Udupi: ಇನ್ನೂ ಘೋಷಣೆಯಾಗದ ಗಾಂಧಿ ಗ್ರಾಮ ಪುರಸ್ಕಾರ

ಗಾಂಧಿ ಜಯಂತಿ ಕಳೆದು 20 ದಿನವಾದರೂ ಪ್ರಶಸ್ತಿ ಇಲ್ಲ; ಟಾಪರ್‌ ಪಟ್ಟಿಯಲ್ಲಿ 7 ಗ್ರಾ.ಪಂ.; ನೀತಿ ಸಂಹಿತೆ ಅಡ್ಡಿ.

Team Udayavani, Oct 23, 2024, 6:17 PM IST

12

ಉಡುಪಿ: ಪ್ರತೀ ವರ್ಷ ಗಾಂಧಿ ಜಯಂತಿ ಪ್ರಯುಕ್ತ ಕೊಡಮಾಡುವ ಗಾಂಧಿ ಗ್ರಾಮ ಪುರಸ್ಕಾರವನ್ನು ಈ ಬಾರಿ ವಿವಿಧ ಕಾರಣಗಳಿಂದ ಗ್ರಾ.ಪಂ.ಗಳಿಗೆ ಇನ್ನೂ ಘೋಷಿಸಿಲ್ಲ. ಗಾಂಧಿ ಜಯಂತಿ ಮುಗಿದು 20 ದಿನವಾದರೂ ಗಾಂಧಿ ಗ್ರಾಮ ಪುರಸ್ಕಾರ ಗ್ರಾ.ಪಂ.ಗಳಿಗೆ ಸಿಕ್ಕಿಲ್ಲ.

ಸರಕಾರದ ಈ ವಿಳಂಬ ನಿರ್ಧಾರದಿಂದ ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳತ್ತ ಗಮನ ಹರಿಸುತ್ತಿರುವ ಗ್ರಾ.ಪಂ.ಗಳು ನಿರಾಶೆ ಗೊಂಡಿವೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಇಲಾಖೆಯು ಈ ಸಂಬಂಧ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಗಾಂಧಿ ಗ್ರಾಮ ಪುರಸ್ಕಾರವು ರಾಜ್ಯದ ಗ್ರಾಮ ಪಂಚಾಯತ್‌ಗಳಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸರಕಾರ ನೀಡುವ ಪ್ರತಿಷ್ಠಿತ ಪ್ರಶಸ್ತಿಯಾಗಿದೆ. ಸ್ವತ್ಛತೆ, ಆರೋಗ್ಯ, ಶಿಕ್ಷಣ, ಕುಡಿಯುವ ನೀರು ಸರಬರಾಜು ಮುಂತಾದ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿರುವ ಗ್ರಾಮ ಪಂಚಾಯತ್‌ಗಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಈ ಪ್ರಶಸ್ತಿ ಐದು ಲಕ್ಷ ರೂ. ನಗದನ್ನು ಒಳಗೊಂಡಿರುತ್ತದೆ. ಗಾಂಧಿ ಗ್ರಾಮ ಪುರಸ್ಕಾರವು ಗ್ರಾ.ಪಂ.ಗಳಿಗೆ ಪ್ರೇರಣೆಯ ಸಂಕೇತವಾಗಿದೆ. ಈ ಪುರಸ್ಕಾರದ ವಿಳಂಬವು ಗ್ರಾಮೀಣ ಭಾಗದ ಅಭಿವೃದ್ಧಿ ಕಾರ್ಯಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಈ ನಿಟ್ಟಿನಲ್ಲಿ ಸರಕಾರವು ಬಗ್ಗೆ ಗಮನ ಹರಿಸಿ, ಶೀಘ್ರ ಕ್ರಮವಹಿಸಬೇಕು. ತಾಲೂಕು ಮಟ್ಟದ ಸಮಿತಿಗಳು ಎಲ್ಲ ಗ್ರಾ.ಪಂ.ಗಳಿಗೆ ಭೇಟಿ ನೀಡಿ ವರದಿ ತಯಾರಿಸಿ ಜಿಲ್ಲಾ ಮಟ್ಟದ ಸಮಿತಿ ಪರಿಶೀಲಿಸುತ್ತದೆ. ಜಿಲ್ಲಾ ಮಟ್ಟದ ಸಮಿತಿ ಅಂತಿಮವಾಗಿ ಮೌಲ್ಯಮಾಪನ ಮಾಡಿ ಅಂಕಗಳನ್ನು ನೀಡಿದೆ.

