Karnataka ವಿದ್ಯುತ್‌ ಪ್ರಸರಣ ನಿಗಮದಿಂದ ಪವರ್‌ ಮ್ಯಾನ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

ಹೊರ ಗುತ್ತಿಗೆ ಲೈನ್‌ಮ್ಯಾನ್‌ಗಳು ಅತಂತ್ರ; ಹಲವು ವರ್ಷಗಳ ಸೇವೆಗೆ ಬೆಲೆ ಇಲ್ಲ; ವಯೋಮಿತಿ, ವಿದ್ಯಾರ್ಹತೆಯಲ್ಲೂ ಹೊಡೆತ

Team Udayavani, Oct 23, 2024, 5:12 PM IST

9

ಬೆಳ್ಮಣ್‌: ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತದಲ್ಲಿ 411 ಕಿರಿಯ ಸ್ಟೇಷನ್‌ ಪರಿಚಾರಕರು, 81 ಕಿರಿಯ ಪವರ್‌ ಮ್ಯಾನ್‌ ಹುದ್ದೆಗಳು ಹಾಗೂ ವಿವಿಧ ವಿದ್ಯುತ್‌ ಸರಬರಾಜು ಕಂಪನಿಗಳಲ್ಲಿ 2,268 ಕಿರಿಯ ಪವರ್‌ಮ್ಯಾನ್‌ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್‌ ಮೂಲಕ ಆರ್ಜಿ ಆಹ್ವಾನಿಸಲಾಗಿದೆ. ಇದರಿಂದಾಗಿ ಬಹು ವರ್ಷಗಳಿಂದ ನೇಮಕಾತಿಯ ನಿರೀಕ್ಷೆಯಲ್ಲಿದ್ದ ಹೊರ ಗುತ್ತಿಗೆ ಲೈನ್‌ಮ್ಯಾನ್‌ಗಳು ಮತ್ತೆ ನಿರಾಶರಾಗಿದ್ದಾರೆ.

ಬಹಳಷ್ಟು ವರ್ಷಗಳಿಂದ ಒಳ ಗುತ್ತಿಗೆ ಮೂಲಕ ಸೇವೆ ಸಲ್ಲಿಸಿದ ಇವರು ಬಳಿಕ ಇಲಾಖೆಯ ಭರವಸೆಗಳನ್ನು ನಂಬಿ ಹೊರಗುತ್ತಿಗೆಗೆ ಒಳಗಾದರು. ಮೆಸ್ಕಾಂ ಇಲಾಖೆಯಲ್ಲಿ ಅತೀ ಕಡಿಮೆ ಸಂಬಳಕ್ಕೆ ದುಡಿಯುತ್ತಾ ಮಳೆ ಬಿಸಿಲೆನ್ನದೆ ವಿದ್ಯುತ್‌ ಕಂಬಗಳನ್ನೇರುವ ಕಾಯಕದಿಂದ ಹಿಡಿದು ತೊಂದರೆ ಕೊಡುವ ಗಿಡಗಂಟಿಗಳನ್ನು ರಾತ್ರಿ ಹಗಲು ಕಡಿಯುತ್ತಿದ್ದ ಈ ಶ್ರಮ ಜೀವಿಗಳಿಗೆ ಪವರ್‌ಮ್ಯಾನ್‌ ಹುದ್ದೆ ಮತ್ತೆ ಮರೀಚಿಕೆಯಾಗಿದೆ.

ಹಲವಾರು ವರ್ಷಗಳಿಂದ ದುಡಿಯುತ್ತಿದ್ದ ತಮಗೆ ಸರಕಾರದ ನೇಮಕಾತಿಯ ವೇಳೆ ವಿಶೇಷ ಅವಕಾಶ ದೊರೆಯಬಹುದು, ಅಥವಾ ತಮ್ಮ ನೇಮಕಾತಿಯನ್ನೇ ಖಾಯಂಗೊಳಿಸಬಹುದು ಎನ್ನುವ ದೂರದ ಆಸೆಯೊಂದು ಇತ್ತು. ಆದರೆ ಈಗ ಅದಕ್ಕೆ ತಣ್ಣೀರು ಬಿದ್ದಂತಾಗಿದೆ.

