Tollywood: ʼಪುಷ್ಪ-3 ಬರುವುದು ಕನ್ಫರ್ಮ್..‌ ನಿರ್ಮಾಪಕರೇ ಬಿಟ್ಟು ಕೊಟ್ರು ಗುಟ್ಟು


Team Udayavani, Oct 24, 2024, 5:42 PM IST

10

ಹೈದರಾಬಾದ್:‌ ಟಾಲಿವುಡ್ ನ ಬಿಗೆಸ್ಟ್ ಪ್ಯಾನ್‌ ಇಂಡಿಯಾ ‌(Pan india) ಸಿನಿಮಾ ʼಪುಷ್ಪ-2ʼ (Pushpa-2) ರಿಲೀಸ್‌ ಡೇಟ್ ಅಧಿಕೃತವಾಗಿದೆ. ಈ ಸುದ್ದಿಯ ಖುಷಿಯಲ್ಲಿದ್ದ ಪ್ರೇಕ್ಷಕರಿಗೆ ಮತ್ತೊಂದು ಬಿಗ್‌ ನ್ಯೂಸ್‌ ಸಿಕ್ಕಿದೆ.

ಅಲ್ಲು ಅರ್ಜು ನ್‌(Allu Arjun)  – ಸುಕುಮಾರ್‌ (Sukumar) ಕಾಂಬಿನೇಷನ್‌ನಲ್ಲಿ 2021ರಲ್ಲಿ ಬಂದ ʼಪುಷ್ಪʼ ಕೋಟಿ ಕೋಟಿ ಗಳಿಕೆ ಕಂಡು ಬಾಕ್ಸ್‌ ಆಫೀಸ್‌ ಶೇಕ್‌ ಮಾಡಿತ್ತು.

ಮೊದಲ ಭಾಗ ಸೂಪರ್‌ ಹಿಟ್‌ ಆದ ಬಳಿಕ ಸಿನಿಮಾದ ಎರಡನೇ ಭಾಗದ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಾಗಿದೆ. ಅನೌನ್ಸ್‌ ಆದ ದಿನದಿಂದ ಒಂದಲ್ಲ ಒಂದು ಕಾರಣದಿಂದ ʼಪುಷ್ಪ-2ʼ ಸದ್ದು ಮಾಡುತ್ತಲೇ ಇದೆ.

ಇದನ್ನೂ ಓದಿ: Actor Suriya: ತಾಯಿ ಮಾಡಿದ 25 ಸಾವಿರ ರೂ. ಸಾಲ ತೀರಿಸಲು ಸಿನಿಮಾ ರಂಗಕ್ಕೆ ಬಂದ ಸೂರ್ಯ

ಗುರುವಾರ (ಅ.24ರಂದು) ಹೈದರಾಬಾದ್‌ನಲ್ಲಿ ಪ್ರೆಸ್‌ ಮೀಟ್‌ ನಡೆಸಿದ ಚಿತ್ರತಂಡ ಸಿನಿಮಾ ಡಿಸೆಂಬರ್‌ 5 ರಂದು ವರ್ಲ್ಡ್‌ ವೈಡ್‌ ರಿಲೀಸ್‌ ಆಗಲಿದೆ ಎಂದು ಹೇಳಿದೆ. ಡಿಸೆಂಬರ್‌ 4 ರಂದು ವಿದೇಶದಲ್ಲಿ ಪ್ರಿಮಿಯರ್‌ ಶೋ ನಡೆಯಲಿದೆ ಎಂದು ಚಿತ್ರತಂಡ ಹೇಳಿದೆ.

ಇದೇ ವೇಳೆ ಪತ್ರಕರ್ತರೊಬ್ಬರು ನಿರ್ಮಾಪಕರ ಬಳಿ ʼಪುಷ್ಪ-3ʼ (Pushpa-2) ಬಗ್ಗೆ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಇದಕ್ಕೆ ನಿರ್ಮಾಪಕ ರವಿಶಂಕರ್‌ ರಿಪ್ಲೈ ಕೊಟ್ಟಿರುವುದು ವೈರಲ್‌ ಆಗಿದೆ.

