Dakshina Kannada: ಎಸೆಸೆಲ್ಸಿಯ 4,742 ವಿದ್ಯಾರ್ಥಿಗಳಿಗೆ ‘ದತ್ತಾಂಶ ಸೂತ್ರ’!

ಫಲಿತಾಂಶದಲ್ಲಿ ಅಗ್ರ ಸ್ಥಾನಕ್ಕಾಗಿ ಶಿಕ್ಷಣ ಇಲಾಖೆ ಸಂಕಲ್ಪ

Team Udayavani, Oct 25, 2024, 8:30 AM IST

WhatsApp Image 2024-10-25 at 02.14.40

ಮಂಗಳೂರು: ಎಸೆಸೆಲ್ಸಿಯಲ್ಲಿ 2023-24ರಲ್ಲಿ ಶೇ.92.12 ಫಲಿತಾಂಶದೊಂದಿಗೆ ರಾಜ್ಯದಲ್ಲಿ 2ನೇ ಸ್ಥಾನ ಪಡೆದ ದಕ್ಷಿಣ ಕನ್ನಡ ಜಿಲ್ಲೆಯು ಈ ಶೈಕ್ಷಣಿಕ ವರ್ಷದಲ್ಲಿ ಪ್ರಥಮ ಸ್ಥಾನ ಪಡೆಯುವ ನಿಟ್ಟಿನಲ್ಲಿ ‘ದತ್ತಾಂಶ ಸೂತ್ರ’ವೊಂದನ್ನು ಶಿಕ್ಷಣ ಇಲಾಖೆ ಹೊಸದಾಗಿ ಅನುಷ್ಠಾನಿಸಿದೆ.

ದ. ಕ. ಜಿಲ್ಲೆಯಲ್ಲಿ 525 ಶಾಲೆಗಳಿದ್ದು 10ನೇ ತರಗತಿಯಲ್ಲಿ 28,612 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಈ ಪೈಕಿ 4742 ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿದವರು ಎಂದು ಇಲಾಖೆ ಪತ್ತೆ ಹಚ್ಚಿತ್ತು. ಇವರನ್ನು ಇತರ ಮಕ್ಕಳ ಸಾಲಿಗೆ ತರುವ ನಿಟ್ಟಿನಲ್ಲಿ ದತ್ತಾಂಶ ಸೂತ್ರ ಎಂಬ ಕಾರ್ಯಕ್ರಮ ಆಯೋಜಿಸಲಾಗಿದೆ.

ಬಂಟ್ವಾಳ ವಲಯದಲ್ಲಿ 1052, ಬೆಳ್ತಂಗಡಿ 650, ಮಂಗಳೂರು ಉತ್ತರ 773, ಮಂಗಳೂರು ದಕ್ಷಿಣ 1064, ಮೂಡುಬಿದಿರೆ 342, ಪುತ್ತೂರು 627, ಸುಳ್ಯ 234 ವಿದ್ಯಾರ್ಥಿಗಳನ್ನು ನಿಧಾನ ಕಲಿಕೆಯವರು ಎಂದು ಗುರುತಿಸಲಾಗಿದೆ.

ನಿಧಾನ ಕಲಿಕೆಯ ಮಕ್ಕಳನ್ನು ಆಯಾ ಶಾಲಾ ಶಿಕ್ಷಕರಿಗೆ ಹಂಚಿಕೆ ಮಾಡಿ ಮಕ್ಕಳಿಗೆ ಕಠಿನ ಇರುವ ವಿಷಯಗಳ ಬಗ್ಗೆ ಶಿಕ್ಷಕರು ಹೆಚ್ಚಿನ ತರಬೇತಿ ನೀಡುತ್ತಿದ್ದಾರೆ. ಜತೆಗೆ ಆ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಮೂಡಿಸುವುದು, ಶಾಲೆಯಲ್ಲಿ ಆನಂದದಾಯಕ ಕಲಿಕಾ ವಾತಾವರಣ ನಿರ್ಮಿಸುವುದು ಇದರ ಉದ್ದೇಶ. ವಿಶೇಷ ತರಗತಿ ಆಯೋಜಿಸಿ ಪ್ರತಿದಿನ ಬೆಳಗ್ಗೆ 1 ಗಂಟೆ ತರಗತಿ ನಡೆಸಲಾಗುತ್ತದೆ. ದೀಕ್ಷಾ ಆ್ಯಪ್‌, ಇ-ಲರ್ನಿಂಗ್‌ ಸಾಧನ ಬಳಸಿ ಪಾಠ ಬೋಧಿಸಲಾಗುತ್ತದೆ. ಇದಕ್ಕಾಗಿಯೇ ಶಿಕ್ಷಕರಿಗೆ ವಿಷಯವಾರು ತರಬೇತಿ ನೀಡಲಾಗಿದೆ.

