ್‌ಆರ್‌ ನಿಧಿಯಿಂದ ಸೌಲಭ್ಯ ಕಲ್ಪಿಸಿ ಎಂದು ಮನವಿ ನೀಡಲಾಗಿತ್ತಾದರೂ ಇದುವರೆಗೂ ಅಂತಹ ಸೌಲಭ್ಯ ದೊರಕಿಲ್ಲ.

ಕತ್ತಲೆ ಪ್ರಯಾಣ ಭೀತಿ
ಬೃಹತ್‌ ಟ್ಯಾಂಕರ್‌ಗಳ ಓಡಾಟದ ಕೇಂದ್ರವಾಗಿರುವ ಕಾನಾ ಬಾಳ ಪ್ರದೇಶದಲ್ಲಿ ಕತ್ತಲೆ ಪ್ರಯಾಣ ಭೀತಿ ಹುಟ್ಟಿಸುವಂತಿದೆ.ಇಲ್ಲಿನ ನಿತ್ಯ ಸಾವಿರಾರು ಬುಲೆಟ್‌ ಟ್ಯಾಂಕರ್‌, ಲಾರಿ ಓಡಾಟ ಹೆಚ್ಚಿರುವುದರಿಂದ ಪ್ರಖರ ಹೆಚ್ಚಿರುವ ಎಲ್‌ಇಡಿ ಲೈಟ್‌ ಆಳವಡಿಸ ಬೇಕಾದ ಅಗತ್ಯವಿದೆ. ಒಂದು ಹಂತದ ವಿದ್ಯುತ್‌ ವ್ಯವಸ್ಥೆಗೆ ಅಂದಾಜು 10 ಲಕ್ಷ ರೂ.ಗಳ ವೆಚ್ಚ ಮಾಡಲಾಗಿದೆ. ಕಾನಾ ಬಳಿ ದ್ವಿಪಥ ಕಾಮಗಾರಿ ಶೇ. 90ರಷ್ಟು ಪೂರ್ಣಗೊಂಡಿದೆ. ಎರಡೂ ಕಡೆಗಳಲ್ಲಿ ಚರಂಡಿ ಕಾಮಗಾರಿ, ಕಾನಾ ಬಳಿ ಸ್ವಲ್ಪ ಭಾಗ ಕಾಂಕ್ರೀಟ್‌ ಕೆಲಸ ಉಳಿದುಕೊಂಡಿದೆ. ಈ ಹಿಂದೆ ಇದ್ದ ಟ್ಯೂಬ್‌ ಲೈಟ್‌ ವ್ಯವಸ್ಥೆಯೂ
ನಿರ್ವಹಣೆಯಿಲ್ಲದೆ ಕೆಲವು ಕಡೆಗಳಲ್ಲಿ ಉರಿಯುತ್ತಿಲ್ಲ.

ತುರ್ತಾಗಿ ಬೇಕಾಗಿದೆ
ಲಾರಿ, ಕಂಟೈನರ್‌ಗಳು ಖಾಸಗಿ ಸ್ಥಳ, ಕಾಂಕ್ರೀಟ್‌ ರಸ್ತೆಯ ಎರಡೂ ಕಡೆಗಳಲ್ಲಿ ಪಾರ್ಕಿಂಗ್‌ ಮಾಡಲಾಗುತ್ತಿದ್ದು ರಸ್ತೆ ಬದಿ ಸುರಕ್ಷತೆಯ ನಿಟ್ಟಿನಲ್ಲಿ ಹೈ ಮಾಸ್ಟ್‌ ದೀಪದ ಅಗತ್ಯವಿದೆ ಎಂಬ ಸಾರ್ವಜನಿಕ ಅಭಿಪ್ರಾಯವೂ ಕೇಳಿ ಬಂದಿದೆ. ರಾತ್ರಿ ವೇಳೆ ಅನೈತಿಕ ಚಟುವಟಿಕೆ ಈ ಭಾಗದಲ್ಲಿ ನಡೆಯದಂತೆ ಸೂಕ್ತ ಕ್ರಮ ಜರಗಿಸುವ ಸಲುವಾಗಿಯೂ ಬೀದಿ ದೀಪದ ವ್ಯವಸ್ಥೆಯನ್ನು ತುರ್ತಾಗಿ ಮಾಡಬೇಕಿದೆ.

ಪಾಲಿಕೆ ಹಾಗೂ ಬಾಳ ಗ್ರಾಮ ಗ್ರಾಮ ಪಂಚಾಯತ್‌ ಗಡಿ ವ್ಯಾಪ್ತಿಯೂ ಇಲ್ಲಿ ಇರುವುದರಿಂದ ದ್ವಿಪಥ ರಸ್ತೆಯ ಸೌಲಭ್ಯ ಪಂಚಾಯತ್‌ಗೂ ಸಿಗುವಂತೆ ಲೋಕೋಪಯೋಗಿ ಇಲಾಖೆ ಯಿಂದಲೇ ಮಾಡಿಸಲಾಗಿದೆ. ಬೀದಿದೀಪ ವ್ಯವಸ್ಥೆ ಮಾತ್ರ ಪಾಲಿಕೆ ಹಾಗೂ ಬಾಳ ಪಂಚಾಯತ್‌ನಿಂದ ಆಗಬೇಕಿದೆ.