ಪ್ರಾಯ ಮಿತಿಯೂ ತೊಡಕು
ಈಗಿನ ಹೊಸ ನೇಮಕಾತಿಯಲ್ಲಿ ಅರ್ಜಿದಾರರಿಗೆ 38 ವರ್ಷದ ಪ್ರಾಯ ಮಿತಿಯನ್ನೂ ನಿಗದಿಪಡಿಸಲಾಗಿದೆ. ಸಣ್ಣ ವಯಸ್ಸಿನಿಂದ ಈ ಕಾಯಕ ನಡೆಸಿಕೊಂಡು ಬಂದು ಹುದ್ದೆಯ ಆಶೆಯಿಂದ ಇನ್ನೂ ಲೈಟ್‌ ಕಂಬವನ್ನೇ ಸುತ್ತುತ್ತಿರುವ ಈಗ 40 ದಾಟಿರುವ ಲೈನ್‌ಮ್ಯಾನ್‌ಗಳು ಈ ಆದೇಶ ನೋಡಿ ನಿರಾಶರಾಗಿದ್ದಾರೆ. ಜತೆಗೆ ಎಸೆಸೆಲ್ಸಿ ವಿದ್ಯಾಭ್ಯಾಸ ಕಡ್ಡಾಯವೆಂಬ ನಿಯಮವೂ ಅವರಿಗೆ ತೊಡಕಾಗಿದೆ.

ಇಂಧನ ಸಚಿವರಿಗೆ ಮನವಿ ನೀಡಲಾಗಿತ್ತು
ಈಗಾಗಲೇ ಕಾರ್ಕಳದ ವಿವಿಧೆಡೆ ಸುಮಾರು 48 ಮಂದಿ ಹೊರಗುತ್ತಿಗೆಯಡಿ ದುಡಿಯುತ್ತಿದ್ದಾರೆ. ಇಂತಹ ಹಲವಾರು ಲೈನ್‌ಮ್ಯಾನ್‌ಗಳು ಈ ಹಿಂದಿನ ಇಂಧನ ಸಚಿವ ವಿ.ಸುನಿಲ್‌ ಕುಮಾರ್‌ ಸಹಿತ ಹಲವರಲ್ಲಿ ಖಾಯಂಮಾತಿಗೆ ಮನವಿ ಮಾಡಿದ್ದರು. ಇದೀಗ ಹುದ್ದೆಗಳಿಗೆ ಅರ್ಜಿ ಆಹ್ವಾನ ಬಂದಿದ್ದು ಪ್ರಾಯ ಮಿತಿ ಹಾಗೂ ಎಸ್‌ಎಸ್‌ಎಲ್‌ಸಿ ಅರ್ಹತೆ ಈ ಆಕಾಂಕ್ಷಿಗಳಿಗೆ ಸಂಕಷ್ಟ ತಂದೊಡ್ಡಿದೆ. ಇದೀಗ ಇಂಧನ ಸಚಿವ ಜಾರ್ಜ್‌ ಅವರಿಗೆ ಹೊರ ಗುತ್ತಿಗೆದಾರರರನ್ನು ಶಾಶ್ವತ ಲೈನ್‌ಮ್ಯಾನ್‌ಗಳೆಂದು ಪರಿಗಣಿಸುವಂತೆ ಮನವಿ ಮಾಡಲಾಗುವುದು ಎಂದು ಲೈನ್‌ಮ್ಯಾನ್‌ಒಬ್ಬರು ತಿಳಿಸಿದ್ದಾರೆ.

ನಮ್ಮ ಸೇವೆಗೆ ಬೆಲೆ ಇಲ್ಲವೇ?
ಬಹಳಷ್ಟು ವರ್ಷಗಳಿಂದ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಮ್ಮನ್ನು ಕಡೆಗಣಿಸುತ್ತಿರುವ ಬಗ್ಗೆ ಬೇಸರವಿದೆ. ನಾವು ಇಷ್ಟು ವರ್ಷ ಮಾಡಿದ ಸೇವೆಗೆ ಬೆಲೆಯೇ ಇಲ್ಲದಂತಾಗಿ ಹೋಗಿದೆ. ಹೊಸ ನೇಮಕಾತಿ ವೇಳೆ ನಮ್ಮನ್ನು ಪರಿಗಣಿಸಬಹುದು ಎಂಬ ಆಸೆ ಇತ್ತು. ಆದರೆ, ನಮಗಾಗಿ ಯಾವುದೇ ವಿಶೇಷ ಅವಕಾಶ ನೀಡದೆ ಇರುವುದು ನೋವು ತಂದಿದೆ.
– ಒಬ್ಬರು ಲೈನ್‌ಮ್ಯಾನ್‌

