Paduperar: ಈ ಬಾರಿ ರಾಮ ಮಂದಿರ ಗೂಡುದೀಪ!

ಶ್ರೀ ನಾಗಬ್ರಹ್ಮ ಯುವಕ ಮಂಡಲದಿಂದ ವರ್ಷಕ್ಕೊಂದು ಹೊಸ ಮಾದರಿ ನಿರ್ಮಾಣ

Team Udayavani, Oct 25, 2024, 11:06 AM IST

11

ಬಜಪೆ: ಪಡುಪೆರಾರದ ಶ್ರೀ ನಾಗಬ್ರಹ್ಮ ಯುವಕ ಮಂಡಲ ಕಳೆದ 27 ವರ್ಷಗಳಿಂದ ದೀಪಾವಳಿ ಹಬ್ಬಕ್ಕೆ ಹೊಸ ಹೊಸ ಮಾದರಿಯ ಗೂಡುದೀಪವನ್ನು ನಿರ್ಮಿಸುತ್ತಿದೆ. ಈ ಬಾರಿ 28ನೇ ವರ್ಷಕ್ಕೆ ಅಯೋಧ್ಯೆ ಶ್ರೀ ರಾಮ ಮಂದಿರದ ಮಾದರಿಯ ಗೂಡು ದೀಪವನ್ನು ನಿರ್ಮಿಸುವ ಕಾರ್ಯದಲ್ಲಿ ಯುವಕರು ನಿರತರಾಗಿದ್ದಾರೆ.

ಯುವಕರು ಅತ್ಯಂತ ಸಂಭ್ರಮದಿಂದ ತಯಾರಿಸುವ ಈ ಬೃಹತ್‌ ಗೂಡು ದೀಪವನ್ನು ಪ್ರತಿವರ್ಷವೂ ಪಡುಪೆರಾರ ಶ್ರೀ ಬ್ರಹ್ಮ ಬಲವಾಂಡಿ ದೈವಸ್ಥಾನದ ಮಹಾದ್ವಾರದ ಬಳಿ ಬಜಪೆ- ಕೈಕಂಬ ರಾಜ್ಯ ಹೆದ್ದಾರಿ101ರಲ್ಲಿ ಬದಿಯಲ್ಲಿ ಸ್ಥಾಪಿಸಲಾಗುತ್ತದೆ. ಇದು ಈ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಭಾರೀ ಆಕರ್ಷಣೀಯವಾಗಿದೆ. ಪ್ರತಿ ವರ್ಷವೂ ಪ್ರಚಲಿತ ವಿದ್ಯಮಾನಕ್ಕೆ ತಕ್ಕಂತೆ ವಿಶೇಷಗಳನ್ನೂಳಗೊಂಡ ಮಾದರಿಯನ್ನು ತಯಾರಿಸುವುದು ಯುವಕ ಮಂಡಲದ ಯುವಕರ ವಿಶೇಷತೆ.

ಧನಲಕ್ಷ್ಮಿ ಟ್ಯಾಬ್ಲೋ ಮಾದರಿ, ಬ್ರಹ್ಮರಥ, ವಿಮಾನ, ಉದ್ಭವ ಲಿಂಗ, ಗಾಳಿಪಟ, ರಂಗಸ್ಥಳ, ನಾಗಮಂಡಲ, ಹೆಲಿಕಾಪ್ಟರ್‌ ಮುಂತಾದ ವಿವಿಧ ಆಕಾರದ ಗೂಡುದೀಪಗಳನ್ನು ನಿರ್ಮಾಣ ಮಾಡುತ್ತಾ ಬಂದಿರುವ ಯುವಕ ಮಂಡಲದ ಸದಸ್ಯರು ಹೊಸ ಹೊಸ ಚಿಂತನೆಗಳೊಂದಿಗೆ ಸಾರ್ವಜನಿಕರಿಗೆ ಮನಸ್ಸಿಗೆ ಮುದ ನೀಡುತ್ತಿದ್ದಾರೆ.

