Mangaluru: ಡ್ರಗ್ಸ್ ಪಾರ್ಸೆಲ್ ಕಸ್ಟಮ್ಸ್ ವಶ ಹೆಸರಲ್ಲಿ 68 ಲಕ್ಷ ರೂಪಾಯಿ ವಂಚನೆ
Team Udayavani, Oct 24, 2024, 2:37 AM IST
ಮಂಗಳೂರು: ಹೊಸದಿಲ್ಲಿಯಿಂದ ಕಳುಹಿಸಿದ ಪಾರ್ಸೆಲ್ ಕಸ್ಟಮ್ಸ್ ವಶವಾಗಿದ್ದು, ಅದರಲ್ಲಿ 3.1 ಕೆ.ಜಿ. ಮಾದಕ ವಸ್ತು ಪತ್ತೆಯಾಗಿದೆ. ಮೊಬೈಲ್ ನಂಬರ್ ಮತ್ತು ಆಧಾರ್ ಕಾರ್ಡ್ ದುರುಪಯೋಗವಾಗುತ್ತಿದೆ. ಅದನ್ನು ಸರಿಪಡಿಸಿಕೊಡುವುದಾಗಿ ತಿಳಿಸಿ ಹಂತಹಂತವಾಗಿ 68 ಲಕ್ಷ ರೂ. ವರ್ಗಾಯಿಸಿಕೊಂಡು ವಂಚನೆ ಮಾಡಿರುವ ಕುರಿತಂತೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆಮಾಡಿ ಪಾರ್ಸೆಲ್ ಬಗ್ಗೆ ತಿಳಿಸಿದ್ದು, ಅದನ್ನು ಸರಿಪಡಿಸಲು ಆರ್ಬಿಐ ಗೈಡ್ಲೈನ್ಸ್ ಪ್ರಕಾರ 24,68,392 ಪಾವತಿಸಬೇಕು ಎಂದು ತಿಳಿಸಿದ್ದ. ಅ.14ರಂದು ಎಚ್ಡಿಎಫ್ ಸಿ ಬ್ಯಾಂಕ್ ಖಾತೆಯಿಂದ 24,68,392, ಅ.18ರಂದು ಐಸಿಐಸಿಐ ಬ್ಯಾಂಕ್ ಖಾತೆಯಿಂದ 27,54,163 ರೂ. ವರ್ಗಾಯಿಸಿದ್ದರು.
ದೂರುದಾರರು ಸಂಶಯ ಬಂದು ಪ್ರಶ್ನಿಸಿದಾಗ ಅವರನ್ನು ಗದರಿಸಿ ಮತ್ತೆ 15,77,445 ರೂ. ಸಹಿತ ಅ.14ರಿಂದ 21ರ ಅವಧಿಯಲ್ಲಿ ಒಟ್ಟು 68 ಲಕ್ಷ ರೂ. ತಮ್ಮ ಖಾತೆಗಳಿಗೆ ವರ್ಗಾಯಿಸಿ ವಂಚಿಸಿದ್ದಾರೆ ಎಂದು ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಪಟಾಕಿ ಮಾರಾಟಕ್ಕೆ ಸ್ಥಳ ನಿಗದಿ; ವಿರೋಧ
Mangaluru: ಲೋಕೋಪಯೋಗಿ ನಿರೀಕ್ಷಣ ಮಂದಿರದ ಆವರಣದಿಂದ ಮರ ಸಾಗಾಟ: ಪ್ರಕರಣ ದಾಖಲು
Mangaluru: ಕರ್ಣಾಟಕ ಬ್ಯಾಂಕ್: 336.07 ಕೋ.ರೂ. ನಿವ್ವಳ ಲಾಭ
Coastal: ಪ್ರವಾಸೋದ್ಯಮ ನೀತಿಯಲ್ಲಿ ಕರಾವಳಿಗೂ ಆದ್ಯತೆ: ಎಂಡಿ ಡಾ.ರಾಜೇಂದ್ರ ಕೆ.ವಿ.
Udupi: ಪ್ರಾಚ್ಯ ವಿದ್ಯಾ ಸಮ್ಮೇಳನ: ಮಂಗಳೂರಿಗೆ ಆಗಮಿಸಿದ ಬಾಬಾ ರಾಮದೇವ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.