Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ; ಪ್ರಯಾಣಿಕರ ಸಂಖ್ಯೆ ಹೆಚ್ಚಳ


Team Udayavani, Oct 24, 2024, 9:03 PM IST

15

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 2024-25ರ ಮೊದಲಾರ್ಧ ವಾರ್ಷಿಕ ಅವಧಿ ಹಾಗೂ ಎರಡನೇ ತ್ರೈಮಾಸಿಕ ಅವಧಿಯ ಪ್ರಯಾಣಿಕರ ಸಂಖ್ಯೆ ಹಾಗೂ ವಿಮಾನಯಾನದಲ್ಲಿ ಉತ್ತಮ ಪ್ರಗತಿ ದಾಖಲಿಸಿದೆ.
ದೇಶೀಯ ಹಾಗೂ ಅಂತಾರಾಷ್ಟ್ರೀಯ ಬೆಳವಣಿಗೆಗಳಿಗೆ ಹೊಂದಿಕೊಂಡಂತೆ ಇಲ್ಲೂ ಏರಿಕೆಯಾಗಿದೆ, ಕೋವಿಡ್‌ನಿಂದಾದ ತಾತ್ಕಾಲಿಕ ಹಿನ್ನಡೆಯ ಬಳಿಕ ಕ್ಷೇತ್ರ ಉತ್ತಮ ಬೆಳವಣಿಗೆ ಕಂಡಿದೆ.

2025ನೇ ಹಣಕಾಸು ವರ್ಷದ ಮೊದಲ ಅರ್ಧವಾರ್ಷಿಕ ಅವಧಿಯಲ್ಲಿ ವಿಮಾನ ನಿಲ್ದಾಣವು 11,21,410 ಪ್ರಯಾಣಿಕರನ್ನು ನಿರ್ವಹಿಸಿದೆ, ಹಿಂದಿನ ಸಾಲಿನ ಇದೇ ಅವಧಿಯಲ್ಲಿ 9,46,233 ಪ್ರಯಾಣಿಕರನ್ನು ನಿರ್ವಹಿಸಲಾಗಿದ್ದು ಶೇ 18.5ರಷ್ಟು ಪ್ರಗತಿಯಾಗಿದೆ.

ಪ್ರಸ್ತುತ ವಿಮಾನ ನಿಲ್ದಾಣವು 6 ದೇಶೀಯ ಹಾಗೂ 8 ಮಧ್ಯ ಪ್ರಾಚ್ಯ ತಾಣಗಳಿಗೆ ವಾಯುಯಾನ ಸೇವೆ ನೀಡುತ್ತಿದೆ. ಆಗಸ್ಟ್‌ 15ರಂದು ಒಂದೇ ದಿನ 7402 ಪ್ರಯಾಣಿಕರನ್ನು ನಿರ್ವಹಿಸಲಾಗಿರುವುದು ಈ ಸಾಲಿನ ಇದುವರೆಗಿನ ಗರಿಷ್ಠ ಸಂಖ್ಯೆಯಾಗಿದೆ. ಮುಖ್ಯವಾಗಿ ಬೆಂಗಳೂರು ಹಾಗೂ ಮುಂಬೈಗೆ ಹೆಚ್ಚಿನ ಪ್ರಯಾಣಿಕರು ಸಂಚರಿಸಿದ್ದಾರೆ.

ಮಂಗಳೂರು ನಿಲ್ದಾಣವು ಮೊದಲ ಅರ್ಧವಾರ್ಷಿಕ ಅವಧಿಯಲ್ಲಿ 7830 ರಷ್ಟು ವಿಮಾನ ಹಾರಾಟ ದಾಖಲಿಸಿದೆ. ಹಿಂದಿನ ಸಾಲಿನ ಇದೇ ಅವಧಿಯಲ್ಲಿ ಇದು 6590 ಆಗಿತ್ತು.

2024-25ರ ಎರಡನೇ ತ್ರೈಮಾಸಿಕ ಅವಧಿಯಲ್ಲಿ ವಿಮಾನ ನಿಲ್ದಾಣವು 5,68,721 ಪ್ರಯಾಣಿಕರನ್ನು ನಿರ್ವಹಿಸಿದ್ದು ಶೇ 16.45 ರಷ್ಟು ಏರಿಕೆಯಾಗಿದೆ. ಇದೇ ಅವಧಿಯಲ್ಲಿ ವಿಮಾನ ಹಾರಾಟ ಸಂಖ್ಯೆ 4010ರಷ್ಟಿದ್ದು ಹಿಂದಿನ ಸಾಲಿನಿಂದ ಶೇ 17.38 ರಷ್ಟು ವೃದ್ಧಿಯಾಗಿದೆ.

ಸರಕು ಸಾಗಾಟದಲ್ಲೂ ಉತ್ತಮ ನಿರ್ವಹಣೆ ಕಂಡು ಬಂದಿದೆ, ಮೊದಲ ಅರ್ಧ ವಾರ್ಷಿಕ ಅವಧಿಯಲ್ಲಿ 2617.29 ಮೆಟ್ರಿಕ್‌ ಟನ್‌ ಸರಕು ನಿರ್ವಹಿಸಲಾಗಿದೆ.

