Bengaluru; 27 ವರ್ಷ ಬಳಿಕ ದಾಖಲೆ ವರ್ಷಧಾರೆ!!

ಪ್ರಕೃತಿ ಮುಂದೆ ಯಾರೂ ಇಲ್ಲ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌

Team Udayavani, Oct 23, 2024, 8:51 AM IST

1-a-bengg

ಬೆಂಗಳೂರು: ತಮಿಳುನಾಡಿನಲ್ಲಿ 5.8 ಎತ್ತರದಲ್ಲಿ ಸರ್ಕ್ಯೂಲೇಶನ್‌ ಇರುವ ಹಿನ್ನೆಲೆಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭಾರೀ ಮಳೆಯಾಗು ತ್ತಿದ್ದು ಬುಧವಾರವೂ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಬಿಬಿಎಂಪಿ ಪ್ರಕಾರ, ಸೋಮವಾರ ತಡರಾತ್ರಿ 12 ಗಂಟೆಯಿಂದ ಮಂಗಳವಾರ ಮುಂಜಾನೆ 6 ಗಂಟೆಯವರೆಗೆ ಯಲಹಂಕದ ಚೌಡೇಶ್ವರಿಯಲ್ಲಿ 15.7 ಸೆಂ.ಮೀ ಮಳೆಯಾಗಿದೆ. ವಿದ್ಯಾರಣ್ಯಪುರದಲ್ಲಿ 10.9, ಜಕ್ಕೂರಿನಲ್ಲಿ 8.1, ಕೋಡಿಗೆಹಳ್ಳಿಯಲ್ಲಿ 7.2, ಹೊರಮಾವು ಪ್ರದೇಶಗಳಲ್ಲಿ 7.3 ಸೆಂ.ಮೀ ಮಳೆಯಾಗಿದೆ.ಇದು 27 ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಅಕ್ಟೋಬರ್‌ ತಿಂಗಳಿನ 24 ಗಂಟೆಯಲ್ಲಿ ಸುರಿದ ದಾಖಲೆ ಮಳೆಯಲಾಗಿದೆ.

1997ರ ಅಕ್ಟೋಬರ್‌ 1ರಂದು 17.8 ಸೆಂ.ಮೀ. (178.9 ಮಿ.ಮೀ) ಮಳೆಯಾಗಿತ್ತು. ಅದಾದ ಬಳಿಕ ಈವರೆಗೆ 2017ರ 6 ಅಕ್ಟೋಬರ್‌ 6ರಂದು 7.6 ಸೆಂ.ಮೀ. ಮಳೆಯಾಗಿದ್ದು ಅತಿ ಹೆಚ್ಚಾಗಿತ್ತು. ಈಗ 2017ರ ದಾಖಲೆ ಮೀರಿ 15.7 ಸೆಂ.ಮೀ. ಮಳೆಯಾಗಿ ದಾಖಲೆ ನಿರ್ಮಾಣವಾಗಿದೆ

ಎಲ್ಲೆಲ್ಲಿ ಎಷ್ಟೆಷ್ಟು ಮಳೆ?
ಮಂಗಳವಾರ ಹಂಪಿನಗರದಲ್ಲಿ 6.3 ಸೆಂ.ಮೀ ಮಳೆ ಸುರಿದಿದ್ದು, ಇದು ನಗರದಲ್ಲಿ ಮಂಗಳವಾರ ಸುರಿದ ಅತ್ಯಧಿಕ ಮಳೆಯ ಪ್ರಮಾಣವಾಗಿದೆ. ಉಳಿದಂತೆ ಮಾರುತಿ ಮಂದಿರದಲ್ಲಿ 5.7, ಕೆಂಗೇರಿ 5.2, ಆರ್‌ಆರ್‌ನಗರ 5.1, ಬಸವೇಶ್ವರನಗರ 4.1, ಕಾಡುಗೋಡಿ4, ವಿ.ನಾಗೇನಹಳ್ಳಿ, ಬಾಣಸವಾಡಿ ತಲಾ 3.7, ಬಾಗಲಗುಂಟೆ 3.6, ನಾಗಪುರ 3.4, ರಾಮಮೂರ್ತಿನಗರ 3.4, ರಾಜಾಜಿನಗರ 3.1, ಮನೋರಾಯನಪಾಳ್ಯ 2.7, ನಂದಿನಿಲೇಔಟ್‌ 2.4, ಚೊಕ್ಕಸಂದ್ರ 2.2, ಹೆಮ್ಮೆಗೆಪುರ 2.1, ಬಸವನಪುರ, ಹೂಡಿ ತಲಾ 2, ಪೀಣ್ಯ 1.9, ಪುಲಕೇಶಿನಗರ 1.8, ಅಂಜನಾಪುರ
1.7, ಶೆಟ್ಟಿಹಳ್ಳಿ 1.7, ವಿದ್ಯಾರಣ್ಯಪುರ 1.7, ಚಾಮರಾಜಪೇಟೆ 1.7, ವಿವಿಪುರ 1.4, ದೊಡ್ಡಬಿದಿರಕಲ್ಲು 1.2, ದೊಡ್ಡನೆಕ್ಕುಂದಿ, ಹೊರಮಾವು ತಲಾ 1.2, ದಯಾನಂದ ಸಾಗರ್‌ 1.1 ಸೆಂ.ಮೀ ಮಳೆಯಾಗಿದೆ.

