Mulki: ಆರ್‌ಟಿಎ ಉಪಕಚೇರಿ ಬೇಕು; ತಾಲೂಕು ರಚನೆಯಾಗಿ 3ವರ್ಷ ದಾಟಿದರೂ ಜನರಿಗೆ ಸಿಗದ ವ್ಯವಸ್ಥೆ

ವಾರಕ್ಕೆ 400 ಮಂದಿ ಪರೀಕ್ಷೆಗೆ ಹಾಜರು; ದಾಖಲೆಗೆ ಮಂಗಳೂರಿಗೇ ಹೋಗಬೇಕು

Team Udayavani, Oct 23, 2024, 5:02 PM IST

8

ಗಾಂಧಿ ಮೈದಾನದಲ್ಲಿ ನಡೆಯುವ ಪರವಾನಿಗೆಗಾಗಿ ಪರೀಕ್ಷೆ ನಿಂತಿರುವ ವಾಹನಗಳು.

ಮೂಲ್ಕಿ: ಮೂಲ್ಕಿ ತಾಲೂಕು ರಚನೆಯಾಗಿ ಮೂರು ವರ್ಷ ದಾಟಿದರೂ ಮೂಲ ಸೌಕರ್ಯಗಳು ಇನ್ನೂ ಸುಧಾರಣೆಯಾಗಿಲ್ಲ. ಇಲ್ಲಿಗೆ ಬರಬೇಕಾದ ಅತೀ ಮುಖ್ಯವಾದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಉಪ ಕಚೇರಿ ಇನ್ನೂ ಕನಸಾಗಿಯೇ ಉಳಿದಿದೆ. ಮೂಲ್ಕಿಯಲ್ಲಿ ಚಾಲನಾ ಪರವಾನಿಗೆ ಪರೀಕ್ಷೆ ನಡೆಯುತ್ತದಾದರೂ ಉಳಿದೆಲ್ಲ ದಾಖಲೆಗಳಿಗೆ ಮಂಗಳೂರನ್ನೇ ಅವಲಂಬಿಸಬೇಕು. ಹೀಗಾಗಿ ಇಲ್ಲಿ ಮಧ್ಯವರ್ತಿಗಳನ್ನೇ ನೆಚ್ಚಿಕೊಳ್ಳಬೇಕಾದ ಪರಿಸ್ಥಿತಿ ಇದೆ.

ಕಳೆದ ಐದಾರು ವರ್ಷಗಳಿಂದ ಮೂಲ್ಕಿ ಗಾಂಧಿ ಮೈದಾನದಲ್ಲಿ ಪ್ರತೀ ಶುಕ್ರವಾರ ಚಾಲನಾ ಪರವಾನಿಗೆ ಪರೀಕ್ಷೆ ನಡೆಯುತ್ತದೆ. ಮಂಗಳೂರು ಆರ್‌ಟಿಓ ಕಚೇರಿಯಿಂದ ಇಲ್ಲಿಗೆ ಒಬ್ಬ ಬ್ರೇಕ್‌ ಇನ್‌ಸ್ಪೆಕ್ಟರ್‌ ಹಾಗೂ ಸಿಬಂದಿ ಆಗಮಿಸುತ್ತಾರೆ. ಪರೀಕ್ಷೆಯ ಜತೆಗೆ ಇಲ್ಲಿ ಕೆಲವು ಸೇವೆಗಳನ್ನು ನೀಡುವುದು ಉದ್ದೇಶ.

300-400 ಮಂದಿ ಪರೀಕ್ಷೆಗೆ
ಪ್ರತೀ ವಾರವೂ ಇಲ್ಲಿಗೆ 300-400 ಮಂದಿ ಪರೀಕ್ಷೆಗೆ ಹಾಜರಾಗುತ್ತಾರೆ. ಆದರೆ, ಇಲ್ಲಿ ಚಾಲನಾ ಪರವಾನಿಗೆ ಪರೀಕ್ಷೆ ಮಾತ್ರ ನಡೆಯುತ್ತಿದೆ. ಉಳಿದ ಕೆಲವು ಕೆಲಸ ಗಳಿಗೆ ಇಲ್ಲಿನ ಜನರು ಮತ್ತೆ ಮಂಗಳೂರು ಕಚೇರಿಗೆ ಹೋಗುವುದು ಅನಿವಾರ್ಯವಾಗಿದೆ. ಇಲ್ಲವೇ ಮಧ್ಯವರ್ತಿಗಳ ಮೂಲಕ ಸೇವೆ ಪಡೆಯಬೇಕಾಗಿದೆ.

