SEBI ಮುಖ್ಯಸ್ಥೆ ಗೈರು: ಸಮಿತಿ ಸಭೆ ಮುಂದೂಡಿದ ಕ್ರಮಕ್ಕೆ ಬಿಜೆಪಿ ಆಕ್ರೋಶ
Team Udayavani, Oct 25, 2024, 1:45 AM IST
ಹೊಸದಿಲ್ಲಿ: ಹಿಂಡನ್ಬರ್ಗ್ ಆರೋಪಕ್ಕೆ ತುತ್ತಾಗಿರುವ ಸೆಬಿ ಮುಖ್ಯಸ್ಥೆ ಮಾಧವಿ ಪುರಿ ಬುಚ್ ಗುರುವಾರ ನಡೆಬೇಕಿದ್ದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಮುಂದೆ ಹಾಜರಾಗಲಿಲ್ಲ. ಹೀಗಾಗಿ, ಸಮಿತಿ ಅಧ್ಯಕ್ಷ ಕೆ.ಸಿ.ವೇಣುಗೋಪಾಲ್ ಸಭೆ ಮುಂದೂಡಿದ್ದಾರೆ.
ಇದೊಂದು ಏಕಕ್ಷೀಯ ನಿರ್ಧಾರ ಎಂದು ಬಿಜೆಪಿ ನೇತೃತ್ವದ ಎನ್ಡಿಎ ನಾಯಕರು ಹರಿಹಾಯ್ದಿದ್ದು, ಸ್ಪೀಕರ್ ಓಂ ಬಿರ್ಲಾ ಅವರಿಗೂ ಈ ಬಗ್ಗೆ ದೂರು ನೀಡಿದ್ದಾರೆ. ಅದಾನಿ ಗ್ರೂಪ್ ಕುರಿತಾದ ಹಿಂಡನ್ ಬರ್ಗ್ ಆರೋಪಗಳಲ್ಲಿ ಬುಚ್ ಅವರ ಹೆಸರೂ ಕೇಳಿಬಂದಿದ್ದು, ಈ ಬಗ್ಗೆ ಪಿಎಸಿ ವಿಚಾರಣೆ ನಡೆಸುತ್ತಿದೆ. ಸಮಿತಿಯ ಬೇರೆ ಯಾವುದೇ ಸದಸ್ಯರನ್ನು ಕೇಳದೆಯೇ ವೇಣುಗೋಪಾಲ್ ಸಭೆ ಮುಂದೂಡುವ ನಿರ್ಧಾರ ತೆಗದುಕೊಂಡಿದ್ದು, ಅವರ ಕಾರ್ಯವೈಖರಿ ಅಸಮಾಧಾನ ತಂದಿದೆ ಎಂದು ಬಿಜೆಪಿ ಹೇಳಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.