ನಿಧಾನ ಕಲಿಕೆಯ ವಿದ್ಯಾರ್ಥಿಗಳಿಗೆ ಹಾಗೂ ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿಗಳಿಗೆ ಪ್ರತಿದಿನ ಸ್ಟುಡಿಯೋ ಮೂಲಕ ಆನ್‌ಲೈನ್‌ ತರಬೇತಿ ನೀಡಲು ಉದ್ದೇಶಿಸಲಾಗಿದೆ.

‘ದತ್ತಾಂಶ ಸೂತ್ರದ ಪ್ರಯೋಗ ಆರಂಭವಾದ 2 ತಿಂಗಳ ಒಳಗೆ ನಿಧಾನ ಕಲಿಕೆಯ 4,742 ವಿದ್ಯಾರ್ಥಿಗಳ ಪೈಕಿ 1,200ರಷ್ಟು ವಿದ್ಯಾರ್ಥಿಗಳು ಕಲಿಕೆಯಲ್ಲಿ ಬಹಳಷ್ಟು ಸುಧಾರಣೆ ಕಂಡಿದ್ದಾರೆ’ ಎಂದು ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಟಾಪ್ ನ್ಯೂಸ್

Selfie Gone Wrong: ಕಾಡಾನೆ ಎದುರು ಸೆಲ್ಫಿ ತೆಗೆಯಲು ಹೋಗಿ ಜೀವ ಕಳೆದುಕೊಂಡ ಯುವಕ

Selfie Gone Wrong: ಕಾಡಾನೆ ಎದುರು ಸೆಲ್ಫಿ ತೆಗೆಯಲು ಹೋಗಿ ಜೀವ ಕಳೆದುಕೊಂಡ ಯುವಕ

By Election; ಯೋಗೇಶ್ವರ್‌ ನಮ್ಮ ಜತೆಗಿದ್ದರು, ಈಗಿಲ್ಲ ಅಷ್ಟೇ….: ವಿಜಯೇಂದ್ರ

By Election; ಯೋಗೇಶ್ವರ್‌ ನಮ್ಮ ಜತೆಗಿದ್ದರು, ಈಗಿಲ್ಲ ಅಷ್ಟೇ….: ವಿಜಯೇಂದ್ರ

Coastalwood; ತುಳುಚಿತ್ರ ನಿರ್ಮಾಣದತ್ತ ಶಿಲ್ಪಾಗಣೇಶ್;‌ ನಾಯಕನಾಗಿ ನಿತ್ಯಪ್ರಕಾಶ್‌ ಬಂಟ್ವಾಳ

Coastalwood; ತುಳುಚಿತ್ರ ನಿರ್ಮಾಣದತ್ತ ಶಿಲ್ಪಾಗಣೇಶ್;‌ ನಾಯಕನಾಗಿ ನಿತ್ಯಪ್ರಕಾಶ್‌ ಬಂಟ್ವಾಳ

ಸತೀಶ ಜಾರಕಿಹೊಳಿ

Hubli: ಟೀಕೆ ಮಾಡುತ್ತಿದ್ದವರೇ ಕುಟುಂಬ ರಾಜಕಾರಣಕ್ಕೆ ಬಲಿಯಾಗಿದ್ದಾರೆ: ಸತೀಶ ಜಾರಕಿಹೊಳಿ

12-surath

ನನ್ನ ಜತೆ ಬರದಿದ್ದರೆ 24 ತುಂಡು ಮಾಡುವೆ:ಬೆದರಿಕೆ ಪ್ರಕರಣ-ಆತಂಕದಿಂದ ಯುವತಿ ಆತ್ಮಹತ್ಯೆ ಯತ್ನ

karkala

Karkala: ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಹತ್ಯೆ ಮಾಡಿದ ಪತ್ನಿ – ದೂರು ದಾಖಲು