ಉಡುಪಿ ತಾಲೂಕಿನಲ್ಲಿ 80 ಬಡಗಬೆಟ್ಟು(359), ತೆಂಕ ನಿಡಿಯೂರು(254), ಕೆಮ್ಮಣ್ಣು (250), ಕಲ್ಯಾಣಪುರ(205), ಅಂಬಲಪಾಡಿ (194), ಕಾಪು ತಾಲೂಕಿನಲ್ಲಿ ಬಡಾ (256.50), ಬೆಳ್ಳೆ (231), ಮಜೂರು (215.50), ಕೋಟೆ (210.50), ಇನ್ನಂಜೆ (206.50), ಕುರ್ಕಾಲು (189), ಬ್ರಹ್ಮಾವರ ತಾಲೂಕಿನಲ್ಲಿ ಕಾಡೂರು (418), ಕೋಟತಟ್ಟು (364), ಆರೂರು (358), ಆವರ್ಸೆ (336), ಕೋಡಿ (222), ಕುಂದಾಪುರ ತಾಲೂಕಿನಲ್ಲಿ ತಲ್ಲೂರು (256.50), ಶಂಕರ್‌ನಾರಾಯಣ (192), ಕೊರ್ಗಿ (163), ಹಕ್ಲಾಡಿ (152), ಬೆಳೂರು (112), ಬೈಂದೂರು ತಾಲೂಕಿನಲ್ಲಿ ನಾಡ (253), ಕಿರಿಮಂಜೇಶ್ವರ (224), ಜಡ್ಕಲ್‌ (216), ನಾವುಂದ (194), ಕೆರ್ಗಾಲು (191), ಕಾರ್ಕಳ ಪಳ್ಳಿ (375), ಸಾಣೂರು(242), ಕುಕ್ಕುಂದೂರು (208), ಮಿಯಾರು(185.50), ನಲ್ಲೂರು(100), ಹೆಬ್ರಿ ಮುದ್ರಾಡಿ (361.50), ಮಡಾಮಕ್ಕಿ (360), ನಾಡಾ³ಲು (320), ವರಂಗ (250), ಕುಚ್ಚಾರು (198) ಗ್ರಾಮ ಪಂಚಾಯತ್‌ಗಳು ಅಂಕಗಳಿಸಿವೆ.

ವಿಳಂಬಕ್ಕೇನು ಕಾರಣ ?
ರಾಜ್ಯದ ವಿವಿಧ ಭಾಗದಲ್ಲಿ ವಿಧಾನಸಭೆ, ವಿಧಾನ ಪರಿಷತ್‌, ಗ್ರಾ. ಪಂ. ಉಪ ಚುನಾವಣೆ ಪ್ರಕ್ರಿಯೆ ಕೆಲವು ಕಡೆಗಳಲ್ಲಿ ನಡೆಯುತ್ತಿರುವುದರಿಂದ ನೀತಿ ಸಂಹಿತೆ ಉಲ್ಲಂಘನೆ ಅಡ್ಡಿಯಾದ ಹಿನ್ನೆಲೆಯಲ್ಲಿ ಗಾಂಧಿ ಗ್ರಾಮ ಪುರಸ್ಕಾರ ಪ್ರಕ್ರಿಯೆ ವಿಳಂಬವಾಗಿರುವ ಸಾಧ್ಯತೆಯಾಗಿದೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ ಅಥವಾ ಸರಕಾರದ ವಿವಿಧ ತಾಂತ್ರಿಕ ಸಮಸ್ಯೆಗಳಿಂದಲೂ ವಿಳಂಬವಾಗಿರಬಹುದು ಎನ್ನಲಾಗುತ್ತಿದೆ.

