Hezbollah ಮುಖ್ಯಸ್ಥ ಅಡಗಿದ್ದ ಬಂಕರ್‌ನೊಳಗೆ 500 ಮಿ. ಡಾಲರ್‌ ನಗದು,ಚಿನ್ನ ಪತ್ತೆ! ಇಸ್ರೇಲ್

ಈ ಬಂಕರ್‌ ಎರಡು ಇತರ ಕಟ್ಟಡದ ಜೊತೆಗೆ ಸಂಪರ್ಕ ಹೊಂದಿದೆ...

Team Udayavani, Oct 22, 2024, 3:53 PM IST

ಹೆಜ್ಬುಲ್ಲಾ ಮುಖ್ಯಸ್ಥ ಅಡಗಿದ್ದ ಬಂಕರ್‌ನೊಳಗೆ 500 ಮಿ. ಡಾಲರ್‌ ನಗದು, ಅಪಾರ ಚಿನ್ನ ಪತ್ತೆ! ಇಸ್ರೇಲ್

ಭಯೋತ್ಪಾದಕ ಸಂಘಟನೆ ಹೆಜ್ಬುಲ್ಲಾ(Hezbollah) ಮುಖ್ಯಸ್ಥ ಹಸ್ಸನ್‌ ನಸ್ರಲ್ಲಾ(Hassan Nasrallah) ಅಡಗಿದ್ದ ರಹಸ್ಯ ಬಂಕರ್‌ ನೊಳಗೆ 500 ಮಿಲಿಯನ್‌ ಡಾಲರ್‌ ನಗದು ಮತ್ತು ಅಪಾರ ಪ್ರಮಾಣದ ಚಿನ್ನ ಪತ್ತೆಯಾಗಿರುವುದಾಗಿ ಇಸ್ರೇಲ್‌ ತಿಳಿಸಿದೆ.

ಬೈರುತ್‌ ನ ಆಸ್ಪತ್ರೆಯ ಕೆಳಭಾಗದಲ್ಲಿ ರಹಸ್ಯವಾಗಿ ನಿರ್ಮಿಸಲಾಗಿದ್ದ ಬೃಹತ್‌ ಬಂಕರ್‌ ನಲ್ಲಿ ಹಸ್ಸನ್‌ ನಸ್ರಲ್ಲಾ ಅಡಗಿಕೊಳ್ಳಲು ಬಳಸುತ್ತಿದ್ದ. ಬಂಕರ್‌ ನ ಆಕಾರದ ಬಗ್ಗೆ ಗ್ರಾಫಿಕ್‌ ಫೋಟೊ ಮತ್ತು ವಿಡಿಯೊವನ್ನು ಇಸ್ರೇಲ್‌ ಡಿಫೆನ್ಸ್‌ ಫೋರ್ಸ್‌ ನ ವಕ್ತಾರ ಅಡ್ಮಿರಲ್‌ ಡೇನಿಯಲ್‌ ಹಗಾರಿ ಬಹಿರಂಗಪಡಿಸಿದ್ದಾರೆ.

ಈ ಬಂಕರ್‌ ಅನ್ನು ಉದ್ದೇಶಪೂರ್ವಕವಾಗಿ ಆಸ್ಪತ್ರೆಯ ಕೆಳಭಾಗದಲ್ಲಿ ನಿರ್ಮಿಸಲಾಗಿದ್ದು, ಅಲ್ಲಿ ಅರ್ಧ ಬಿಲಿಯನ್‌ ಡಾಲರ್‌ ಗಿಂತಲೂ ಹೆಚ್ಚು ನಗದು, ಚಿನ್ನಾಭರಣವನ್ನು ಕೂಡಿಡಲಾಗಿದೆ. ಬಹುಶಃ ಈ ಹಣ ಲೆಬನಾನ್‌ ನಿವಾಸಿಗಳ ಪುನರ್ವಸತಿಗೆ ಬಳಸಬೇಕಾಗಿತ್ತು. ಆದರೆ ಅದನ್ನು ಹೆಜ್ಬುಲ್ಲಾ ಉಗ್ರರ ಪುನರ್ವಸತಿಗೆ ಬಳಸಲಾಗುತ್ತಿತ್ತು ಎಂದು ಹಗಾರಿ ವಿವರಿಸಿದ್ದಾರೆ.