27ನೇ ವರ್ಷಕ್ಕೆ ಚಂದ್ರಯಾನ 3 ಮಾದರಿಯ ಬೃಹತ್‌ ಗೂಡುದೀಪ ನಿರ್ಮಿಸಲಾಗಿತ್ತು.ಗೂಡುದೀಪ ಮಾದರಿಯನ್ನು ಅ.31ರಂದು ಕತ್ತಿಂಜದಿಂದ ಪೆರಾರ ದ್ವಾರಕ್ಕೆ ತರಲಾಗುತ್ತದೆ. ಅಲ್ಲಿ ವೇದಿಕೆಯಲ್ಲಿ ಇಡಲಾಗುತ್ತದೆ. ಅಯೋಧ್ಯ ಶ್ರೀರಾಮ ಮಂದಿರದ ಮಾದರಿಯಾದ ಕಾರಣ ಇದನ್ನು ನೇತಾಡಿಸುವ ಇರಾದೆ ಇಲ್ಲವಂತೆ. ಬಣ್ಣಬಣ್ಣದ ದೀಪದಿಂದ ಇದನ್ನು ಶೃಂಗಾರಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ರಾಮ ಮಂದಿರ: 2 ತಿಂಗಳಿನಿಂದ ನಿರ್ಮಾಣ!
ಅಯೋಧ್ಯ ಶ್ರೀರಾಮ ಮಂದಿರದ ಮಾದರಿಯ ಗೂಡು ದೀಪವನ್ನು ನಿರ್ಮಿಸಲು ಯುವಕ ಮಂಡಲ ಸದಸ್ಯರು ಕಳೆದ 2 ತಿಂಗಳಿನಿಂದ ಕೆಲಸ ಮಾಡುತ್ತಿದ್ದಾರೆ.  ಸದಸ್ಯರೆಲ್ಲರೂ ಸಂಜೆಯ ವೇಳೆಗೆ ಪಡುಪೆರಾರದ ಕಟ್ತಿಂಜದ ಜರ್ನಾದನ ಶೆಟ್ಟಿಯವರ ಮನೆಯಲ್ಲಿ ಸೇರಿ ಈ ಗೂಡುದೀಪ ನಿರ್ಮಾಣದಲ್ಲಿ ತೊಡಗಿದ್ದಾರೆ. ಕಬ್ಬಿಣದ ರಾಡ್‌, ಪಾಮ್‌ ಶೀಟ್‌ ಅಳವಡಿಸಿ, ನಾಲ್ಕು ಬಣ್ಣ ದಿಂದ ಕೂಡಿದ ಅಯೋಧ್ಯ ಶ್ರೀರಾಮ ಮಂದಿರದ ಮಾದರಿ ನಿರ್ಮಿಸುತ್ತಿದ್ದಾರೆ. ಈ ಗೂಡುದೀಪ 10 ಅಡಿ ಎತ್ತರ, 11 ಅಡಿ ಉದ್ದ, 7 ಅಡಿ ಅಗಲವಿದೆ.

-ಸುಬ್ರಾಯ ನಾಯಕ್‌ ಎಕ್ಕಾರು

ಟಾಪ್ ನ್ಯೂಸ್

Actor Sushant Singh Case: ನಟಿ ರಿಯಾ ಚಕ್ರವರ್ತಿ ವಿರುದ್ಧ ಸಿಬಿಐ ಸಲ್ಲಿಸಿದ್ದ ಅರ್ಜಿ ವಜಾ

Actor Sushant Singh Case: ನಟಿ ರಿಯಾ ಚಕ್ರವರ್ತಿ ವಿರುದ್ಧ ಸಿಬಿಐ ಸಲ್ಲಿಸಿದ್ದ ಅರ್ಜಿ ವಜಾ

One Day Cup: Western Australia lost 8 wickets by just 1 run

One Day Cup: ಕೇವಲ 1 ರನ್‌ ಅಂತರದಲ್ಲಿ 8 ವಿಕೆಟ್‌ ಕಳೆದುಕೊಂಡ ವೆಸ್ಟರ್ನ್‌ ಆಸ್ಟ್ರೇಲಿಯಾ

First Look:ವಂದೇ ಭಾರತ್‌ ಸ್ಲೀಪರ್‌ ರೈಲು ಬಿಡುಗಡೆಗೆ ಸಜ್ಜು;ಅತ್ಯಾಧುನಿಕ ವೈಶಿಷ್ಟ್ಯಗಳಿವೆ!

First Look:ವಂದೇ ಭಾರತ್‌ ಸ್ಲೀಪರ್‌ ರೈಲು ಬಿಡುಗಡೆಗೆ ಸಜ್ಜು;ಅತ್ಯಾಧುನಿಕ ವೈಶಿಷ್ಟ್ಯಗಳಿವೆ!

