Gangolli: ತ್ಯಾಜ್ಯ ಸಂಗ್ರಹ ಸ್ಥಗಿತ; ಮನೆಗಳ ಎದುರು, ರಸ್ತೆಗಳಲ್ಲಿ ಕಸದ ರಾಶಿ

ವಾರದಿಂದ ನಡೆಯದ ತ್ಯಾಜ್ಯ ವಿಲೇವಾರಿ

Team Udayavani, Oct 24, 2024, 4:58 PM IST

6

ಗಂಗೊಳ್ಳಿ: ಗಂಗೊಳ್ಳಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಖಾಸಗಿ ಸಂಸ್ಥೆಯ ನಿರ್ವಹಣೆ ವೈಫಲ್ಯದಿಂದಾಗಿ ಒಂದು ವಾರದಿಂದ ತ್ಯಾಜ್ಯ ಸಂಗ್ರಹ ಸ್ಥಗಿತಗೊಂಡಿದ್ದು, ಬಂದರು ಪ್ರದೇಶದಲ್ಲಿರುವ ಘನ ಮತ್ತು ದ್ರವ ಸಂಪನ್ಮೂಲ ಘಟಕ ರೋಗ ಉತ್ಪತ್ತಿ ಕೇಂದ್ರವಾಗಿ ಮಾರ್ಪಟ್ಟಿದೆ.

ಗಂಗೊಳ್ಳಿಯಲ್ಲಿ ಹಲವು ತಿಂಗಳಿ ನಿಂದ ತ್ಯಾಜ್ಯ ವಿಲೇವಾರಿ ಸಮಸ್ಯೆ ಉಲ್ಬಣಗೊಂಡಿದೆ. ಇದೇ ಈ ಭಾಗದ ಜನರಿಗೆ ದೊಡ್ಡ ಸಮಸ್ಯೆಯನ್ನೇ ಸೃಷ್ಟಿಸಿದೆ.

ಗಂಗೊಳ್ಳಿ ಗ್ರಾಮ ಪಂಚಾಯತ್‌ ಆಡಳಿತ ಘನ ಮತ್ತು ದ್ರವ ಸಂಪನ್ಮೂಲ ಘಟಕದ ಕಾರ್ಯನಿರ್ವಹಣೆಯನ್ನು ಒಂದುವರೆ ವರ್ಷಗಳ ಹಿಂದೆ ಖಾಸಗಿ ಎನ್‌ಜಿಒ ಸಂಸ್ಥೆಗೆ ವಹಿಸಿಕೊಟ್ಟಿತ್ತು. 1,300ಕ್ಕೂ ಹೆಚ್ಚು ಮನೆ ಮತ್ತು ವಾಣಿಜ್ಯ ಮಳಿಗೆಗಳಿಂದ ಪ್ರತಿನಿತ್ಯ ತ್ಯಾಜ್ಯ ಸಂಗ್ರಹಿಸಲಾಗುತ್ತಿತ್ತು. ಈಗ ಸ್ಥಗಿತವಾದ ಕಾರಣ ಮನೆಗಳ ಮುಂದೆ ಕಸದ ಚೀಲ ನೇತಾಡುತ್ತಿದೆ. ಅದರಿಂದ ವಾಸನೆ ಬರುತ್ತಿದೆ.

ಲೋಡುಗಟ್ಟಲೆ ಕಸ
ತ್ಯಾಜ್ಯ ವಿಲೇವಾರಿ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಗಂಗೊಳ್ಳಿಯ ಮೀನುಗಾರಿಕಾ ಬಂದರು ಸಮೀಪ ಸುಮಾರು 7.5 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾದ ಎಸ್‌ಎಲ್‌ಆರ್‌ಎಂ ಘಟಕದಲ್ಲಿ ತ್ಯಾಜ್ಯ ಸಂಗ್ರಹ ತುಂಬಿ ತುಳುಕುತ್ತಿದೆ. ಘಟಕದಲ್ಲಿ ಹಸಿ ಕಸ ವಿಲೇವಾರಿಗೆ ಕಾಂಪೋಸ್ಟ್‌ ಗೊಬ್ಬರದ ಗುಂಡಿ ನಿರ್ಮಾಣ ಸಹಿತ ಎಲ್ಲ ಸೌಕರ್ಯಗಳನ್ನು ಸ್ಥಳೀಯಾಡಳಿತ ಮಾಡಿದೆ. ಕಾಂಪೋಸ್ಟ್‌ ಗುಂಡಿಯಲ್ಲಿ ಗೊಬ್ಬರ ತುಂಬಿದ್ದರೂ ವಿಲೇವಾರಿಗೊಳಿಸದಿರುವುದರಿಂದ ಹಸಿ ಕಸ ನಿರ್ವಹಣೆಗೆ ಅಡ್ಡಿಯಾಗುತ್ತಿದೆ.