ಹೆಜ್ಬುಲ್ಲಾ ವಿರುದ್ಧ ಲೆಬನಾನ್‌ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿರುವ ಹಗಾರಿ, ಅವರಿಗೆ ನೀಡಿರುವ ಸೌಲಭ್ಯವನ್ನು ಪರಿಶೀಲಿಸುವಂತೆ ತಿಳಿಸಿದ್ದಾರೆ. ನಾನು ಲೆಬನಾನ್‌ ಸರ್ಕಾರ, ಲೆಬನಾನ್‌ ಅಧಿಕಾರಿಗಳು ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಮನವಿ ಮಾಡುತ್ತಿದ್ದೇನೆ, ಹೆಜ್ಬುಲ್ಲಾ ಹಣವನ್ನು ಭಯೋತ್ಪಾದನೆಗೆ ಬಳಸಲು ಅವಕಾಶ ನೀಡಬೇಡಿ, ಅಷ್ಟೇ ಅಲ್ಲ ಇಸ್ರೇಲ್‌ ಮೇಲೆ ದಾಳಿ ನಡೆಸಲು ಅವಕಾಶ ನೀಡಬಾರದು ಎಂದು ತಿಳಿಸಿದ್ದಾರೆ.

ಹೆಜ್ಬುಲ್ಲಾ ಮತ್ತು ಹಮಾಸ್‌ ವಿರುದ್ಧ ಆರೋಪಿಸಿರುವ ಇಸ್ರೇಲ್‌ ರಕ್ಷಣಾ ಪಡೆ, ಆಸ್ಪತ್ರೆ, ಶಾಲೆ ಸೇರಿದಂತೆ ಸೂಕ್ಷ್ಮ ಪ್ರದೇಶಗಳನ್ನು ತಮ್ಮ ಶಸ್ತ್ರಾಸ್ತ್ರ ಅಡಗಿಸಿಡಲು ಮತ್ತು ಉಗ್ರರಿಗೆ ರಕ್ಷಣೆ ಒದಗಿಸಲು ಬಳಸಿಕೊಂಡಿರುವುದಾಗಿ ತಿಳಿಸಿದೆ.

ಲೆಬನಾನ್‌ ಜನರು ಮತ್ತು ಇರಾನ್‌ ಆಡಳಿತ ಎರಡೂ ಕೂಡಾ ಹೆಜ್ಬುಲ್ಲಾದ ಪ್ರಮುಖ ಆದಾಯದ ಮೂಲಗಳಾಗಿವೆ ಎಂದು ಹಗಾರಿ ಹೇಳಿದ್ದು, ಲೆಬನಾನ್‌, ಸಿರಿಯಾ, ಯೆಮೆನ್‌, ಟರ್ಕಿಯಲ್ಲಿ ಹೆಜ್ಬುಲ್ಲಾ ಫ್ಯಾಕ್ಟರಿಗಳನ್ನು ನಡೆಸುತ್ತಿದ್ದು, ಇದರ ಮೂಲಕ ಆದಾಯ ಗಳಿಸಿ ಭಯೋತ್ಪಾದಕ ಚಟುವಟಿಕೆಗಳಿಗೆ ಬೆಂಬಲ ನೀಡಲು ಹಣವನ್ನು ಬಳಸುತ್ತಿರುವುದಾಗಿ ಹಗಾರಿ ತಿಳಿಸಿದ್ದಾರೆ.