ಟಾಪ್ ನ್ಯೂಸ್

Udupi: ಅಧಿಕ ಲಾಭಾಂಶದ ಆಮಿಷ: ಲಕ್ಷಾಂತರ ರೂ.ವಂಚನೆ

Udupi: ಅಧಿಕ ಲಾಭಾಂಶದ ಆಮಿಷ: ಲಕ್ಷಾಂತರ ರೂ.ವಂಚನೆ

supreem

Supreme Court; ಕೈಗಾರಿಕ ಮದ್ಯಸಾರಕ್ಕೆ ತೆರಿಗೆ ವಿಧಿಸಲು ರಾಜ್ಯಕ್ಕೆ ಅಧಿಕಾರ ಇದೆ

Kaup: ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Kaup: ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Byndoor: ಹೊಳೆಗೆ ಬಿದ್ದ ಬೈಕ್‌, ಸವಾರ ಪಾರು

Byndoor: ಹೊಳೆಗೆ ಬಿದ್ದ ಬೈಕ್‌, ಸವಾರ ಪಾರು

Dharmasthala: ಗ್ರಾಮಾಭಿವೃದ್ಧಿಗೆ ಭಾರತರತ್ನ ಒಲಿಯಲಿ: ಡಾ| ಮಂಜುನಾಥ್‌

Dharmasthala: ಗ್ರಾಮಾಭಿವೃದ್ಧಿಗೆ ಭಾರತರತ್ನ ಒಲಿಯಲಿ: ಡಾ| ಮಂಜುನಾಥ್‌

Kemmannu: ಗಣಪತಿ ಸಹಕಾರಿ ವ್ಯವಸಾಯಕ ಸಂಘ: ಅ. 27: “ಶತಾಭಿವಂದನಂ’ ಕೊಡುಗೆ ಅನಾವರಣ

Kemmannu: ಗಣಪತಿ ಸಹಕಾರಿ ವ್ಯವಸಾಯಕ ಸಂಘ: ಅ. 27: “ಶತಾಭಿವಂದನಂ’ ಕೊಡುಗೆ ಅನಾವರಣ

Sullia: ಸುಟ್ಟ ಗಾಯ: ಮಹಿಳೆ ಸಾವು: ಪತಿಯ ಅಣ್ಣನೇ ಬೆಂಕಿ ಹಚ್ಚಿದ್ದ ಪ್ರಕರಣ

Sullia: ಸುಟ್ಟ ಗಾಯ: ಮಹಿಳೆ ಸಾವು: ಪತಿಯ ಅಣ್ಣನೇ ಬೆಂಕಿ ಹಚ್ಚಿದ್ದ ಪ್ರಕರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-kutti

Mangaluru CCB: 30 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊ*ಲೆ ಆರೋಪಿ ಬಂಧನ

4

Surathkal: ಸಸಿಹಿತ್ಲು ಆಳಸಮುದ್ರದಲ್ಲಿ ಪ್ರಜ್ವಲ್‌ ಮೃತದೇಹ ಪತ್ತೆ

8

KSRTC ನಿಲ್ದಾಣ-ಲಾಲ್‌ಭಾಗ್‌ ರಸ್ತೆ ಫುಟ್‌ಪಾತ್‌ ಇಲ್ಲದೆ ಪಾದಚಾರಿಗಳ ಪರದಾಟ

4(1)

Mangaluru: ಸಮುದ್ರದ ಮೀನುಗಳನ್ನೂ ಬಿಡದ ಪ್ಲಾಸ್ಟಿಕ್‌!

3-ullala

Deralakatte: ಶಾಲಾ ವಿದ್ಯಾರ್ಥಿಗಳಿದ್ದ ರಿಕ್ಷಾಗೆ ಪಿಕಪ್ ಡಿಕ್ಕಿ; ವಿದ್ಯಾರ್ಥಿನಿ ಸಾವು

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

jio

‘JioHotstar’ ಡೊಮೈನ್‌ಗೆ 1 ಕೋಟಿ ಕೊಡಿ: ಟೆಕಿ ಆಫ‌ರ್‌

Udupi: ಅಧಿಕ ಲಾಭಾಂಶದ ಆಮಿಷ: ಲಕ್ಷಾಂತರ ರೂ.ವಂಚನೆ

Udupi: ಅಧಿಕ ಲಾಭಾಂಶದ ಆಮಿಷ: ಲಕ್ಷಾಂತರ ರೂ.ವಂಚನೆ

1-sebi

SEBI ಮುಖ್ಯಸ್ಥೆ ಗೈರು: ಸಮಿತಿ ಸಭೆ ಮುಂದೂಡಿದ ಕ್ರಮಕ್ಕೆ ಬಿಜೆಪಿ ಆಕ್ರೋಶ

supreem

Supreme Court; ಕೈಗಾರಿಕ ಮದ್ಯಸಾರಕ್ಕೆ ತೆರಿಗೆ ವಿಧಿಸಲು ರಾಜ್ಯಕ್ಕೆ ಅಧಿಕಾರ ಇದೆ

Kaup: ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Kaup: ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.