ʼಪುಷ್ಪʼ ಸಿನಿಮಾ ಯಾರೂ ನಿರೀಕ್ಷೆ ಮಾಡದ್ದಷ್ಟು ದೊಡ್ಡ ಬ್ಲಾಕ್‌ ಬಸ್ಟರ್‌ ಹಿಟ್‌ ಆಯಿತು. ಸಿನಿಮಾದ 3ನೇ ಭಾಗವೂ ಹೀಗೆಯೇ ಇರಬಹುದೇ ಎಂದು ಪ್ರಶ್ನೆ ಕೇಳಿದ್ದಾರೆ.

ʼಪುಷ್ಪ-3ʼ ಗೆ ಒಂದು ಲೀಡ್‌ ಇದೆ. ಮೂರನೇ ಬರುವುದು ಕನ್ಫರ್ಮ್. ಪುಷ್ಪ- 2ಗೆ ಪ್ರೇಕ್ಷಕರಿಂದ  ಮೊದಲ ಭಾಗದಂತೆಯೇ ಪ್ರೀತಿ ಪ್ರೋತ್ಸಾಹ ಬಂದರೆ, ನಾವು ʼಪುಷ್ಪ-3ʼ ಮಾಡಲು ಸಿದ್ಧರಿದ್ದೇವೆ.” ಎಂದು ನಿರ್ಮಾಪಕ ರವಿಶಂಕರ್‌ ಹೇಳಿದ್ದಾರೆ.

ಇದನ್ನು ಕೇಳಿ ಅಲ್ಲು ಅರ್ಜುನ್‌ ಫ್ಯಾನ್ಸ್‌ ಗಳು ಖುಷ್‌ ಆಗಿದ್ದಾರೆ. ʼಪುಷ್ಪ-2ʼ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗುವಂತೆ ಆಗಿದೆ ಎಂದು ಫ್ಯಾನ್ಸ್‌ ಗಳು ಮಾತನಾಡಿಕೊಳ್ಳುತ್ತಿದ್ದಾರೆ.

ಇನ್ನು ʼಪುಷ್ಪ-2ʼ ಮೊದಲು ಇದೇ ವರ್ಷದ ಏಪ್ರಿಲ್‌ ನಲ್ಲಿ ರಿಲೀಸ್‌ ಆಗಬೇಕಿತ್ತು. ಆದಾದ ಬಳಿಕ ಆಗಸ್ಟ್‌ 15ರಂದು ರಿಲೀಸ್‌ ಮಾಡುವುದಾಗಿ ಚಿತ್ರತಂಡ ಹೇಳಿತ್ತು. ಅಲ್ಲಿಂದಲೂ ಮುಂದೂಡಿಕೆ ಆಗಿ ಡಿಸೆಂಬರ್‌ 6 ರಂದು ರಿಲೀಸ್‌ ಆಗುತ್ತದೆ ಎಂದು ಹೇಳಲಾಗಿತ್ತು. ಇದೀಗ ಡಿಸೆಂಬರ್‌ 5 ಅಂದರೆ ಮೊದಲಿನ ದಿನಕ್ಕಿಂತ ಒಂದು ದಿನ ಮೊದಲೇ ಸಿನಿಮಾ ರಿಲೀಸ್‌ ಆಗಲಿದೆ.

ಅಂದಾಜು 500 ಕೋಟಿ ರೂ. ಬಜೆಟ್‌ ನಲ್ಲಿ ತಯರಾಗಿರುವ ʼಪುಷ್ಪ-2ʼ ಸಿನಿಮಾದಲ್ಲಿ ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ, ಫಾಹದ್‌ ಫಾಸಿಲ್‌, ಸುನೀಲ್‌, ಜಗದೀಶ್ ಪ್ರತಾಪ್ ಭಂಡಾರಿ, ಜಗಪತಿ ಬಾಬು ಮತ್ತು ಪ್ರಕಾಶ್ ರಾಜ್ ಮುಂತಾದವರು ನಟಿಸಿದ್ದಾರೆ.

ಟಾಪ್ ನ್ಯೂಸ್

army

J&K ; ಮತ್ತೆ ಉಗ್ರರ ಅಟ್ಟಹಾಸ: ದಾಳಿಯಲ್ಲಿ ನಾಗರಿಕ ಸಾ*ವು, ಹಲವು ಯೋಧರಿಗೆ ಗಾಯ

1-kutti

Mangaluru CCB: 30 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊ*ಲೆ ಆರೋಪಿ ಬಂಧನ

court

Koppal; ಮರುಕುಂಬಿ ಪ್ರಕರಣ: 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್!