ಮಳೆ ಹಾನಿ ನಿರ್ವಹಣೆಗೆ ಪ್ರತ್ಯೇಕ ತಂಡ: ಡಿಸಿಎಂ
ದುಬೈ ಸೇರಿದಂತೆ ಹಲವೆಡೆ ಮಳೆ ಆಗುತ್ತಿದೆ. ಬರಪೀಡಿತ ಪ್ರದೇಶದಲ್ಲಿಯೂ ಮಳೆ ಆಗುತ್ತಿದೆ. ಪ್ರಕೃತಿ ಮುಂದೆ ಯಾರೂ ಇಲ್ಲ. ಬೆಂಗಳೂರಿನಲ್ಲಿ ಸುರಿಯುತ್ತಿರುವಮಳೆ ಮತ್ತು ಅದರಿಂದಾದ ಅವಾಂತರದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿರುವುದಾಗಿ ಬೆಂಗಳೂರು ಅಭಿವೃದ್ಧಿ
ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ನಗರದ ಮಳೆ ಕುರಿತು ಮಾಹಿತಿ ನೀಡಿರುವ ಅವರು, “ರಾಜ್ಯ ರಾಜಧಾನಿಯ ಚೌಡೇಶ್ವರಿನಗರದಲ್ಲಿ 150 ಮಿ.ಮೀ. ಮಳೆ ಬಿದ್ದಿದೆ. ಇದೇ ರೀತಿ ನಗರದ ವಿವಿಧೆಡೆ ಗರಿಷ್ಠ ಮಳೆಯಾಗಿದೆ. ದುಬೈ ಸೇರಿದಂತೆ ಹಲವೆಡೆಯೂ ಮಳೆ ಆಗುತ್ತಿದೆ. ಬರಪೀಡಿತ ಪ್ರದೇಶ ಗಳಲ್ಲೂ ವರುಣನ ಆರ್ಭಟ ಮುಂದುವರಿದಿದೆ. ನಗರದಲ್ಲಿ ಮಳೆಯಿಂದಾದ ಸಮಸ್ಯೆ ಗಳ ಕುರಿತು ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದಿರುವೆ, ಎಲ್ಲರಿಗೂ ಸೂಚನೆ
ಕೂಡ ನೀಡಿದ್ದೇನೆ. ಐದು ರಾಜ್ಯ ವಿಪತ್ತು ನಿರ್ವಹಣಾ ತಂಡ (ಎಸ್‌ಡಿಆರ್‌ಎಫ್) ಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ಪ್ರಕೃತಿ ಮುಂದೆ ಯಾರೂ ಇಲ್ಲ’ ಎಂದರು. ನಾನು ಸ್ಥಳಕ್ಕೆ ಭೇಟಿ ನೀಡುವುದು ದೊಡ್ಡದೇನು ಅಲ್ಲ. ಪ್ರಚಾರ ನನಗೆ ಮುಖ್ಯವಲ್ಲ; ಮಳೆ ಹಾನಿ ನಿರ್ವಹಣೆಗಾಗಿ ಪ್ರತ್ಯೇಕ ತಂಡ ಮಾಡಿದ್ದೇವೆ ಎಂದು ಹೇಳಿದರು.