ಈ ಬಂಕರ್‌ ಎರಡು ಇತರ ಕಟ್ಟಡದ ಜೊತೆಗೆ ಸಂಪರ್ಕ ಹೊಂದಿದ್ದು, ಅದನ್ನು ಪ್ರವೇಶಿಸಲು ಮತ್ತು ಹೊರಹೋಗಲು ಬಳಸಲಾಗುತ್ತಿತ್ತು. ಬಂಕರ್‌ ಶಸ್ತ್ರಸಜ್ಜಿತ ಬೆಡ್‌ ಗಳು, ಕೋಣೆಗಳನ್ನು ಹೊಂದಿದ್ದು, ಯುದ್ಧ ಕಾರ್ಯಾಚರಣೆಗೆ ಕಮಾಂಡ್‌ ನೀಡುವ ಸೆಂಟರ್‌ ಗಳು ಕೂಡಾ ಇದ್ದಿರುವುದಾಗಿ ಇಸ್ರೇಲ್‌ ತಿಳಿಸಿದೆ.

“ ನಮ್ಮ ಯುದ್ಧ ಲೆಬನಾನ್‌ ಜನರ ವಿರುದ್ಧವಲ್ಲ, ಆದರೆ ಕೊಲೆ*ಗಡುಕ ಭಯೋತ್ಪಾದಕ ಸಂಘಟನೆ ವಿರುದ್ಧ ಮುಂದುವರಿಯಲಿದೆ. ನಾವು ಹೆಜ್ಬುಲ್ಲಾದ ಹೆಡೆಮುರಿ ಕಟ್ಟಿ ತಕ್ಕ ಪಾಠ ಕಲಿಸುವುದಾಗಿ ಇಸ್ರೇಲ್‌ ಹೇಳಿದೆ.‌

ಟಾಪ್ ನ್ಯೂಸ್

Odisha-Dana

Cyclone: ಮುಂದಿನ 48 ಗಂಟೆಗಳಲ್ಲಿ ಒಡಿಶಾ, ಪ.ಬಂಗಾಳಕ್ಕೆ ಅಪ್ಪಳಿಸಲಿದೆ ʼಡಾನಾʼ ಚಂಡಮಾರುತ!

Belagavi: ಕಿತ್ತೂರು ಉತ್ಸವ ಹಿನ್ನೆಲೆಯಲ್ಲಿ 2 ತಾಲೂಕಿನ ಶಾಲೆಗಳಿಗೆ 3 ದಿನ ರಜೆ ಘೋಷಣೆ

Belagavi: ಸಂತೋಷ ಪದ್ಮಣ್ಣವರ ಕೊಲೆ ಪ್ರಕರಣ: ನಾಲ್ಕಕ್ಕೇರಿದ ಬಂಧಿತರ ಸಂಖ್ಯೆ

Belagavi: ಸಂತೋಷ ಪದ್ಮಣ್ಣವರ ಕೊಲೆ ಪ್ರಕರಣ: ನಾಲ್ಕಕ್ಕೇರಿದ ಬಂಧಿತರ ಸಂಖ್ಯೆ

Rain-Kendriya

Cloud Burst: ಬೆಂಗಳೂರಿನ ಯಲಹಂಕದಲ್ಲಿ ದಾಖಲೆಯ ಮಳೆ; 10 ಬಡಾವಣೆ ಜಲಾವೃತ

Under construction building collapses in Bengaluru

Bengaluru: ಕುಸಿದ ನಿರ್ಮಾಣ ಹಂತದ ಕಟ್ಟಡ; ಮೂವರು ಸಾವು, ಹಲವರು ಸಿಲುಕಿರುವ ಶಂಕೆ

Stock Market: ಷೇರುಪೇಟೆ ಸೂಚ್ಯಂಕ 900ಕ್ಕೂ ಅಧಿಕ ಅಂಕ ಕುಸಿತ; 9 ಲಕ್ಷ ಕೋಟಿ ರೂ. ನಷ್ಟ

Stock Market: ಷೇರುಪೇಟೆ ಸೂಚ್ಯಂಕ 900ಕ್ಕೂ ಅಧಿಕ ಅಂಕ ಕುಸಿತ; 9 ಲಕ್ಷ ಕೋಟಿ ರೂ. ನಷ್ಟ

Prithvi Shaw out of the Ranji team too; Is Mumbai player’s cricket life over

Prithvi Shaw: ರಣಜಿ ತಂಡದಿಂದಲೂ ಪೃಥ್ವಿ ಔಟ್;‌ ಮುಗಿಯಿತಾ ಮುಂಬೈ ಆಟಗಾರನ ಕ್ರಿಕೆಟ್‌ ಜೀವನ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

UPI Payment: ಮಾಲ್ದೀವ್ಸ್‌ನಲ್ಲಿ ಭಾರತದ ಯುಪಿಐ ಪಾವತಿ ವ್ಯವಸ್ಥೆ!

