Hassan: ಹಾಸನಾಂಬೆ ದರ್ಶನ ಆರಂಭ: ದೇವಿಯ ಪವಾಡಕ್ಕೆ ಭಕ್ತರು ಪರವಶ
Team Udayavani, Oct 25, 2024, 12:36 AM IST
ಹಾಸನ: ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ಭಾಗ್ಯ ಕರುಣಿಸುವ ಹಾಸನದ ಅಧಿದೇವತೆ ಶ್ರೀ ಹಾಸನಾಂಬೆಯ ಗರ್ಭಗುಡಿ ಬಾಗಿಲು ಗುರುವಾರ ಮಧ್ಯಾಹ್ನ 12.10ಕ್ಕೆ ಶಾಸ್ತ್ರೋಕ್ತವಾಗಿ ತೆರೆಯಲಾಯಿತು.
ಗರ್ಭಗುಡಿ ಬಾಗಿಲು ತೆರೆದಾಗ ಕಳೆದ ವರ್ಷ ಬಾಗಿಲು ಮುಚ್ಚುವ ವೇಳೆ ಹಚ್ಚಿಟ್ಟಿದ್ದ ಹಣತೆ ಹಾಗೆಯೇ ಉರಿಯುತ್ತಿತ್ತು. ಹೂವು ಬಾಡಿರಲಿಲ್ಲ, ನೈವೇದ್ಯ ತಾಜಾ ರೂಪದಲ್ಲೇ ಇತ್ತು. ಈ ಅಪರೂಪದ ದೃಶ್ಯವನ್ನು ನೆರೆದಿದ್ದ ಭಕ್ತರು ಕಣ್ತುಂಬಿಕೊಂಡು ಹಾಸನಾಂಬೆಯ ಪವಾಡಕ್ಕೆ ಭಾವ ಪರವಶರಾದರು.
ನ. 3ರ ಮುಂಜಾನೆವರೆಗೂ ಭಕ್ತರಿಗೆ ಅಹೋರಾತ್ರಿ ದರ್ಶನದ ವ್ಯವಸ್ಥೆ ಮಾಡಲಾಗಿದೆ. ಮೈಸೂರು ಅರಸು ವಂಶಸ್ಥ ನರಸಿಂಹರಾಜ ಅರಸ್ ಅವರು ದೇವಿಯ ಗರ್ಭಗುಡಿಯ ಬಾಗಿಲು ತೆರೆದ ತತ್ಕ್ಷಣ ಗೊನೆಕಟ್ಟಿದ್ದ ಬಾಳೆ ಕಂದು ಕಡಿದರು. ಆದಿಚುಂಚನಗಿರಿ ಶ್ರೀ, ಸಿದ್ಧಗಂಗಾ ಶ್ರೀ ಹಾಜರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.