Mangaluru: ಪಟಾಕಿ ಮಾರಾಟಕ್ಕೆ 13 ಸ್ಥಳ ನಿಗದಿ; ಬೆಳಕಿನ ಹಬ್ಬಕ್ಕೆ ಭರದ ಸಿದ್ಧತೆ

ಪಟಾಕಿ ಮಾರಾಟಕ್ಕೆ ಪಾಲಿಕೆಯಿಂದ ಎಚ್ಚರಿಕೆಯ ಹೆಜ್ಜೆ

Team Udayavani, Oct 22, 2024, 6:58 PM IST

12

ಮಹಾನಗರ: ಬೆಳಕಿನ ಹಬ್ಬ ದೀಪಾವಳಿಗೆ ಕರಾವಳಿಯಲ್ಲಿ ಸಿದ್ಧತೆಗಳು ಶುರುವಾಗಿದೆ. ಸಡಗರ ಸಂಭ್ರಮದಿಂದ ಆಚರಿಸುವ ಈ ಹಬ್ಬ ಆಚರಣೆ ವೇಳೆ ಹಣತೆ ಹಚ್ಚುವುದು ಒಂದೆಡೆಯಾದರೆ, ಪಟಾಕಿ ಸಿಡಿಸಿ ಚಟಾಕಿ ಹರಿಸುವುದು ಮತ್ತೂಂದೆಡೆ. ಪಟಾಕಿಗಳನ್ನು ಬಾನಂಗಳಕ್ಕೆ ಹಾರಿಸಲು ಕಾತರತೆ ಹೆಚ್ಚಾಗಿದೆ. ಇದಕ್ಕಾಗಿ ಸಿದ್ಧತೆಗಳು ಶುರುವಾಗಿವೆ.

ಪಟಾಕಿಗಳು ಸೂಕ್ಷ್ಮವಾಗಿರುವ ಕಾರಣದಿಂದಾಗಿ ಬೇಕಾಬಿಟ್ಟಿ ಅಂಗಡಿಗಳಲ್ಲಿ ಇಟ್ಟು ಮಾರಾಟ ಮಾಡಲು ಅವಕಾಶವಿಲ್ಲ. ಈ ಕಾರಣದಿಂದಾಗಿ ನಗರ ವ್ಯಾಪ್ತಿಯಲ್ಲಿ ಪಾಲಿಕೆ ಗೊತ್ತು ಮಾಡಿದ ಸ್ಥಳಗಳಲ್ಲೇ ವ್ಯಾಪಾರ ನಡೆಸುವಂತೆ ನಿರ್ದೇಶಿಸಿದೆ. ಈ ಪೈಕಿ ನೆಹರೂ ಮೈದಾನದಲ್ಲಿ ಅತ್ಯಧಿಕ ಸ್ಟಾಲ್‌ಗ‌ಳಿಗೆ ಅವಕಾಶ ಕಲ್ಪಿಸಲು ಪಾಲಿಕೆ ಮುಂದಾಗಿದೆ. ದೀಪಾವಳಿ ಹಾಗೂ ತುಳಸಿ ಪೂಜೆಯ ಸಂದರ್ಭದಲ್ಲಿ ತಾತ್ಕಾಲಿಕ ಚಿಲ್ಲರೆ ಪಟಾಕಿ ಮಾರಾಟಕ್ಕೆ ಗುರುತಿಸಲಾಗಿರುವ ಸ್ಥಳಗಳಲ್ಲಿ ವ್ಯಾಪಾರಕ್ಕೆ ಅನುಮತಿ ಸಿಗಲಿದೆ.

13 ಸ್ಥಳಗಳಲ್ಲಿ 89 ಸ್ಟಾಲ್‌ಗ‌ಳು
ಪಾಲಿಕೆಯ ಮೊದಲ ವಲಯದಲ್ಲಿ ಕೃಷ್ಣಪುರ ಪ್ಯಾರಡೈಸ್‌ ಮೈದಾನ, ಎ.ಪಿ.ಎಂ.ಸಿ. ಕಟ್ಟಡದ ಮುಂಭಾಗದ ತೆರೆದ ಜಾಗ, ಆದರ್ಶ ಯುವಕ ಮಂಡಲ ಮಹಿಳಾ ಸಮಿತಿ ಗಣೇಶಪುರ ಕೈಕಂಬಗಳಲ್ಲಿ ಒಟ್ಟು 15 ಸ್ಟಾಲ್‌ಗ‌ಳಿವೆ. ಎರಡನೇ ವಲಯದಲ್ಲಿ 8 ಸ್ಥಳಗಳಿದ್ದು 89 ಸ್ಟಾಲ್‌ಗ‌ಳಿಗೆ ಅನುಮತಿ ನೀಡಲು ಪಾಲಿಕೆ ಮುಂದಾಗಿದೆ. ಕದ್ರಿ ಕ್ರಿಕೆಟ್‌ ಮೈದಾನ, ಪದವು ಹೈಸ್ಕೂಲ್‌ ಮೈದಾನ, ಬೊಂದೇಲ್‌ ಕ್ರಿಕೆಟ್‌ ಮೈದಾನ, ಪಚ್ಚನಾಡಿ ಮೈದಾನ, ನೆಹರು ಮೈದಾನ, ಅತ್ತಾವರ ನಾಯಕ ಮೈದಾನ, ಎಮ್ಮೆಕೆರೆ ಮೈದಾನ, ಉರ್ವ ಕ್ರಿಕೆಟ್‌ ಮೈದಾನ ಸೇರಿದೆ.