ವಿಸ್ತರಣೆ ಅಗತ್ಯ
ಎಸ್‌ಎಲ್‌ಅರ್‌ಎಂ ಘಟಕ ವಿಸ್ತರಣೆಯಾದರಷ್ಟೇ ಸಮರ್ಪಕ ಕಾರ್ಯನಿರ್ವಹಣೆ ಹಾಗೂ ತ್ಯಾಜ್ಯ ನಿರ್ವಹಣೆ ಸಾಧ್ಯ. ಎಸ್‌ಎಲ್‌ಆರ್‌ಎಂ ಘಟಕ ವಿಸ್ತರಣೆ ಉದ್ದೇಶದಿಂದ ಸ್ಥಳೀಯಾಡಳಿತ ಎದುರಾದ ಭೂಮಿ ಸಮಸ್ಯೆ ಹರಿಸುವತ್ತ ಆದ್ಯತೆ ನೀಡಬೇಕು ಎಂದು ಗಂಗೊಳ್ಳಿ ಜನತೆ ಒತ್ತಾಯಿಸಿದ್ದಾರೆ.

ಶುಚಿತ್ವಕ್ಕೆ ಆದ್ಯತೆ ಇಲ್ಲ
ಪಂಚಾಯತ್‌ ಕಸ ವಿಲೇವಾರಿ ಘಟಕದಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಿಲ್ಲ. ರೋಗ ಹರಡುವ ಕೇಂದ್ರವಾಗಿದೆ. ಪಂಚಾಯತ್‌ ನಿರ್ಲಕ್ಷ್ಯ ವಹಿಸಿದೆ. ಈ ಪರಿಸರದಲ್ಲಿ ಬದುಕು ಅಸಹನೀಯವಾಗುತ್ತಿದೆ.
-ರಾಘವೇಂದ್ರ, ಗಂಗೊಳ್ಳಿ

ಶೀಘ್ರ ಪರಿಹಾರ
ಗಂಗೊಳ್ಳಿ ಗ್ರಾ.ಪಂ. ಘನ ಮತ್ತು ದ್ರವ ಸಂಪನ್ಮೂಲ ಘಟಕದ ಕಾರ್ಯನಿರ್ವಹಣೆ ಉತ್ತಮವಾಗಿ ನಡೆಯುತ್ತಿದ್ದು, ಇಡೀ ಗ್ರಾಮದ ತ್ಯಾಜ್ಯ ಸಂಗ್ರಹಣೆಗೆ ಘಟಕ ವಿಸ್ತರಣೆ ಅಗತ್ಯ. ಹೆಚ್ಚಿನ ಜನರು ಪ್ಯಾಂಪರನ್ನು ನೀಡುತ್ತಿದ್ದು, ವಿಲೇವಾರಿ ಕಷ್ಟವಾಗುತ್ತಿದೆ. ಘಟಕದಲ್ಲಿ ಸಮಸ್ಯೆ ಉಂಟಾಗಲು ಇದೇ ಕಾರಣ. ಘಟಕ ವಿಸ್ತರಣೆಗೆ ಜಾಗದ ಸಮಸ್ಯೆಯೂ ಇದೆ. ಶೀಘ್ರವೇ ಎಲ್ಲ ಬಗೆಹರಿಸಲಾಗುವುದು.
-ಉಮಾಶಂಕರ, ಪಿಡಿಒ, ಗಂಗೊಳ್ಳಿ

ಪ್ರಾಣಿಗಳಿಂದ ಪ್ಲಾಸ್ಟಿಕ್‌ ಸೇವನೆ
ತ್ಯಾಜ್ಯದ ರಾಶಿ ಇರುವ ಕಡೆಗಳಲ್ಲಿ ಜಾನುವಾರುಗಳು ಹಾಗೂ ನಾಯಿಗಳ ಹಿಂಡು ಆಗಮಿಸುತ್ತಿದ್ದು, ಸಂಗ್ರಹಗೊಂಡಿರುವ ತ್ಯಾಜ್ಯಗಳನ್ನು ತಿನ್ನುತ್ತಿವೆ. ಈ ಸಂದರ್ಭ ಪ್ಲಾಸ್ಟಿಕ್‌ ಕೂಡ ಪ್ರಾಣಿಗಳ ಹೊಟ್ಟೆ ಸೇರುತ್ತಿದ್ದು, ಹಲವು ಹಸುಗಳು, ನಾಯಿಗಳು ಜೀವನ್ಮರಣ ಸ್ಥಿತಿಯಲ್ಲಿ ಒದ್ದಾಡುತ್ತಿವೆ.