ಟಾಪ್ ನ್ಯೂಸ್

Odisha-Dana

Cyclone: ಮುಂದಿನ 48 ಗಂಟೆಗಳಲ್ಲಿ ಒಡಿಶಾ, ಪ.ಬಂಗಾಳಕ್ಕೆ ಅಪ್ಪಳಿಸಲಿದೆ ʼಡಾನಾʼ ಚಂಡಮಾರುತ!

Belagavi: ಕಿತ್ತೂರು ಉತ್ಸವ ಹಿನ್ನೆಲೆಯಲ್ಲಿ 2 ತಾಲೂಕಿನ ಶಾಲೆಗಳಿಗೆ 3 ದಿನ ರಜೆ ಘೋಷಣೆ

Belagavi: ಸಂತೋಷ ಪದ್ಮಣ್ಣವರ ಕೊಲೆ ಪ್ರಕರಣ: ನಾಲ್ಕಕ್ಕೇರಿದ ಬಂಧಿತರ ಸಂಖ್ಯೆ

Belagavi: ಸಂತೋಷ ಪದ್ಮಣ್ಣವರ ಕೊಲೆ ಪ್ರಕರಣ: ನಾಲ್ಕಕ್ಕೇರಿದ ಬಂಧಿತರ ಸಂಖ್ಯೆ

Rain-Kendriya

Cloud Burst: ಬೆಂಗಳೂರಿನ ಯಲಹಂಕದಲ್ಲಿ ದಾಖಲೆಯ ಮಳೆ; 10 ಬಡಾವಣೆ ಜಲಾವೃತ

Under construction building collapses in Bengaluru

Bengaluru: ಕುಸಿದ ನಿರ್ಮಾಣ ಹಂತದ ಕಟ್ಟಡ; ಮೂವರು ಸಾವು, ಹಲವರು ಸಿಲುಕಿರುವ ಶಂಕೆ

Stock Market: ಷೇರುಪೇಟೆ ಸೂಚ್ಯಂಕ 900ಕ್ಕೂ ಅಧಿಕ ಅಂಕ ಕುಸಿತ; 9 ಲಕ್ಷ ಕೋಟಿ ರೂ. ನಷ್ಟ

Stock Market: ಷೇರುಪೇಟೆ ಸೂಚ್ಯಂಕ 900ಕ್ಕೂ ಅಧಿಕ ಅಂಕ ಕುಸಿತ; 9 ಲಕ್ಷ ಕೋಟಿ ರೂ. ನಷ್ಟ

Prithvi Shaw out of the Ranji team too; Is Mumbai player’s cricket life over

Prithvi Shaw: ರಣಜಿ ತಂಡದಿಂದಲೂ ಪೃಥ್ವಿ ಔಟ್;‌ ಮುಗಿಯಿತಾ ಮುಂಬೈ ಆಟಗಾರನ ಕ್ರಿಕೆಟ್‌ ಜೀವನ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

Mangaluru: ಪಟಾಕಿ ಮಾರಾಟಕ್ಕೆ 13 ಸ್ಥಳ ನಿಗದಿ; ಬೆಳಕಿನ ಹಬ್ಬಕ್ಕೆ ಭರದ ಸಿದ್ಧತೆ

6(2)

Pandeshwar ರೈಲು ಹಳಿ ದುರಸ್ತಿ; ವಾಹನ ಸವಾರರಿಗೆ ಸಂಕಷ್ಟ

4

Pilikula: 10 ವರ್ಷಗಳ ಬಳಿಕ ನಡೆಯಲಿದೆ ಕಂಬಳ!

3

Mangaluru: ಮೂಕ ಪ್ರಾಣಿಗಳ ಪ್ರಾಣ ಹಿಂಡುವ ಪ್ಲಾಸ್ಟಿಕ್‌!

3

Mangaluru: ಬಸ್‌ ಸಿಬಂದಿ ನಡುವೆ ಜಗಳ; ಕನ್ನಡಿಗೆ ಹಾನಿ; 4 ಸಾವಿರ ರೂ. ನಷ್ಟ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

15(1)

Manipal: ಮಲ್ಪೆಯ ಮರಳು ಭೂಮಿಯಲ್ಲೊಂದು ಸುಂದರ ಉದ್ಯಾನ!

Odisha-Dana

Cyclone: ಮುಂದಿನ 48 ಗಂಟೆಗಳಲ್ಲಿ ಒಡಿಶಾ, ಪ.ಬಂಗಾಳಕ್ಕೆ ಅಪ್ಪಳಿಸಲಿದೆ ʼಡಾನಾʼ ಚಂಡಮಾರುತ!

Belagavi: ಕಿತ್ತೂರು ಉತ್ಸವ ಹಿನ್ನೆಲೆಯಲ್ಲಿ 2 ತಾಲೂಕಿನ ಶಾಲೆಗಳಿಗೆ 3 ದಿನ ರಜೆ ಘೋಷಣೆ

12

Mangaluru: ಪಟಾಕಿ ಮಾರಾಟಕ್ಕೆ 13 ಸ್ಥಳ ನಿಗದಿ; ಬೆಳಕಿನ ಹಬ್ಬಕ್ಕೆ ಭರದ ಸಿದ್ಧತೆ

13(3)

Udupi: ಎರಡು ವರ್ಷಗಳಲ್ಲಿ ಚಿರತೆ ದಾಳಿಗೆ 122 ಜಾನುವಾರುಗಳು ಬಲಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.