ಮಳೆ ದೂರುಗಳಿದ್ದರೆ 1533ಗೆ ಕರೆ ಮಾಡಿ
ಪಾಲಿಕೆಯ ಅಧಿಕಾರಿಗಳು ಸಮಸ್ಯೆಯಾಗಿರುವ ಕಡೆ ಸ್ಥಳದಲ್ಲಿದ್ದು, ಬಗೆಹರಿಸುವ ಕೆಲಸ ಮಾಡುತ್ತಿದ್ದಾರೆ. ಮಳೆ ಸಂಬಂಧಿಸಿದ ದೂರುಗಳಿದ್ದರೆ ನಾಗರಿಕರು ಕೂಡಲೆ ದಯಮಾಡಿ 1533 ಕರೆ ಮಾಡಲು ಬಿಬಿಎಂಪಿ ಮನವಿ ಮಾಡಿದೆ.

ಬಿಬಿಎಂಪಿಗೆ ಬಂದಿವೆ1,328 ದೂರುಗಳು
ಮಳೆಯಿಂದ ಆದ ಅವಾಂತರಗಳ ಕುರಿತು ಬಿಬಿಎಂಪಿಗೆ ಇದುವರೆಗೆ 1,328 ದೂರುಗಳು ಬಂದಿವೆ. ಈ ಪೈಕಿ ರಸ್ತೆಯಲ್ಲಿ ನೀರು ನಿಂತಿರುವುದಕ್ಕೆ ಸಂಬಂಧಿಸಿದ 232,ಮನೆಗೆ ನೀರು ನುಗ್ಗಿರುವುದು 1066, ಮರ ಉರುಳಿರುವುದು 8, ಮರದ ರೆಂಬೆ ಉರುಳಿರಿವುದು 22 ಸೇರಿ ಒಟ್ಟಾರೆ 1328 ದೂರುಗಳು ಬಿಬಿಎಂಪಿಗೆ ಬಂದಿವೆ. ಈ ಪೈಕಿ 590 ದೂರುಗಳಿಗೆ ಸಂಬಂಧಿಸಿದಂತೆ ಬಿಬಿಎಂಪಿ ಸಿಬ್ಬಂದಿ ಈ ಸಮಸ್ಯೆ ಪರಿಹರಿಸಿದೆ.

ಟಾಪ್ ನ್ಯೂಸ್

3

Kollywood: ಮಾಜಿ ಆಳಿಯನ ಜತೆ ರಜಿನಿ ನಟನೆ? ಒಂದೇ ಚಿತ್ರದಲ್ಲಿ ಧನುಷ್ – ರಜಿನಿಕಾಂತ್?

3-ptr

Puttur: ವಿಹಿಂಪ ಜಿಲ್ಲಾ ಕಾರ್ಯಾಲಯದ ಭೂಮಿ‌‌ ಪೂಜೆ; ಅರುಣ್ ಪುತ್ತಿಲ ಆಗಮನಕ್ಕೆ ವಿರೋಧ

2

Actor Yash: ‘ರಾಮಾಯಣʼಕ್ಕೆ ನಾನೇ ʼರಾವಣʼ.. ಬಿಗ್‌ ಬಜೆಟ್‌ ಚಿತ್ರದ ಬಗ್ಗೆ ಯಶ್‌ ಮಾತು

1-a-ewww

C. P. Yogeshwara; ಎಲ್ಲ ಮರೆತು ಬೇಷರತ್ತಾಗಿ ‘ಕೈ’ ಹಿಡಿದಿದ್ದಾರೆ: ಡಿ.ಕೆ.ಶಿವಕುಮಾರ್

Americaದ ಮೇಲೆ ರಷ್ಯಾ,ಇರಾನ್‌, ಚೀನಾ ಪ್ರತೀಕಾರ?ಅಮೆರಿಕದ ನಿದ್ದೆಗೆಡಿಸಿದ ಗುಪ್ತಚರ ಮಾಹಿತಿ!