By ElectioN; ಸಂಡೂರಿನಲ್ಲಿ ಒಗ್ಗಟ್ಟು ಪ್ರದರ್ಶಿಸಿದ ಜನಾರ್ದನ ರೆಡ್ಡಿ- ಶ್ರೀರಾಮುಲು

By Election; ಸಂಡೂರಿನಲ್ಲಿ ಒಗ್ಗಟ್ಟು ಪ್ರದರ್ಶಿಸಿದ ಜನಾರ್ದನ ರೆಡ್ಡಿ- ಶ್ರೀರಾಮುಲು

21-tirupathi

Tour Circle: ತಿರುಮಲನ ದರ್ಶನಕ್ಕೊಂದು ಪ್ರವಾಸ

Canada: ಡಿವೈಡರ್ ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಕಾರು… ನಾಲ್ವರು ಭಾರತೀಯರು ಮೃತ್ಯು

Road Mishap: ಕೆನಡಾದಲ್ಲಿ ಭೀಕರ ರಸ್ತೆ ಅಪಘಾತ… ನಾಲ್ವರು ಭಾರತೀಯರು ಮೃತ್ಯು

Sapthami Gowda is joins the cast of ‘Halagali’

Sapthami Gowda: ʼಹಲಗಲಿʼಗೆ ಸಪ್ತಮಿ ನಾಯಕಿ; ಡಾಲಿಗೆ ಕಾಂತಾರ ಬೆಡಗಿ ಜೋಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

17(1)

Mangaluru: ವಿಶೇಷ ಮಕ್ಕಳ ಕಂಗಳಲ್ಲಿ ಬಣ್ಣದ ಹಣತೆಗಳ ಕಾಂತಿ

12-surath

ನನ್ನ ಜತೆ ಬರದಿದ್ದರೆ 24 ತುಂಡು ಮಾಡುವೆ:ಬೆದರಿಕೆ ಪ್ರಕರಣ-ಆತಂಕದಿಂದ ಯುವತಿ ಆತ್ಮಹತ್ಯೆ ಯತ್ನ

10

Mangaluru: ನಿರ್ಬಂಧವಿದೆ, ದಂಡನೆಯಿದೆ.. ಜಾರಿ ಇಲ್ಲ !

WhatsApp Image 2024-10-25 at 02.11.37

Legislative council bypolls: ಒಬಿಸಿ ಸಮುದಾಯದ ಗೆಲುವು; ಜೆ.ಪಿ.ನಡ್ಡಾ

WhatsApp Image 2024-10-25 at 02.14.40

Dakshina Kannada: ಎಸೆಸೆಲ್ಸಿಯ 4,742 ವಿದ್ಯಾರ್ಥಿಗಳಿಗೆ ‘ದತ್ತಾಂಶ ಸೂತ್ರ’!

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Actor Sushant Singh Case: ನಟಿ ರಿಯಾ ಚಕ್ರವರ್ತಿ ವಿರುದ್ಧ ಸಿಬಿಐ ಸಲ್ಲಿಸಿದ್ದ ಅರ್ಜಿ ವಜಾ

Actor Sushant Singh Case: ನಟಿ ರಿಯಾ ಚಕ್ರವರ್ತಿ ವಿರುದ್ಧ ಸಿಬಿಐ ಸಲ್ಲಿಸಿದ್ದ ಅರ್ಜಿ ವಜಾ

ಮುಧೋಳ: 36 ಹಳ್ಳಿ ಗಳಿಗೆ ಒಂದೇ ಒಂದು ಪೊಲೀಸ್‌ ಠಾಣೆ

ಮುಧೋಳ: 36 ಹಳ್ಳಿಗಳಿಗೆ ಒಂದೇ ಒಂದು ಪೊಲೀಸ್‌ ಠಾಣೆ

One Day Cup: Western Australia lost 8 wickets by just 1 run

One Day Cup: ಕೇವಲ 1 ರನ್‌ ಅಂತರದಲ್ಲಿ 8 ವಿಕೆಟ್‌ ಕಳೆದುಕೊಂಡ ವೆಸ್ಟರ್ನ್‌ ಆಸ್ಟ್ರೇಲಿಯಾ

First Look:ವಂದೇ ಭಾರತ್‌ ಸ್ಲೀಪರ್‌ ರೈಲು ಬಿಡುಗಡೆಗೆ ಸಜ್ಜು;ಅತ್ಯಾಧುನಿಕ ವೈಶಿಷ್ಟ್ಯಗಳಿವೆ!

First Look:ವಂದೇ ಭಾರತ್‌ ಸ್ಲೀಪರ್‌ ರೈಲು ಬಿಡುಗಡೆಗೆ ಸಜ್ಜು;ಅತ್ಯಾಧುನಿಕ ವೈಶಿಷ್ಟ್ಯಗಳಿವೆ!

By ElectioN; ಸಂಡೂರಿನಲ್ಲಿ ಒಗ್ಗಟ್ಟು ಪ್ರದರ್ಶಿಸಿದ ಜನಾರ್ದನ ರೆಡ್ಡಿ- ಶ್ರೀರಾಮುಲು

By Election; ಸಂಡೂರಿನಲ್ಲಿ ಒಗ್ಗಟ್ಟು ಪ್ರದರ್ಶಿಸಿದ ಜನಾರ್ದನ ರೆಡ್ಡಿ- ಶ್ರೀರಾಮುಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.