ವಲಯ ಮೂರರಲ್ಲಿ ಪಂಪ್‌ವೆಲ್‌ ಬಸ್‌ ನಿಲ್ದಾಣಕ್ಕೆ ನಿಗದಿ ಪಡಿಸಿದ ಜಾಗ ಹಾಗೂ ಶಕ್ತಿನಗರ ಮೈದಾನ ಆಯ್ಕೆ ಮಾಡಲಾಗಿದ್ದು 10 ಮಂದಿಗೆ ವ್ಯಾಪಾರಕ್ಕೆ ಅವಕಾಶ ಸಿಗಲಿದೆ.

ಮುನ್ನೆಚ್ಚರಿಕೆ ಅಗತ್ಯ
ಮನಸ್ಸಿಗೆ ಮುದ ನೀಡುವ ಹಿನ್ನೆಲೆ ಪಟಾಕಿ ಸಿಡಿಸಲು ಮಕ್ಕಳು ಯುವಕರು ಮುಂದಾಗುತ್ತಾರೆ. ಆದರೆ, ಪಟಾಕಿ ಸಿಡಿಸುವ ವೇಳೆ ಎಚ್ಚರ ಅಗತ್ಯ.ಹಿಂದೆ ಅನೇಕ ಅನಾಹುತಗಳು ಸಂಭವಿಸಿರುವ ಬಗ್ಗೆ ಎಚ್ಚರಿಕೆ ವಹಿಸಬೇಕು. ಪಟಾಕಿ ಸಿಡಿಸುವ ವೇಳೆ ಮಕ್ಕಳನ್ನು ದೂರ ನಿಲ್ಲಿಸುವುದನ್ನು ಮರೆಯಬಾರದು. ಕೈಯಲ್ಲಿ ಹಿಡಿದುಕೊಂಡು ಪಟಾಕಿ ಸಿಡಿಸಬಾರದು. ಅಸ್ತಮಾ, ಆಲರ್ಜಿ ಸಹಿ ತ ಅನಾರೋಗ್ಯ ಇರುವವರು ಪಟಾಕಿಯಿಂದ ದೂರವಿರಬೇಕು. ವಾಹನಗಳನ್ನು ದೂರವಿಟ್ಟು ಪಟಾಕಿ ಸಿಡಿ ಸುವುದು ಉತ್ತಮ. ಮಕ್ಕಳು ಹಿರಿಯರಿರುವ ವೇಳೆ ಕಡಿಮೆ ಶಬ್ಧದ ಪಟಾಕಿ ಬಳಸುವುದರಿಂದ ಆರೋಗ್ಯ ಹಾಗೂ ಪರಿಸರಕ್ಕೂ ಪೂಕರವಾಗಿರಲಿದೆ.

-ಸಂತೋಷ್‌ ಮೊಂತೇರೊ

ಟಾಪ್ ನ್ಯೂಸ್

DVG-1

Davanagere: ನಾಪತ್ತೆಯಾಗಿದ್ದ ವ್ಯಕ್ತಿ ಅಣಜಿ ಕೆರೆ ಬಳಿ ಅಸ್ಥಿಪಂಜರವಾಗಿ ಪತ್ತೆ!

Udupi: 51ನೇ ಅ.ಭಾ. ಪ್ರಾಚ್ಯವಿದ್ಯಾ ಸಮ್ಮೇಳನ ಭಾರತೀಯ ಜ್ಞಾನಪರಂಪರೆ ಕುರಿತು ಚಿಂತನ ಮಂಥನ

Udupi: 51ನೇ ಅ.ಭಾ. ಪ್ರಾಚ್ಯವಿದ್ಯಾ ಸಮ್ಮೇಳನ ಭಾರತೀಯ ಜ್ಞಾನಪರಂಪರೆ ಕುರಿತು ಚಿಂತನ ಮಂಥನ

Many leaders left BJP and joined JMM

Jharkhand: ಬಿಜೆಪಿ ತೊರೆದು ಜೆಎಂಎಂ ಸೇರಿದ ಹಲವು ನಾಯಕರು!