Americaದ ಮೇಲೆ ರಷ್ಯಾ,ಇರಾನ್‌, ಚೀನಾ ಪ್ರತೀಕಾರ?ಅಮೆರಿಕದ ನಿದ್ದೆಗೆಡಿಸಿದ ಗುಪ್ತಚರ ಮಾಹಿತಿ!

1-aaaaa

Jharkhand polls; ಜೆಎಂಎಂ 35 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

1—a-deee

Maharashtra polls; ಗುವಾಹಟಿಯ ಕಾಮಾಖ್ಯ ದೇವಿ ದರ್ಶನ ಪಡೆದ ಸಿಎಂ ಶಿಂಧೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-a-ewww

C. P. Yogeshwara; ಎಲ್ಲ ಮರೆತು ಬೇಷರತ್ತಾಗಿ ‘ಕೈ’ ಹಿಡಿದಿದ್ದಾರೆ: ಡಿ.ಕೆ.ಶಿವಕುಮಾರ್

1-a–a-yogi

C.P.Yogeshwar ಕಾಂಗ್ರೆಸ್ ಸೇರ್ಪಡೆ ಖಚಿತ: ಸಿದ್ದರಾಮಯ್ಯ ಭೇಟಿಯಾಗಿ ಮಹತ್ವದ ಮಾತುಕತೆ

1-a-rain-sss

Bengaluru Rains;ಇಂದು ಶಾಲೆಗಳಿಗೆ ರಜೆ ಘೋಷಿಸಿದ ಡಿಸಿ: ಖಾಸಗಿ ಶಾಲೆಗಳ ಒಕ್ಕೂಟ ವಿರೋಧ

1-a-bg

Bengaluru ;6 ಅಂತಸ್ತಿನ ಕಟ್ಟಡ ಕುಸಿತ ಪ್ರಕರಣ: ಸಾ*ವಿನ ಸಂಖ್ಯೆ 5 ಕ್ಕೇರಿಕೆ

Bengaluru: ಕಂಬಳ ಪ್ರಶ್ನಿಸಿ ಅರ್ಜಿ ಇಂದು ಹೈಕೋರ್ಟ್‌ನಲ್ಲಿ ವಿಚಾರಣೆ

Bengaluru: ಕಂಬಳ ಪ್ರಶ್ನಿಸಿ ಅರ್ಜಿ ಇಂದು ಹೈಕೋರ್ಟ್‌ನಲ್ಲಿ ವಿಚಾರಣೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

3

Kollywood: ಮಾಜಿ ಆಳಿಯನ ಜತೆ ರಜಿನಿ ನಟನೆ? ಒಂದೇ ಚಿತ್ರದಲ್ಲಿ ಧನುಷ್ – ರಜಿನಿಕಾಂತ್?

3-ptr

Puttur: ವಿಹಿಂಪ ಜಿಲ್ಲಾ ಕಾರ್ಯಾಲಯದ ಭೂಮಿ‌‌ ಪೂಜೆ; ಅರುಣ್ ಪುತ್ತಿಲ ಆಗಮನಕ್ಕೆ ವಿರೋಧ

2

Actor Yash: ‘ರಾಮಾಯಣʼಕ್ಕೆ ನಾನೇ ʼರಾವಣʼ.. ಬಿಗ್‌ ಬಜೆಟ್‌ ಚಿತ್ರದ ಬಗ್ಗೆ ಯಶ್‌ ಮಾತು

1-a-ewww

C. P. Yogeshwara; ಎಲ್ಲ ಮರೆತು ಬೇಷರತ್ತಾಗಿ ‘ಕೈ’ ಹಿಡಿದಿದ್ದಾರೆ: ಡಿ.ಕೆ.ಶಿವಕುಮಾರ್

Americaದ ಮೇಲೆ ರಷ್ಯಾ,ಇರಾನ್‌, ಚೀನಾ ಪ್ರತೀಕಾರ?ಅಮೆರಿಕದ ನಿದ್ದೆಗೆಡಿಸಿದ ಗುಪ್ತಚರ ಮಾಹಿತಿ!

Americaದ ಮೇಲೆ ರಷ್ಯಾ,ಇರಾನ್‌, ಚೀನಾ ಪ್ರತೀಕಾರ?ಅಮೆರಿಕದ ನಿದ್ದೆಗೆಡಿಸಿದ ಗುಪ್ತಚರ ಮಾಹಿತಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.