ರೋಗಗಳಿಗೆ ಆಹ್ವಾನ
ಸಿಬಂದಿ ಕೊರತೆಯಿಂದ ಸಮಸ್ಯೆ ಘನ ಮತ್ತು ದ್ರವ ಸಂಪನ್ಮೂಲ ಘಟಕದಲ್ಲಿ ಇರುವ ಸಿಬ್ಬಂದಿ ಕೊರತೆ ಕೂಡ ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸಿದೆ. ಗಂಗೊಳ್ಳಿ ಗ್ರಾಮಸಭೆಯಲ್ಲೂ ಎಸ್‌ಎಲ್‌ಆರ್‌ಎಂ ಘಟಕದ ಸಮಸ್ಯೆ ಕುರಿತು ಪ್ರಸ್ತಾಪವಾಗಿದ್ದು, ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಎಸ್‌ಎಲ್‌ಆರ್‌.ಎಂ ಘಟಕದಲ್ಲಿ ಹಸಿತ್ಯಾಜ್ಯ ವಿಲೇವಾರಿಗೆ ನಿರ್ಮಿಸಲಾದ ಕಾಂಪೋಸ್ಟ್‌ ಗುಂಡಿಯಲ್ಲಿ ತುಂಬಿರುವ ಗೊಬ್ಬರ, ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡುವಂತಿದೆ.

ಮೀನುಗಾರರಿಗೂ ಕಷ್ಟ
ಬಂದರು ಪ್ರವೇಶ ದ್ವಾರದ ಬಳಿ ಇರುವ ಘಟಕದಲ್ಲಿ ಪ್ಲಾಸ್ಟಿಕ್‌, ತ್ಯಾಜ್ಯ ಸಂಗ್ರಹವಾದ ಕಾರಣ ಅದರಲ್ಲಿ ಮಳೆ ಬಂದು ಹಾಗೂ ತ್ಯಾಜ್ಯದಲ್ಲಿ ತುಂಬಿದ ನೀರು ಹರಿಯುವ ಕಾರಣ ರೋಗ ಉತ್ಪತ್ತಿ ಭೀತಿ ಕಾಣಿಸಿಕೊಂಡಿದೆ. ಈ ರಸ್ತೆ ಮೂಲಕ ಓಡಾಡುವ ಸಾವಿರಾರು ಮಂದಿಗೆ ಸಹಜ ಆತಂಕ ಉಂಟಾಗಿದೆ. ಬಂದರಿಗೆ ಹೋಗಬೇಕಾದರೆ ಈ ಘಟಕ ದಾಟಿಯೇ ಹೋಗಬೇಕು. ಹಾಗಾಗಿ ಬೇಡ ಬೇಡ ಎಂದರೂ ಇಲ್ಲಿನ ಅವ್ಯವಸ್ಥೆ ಬಂದವರ ಕಣ್ಣಿಗೆ ರಾಚುತ್ತದೆ. ಸ್ಥಳೀಯರು ಆರೋಪಿಸುವಂತೆ ಇದರ ವಿಲೇಗೆ ಯಾವುದೇ ಪ್ರಯತ್ನ ಆಗಲಿಲ್ಲ.

ಟಾಪ್ ನ್ಯೂಸ್

court

Koppal; ಮರುಕುಂಬಿ ಪ್ರಕರಣ: 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್!

