UV Fusion: ಹೊಸ ಕನಸಿಗೆ ಮೊದಲ ಹೆಜ್ಜೆ


Team Udayavani, Oct 22, 2024, 5:08 PM IST

5

ಎದೆಯಲ್ಲಿ ನಿರಂತರ ಬೋರ್ಗರೆವ ಕಡಲು, ಆತಂಕದ ನಡುವೆ ತುಸು ಸಂತಸವನ್ನು ಹೊತ್ತಿರುವ ಒಡಲು, ಕಾದಿವೆ ಎಷ್ಟೆಲ್ಲ ಕಣ್ಣುಗಳು ಬರಿ ನೋಟದಲ್ಲಿ ಬೆನ್ನ ಸುಡುವುದು. ಇದು ಮೊದಲ ದಿನ ಕಾಲೇಜು ಮೆಟ್ಟಿಲು ಹತ್ತುವ ಪ್ರತಿಯೊಬ್ಬರ ಮನಸ್ಥಿತಿ. ಇದರಲ್ಲಿ ನಾನು ಒಬ್ಬಳು. ಮೊದಲ ದಿನ ಕಾಲೇಜಿಗೆ ಬಂದಾಗ ಸಂಕೋಚ, ಸಂಭ್ರಮ, ಆತಂಕ, ನಿರೀಕ್ಷೆ ಎಲ್ಲವೂ ಕೂಡಿ ಮನಸ್ಸಿಗೆ ಹೊಸದಾಗಿ ಕನಸಿನ ರೆಕ್ಕೆ ಮೂಡಿ ಮಾತು ಮರೆತು ಹೊಸ ಪ್ರಪಂಚದಲ್ಲಿ ಹಾರುವ ಕ್ಷಣಗಳು. ಆ ದಿನದ ಪ್ರತಿಯೊಂದು ಕ್ಷಣವು ಭಿನ್ನ.

ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಇಂತಹದೇ ಕಾಲೇಜಿನಲ್ಲಿ ಶಿಕ್ಷಣ ಪಡೆಯಬೇಕೆಂಬ ಕನಸಿರುತ್ತದೆ. ನನಗೂ ಎಸ್‌. ಡಿ.ಎಂ. ಕಾಲೇಜಿನಲ್ಲಿ  ಓದಬೇಕೆಂಬ ಕನಸು. ಈ ಕಾಲೇಜು ಅದೆಷ್ಟೋ ವಿದ್ಯಾರ್ಥಿಗಳಿಗೆ ಬದುಕಿಗೆ ದಾರಿ ತೋರಿಸಿದೆ. ಅವಕಾಶಗಳಿಗೆ ವೇದಿಕೆ ಕೊಟ್ಟಿದೆ.  ಹೊಸ ಜೀವನಕ್ಕೆ ಬುನಾದಿ ಹಾಕಿದ ಕಾಲೇಜು.