ಹಳಬರೇ ಇದ್ದರೆ ಒಳಿತು
ಹೊರ ಗುತ್ತಿಗೆ ಉದ್ಯೋಗಿಗಳು ಶಾಶ್ವತವಾಗಿ ನಮ್ಮ ಜತೆ ಬಂದರೆ ಒಳ್ಳೆಯದು. ಅವರು ಸ್ಥಳೀಯರೇ ಆದ್ದರಿಂದ ವರ್ಗಾವಣೆಯ ಸಮಸ್ಯೆ ಇರುವುದಿಲ್ಲ. ಆದರೆ ಇದು ಸರಕಾರಿ ಮಟ್ಟದಿಂದಲೇ ಬದಲಾವಣೆ ಆಗಬೇಕಾದ ಪ್ರಕ್ರಿಯೆ.
-ನರಸಿಂಹ ಪಂಡಿತ್‌, ಎಕ್ಸಿಕ್ಯೂಟಿವ್‌ ಎಂಜಿನಿಯರ್‌ , ಕಾರ್ಕಳ ಮೆಸ್ಕಾಂ

-ಶರತ್‌ ಶೆಟ್ಟಿ ಮುಂಡ್ಕೂರು

ಟಾಪ್ ನ್ಯೂಸ್

ಬಸ್ ದ್ವಿಚಕ್ರ ವಾಹನ ನಡುವೆ ಭೀಕರ ಅಪಘಾತ: ಇಬ್ಬರು ಸ್ಥಳದಲ್ಲೇ ಮೃತ್ಯು, ಓರ್ವನಿಗೆ ಗಾಯ

ಬಸ್ ದ್ವಿಚಕ್ರ ವಾಹನ ನಡುವೆ ಭೀಕರ ಅಪಘಾತ: ಇಬ್ಬರು ಸ್ಥಳದಲ್ಲೇ ಮೃತ್ಯು, ಓರ್ವನಿಗೆ ಗಾಯ

Terror Attack: ಟರ್ಕಿಯಲ್ಲಿ ಭಯೋತ್ಪಾದಕ ದಾಳಿ… ಮೂವರು ಮೃತ್ಯು, ಹಲವರು ಗಂಭೀರ

Terror Attack: ಟರ್ಕಿಯಲ್ಲಿ ಭಯೋತ್ಪಾದಕ ದಾಳಿ… ಮೂವರು ಮೃತ್ಯು, ಹಲವರು ಗಂಭೀರ

Udupi: ಪ್ರಾಚ್ಯ ವಿದ್ಯಾ ಸಮ್ಮೇಳನ: ಮಂಗಳೂರಿಗೆ ಆಗಮಿಸಿದ ಬಾಬಾ ರಾಮದೇವ್

Udupi: ಪ್ರಾಚ್ಯ ವಿದ್ಯಾ ಸಮ್ಮೇಳನ: ಮಂಗಳೂರಿಗೆ ಆಗಮಿಸಿದ ಬಾಬಾ ರಾಮದೇವ್

Mandya1

Mandya: ಸಾಹಿತ್ಯ ಸಮ್ಮೇಳನ ಸಂಭ್ರಮಕ್ಕೆ ಕೊರತೆಯಾಗದಂತೆ ಮಿತಿಯಲ್ಲಿ ಖರ್ಚು ಮಾಡಿ: ಸಚಿವ

Wedding Day: ಶಬಾನಾ ಆಜ್ಮಿ ವರಿಸುವಾಗ ಜಾವೇದ್‌ ನಶೆಯಲ್ಲಿದ್ದರು… ಅನ್ನು ಕಪೂರ್‌

Wedding Day: ಶಬಾನಾ ಆಜ್ಮಿ ವರಿಸುವಾಗ ಜಾವೇದ್‌ ನಶೆಯಲ್ಲಿದ್ದರು… ಅನ್ನು ಕಪೂರ್‌

Udupi: ಅ.24-26; ಪ್ರಾಚ್ಯವಿದ್ಯಾ ಸಮ್ಮೇಳನದಲ್ಲಿ ಬಾಬಾ ರಾಮ್‌ದೇವ್‌ರಿಂದ ಯೋಗಾಭ್ಯಾಸ

Udupi: ಅ.24-26; ಪ್ರಾಚ್ಯವಿದ್ಯಾ ಸಮ್ಮೇಳನದಲ್ಲಿ ಬಾಬಾ ರಾಮ್‌ದೇವ್‌ರಿಂದ ಯೋಗಾಭ್ಯಾಸ

Bidar: ಕನ್ನಡ ನಾಮಫಲಕ: ಆಡಳಿತದಿಂದ ಜಾಗೃತಿ ಜಾಥಾ

