Kadaba: ಆಲಂಕಾರು ಗ್ರಾಮದ ನೆಕ್ಕಿಲಾಡಿ ಬಳಿ ಹುಲಿ?
Team Udayavani, Oct 23, 2024, 1:12 AM IST
ಆಲಂಕಾರು: ಕಡಬ ತಾಲೂಕು ಆಲಂಕಾರು ಗ್ರಾಮದ ನೆಕ್ಕಿಲಾಡಿ ನೈಯ್ಯಲ್ಗ ಜನಾರ್ದನ ಬಂಗೇರ ಎಂಬವರ ಮನೆಯ ಸಮೀಪ ಮಂಗಳವಾರ ಬೆಳಗ್ಗಿನ ಜಾವ ಹುಲಿ ಕಂಡು ಬಂದಿದೆ ಎಂದು ಸ್ಥಳೀಯರು ತಿಳಿಸಿದ್ದು, ಇದು ಪರಿಸರದ ಜನರಲ್ಲಿ ಆತಂಕ ಮೂಡಿಸಿದೆ.
ಬೆಳಗ್ಗಿನ ಜಾವ ಹಟ್ಟಿಯಲ್ಲಿದ್ದ ದನ ಏಕಾಏಕಿ ಕೂಗಲು ಆರಂಭಿಸಿತ್ತು, ತತ್ಕ್ಷಣ ಮನೆಮಂದಿ ಹಟ್ಟಿ ಬಳಿ ಪರಿಶೀಲಿಸಿದಾಗ ದನ ಹೆದರಿ ಕುಸಿದು ಬಿದ್ದಿತ್ತು. ತತ್ಕ್ಷಣ ದನವನ್ನು ಹಗ್ಗ ಬಿಚ್ಚಿ ಬಿಡಲಾಗಿತ್ತು. ಜನಾರ್ದನ ಬಂಗೇರ ಬೆಳಗ್ಗೆ ತನ್ನ ದೈವದ ಬನದಲ್ಲಿ ದೀಪ ಹಚ್ಚಲು ತೆರಳಿದ್ದಾಗ ಹುಲಿ ಕಂಡು ಬಂದಿದೆ ಎಂದು ತಿಳಿಸಿದ್ದಾರೆ. ಆದರೆ ಇದು ಹುಲಿಯೋ, ಚಿರತೆಯೋ ಎಂಬುದರ ಬಗ್ಗೆ ಸ್ಪಷ್ಟತೆಯಿಲ್ಲ.
ಪರಿಶೀಲಿಸಿದಾಗ ಕೆಳಗಿನ ನೈಯ್ಯಲ್ಗ ಭಾಗದಿಂದ ಬಂದ ಹೆಜ್ಜೆ ಗುರುತು ಹೊಳ್ಳೆತ್ತೂರು ಕಡೆಗೆ ತೆರಳಿದಂತೆ ಕಂಡು ಬಂದಿದೆ. ಈ ಬಗ್ಗೆ ಜನಾರ್ದನ ಅವರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ತತ್ಕ್ಷಣ ಕುಂತೂರು ವಲಯ ಅರಣ್ಯಾಧಿಕಾಗಳಾದ ಜಯಕುಮಾರ್, ರವಿಕುಮಾರ್ ಮತ್ತು ಸಿಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bantwala: ಬೋಳಂಗಡಿ: ಹೆದ್ದಾರಿ ಕಾಮಗಾರಿ ಯಂತ್ರ ಢಿಕ್ಕಿ; ಪಾದಚಾರಿಗೆ ಗಾಯ
Police Compliant: ಸಂಜೀವ ಕಾಣಿಯೂರು ವಿರುದ್ಧ ಕುಣಿತ ಭಜನೆಯ ಹೆಣ್ಮಕ್ಕಳಿಂದ ದೂರು
Dakshina Kannada: ಅಬಕಾರಿ ಕಾರ್ಯಾಚರಣೆ; ಮದ್ಯ, ಗಾಂಜಾ ವಶ
Mangaladevi Temple: ಹೈಕೋರ್ಟ್ ತಡೆಯಾಜ್ಞೆ ಆದೇಶಕ್ಕೆ ಆಡಳಿತ ಮಂಡಳಿಯಿಂದ ಅರ್ಜಿ
Mangaluru: ರೈಲು ಹಳಿ ಮೇಲೆ ಕಲ್ಲಿಟ್ಟ ಆರೋಪಿಗಳ ತಕ್ಷಣ ಬಂಧಿಸಿ: ಸಂಸದ ಕ್ಯಾ. ಚೌಟ ಆಗ್ರಹ
MUST WATCH
ಹೊಸ ಸೇರ್ಪಡೆ
Wrestling: ಪ್ರತಿಭಟನೆಗೆ ಉತ್ತೇಜಿಸಿದ್ದೇ ಬಬಿತಾ: ಸಾಕ್ಷಿ ಮಲಿಕ್ ಆರೋಪ
Governmnet Encourage: ಎಸೆಸೆಲ್ಸಿ ಸಾಧಕರಿಗೆ ಲ್ಯಾಪ್ಟಾಪ್
Sulya: ನಗರದ ಜ್ಯೋತಿ ವೃತ್ತದ ಬಳಿ ರಿಕ್ಷಾ ಢಿಕ್ಕಿ: ಬಾಲಕಿಗೆ ಗಾಯ
Bantwala: ಬೋಳಂಗಡಿ: ಹೆದ್ದಾರಿ ಕಾಮಗಾರಿ ಯಂತ್ರ ಢಿಕ್ಕಿ; ಪಾದಚಾರಿಗೆ ಗಾಯ
Police Compliant: ಸಂಜೀವ ಕಾಣಿಯೂರು ವಿರುದ್ಧ ಕುಣಿತ ಭಜನೆಯ ಹೆಣ್ಮಕ್ಕಳಿಂದ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.