ಉತ್ತರ ಕರ್ನಾಟಕದಿಂದ ಬಂದ ನಾನು ಇಲ್ಲಿನ ಪ್ರತಿಯೊಂದಕ್ಕೂ  ಹೊಂದಾಣಿಕೆಯಾಗುವುದು ಅನಿವಾರ್ಯವಾಗಿತ್ತು. ಆದರೂ ಈ ಅನಿವಾರ್ಯತೆ ಮುಂದಿನ ಜೀವನಕ್ಕೆ ಸಹಾಯವಾಗುತ್ತದೆ ಎಂಬ ನಂಬಿಕೆಯೊಂದಿಗೆ ಬಂದೆ. ಮೊದಲ ದಿನ ನಮಗೆ  ಸ್ನಾತಕೋತ್ತರ ಕೇಂದ್ರದ ವಿವಿಧ ವಿಭಾಗಗಳಿಗೆ  ಪ್ರವೇಶಾತಿ ಪಡೆದ ಮೊದಲ ವರ್ಷದ  ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ನಾನು ಸ್ನಾತಕೋತ್ತರದಲ್ಲಿ ತೆಗೆದುಕೊಂಡ ವಿಷಯ ಪತ್ರಿಕೊದ್ಯಮ ಮತ್ತು ಸಮೂಹ ಸಂವಹನ. ಡಿಗ್ರಿಯಲ್ಲಿ ಸಹ ನನ್ನ ವಿಷಯ ಪತ್ರಿಕೋದ್ಯಮ. ಇದು ಮುಗಿದ ಅನಂತರ ಎಲ್ಲಿ ಪಿ.ಜಿ. ಮಾಡಬೇಕೆಂದು ಕೇಳಿದಾಗ ಮೊದಲ ಬಂದ ಉತ್ತರವೇ ಎಸ್‌.ಡಿ.ಎಂ ಕಾಲೇಜು. ಏಕೆಂದರೆ ಇಲ್ಲಿ ಕಲಿತ  ವಿದ್ಯಾರ್ಥಿಗಳು ಪ್ರತಿಯೊಂದು ಕ್ಷೇತ್ರದಲ್ಲೂ ಗುರಿತಿಸಿಕೊಂಡಿದ್ದಾರೆ. ಅದೇ ರೀತಿ ನಾನು ಗುರುತಿಸಿಕೊಳ್ಳಬೇಕೆಂದು ಕನಸಿನ ಮೂಟೆಯನ್ನು ಹೆಗಲೆರಿಸಿಕೊಂಡು ಬಂದಿರುವೆ. ಎÇÉೊ  ಒಂದು ನದಿಯಾಗಿ ಹರಿಯುತ್ತಿದ್ದ ನಾನು ಇಂದು  ಸಮುದ್ರ ಸೇರಿದ್ದೇನೆ. ಎಲ್ಲವೂ ಹೊಸ ಅನುಭವ. ಆದರೆ ಎಲ್ಲೋ ಒಂದು ಕಡೆ ನಂಬಿಕೆ ಇದೆ. ಏನಾದರೂ ಸಾಧಿಸುತ್ತೇನೆ ಎಂದು.

ಇದೆ ಮೊದಲು  ನನ್ನ ಊರು ಬಿಟ್ಟು ಬೇರೆ ಕಡೆ ಕಲಿಯಲು ಬಂದಿರುವ ಅನುಭವ ಎಲ್ಲವನ್ನು ಬಿಟ್ಟು ಬರುವುದು ಕಷ್ಟ. ಆದರೂ ಮುಂದಿನ ಜೀವನಕ್ಕೆ ಇದು ಅನಿವಾರ್ಯವಾಗಿದೆ.  ನನ್ನ ಜೀವನದಲ್ಲಿ ತೆಗೆದುಕೊಂಡ ನಿರ್ಧಾರಗಳಲ್ಲಿ   ಎಸ್‌.ಡಿ.ಎಂ. ಕಾಲೇಜು ಆಯ್ಕೆ ಕೂಡ ಒಂದು. ಈ ಕಾಲೇಜು  ವಿಧ್ಯಾರ್ಥಿಗಳ ಜೀವನದಲ್ಲಿ  ಅವಿಸ್ಮರಣಿಯ.

- ಸೌಮ್ಯಾ ಕಾಗಲ್‌

ಬಾಗಲಕೋಟೆ

ಟಾಪ್ ನ್ಯೂಸ್

Davanagere: ಭೈರತಿ ಸುರೇಶ್ ವಿರುದ್ದ ಮಾನನಷ್ಟ ಮೊಕದ್ದಮೆ ಎಚ್ಚರಿಕೆ ನೀಡಿದ ರೇಣುಕಾಚಾರ್ಯ

Davanagere: ಭೈರತಿ ಸುರೇಶ್ ವಿರುದ್ದ ಮಾನನಷ್ಟ ಮೊಕದ್ದಮೆ ಎಚ್ಚರಿಕೆ ನೀಡಿದ ರೇಣುಕಾಚಾರ್ಯ

Odisha-Dana

Cyclone: ಮುಂದಿನ 48 ಗಂಟೆಗಳಲ್ಲಿ ಒಡಿಶಾ, ಪ.ಬಂಗಾಳಕ್ಕೆ ಅಪ್ಪಳಿಸಲಿದೆ ʼಡಾನಾʼ ಚಂಡಮಾರುತ!