Bidar: ಅಂಗಡಿ ಮುಂಗಟ್ಟುಗಳ ಮುಂದೆ ಕನ್ನಡ ನಾಮಫಲಕ: ಆಡಳಿತದಿಂದ ಜಾಗೃತಿ ಜಾಥಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Mukka: ಈಜಾಡುತ್ತಿದ್ದ ಯುವಕ ಸಮುದ್ರಪಾಲು

accident

Udupi: ದ್ವಿಚಕ್ರ ವಾಹನ ಢಿಕ್ಕಿ; ಮಹಿಳೆಗೆ ಗಾಯ

Udupi: ಪ್ರಾಚ್ಯ ವಿದ್ಯಾ ಸಮ್ಮೇಳನ: ಮಂಗಳೂರಿಗೆ ಆಗಮಿಸಿದ ಬಾಬಾ ರಾಮದೇವ್

Udupi: ಪ್ರಾಚ್ಯ ವಿದ್ಯಾ ಸಮ್ಮೇಳನ: ಮಂಗಳೂರಿಗೆ ಆಗಮಿಸಿದ ಬಾಬಾ ರಾಮದೇವ್

Udupi: ಅ.24-26; ಪ್ರಾಚ್ಯವಿದ್ಯಾ ಸಮ್ಮೇಳನದಲ್ಲಿ ಬಾಬಾ ರಾಮ್‌ದೇವ್‌ರಿಂದ ಯೋಗಾಭ್ಯಾಸ

Udupi: ಅ.24-26; ಪ್ರಾಚ್ಯವಿದ್ಯಾ ಸಮ್ಮೇಳನದಲ್ಲಿ ಬಾಬಾ ರಾಮ್‌ದೇವ್‌ರಿಂದ ಯೋಗಾಭ್ಯಾಸ

14

Katpadi – ಶಿರ್ವ: ರಸ್ತೆ ಗುಂಡಿಗೆ ತೇಪೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

ಬಸ್ ದ್ವಿಚಕ್ರ ವಾಹನ ನಡುವೆ ಭೀಕರ ಅಪಘಾತ: ಇಬ್ಬರು ಸ್ಥಳದಲ್ಲೇ ಮೃತ್ಯು, ಓರ್ವನಿಗೆ ಗಾಯ

ಬಸ್ ದ್ವಿಚಕ್ರ ವಾಹನ ನಡುವೆ ಭೀಕರ ಅಪಘಾತ: ಇಬ್ಬರು ಸ್ಥಳದಲ್ಲೇ ಮೃತ್ಯು, ಓರ್ವನಿಗೆ ಗಾಯ

5

Mukka: ಈಜಾಡುತ್ತಿದ್ದ ಯುವಕ ಸಮುದ್ರಪಾಲು

Terror Attack: ಟರ್ಕಿಯಲ್ಲಿ ಭಯೋತ್ಪಾದಕ ದಾಳಿ… ಮೂವರು ಮೃತ್ಯು, ಹಲವರು ಗಂಭೀರ

Terror Attack: ಟರ್ಕಿಯಲ್ಲಿ ಭಯೋತ್ಪಾದಕ ದಾಳಿ… ಮೂವರು ಮೃತ್ಯು, ಹಲವರು ಗಂಭೀರ

accident

Udupi: ದ್ವಿಚಕ್ರ ವಾಹನ ಢಿಕ್ಕಿ; ಮಹಿಳೆಗೆ ಗಾಯ

Udupi: ಪ್ರಾಚ್ಯ ವಿದ್ಯಾ ಸಮ್ಮೇಳನ: ಮಂಗಳೂರಿಗೆ ಆಗಮಿಸಿದ ಬಾಬಾ ರಾಮದೇವ್

Udupi: ಪ್ರಾಚ್ಯ ವಿದ್ಯಾ ಸಮ್ಮೇಳನ: ಮಂಗಳೂರಿಗೆ ಆಗಮಿಸಿದ ಬಾಬಾ ರಾಮದೇವ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.