Mandya; Kidnapper bites his hand and escapes; A cinematic kind of case

Mandya; ಕಿಡ್ನ್ಯಾಪರ್‌ ಕೈಗೆ ಕಚ್ಚಿ ತಪ್ಪಿಸಿಕೊಂಡ ಬಾಲಕ; ಸಿನಿಮೀಯ ರೀತಿಯ ಪ್ರಕರಣ

Vijayapura: ರೇಂಜರ್ ಸ್ವಿಂಗ್‌ನಿಂದ ಬಿದ್ದು ಯುವತಿ ಸಾವು, ಕೊನೆ ಕ್ಷಣ ಮೊಬೈಲ್‌ನಲ್ಲಿ ಸೆರೆ

Vijayapura: ರೇಂಜರ್ ಸ್ವಿಂಗ್‌ನಿಂದ ಬಿದ್ದು ಯುವತಿ ಸಾವು, ಕೊನೆ ಕ್ಷಣ ಮೊಬೈಲ್‌ನಲ್ಲಿ ಸೆರೆ

S.-Lad

By Poll: ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್‌ ಪಕ್ಷಕ್ಕೆ ಬಂದ್ರೆ ಸ್ವಾಗತಿಸುವೆ: ಸಂತೋಷ್ ಲಾಡ್‌

ಸತೀಶ್‌ ಜಾರಕಿಹೊಳಿ

Belagavi: ಸಿಪಿವೈ ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ಮಾಹಿತಿ ಇಲ್ಲ: ಸತೀಶ್‌ ಜಾರಕಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

arest

Mangaluru: ಡ್ರಗ್ಸ್‌ ಸೇವನೆ; ಯುವಕನ ಬಂಧನ

6(2)

Pandeshwar ರೈಲು ಹಳಿ ದುರಸ್ತಿ; ವಾಹನ ಸವಾರರಿಗೆ ಸಂಕಷ್ಟ

5

Surathkal: ಬೀದಿದೀಪಗಳಿಗೇ ಇನ್ನೂ ಸಿಕ್ಕಿಲ್ಲ ವಿದ್ಯುತ್‌ ಸಂಪರ್ಕ

4

Pilikula: 10 ವರ್ಷಗಳ ಬಳಿಕ ನಡೆಯಲಿದೆ ಕಂಬಳ!

3

Mangaluru: ಮೂಕ ಪ್ರಾಣಿಗಳ ಪ್ರಾಣ ಹಿಂಡುವ ಪ್ಲಾಸ್ಟಿಕ್‌!

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

kas-a

Kasaragod ಅಪರಾಧ ಸುದ್ದಿಗಳು

PKL 11: Hattrick defeat for Bengaluru Bulls

PKL 11: ಬುಲ್ಸ್‌ ಗೆ ಹ್ಯಾಟ್ರಿಕ್‌ ಸೋಲು

DVG-1

Davanagere: ನಾಪತ್ತೆಯಾಗಿದ್ದ ವ್ಯಕ್ತಿ ಅಣಜಿ ಕೆರೆ ಬಳಿ ಅಸ್ಥಿಪಂಜರವಾಗಿ ಪತ್ತೆ!

Udupi: 51ನೇ ಅ.ಭಾ. ಪ್ರಾಚ್ಯವಿದ್ಯಾ ಸಮ್ಮೇಳನ ಭಾರತೀಯ ಜ್ಞಾನಪರಂಪರೆ ಕುರಿತು ಚಿಂತನ ಮಂಥನ

Udupi: 51ನೇ ಅ.ಭಾ. ಪ್ರಾಚ್ಯವಿದ್ಯಾ ಸಮ್ಮೇಳನ ಭಾರತೀಯ ಜ್ಞಾನಪರಂಪರೆ ಕುರಿತು ಚಿಂತನ ಮಂಥನ

Agriculture Minister Shivraj Chouhan to the budget announcement implementation committee

ಬಜೆಟ್‌ ಘೋಷಣೆ ಅನುಷ್ಠಾನ ಸಮಿತಿಗೆ ಕೃಷಿ ಸಚಿವ ಶಿವರಾಜ್‌ ಚೌಹಾಣ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.