ಪ್ರಶಸ್ತಿ ರೇಸ್‌ನಲ್ಲಿ ಟಾಪ್‌ ಗ್ರಾ.ಪಂ.
– 80 ಬಡಗಬೆಟ್ಟು
– ಬಡಾ
– ಕಾಡೂರು
– ತಲ್ಲೂರು
– ನಾಡ
– ಪಳ್ಳಿ
– ಮುದ್ರಾಡಿ

ಸರಕಾರಕ್ಕೆ ವರದಿ
ಗಾಂಧಿ ಗ್ರಾಮ ಪುರಸ್ಕಾರ ನೀಡುವ ನಿಟ್ಟಿನಲ್ಲಿ ತಾಲೂಕು ಸಮಿತಿ, ಜಿಲ್ಲಾ ಸಮಿತಿ ವ್ಯವಸ್ಥಿತವಾಗಿ ಪರಿಶೀಲನೆ ನಡೆಸಿ ಮೌಲ್ಯಮಾಪನ ಮಾಡಿ ಅಂಕಗಳನ್ನು ನೀಡಿದೆ. ಈ ಬಗ್ಗೆ ಎಲ್ಲ ಗ್ರಾ. ಪಂ.ಗಳಿಗೆ ಪರಿಶೀಲಿಸಲು ಮುಕ್ತ ಅವಕಾಶ ನೀಡಲಾಗಿದ್ದು, ನೀತಿ ಸಂಹಿತೆ ಮುಗಿದ ಬಳಿಕ ಸರಕಾರಕ್ಕೆ ವರದಿ ಕಳುಹಿಸಲಾಗುತ್ತದೆ.
– ಪ್ರತೀಕ್‌ ಬಯಾಲ್‌, ಸಿಇಒ, ಉಡುಪಿ ಜಿ. ಪಂ.