Udupi: ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಿದ ‘ಕ್ಯಾಪ್ಟನ್’ ಶ್ವಾನ ನಿವೃತ್ತಿ

Udupi: ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಿದ ‘ಕ್ಯಾಪ್ಟನ್’ ಶ್ವಾನ ನಿವೃತ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

17(1)

Mangaluru: ವಿಶೇಷ ಮಕ್ಕಳ ಕಂಗಳಲ್ಲಿ ಬಣ್ಣದ ಹಣತೆಗಳ ಕಾಂತಿ

12-surath

ನನ್ನ ಜತೆ ಬರದಿದ್ದರೆ 24 ತುಂಡು ಮಾಡುವೆ:ಬೆದರಿಕೆ ಪ್ರಕರಣ-ಆತಂಕದಿಂದ ಯುವತಿ ಆತ್ಮಹತ್ಯೆ ಯತ್ನ

11

Paduperar: ಈ ಬಾರಿ ರಾಮ ಮಂದಿರ ಗೂಡುದೀಪ!

10

Mangaluru: ನಿರ್ಬಂಧವಿದೆ, ದಂಡನೆಯಿದೆ.. ಜಾರಿ ಇಲ್ಲ !

WhatsApp Image 2024-10-25 at 02.11.37

Legislative council bypolls: ಒಬಿಸಿ ಸಮುದಾಯದ ಗೆಲುವು; ಜೆ.ಪಿ.ನಡ್ಡಾ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Selfie Gone Wrong: ಕಾಡಾನೆ ಎದುರು ಸೆಲ್ಫಿ ತೆಗೆಯಲು ಹೋಗಿ ಜೀವ ಕಳೆದುಕೊಂಡ ಯುವಕ

Selfie Gone Wrong: ಕಾಡಾನೆ ಎದುರು ಸೆಲ್ಫಿ ತೆಗೆಯಲು ಹೋಗಿ ಜೀವ ಕಳೆದುಕೊಂಡ ಯುವಕ

By Election; ಯೋಗೇಶ್ವರ್‌ ನಮ್ಮ ಜತೆಗಿದ್ದರು, ಈಗಿಲ್ಲ ಅಷ್ಟೇ….: ವಿಜಯೇಂದ್ರ

By Election; ಯೋಗೇಶ್ವರ್‌ ನಮ್ಮ ಜತೆಗಿದ್ದರು, ಈಗಿಲ್ಲ ಅಷ್ಟೇ….: ವಿಜಯೇಂದ್ರ

17(1)

Mangaluru: ವಿಶೇಷ ಮಕ್ಕಳ ಕಂಗಳಲ್ಲಿ ಬಣ್ಣದ ಹಣತೆಗಳ ಕಾಂತಿ

13

PM Modi: ಕಟ್ಟಡ ಕುಸಿತ: ಮೃತರ ಕುಟುಂಬಕ್ಕೆ ಪ್ರಧಾನಿ ಮೋದಿ 2 ಲಕ್ಷ ರೂ. ಪರಿಹಾರ

Coastalwood; ತುಳುಚಿತ್ರ ನಿರ್ಮಾಣದತ್ತ ಶಿಲ್ಪಾಗಣೇಶ್;‌ ನಾಯಕನಾಗಿ ನಿತ್ಯಪ್ರಕಾಶ್‌ ಬಂಟ್ವಾಳ

Coastalwood; ತುಳುಚಿತ್ರ ನಿರ್ಮಾಣದತ್ತ ಶಿಲ್ಪಾಗಣೇಶ್;‌ ನಾಯಕನಾಗಿ ನಿತ್ಯಪ್ರಕಾಶ್‌ ಬಂಟ್ವಾಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.