1-bharat

BJP; ಶಿಗ್ಗಾವಿಯಲ್ಲಿ ನಾಮಪತ್ರ ಸಲ್ಲಿಸಿದ ಭರತ್ ಬೊಮ್ಮಾಯಿ

1-congress

By Election; ಕೈ ಶಕ್ತಿ ಪ್ರದರ್ಶನ: ನಾಮಪತ್ರ ಸಲ್ಲಿಸಿದ ಯೋಗೇಶ್ವರ್, ಅನ್ನಪೂರ್ಣ

u

Udupi: ಪ್ರಾಚ್ಯ ವಿದ್ಯಾ ಸಮ್ಮೇಳನ: ಚೀನಾದಲ್ಲೂ ಭಾರತದ ಜ್ಞಾನದ ಕುರಿತು ಮಾಹಿತಿ ಇದೆ:ಭಾಟೇ

somashekar st

Karnataka BJP ; 8 ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ..!; ಎಸ್.ಟಿ.ಸೋಮಶೇಖರ್ ಬಾಂಬ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

Actor Suriya: ತಾಯಿ ಮಾಡಿದ 25 ಸಾವಿರ ರೂ. ಸಾಲ ತೀರಿಸಲು ಸಿನಿಮಾ ರಂಗಕ್ಕೆ ಬಂದ ಸೂರ್ಯ

Salaar 2: ಪ್ರಭಾಸ್‌ – ಪ್ರಶಾಂತ್‌ ನೀಲ್‌ ʼಸಲಾರ್‌ -2ʼ ಶೂಟಿಂಗ್‌ ಆರಂಭ?

Salaar 2: ಪ್ರಭಾಸ್‌ – ಪ್ರಶಾಂತ್‌ ನೀಲ್‌ ʼಸಲಾರ್‌ -2ʼ ಶೂಟಿಂಗ್‌ ಆರಂಭ?

Pushpa 2: ಅಲ್ಲು ಅರ್ಜುನ್‌ ʼಪುಷ್ಪ-2ʼ ಹೊಸ ರಿಲೀಸ್‌ ಡೇಟ್‌ ಅನೌನ್ಸ್   

Pushpa 2: ಅಲ್ಲು ಅರ್ಜುನ್‌ ʼಪುಷ್ಪ-2ʼ ಹೊಸ ರಿಲೀಸ್‌ ಡೇಟ್‌ ಅನೌನ್ಸ್  

15

Amaran trailer: ಮೇಜರ್‌ ಮುಕುಂದ್‌ ಸಾಹಸಗಾಥೆಗೆ ಜೀವ ತುಂಬಿದ ಶಿವಕಾರ್ತಿಕೇಯನ್

Actor: ಮಾಜಿ ಪತ್ನಿ ದೂರಿನಿಂದ ಅರೆಸ್ಟ್‌ ಆದ ಕೆಲ ದಿನಗಳಲ್ಲೇ 3ನೇ ಮದುವೆಯಾದ ಖ್ಯಾತ ನಟ

Actor: ಮಾಜಿ ಪತ್ನಿ ದೂರಿನಿಂದ ಅರೆಸ್ಟ್‌ ಆದ ಕೆಲ ದಿನಗಳಲ್ಲೇ 3ನೇ ಮದುವೆಯಾದ ಖ್ಯಾತ ನಟ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

army

J&K ; ಮತ್ತೆ ಉಗ್ರರ ಅಟ್ಟಹಾಸ: ದಾಳಿಯಲ್ಲಿ ನಾಗರಿಕ ಸಾ*ವು, ಹಲವು ಯೋಧರಿಗೆ ಗಾಯ

13

Siddapura: ಅಂಪಾರು ಮನೆ ಕಳವು; 24 ತಾಸಿನಲ್ಲಿ ಆರೋಪಿ ಸೆರೆ

15

Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ; ಪ್ರಗತಿಯತ್ತ ದಾಪುಗಾಲು

1-wewqewqe

Bidar; ಸಾಲ ಬಾಧೆಯಿಂದ ರೈತ ಆತ್ಮಹ*ತ್ಯೆ

bike

Doddangudde: ದ್ವಿಚಕ್ರ ವಾಹನ ಕಳವು; ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.