Belagavi: ಕಿತ್ತೂರು ಉತ್ಸವ ಹಿನ್ನೆಲೆಯಲ್ಲಿ 2 ತಾಲೂಕಿನ ಶಾಲೆಗಳಿಗೆ 3 ದಿನ ರಜೆ ಘೋಷಣೆ

Belagavi: ಸಂತೋಷ ಪದ್ಮಣ್ಣವರ ಕೊಲೆ ಪ್ರಕರಣ: ನಾಲ್ಕಕ್ಕೇರಿದ ಬಂಧಿತರ ಸಂಖ್ಯೆ

Belagavi: ಸಂತೋಷ ಪದ್ಮಣ್ಣವರ ಕೊಲೆ ಪ್ರಕರಣ: ನಾಲ್ಕಕ್ಕೇರಿದ ಬಂಧಿತರ ಸಂಖ್ಯೆ

Rain-Kendriya

Cloud Burst: ಬೆಂಗಳೂರಿನ ಯಲಹಂಕದಲ್ಲಿ ದಾಖಲೆಯ ಮಳೆ; 10 ಬಡಾವಣೆ ಜಲಾವೃತ

Under construction building collapses in Bengaluru

Bengaluru: ಕುಸಿದ ನಿರ್ಮಾಣ ಹಂತದ ಕಟ್ಟಡ; ಮೂವರು ಸಾವು, ಹಲವರು ಸಿಲುಕಿರುವ ಶಂಕೆ

Stock Market: ಷೇರುಪೇಟೆ ಸೂಚ್ಯಂಕ 900ಕ್ಕೂ ಅಧಿಕ ಅಂಕ ಕುಸಿತ; 9 ಲಕ್ಷ ಕೋಟಿ ರೂ. ನಷ್ಟ

Stock Market: ಷೇರುಪೇಟೆ ಸೂಚ್ಯಂಕ 900ಕ್ಕೂ ಅಧಿಕ ಅಂಕ ಕುಸಿತ; 9 ಲಕ್ಷ ಕೋಟಿ ರೂ. ನಷ್ಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

UV Fusion: ಕಣ್ಮರೆಯಾಗುತ್ತಿರುವ ಪರಂಪರಾನುಗತ ವೃತ್ತಿಗಳು

3-uv-fusion

UV Fusion: ಅಮ್ಮನ ಬೀಡಿಸೂಪಿನೆಡೆಯಿಂದ…

11-uv-fusion

Life: ಬಯಸಿದಂತೆಲ್ಲಾ ಇರುವುದಿಲ್ಲ ಬದುಕು

7-uv-fusion

UV Fusion: ಋಣವನ್ನು ಎಂದಿಗೂ ಮರೆಯದಿರೋಣ

6-uv-fusion

UV Fusion: ಸಹವಾಸ ದೋಷ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Davanagere: ಭೈರತಿ ಸುರೇಶ್ ವಿರುದ್ದ ಮಾನನಷ್ಟ ಮೊಕದ್ದಮೆ ಎಚ್ಚರಿಕೆ ನೀಡಿದ ರೇಣುಕಾಚಾರ್ಯ

Davanagere: ಭೈರತಿ ಸುರೇಶ್ ವಿರುದ್ದ ಮಾನನಷ್ಟ ಮೊಕದ್ದಮೆ ಎಚ್ಚರಿಕೆ ನೀಡಿದ ರೇಣುಕಾಚಾರ್ಯ

15(1)

Manipal: ಮಲ್ಪೆಯ ಮರಳು ಭೂಮಿಯಲ್ಲೊಂದು ಸುಂದರ ಉದ್ಯಾನ!

Odisha-Dana

Cyclone: ಮುಂದಿನ 48 ಗಂಟೆಗಳಲ್ಲಿ ಒಡಿಶಾ, ಪ.ಬಂಗಾಳಕ್ಕೆ ಅಪ್ಪಳಿಸಲಿದೆ ʼಡಾನಾʼ ಚಂಡಮಾರುತ!

Belagavi: ಕಿತ್ತೂರು ಉತ್ಸವ ಹಿನ್ನೆಲೆಯಲ್ಲಿ 2 ತಾಲೂಕಿನ ಶಾಲೆಗಳಿಗೆ 3 ದಿನ ರಜೆ ಘೋಷಣೆ

12

Mangaluru: ಪಟಾಕಿ ಮಾರಾಟಕ್ಕೆ 13 ಸ್ಥಳ ನಿಗದಿ; ಬೆಳಕಿನ ಹಬ್ಬಕ್ಕೆ ಭರದ ಸಿದ್ಧತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.