-ಅವಿನ್‌ ಶೆಟ್ಟಿ

ಟಾಪ್ ನ್ಯೂಸ್

Actor: ದರ್ಶನ್‌ಗೆ ಡಿಸ್ಕ್ ಸಮಸ್ಯೆ: ಚಿಕಿತ್ಸೆ ಅನಿವಾರ್ಯ

Actor: ದರ್ಶನ್‌ಗೆ ಡಿಸ್ಕ್ ಸಮಸ್ಯೆ: ಚಿಕಿತ್ಸೆ ಅನಿವಾರ್ಯ

Test Match: ಇನ್ನಿಂಗ್ಸ್‌ ಸೋಲಿನಿಂದ ಪಾರಾದ ಬಾಂಗ್ಲಾ

Test Match: ಇನ್ನಿಂಗ್ಸ್‌ ಸೋಲಿನಿಂದ ಪಾರಾದ ಬಾಂಗ್ಲಾ

BBK11: ಬಿಗ್ ಮನೆಯಲ್ಲಿ ಜೋರಾಯಿತು ರಾಜಕೀಯ:ಪೋಸ್ಟರ್ ಅಂಟಿಸುವ ವಿಚಾರದಲ್ಲಿ ತಾರರಕ್ಕೇರಿದ ಜಗಳ

BBK11: ಬಿಗ್ ಮನೆಯಲ್ಲಿ ಜೋರಾಯಿತು ರಾಜಕೀಯ:ಪೋಸ್ಟರ್ ಅಂಟಿಸುವ ವಿಚಾರದಲ್ಲಿ ತಾರರಕ್ಕೇರಿದ ಜಗಳ

India vs Germany Hockey: ಭಾರತಕ್ಕೆ ಅವಳಿ ಸೋಲಿನ ಆಘಾತ

India vs Germany Hockey: ಭಾರತಕ್ಕೆ ಅವಳಿ ಸೋಲಿನ ಆಘಾತ

Ford Trophy: 103 ಎಸೆತಗಳಲ್ಲಿ ದ್ವಿಶತಕ… ಬೌಸ್‌ ದಾಖಲೆ

Ford Trophy: 103 ಎಸೆತಗಳಲ್ಲಿ ದ್ವಿಶತಕ… ಬೌಸ್‌ ದಾಖಲೆ

DKS-1

Bengaluru Rain: ಮನೆ ಬಾಗಿಲು ಮುರಿದಾದ್ರೂ ಕಾರ್ಯಾಚರಣೆ ಮುಂದುವರಿಸಿ: ಡಿಸಿಎಂ ಶಿವಕುಮಾರ್

Pro Kabaddi League: ಪುನೇರಿಯನ್ನು ಕೆಡವಿದ ತಮಿಳ್‌ ತಲೈವಾಸ್‌

Pro Kabaddi League: ಪುನೇರಿಯನ್ನು ಕೆಡವಿದ ತಮಿಳ್‌ ತಲೈವಾಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Krishna Matha: ಉಡುಪಿಗೆ ಆಗಮಿಸಿದ ಯೋಗಗುರು ಬಾಬಾ ರಾಮ್‌ದೇವ್‌

Krishna Matha: ಉಡುಪಿಗೆ ಆಗಮಿಸಿದ ಯೋಗಗುರು ಬಾಬಾ ರಾಮ್‌ದೇವ್‌

POlice

Moodubelle: ಕೋಳಿ ಅಂಕಕ್ಕೆ ದಾಳಿ; 7 ಮಂದಿ ವಶಕ್ಕೆ

5

Mukka: ಈಜಾಡುತ್ತಿದ್ದ ಯುವಕ ಸಮುದ್ರಪಾಲು

accident

Udupi: ದ್ವಿಚಕ್ರ ವಾಹನ ಢಿಕ್ಕಿ; ಮಹಿಳೆಗೆ ಗಾಯ

Udupi: ಪ್ರಾಚ್ಯ ವಿದ್ಯಾ ಸಮ್ಮೇಳನ: ಮಂಗಳೂರಿಗೆ ಆಗಮಿಸಿದ ಬಾಬಾ ರಾಮದೇವ್

Udupi: ಪ್ರಾಚ್ಯ ವಿದ್ಯಾ ಸಮ್ಮೇಳನ: ಮಂಗಳೂರಿಗೆ ಆಗಮಿಸಿದ ಬಾಬಾ ರಾಮದೇವ್

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Actor: ದರ್ಶನ್‌ಗೆ ಡಿಸ್ಕ್ ಸಮಸ್ಯೆ: ಚಿಕಿತ್ಸೆ ಅನಿವಾರ್ಯ

Actor: ದರ್ಶನ್‌ಗೆ ಡಿಸ್ಕ್ ಸಮಸ್ಯೆ: ಚಿಕಿತ್ಸೆ ಅನಿವಾರ್ಯ

Test Match: ಇನ್ನಿಂಗ್ಸ್‌ ಸೋಲಿನಿಂದ ಪಾರಾದ ಬಾಂಗ್ಲಾ

Test Match: ಇನ್ನಿಂಗ್ಸ್‌ ಸೋಲಿನಿಂದ ಪಾರಾದ ಬಾಂಗ್ಲಾ

BBK11: ಬಿಗ್ ಮನೆಯಲ್ಲಿ ಜೋರಾಯಿತು ರಾಜಕೀಯ:ಪೋಸ್ಟರ್ ಅಂಟಿಸುವ ವಿಚಾರದಲ್ಲಿ ತಾರರಕ್ಕೇರಿದ ಜಗಳ

BBK11: ಬಿಗ್ ಮನೆಯಲ್ಲಿ ಜೋರಾಯಿತು ರಾಜಕೀಯ:ಪೋಸ್ಟರ್ ಅಂಟಿಸುವ ವಿಚಾರದಲ್ಲಿ ತಾರರಕ್ಕೇರಿದ ಜಗಳ

India vs Germany Hockey: ಭಾರತಕ್ಕೆ ಅವಳಿ ಸೋಲಿನ ಆಘಾತ

India vs Germany Hockey: ಭಾರತಕ್ಕೆ ಅವಳಿ ಸೋಲಿನ ಆಘಾತ

Ford Trophy: 103 ಎಸೆತಗಳಲ್ಲಿ ದ್ವಿಶತಕ… ಬೌಸ್‌ ದಾಖಲೆ

Ford Trophy: 103 ಎಸೆತಗಳಲ್ಲಿ ದ್ವಿಶತಕ… ಬೌಸ್‌ ದಾಖಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.