Mangaluru: ಸಿಬಿಐ ಅಧಿಕಾರಿ ಹೆಸರಿನಲ್ಲಿ ಕರೆ ಮಾಡಿ 31.12 ಲಕ್ಷ ರೂ. ವಂಚನೆ
Team Udayavani, Oct 24, 2024, 7:10 AM IST
ಮಂಗಳೂರು: ಸಿಬಿಐ ಅಧಿಕಾರಿ ಎಂದ ಬಂದ ಕರೆಯನ್ನು ನಂಬಿದ ಮಂಗಳೂರಿನ ವ್ಯಕ್ತಿಯೊಬ್ಬರು 31,12,000 ರೂ. ಅನ್ನು ವರ್ಗಾಯಿಸಿಕೊಂಡು ವಂಚನೆಗೆ ಒಳಗಾಗಿರುವ ಕುರಿತಂತೆ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರಿಗೆ ಕರೆ ಮಾಡಿದ ವ್ಯಕ್ತಿ ನಿಮ್ಮ ಹೆಸರಿನಲ್ಲಿ 2 ಸಿಮ್ ಚಾಲ್ತಿಯಲ್ಲಿದೆ. ಒಂದು ಸಿಮ್ ಮೂಲಕ ಕಾನೂನು ಬಾಹಿರ ಸಂದೇಶ ರವಾನೆಯಾಗಿದೆ. ಮುಂಬಯಿನ ಅಗ್ರಿಪಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆಗೆ ತತ್ಕ್ಷಣ ಠಾಣೆಗೆ ಬರುವಂತೆ ಕರೆ ಬಂದಿದೆ. ಅಕ್ರಮ ಹಣ ವರ್ಗಾವಣೆಯಲ್ಲಿ ಆಧಾರ್ ಕಾರ್ಡ್ ದುರ್ಬಳಕೆಯಾಗಿದೆ.
ಜೆಟ್ ಏರ್ವೇಸ್ ಮಾಲಕ ನರೇಶ್ ಗೋಯೆಲ್ ಮನೆಗೆ ದಾಳಿ ಮಾಡಿದಾಗ ಪತ್ತೆಯಾಗಿರುವ ಡೆಬಿಟ್ ಕಾರ್ಡ್ ನಿಮ್ಮ ಹೆಸರಿದೆ. ಮುಂಬಯಿಯಲ್ಲಿ ಕೆನರಾ ಬ್ಯಾಂಕ್ ಶಾಖೆಯಲ್ಲಿ ಖಾತೆ ತೆರೆದು ಸಾರ್ವಜನಿಕರಿಂದ ಹಣ ಸಂಗ್ರಹಿಸಲಾಗಿದೆ. ಈ ಖಾತೆಯಿಂದ ವಿದೇಶಗಳಿಗೆ ಅಕ್ರಮ ವರ್ಗಾವಣೆ ಮಾಡಲಾಗಿದೆ ಎಂದು ಭಯಪಡಿಸಿದ್ದಾನೆ.
ಈ ಕೇಸ್ ಸರಿಪಡಿಸಲು ನಿಮ್ಮ ಎಲ್ಲ ಬ್ಯಾಂಕ್ ಖಾತೆಗಳ ಲ್ಲಿರುವ ಹಣವನ್ನು ನಾವು ನೀಡುವ ಬ್ಯಾಂಕ್ ಖಾತೆಗೆ ವರ್ಗಾಯಿಸುವಂತೆ ನಂಬಿಸಿದ್ದಾರೆ. ಅ.19ರ ತನಕ ವಿವಿಧ ಬ್ಯಾಂಕ್ಗಳಲ್ಲಿದ್ದ ಒಟ್ಟು 31,12,000 ರೂ. ವರ್ಗಾಯಿಸಿದ್ದಾರೆ. ಬಳಿಕ ಸಂಶಯ ಬಂದು ಮನೆಯವರಿಗೆ ತಿಳಿಸಿದಾಗ ಮೋಸ ಹೋಗಿರುವುದು ಗೊತ್ತಾಗಿದೆ. ಹಣವನ್ನು ವಿವಿಧ ಬ್ಯಾಂಕ್ ಖಾತೆಗೆ ವರ್ಗಾಯಿಸಿ ಮೋಸ ಮಾಡಿದ ಆರೋಪಿಗಳಾದ ಸಂದೀಪ್ ರಾವ್, ಸಂಜನಾ ಹಾಗೂ ನವೋಜೋತ್ ಸಿಮಿ ಮೇಲೆ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Arrested: ನಟ ಸಲ್ಮಾನ್ ಖಾನ್ಗೆ ಬೆದರಿಕೆ ಹಾಕಿ 5ಕೋಟಿಗೆ ಬೇಡಿಕೆ ಇಟ್ಟಿದ್ದ ಆರೋಪಿ ಅರೆಸ್ಟ್
BBK11: ಬಿಗ್ ಬಾಸ್ ಮನೆಗೆ ಖ್ಯಾತ ಆ್ಯಂಕರ್ ರಾಧಾ ಹಿರೇಗೌಡರ್ ಎಂಟ್ರಿ
Udupi; ಜಗತ್ತು ಯೋಗಮಯವಾಗುವ ಆಕಾಂಕ್ಷೆ: ಪ್ರಾಚ್ಯವಿದ್ಯಾ ಸಮ್ಮೇಳನದಲ್ಲಿ ಬಾಬಾ ರಾಮ್ದೇವ್
Female CFO: ಭಾರತದ ಪಾಮ್ ಕೌರ್ಗೆ ಎಚ್ಎಸ್ಬಿಸಿ ಸಿಎಫ್ಒ ಹುದ್ದೆ
Mudhol: ಅಕ್ರಮ ಮರಳು ಅಡ್ಡೆಗಳ ಮೇಲೆ ಅಧಿಕಾರಿಗಳ ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.