UPI Payment: ಮಾಲ್ದೀವ್ಸ್‌ನಲ್ಲಿ ಭಾರತದ ಯುಪಿಐ ಪಾವತಿ ವ್ಯವಸ್ಥೆ!

Israeli Military: ಹೆಜ್ಬುಲ್ಲಾ ಬ್ಯಾಂಕಿಂಗ್‌ ಸಂಸ್ಥೆ ಗುರಿಯಾಗಿಸಿ ಇಸ್ರೇಲ್‌ ದಾಳಿ

Israeli Military: ಹೆಜ್ಬುಲ್ಲಾ ಬ್ಯಾಂಕಿಂಗ್‌ ಸಂಸ್ಥೆ ಗುರಿಯಾಗಿಸಿ ಇಸ್ರೇಲ್‌ ದಾಳಿ

US Election: ಫ್ರೆಂಚ್‌ ಫ್ರೈಸ್‌ ತಯಾರಿಸಿ ಕಮಲಾಗೆ ಟಾಂಗ್‌ ಕೊಟ್ಟ ಡೊನಾಲ್ಡ್‌ ಟ್ರಂಪ್‌

US Election: ಫ್ರೆಂಚ್‌ ಫ್ರೈಸ್‌ ತಯಾರಿಸಿ ಕಮಲಾಗೆ ಟಾಂಗ್‌ ಕೊಟ್ಟ ಡೊನಾಲ್ಡ್‌ ಟ್ರಂಪ್‌

Isreal-Meet

leaked letter: ಇರಾನ್‌ ಮೇಲೆ ದಾಳಿಗೆ ಇಸ್ರೇಲ್‌ ಸಿದ್ಧವಾಗಿತ್ತು: ವರದಿ

Isrel 2

Israel ಪಡೆಗಳಿಂದ ಭಾರೀ ದಾಳಿ: ಉತ್ತರ ಗಾಜಾದಲ್ಲಿ ಕನಿಷ್ಠ 73 ಮಂದಿ ಬ*ಲಿ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

15(1)

Manipal: ಮಲ್ಪೆಯ ಮರಳು ಭೂಮಿಯಲ್ಲೊಂದು ಸುಂದರ ಉದ್ಯಾನ!

Odisha-Dana

Cyclone: ಮುಂದಿನ 48 ಗಂಟೆಗಳಲ್ಲಿ ಒಡಿಶಾ, ಪ.ಬಂಗಾಳಕ್ಕೆ ಅಪ್ಪಳಿಸಲಿದೆ ʼಡಾನಾʼ ಚಂಡಮಾರುತ!

Belagavi: ಕಿತ್ತೂರು ಉತ್ಸವ ಹಿನ್ನೆಲೆಯಲ್ಲಿ 2 ತಾಲೂಕಿನ ಶಾಲೆಗಳಿಗೆ 3 ದಿನ ರಜೆ ಘೋಷಣೆ

12

Mangaluru: ಪಟಾಕಿ ಮಾರಾಟಕ್ಕೆ 13 ಸ್ಥಳ ನಿಗದಿ; ಬೆಳಕಿನ ಹಬ್ಬಕ್ಕೆ ಭರದ ಸಿದ್ಧತೆ

13(3)

Udupi: ಎರಡು ವರ್ಷಗಳಲ್ಲಿ ಚಿರತೆ ದಾಳಿಗೆ 122 ಜಾನುವಾರುಗಳು ಬಲಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.