ಕಾಯುವುದೇ ಕೆಲಸವಾಗಿದೆ
ಆರ್‌ಟಿಒ ಕೆಲಸಗಳಿಗೆ ಬಹಳಷ್ಟು ಜನರು ಮೈದಾನದಲ್ಲಿ ಗಂಟೆಗಟ್ಟಲೆ ಕಾದು ಕುಳಿತರೂ ತಮ್ಮ ಎಲ್ಲ ಕೆಲಸ ಪೂರ್ತಿಯಾಗದೆ ಮಂಗಳೂರಿನಲ್ಲಿ ಇಲಾಖೆಯ ಸೇವೆಯನ್ನು ಪಡೆಯು ವಂತಾಗಿದೆ. ಜನರ ಅಗತ್ಯ ಮತ್ತು ತಾಲೂಕು ಕೇಂದ್ರದ ಸವಲತ್ತು ಈ ಎರಡನ್ನು ಪರಿಗಣಿಸಿ ಆರ್‌ಟಿಓ ಕಚೇರಿಯನ್ನು ಶೀಘ್ರವಾಗಿ ಮೂಲ್ಕಿ ಯಲ್ಲಿ ಸ್ಥಾಪಿಸಬೇಕೆಂಬುದು ಜನರ ಬೇಡಿಕೆಯಾಗಿದೆ.

ಪ್ರಯತ್ನ ಮುಂದುವರಿದಿದೆ
ನನ್ನ ಮೊದಲ ಅವಧಿಯಲ್ಲಿ ನಮ್ಮದೇ ಪಕ್ಷದ ಸರಕಾರವಿತ್ತು. ಎಲ್ಲ ಕಡೆ ಅಭಿವೃದ್ಧಿ ಕಾರ್ಯ ನಡೆಸಿದ್ದೇನೆ. ಈಗ ಮೂಲ್ಕಿ ತಾಲೂಕು ಕಟ್ಟಡ ಕಾಮಗಾರಿಯೂ ನನ್ನ ನಿರೀಕ್ಷೆಯ ವೇಗದಲ್ಲಿ ನಡೆಯುತ್ತಿಲ್ಲ. ಇದಕ್ಕೆ ಕಾರಣ ಸರಕಾರದಿಂದ ಯಾವುದೇ ಅನುದಾನ ಮತ್ತು ಸಹಕಾರ ಸಿಗದಿರುವುದು. ಸಾರಿಗೆ ಇಲಾಖೆಯ ವಾರದ ಕ್ಯಾಂಪ್‌ನಿಂದ ಜನರಿಗೆ ಪೂರ್ಣ ಪ್ರಯೋಜನ ಸಿಗುತ್ತಿಲ್ಲ ಎಂಬುದು ನನ್ನ ಗಮನಕ್ಕೆ ಬಂದಿದೆ. ಈ ವಿಚಾರದಲ್ಲಿ ಪ್ರಯತ್ನ ಮುಂದುವರಿಸುತ್ತೇನೆ.
-ಉಮಾನಾಥ ಕೋಟ್ಯಾನ್‌,ಶಾಸಕರು

ಮೊದಲಿನಿಂದಲೂ ಇತ್ತು
ಮೂಲ್ಕಿಗೆ ಆರ್‌ಟಿಒ ಸಂಬಂಧಿತ ಚಟುವಟಿಕೆಗಳ ತುರ್ತು ತಾಲೂಕು ರಚನೆಗೂ ಮೊದಲೇ ಇತ್ತು. ಇದನ್ನು ಪರಿಗಣಿಸಿದ್ದ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದ ಕೃಷ್ಣ ಪಾಲೇಮಾರ್‌ ಅವರು ಗಾಂಧಿ ಮೈದಾನದಲ್ಲಿ ಚಾಲನಾ ಪರವಾನಿಗೆ ಪರೀಕ್ಷೆ ವ್ಯವಸ್ಥೆಗೆ ಚಾಲನೆ ನೀಡಿದ್ದರು. ಮೂಲ್ಕಿ ತಾಲೂಕು ಆಗುವ ಮೊದಲೇ ಇದ್ದ ವ್ಯವಸ್ಥೆ ಈಗಲೂ ಮುಂದುವರಿದಿದೆ. ಈಗಲೂ ಕೂಡಾ ವಾರಕ್ಕೊಂದು ದಿನದ ಸೇವೆ ಮಾತ್ರ ಲಭ್ಯವಿದೆಯೇ ಹೊರತು ಉಪ ಕಚೇರಿ ನಿರ್ಮಾಣ ಕಾರ್ಯವಾಗಿಲ್ಲ.

 -ಸರ್ವೋತ್ತಮ ಅಂಚನ್‌

ಟಾಪ್ ನ್ಯೂಸ್

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vamanjoor Thiruvailuguthu Sankupoonja – Devupoonja Jodukare Kambala Result

Kambala Result: ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ -ದೇವುಪೂಂಜ ಜೋಡುಕರೆ ಕಂಬಳ ಫಲಿತಾಂಶ

Congress: ದಲಿತ ಸಮಾವೇಶ ಯಾವ ರೀತಿ ಎಂಬ ಬಗ್ಗೆಯಷ್ಟೇ ಚರ್ಚೆ: ದಿನೇಶ್‌ ಗುಂಡೂರಾವ್‌

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

16

Uv Fusion: ಪೆನ್ನಿಗೊಂದು ಕಥೆ

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.