1-bharat

BJP; ಶಿಗ್ಗಾವಿಯಲ್ಲಿ ನಾಮಪತ್ರ ಸಲ್ಲಿಸಿದ ಭರತ್ ಬೊಮ್ಮಾಯಿ

1-congress

By Election; ಕೈ ಶಕ್ತಿ ಪ್ರದರ್ಶನ: ನಾಮಪತ್ರ ಸಲ್ಲಿಸಿದ ಯೋಗೇಶ್ವರ್, ಅನ್ನಪೂರ್ಣ

u

Udupi: ಪ್ರಾಚ್ಯ ವಿದ್ಯಾ ಸಮ್ಮೇಳನ: ಚೀನಾದಲ್ಲೂ ಭಾರತದ ಜ್ಞಾನದ ಕುರಿತು ಮಾಹಿತಿ ಇದೆ:ಭಾಟೇ

somashekar st

Karnataka BJP ; 8 ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ..!; ಎಸ್.ಟಿ.ಸೋಮಶೇಖರ್ ಬಾಂಬ್

KSRTC: ಬಸ್ ಪಲ್ಟಿ, ಮಹಿಳೆ ಸಾವು; ಹಲವರಿಗೆ ಗಂಭೀರ ಗಾಯ

Harapanahalli: ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ; ಮಹಿಳೆ ಸಾವು; ಹಲವರಿಗೆ ಗಂಭೀರ ಗಾಯ

BBK11: ಮಹಿಳಾ ಸ್ಪರ್ಧಿಯ ಹೊಟ್ಟೆಗೆ ಏಟು; ಉಗ್ರಂ ಮಂಜುರನ್ನು ಆಚೆ ಕರೆಸಿ ಎಂದ ನೆಟ್ಟಿಗರು

BBK11: ಮಹಿಳಾ ಸ್ಪರ್ಧಿಯ ಹೊಟ್ಟೆಗೆ ಏಟು; ಉಗ್ರಂ ಮಂಜುರನ್ನು ಆಚೆ ಕರೆಸಿ ಎಂದ ನೆಟ್ಟಿಗರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

u

Udupi: ಪ್ರಾಚ್ಯ ವಿದ್ಯಾ ಸಮ್ಮೇಳನ: ಚೀನಾದಲ್ಲೂ ಭಾರತದ ಜ್ಞಾನದ ಕುರಿತು ಮಾಹಿತಿ ಇದೆ:ಭಾಟೇ

12

Volakadu: ಡ್ರೈನೇಜ್‌ ಸಮಸ್ಯೆಗೆ ಸಿಗದ ಪರಿಹಾರ

10(1)

Kaup: ಸುಂದರ ಕಾಪು ನಗರಕ್ಕೆ ಕೊಳಚೆ ಕಪ್ಪು ಚುಕ್ಕೆ!

Udupi: ಪ್ರಾಚ್ಯವಿದ್ಯಾ ಸಮ್ಮೇಳನ ದಕ್ಷಿಣೋತ್ತರದ ಸಂಗಮ: ಪುತ್ತಿಗೆ ಶ್ರೀ

Udupi: ಪ್ರಾಚ್ಯವಿದ್ಯಾ ಸಮ್ಮೇಳನ ದಕ್ಷಿಣೋತ್ತರದ ಸಂಗಮ: ಪುತ್ತಿಗೆ ಶ್ರೀ

Shirva: ಶಿರ್ವ ಮಹಮ್ಮಾಯಿ ಮಾರಿಗುಡಿ; ನಿಧಿ ಕುಂಭ ಸಮರ್ಪಣೆ

Shirva: ಶಿರ್ವ ಮಹಮ್ಮಾಯಿ ಮಾರಿಗುಡಿ; ನಿಧಿ ಕುಂಭ ಸಮರ್ಪಣೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

court

Koppal; ಮರುಕುಂಬಿ ಪ್ರಕರಣ: 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್!

1-bharat

BJP; ಶಿಗ್ಗಾವಿಯಲ್ಲಿ ನಾಮಪತ್ರ ಸಲ್ಲಿಸಿದ ಭರತ್ ಬೊಮ್ಮಾಯಿ

4

Surathkal: ಸಸಿಹಿತ್ಲು ಆಳಸಮುದ್ರದಲ್ಲಿ ಪ್ರಜ್ವಲ್‌ ಮೃತದೇಹ ಪತ್ತೆ

cr

Kasaragod:ಅಪರಾಧ ಸುದ್ದಿಗಳು;‌ ಅಕ್ರಮ ಮೀನುಗಾರಿಕೆ: 3 ಬೋಟ್‌ಗಳು ವಶಕ್ಕೆ

1-congress

By Election; ಕೈ ಶಕ್ತಿ ಪ್ರದರ್ಶನ: ನಾಮಪತ್ರ ಸಲ್ಲಿಸಿದ ಯೋಗೇಶ್ವರ್, ಅನ್ನಪೂರ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.