Kollywood: ಮಾಜಿ ಆಳಿಯನ ಜತೆ ರಜಿನಿ ನಟನೆ? ಒಂದೇ ಚಿತ್ರದಲ್ಲಿ ಧನುಷ್ – ರಜಿನಿಕಾಂತ್?
Team Udayavani, Oct 23, 2024, 12:44 PM IST
ಚೆನ್ನೈ: ಸೂಪರ್ ಸ್ಟಾರ್ ರಜಿನಿಕಾಂತ್ (Rajinikanth) ಅವರ ವಯಸ್ಸು 70 ದಾಟಿದರೂ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
‘ಜೈಲರ್’ ಬಳಿಕ ಇತ್ತೀಚೆಗೆ ಬಂದ ‘ವೆಟ್ಟೈಯಾನ್’ ನಲ್ಲೂ ರಜಿನಿ ಕಮಾಲ್ ಮಾಡಿದ್ದಾರೆ. ಎನ್ ಕೌಂಟರ್ ಸ್ಪೆಷೆಲಿಸ್ಟ್ ಆಗಿ ರಜಿನಿ ಬಿಗ್ ಸ್ಕ್ರೀನ್ ನಲ್ಲಿ ಮಿಂಚಿದ್ದಾರೆ. ಸಿನಿಮಾ 200 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.
ರಜಿನಿಕಾಂತ್ ಮುಂದೆ ಲೋಕೇಶ್ ಕನಕರಾಜ್ (Lokesh Kanagaraj) ಅವರ ‘ಕೂಲಿ’ (Coolie) ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರೆ. ಇದಾದ ಬಳಿಕ ರಜಿನಿಕಾಂತ್ ನೆಲ್ಸನ್ ದಿಲೀಪ್ ಕುಮಾರ್ (Nelson Dilipkumar) ಅವರ ‘ಜೈಲರ್ -2’ (Jailer-2) ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಇದೀಗ ಈ ಸಿನಿಮಾದ ಬಗೆಗಿನ ಮಾತೊಂದು ಕಾಲಿವುಡ್ ನಲ್ಲಿ ಹರಿದಾಡುತ್ತಿದೆ. ರಜಿನಿಕಾಂತ್ ಅವರ ಮಾಜಿ ಆಳಿಯ ಧನುಷ್ (Dhanush) ‘ಜೈಲರ್-2’ ನಲ್ಲಿ ನಟಿಸಲಿದ್ದಾರೆ ಎನ್ನುವ ಮಾತು ಕಾಲಿವುಡ್ ವಲಯದಲ್ಲಿ ಕೇಳಿ ಬರುತ್ತಿದೆ.
ರಜಿನಿಕಾಂತ್ ಹಾಗೂ ಧನುಷ್ ಇದುವರೆಗೆ ಜತೆಯಾಗಿ ಯಾವ ಸಿನಿಮಾದಲ್ಲೂ ಕಾಣಿಸಿಕೊಂಡಿಲ. ಇಬ್ಬರಿಗೂ ತಮ್ಮದೇ ಆದ ದೊಡ್ಡ ಫ್ಯಾನ್ ಫಾಲೋವಿಂಗ್ ಇದೆ. ಇಬ್ಬರು ಜತೆಯಾಗಿ ನಟಿಸಬೇಕೆನ್ನುವ ಆಸೆ ಅಭಿಮಾನಿಗಳದು. ಈ ನಿಟ್ಟಿನಲ್ಲಿ ‘ಜೈಲರ್-2’ ನಲ್ಲಿ ಧನುಷ್ ಅವರಿಗಾಗಿ ನೆಲ್ಸನ್ ಸ್ಪೆಷಲ್ ರೋಲ್ ವೊಂದನ್ನು ಬರೆದಿದ್ದಾರೆ ಎನ್ನಲಾಗಿದೆ. ಇದನ್ನು ರಜಿನಿಕಾಂತ್ ಒಪ್ಪಿದರೆ ಸಿನಿಮಾ ಅಧಿಕೃತವಾಗಿ ಘೋಷಣೆ ಆಗಲಿದೆ ಎನ್ನಲಾಗಿದೆ.
