Santana row: ಸನಾತನ ವಿವಾದಕ್ಕೆ ತಾನು ಕರುಣಾನಿಧಿ ಮೊಮ್ಮಗ, ಕ್ಷಮೆ ಕೇಳಲ್ಲ: ಉದಯನಿಧಿ
Team Udayavani, Oct 22, 2024, 11:36 PM IST
ಚೆನ್ನೈ: “ನಾನು ಕರುಣಾನಿಧಿಯವರ ಮೊಮ್ಮಗ. ಸನಾತನ ಧರ್ಮದ ವಿರುದ್ಧ ನೀಡಿದ್ದ ತನ್ನ ಹೇಳಿಕೆಗಾಗಿ ಕ್ಷಮೆಯಾಚಿಸುವುದಿಲ್ಲ ಎಂದು ತಮಿಳುನಾಡು ಡಿಸಿಎಂ ಉದಯನಿಧಿ ಸ್ಟಾಲಿನ್ ತಿಳಿಸಿದ್ದಾರೆ.
ಚೆನ್ನೈನಲ್ಲಿ ಮಾತನಾಡಿದ ಅವರು,ಸನಾತನ ಧರ್ಮವು ಮಹಿಳೆಯರಿಗೆ ವಿದ್ಯಾಭ್ಯಾಸ ನಿರಾಕರಿಸಿತು, ಮನೆಯಾಚೆ ಕಾಲಿಡಲು ನಿರ್ಬಂಧಿಸಿತು ಅಲ್ಲದೆ ಸತಿ ಸಹಗಮನಕ್ಕೆ ಒಳಗಾಗಬೇಕಿತ್ತು. ಅದನ್ನು ಪೆರಿಯಾರ್, ಅಣ್ಣಾದೊರೈ ಮತ್ತು ಕರುಣಾನಿಧಿ ವಿರೋಧಿಸಿದ್ದರು. ಆ ಚಿಂತನೆಯನ್ನೇ ನಾನು ವ್ಯಕ್ತಪಡಿಸಿದ್ದೇನೆ ಎಂದರು. ಕಳೆದ ವರ್ಷ ಉದಯನಿಧಿ, ಸನಾತನ ಧರ್ಮವನ್ನು ಮಾರಕ ಕಾಯಿಲೆಗಳಿಗೆ ಹೋಲಿಸಿ ಸುದ್ದಿಯಾಗಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.