ರಜಿನಿಕಾಂತ್ ಪುತ್ರಿ ಐಶ್ವರ್ಯಾ ಹಾಗೂ ಧನುಷ್ ಪರಸ್ಪರ ಒಪ್ಪಿ ವಿಚ್ಛೇದನ ನೀಡಲು ಮುಂದಾಗಿದ್ದಾರೆ. ಆದರೆ ಇಬ್ಬರು ಮತ್ತೆ ಮುನಿಸು ಮರೆತು ಒಂದಾಗುತ್ತಾರೆ ಎಂದು ಹೇಳಲಾಗುತ್ತಿದೆ. ಏಕೆಂದರೆ ಇತ್ತೀಚೆಗೆ ಇಬ್ಬರು ವಿಚ್ಚೇದನ ಸಂಬಂಧದ ಅರ್ಜಿ ವಿಚಾರಣೆಗೆ ಗೈರಾಗಿದ್ದರು.
ಸದ್ಯ ಧನುಷ್ ‘ರಾಯನ್’ ನಿಂದ ಬಿಗ್ ಹಿಟ್ ಪಡೆದು, ‘ಕುಬೇರ’ ಹಾಗೂ ‘ಇಡ್ಲಿ ಕಡೈ’ ಎಂಬ ಸಿನಿಮಾದಲ್ಲಿ ಮುಂದೆ ಕಾಣಿಸಿಕೊಳ್ಳಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
The Raja Saab: ಹುಟ್ಟುಹಬ್ಬಕ್ಕೆ ʼರಾಜಾಸಾಬ್ʼ ಆಗಿ ಸಿಂಹಾಸನದಲ್ಲಿ ಕೂತ ರೆಬೆಲ್ ಸ್ಟಾರ್
Toxic Movie: ‘ಟಾಕ್ಸಿಕ್ʼ ರಿಲೀಸ್ ಡೇಟ್ ಮುಂದೂಡಿಕೆ ಅಧಿಕೃತ; ಯಶ್ ಹೇಳಿದ್ದೇನು?
Actor Yash: ‘ಕೆಜಿಎಫ್-3ʼ ಬಗ್ಗೆ ಯಶ್ ಕೊಟ್ರು ಬಿಗ್ ಅಪ್ಡೇಟ್; ಯಾವಾಗ ಬರಲಿದೆ ಸಿನಿಮಾ?
Actor Yash: ‘ರಾಮಾಯಣʼಕ್ಕೆ ನಾನೇ ʼರಾವಣʼ.. ಬಿಗ್ ಬಜೆಟ್ ಚಿತ್ರದ ಬಗ್ಗೆ ಯಶ್ ಮಾತು
Tollywood: ‘ಪುಷ್ಪ-2ʼ ಐಟಂ ಸಾಂಗ್ನಲ್ಲಿ ಸೊಂಟ ಬಳುಕಿಸಲಿದ್ದಾರೆ ʼಸ್ತ್ರೀ-2ʼ ನಟಿ
MUST WATCH
ಹೊಸ ಸೇರ್ಪಡೆ
Mangaluru: ಪ್ಲಾಸ್ಟಿಕ್ ಸದ್ಬಳಕೆಯಿಂದ ದುಡ್ಡೂ ಮಾಡಬಹುದು!
The Raja Saab: ಹುಟ್ಟುಹಬ್ಬಕ್ಕೆ ʼರಾಜಾಸಾಬ್ʼ ಆಗಿ ಸಿಂಹಾಸನದಲ್ಲಿ ಕೂತ ರೆಬೆಲ್ ಸ್ಟಾರ್
Belthangady: ಕಡೆಗೂ ಕಜಕ್ಕೆ ಶಾಲೆಯವರೆಗೆ ಬಂತು ಸರಕಾರಿ ಬಸ್
Mudipinadka-ಸುಳ್ಯಪದವು: ರಸ್ತೆ ಹೊಂಡ ತಪ್ಪಿಸುವುದೇ ಸಾಹಸ!
Belagavi: ಕ್ರಾಂತಿಯ ನೆಲ ಕಿತ್ತೂರಿನಲ್ಲಿ 200ನೇ ವಿಜಯೋತ್ಸವಕ್ಕೆ ಅದ್ಧೂರಿ ಚಾಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.