Bidkalkatte: ಆಡಿಸಿ ನೋಡಿದರೂ ಬೀಳದ ಶಿಲೆ; ಇದೆಂಥಾ ಲೀಲೆ?

ಕಂಬಿಕಲ್ಲು: ಬಂಡೆಯ ಮೇಲೆ ಜಾರುವ ಸ್ಥಿತಿಯಲ್ಲಿಯೇ ನಿಂತಿದೆ ವೃತ್ತಾಕಾರದ ಕಲ್ಲು

Team Udayavani, Oct 25, 2024, 12:09 PM IST

15

ಬಿದ್ಕಲ್‌ಕಟ್ಟೆ: ಇಲ್ಲೊಂದು ಬೃಹತ್‌ ಗಾತ್ರದ ವೃತ್ತಾಕಾರದ ಶಿಲೆ ಶತಮಾನಗಳಿಂದಲೂ ಜಾರುವ ಸ್ಥಿತಿಯಲ್ಲೇ ಸ್ಥಿರವಾಗಿ ನಿಂತಿದೆ. ಸಣ್ಣ ಸಣ್ಣ ಕಂಪನಗಳಿಗೇ ಬೆಟ್ಟಗಳು ಉರುಳುವ ಈ ಕಾಲದಲ್ಲಿ ಕಲ್ಲೊಂದು ಯಾವ ಹೆಚ್ಚಿನ ಆಧಾರವಿಲ್ಲದೆ ಗಟ್ಟಿಯಾಗಿ ನಿಂತಿರುವುದು ಅಚ್ಚರಿ ಮತ್ತು ದೈವ ಲೀಲೆ ಎಂದೇ ಜನರು ಪರಿಗಣಿಸಿದ್ದಾರೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾರ್ದಳ್ಳಿ ಮಂಡಳ್ಳಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಬಿದ್ಕಲ್‌ಕಟ್ಟೆಯಿಂದ ಸುಮಾರು 4 ಕಿ.ಮೀ ದೂರದ ಕಕ್ಕುಂಜೆ ಗ್ರಾಮದ ಕಂಬಿಕಲ್ಲು ಶ್ರೀ ಮಹಾಗಣಪತಿ ದೇಗುಲದ ಸಮೀಪ ನೈಸರ್ಗಿಕ ಹಸುರು ಕಾನನದ ನಡುವೆ ಈ ಕಲ್ಲು ನಿಂತಿದೆ.

ಇಲ್ಲಿನ ಪರಿಸರದಲ್ಲಿ ಕಂಬದಂತೆ ಸಾಲು ಸಾಲು ಬೃಹದಾಕಾರದ ಬಂಡೆಗಳು ಆನೆಯ ರೂಪದಲ್ಲಿರುವುದರಿಂದ ಈ ಕ್ಷೇತ್ರಕ್ಕೆ ಕಂಬಿಕಲ್ಲು ಎನ್ನುವ ಹೆಸರು ಬಂದಿದೆ ಎಂದು ಸ್ಥಳೀಯರಾದ ಕೃಷ್ಣಮೂರ್ತಿ ಆಚಾರ್ಯ ಕಕ್ಕುಂಜೆ ಅವರು ಹೇಳುತ್ತಾರೆ.

ಉದ್ಭವ ಗಣಪತಿಯ ಬೀಡು
ಇಲ್ಲಿನ ಸುತ್ತಮುತ್ತ ಶಿರಿಯಾರದ ಗುಡ್ಡಟ್ಟು ಶ್ರೀ ವಿನಾಯಕ ದೇವಸ್ಥಾನ, ಪಡುಮುಂಡು ಶ್ರೀ ಮಹಾಗಣಪತಿ ದೇವಸ್ಥಾನ, ಕಂಬಿಕಲ್ಲು (ಕಕ್ಕುಂಜೆ) ಶ್ರೀ ಮಹಾಗಣಪತಿ ದೇಗುಲ, ಬಿದ್ಕಲ್‌ಕಟ್ಟೆ
ಕೊಳನಕಲ್ಲು ಶ್ರೀ ವಿನಾಯಕ ದೇಗುಲಗಳು ಪ್ರಾಕೃತಿಕ ಸೊಬಗಿನ ನಡುವೆ ನಿಂತಿವೆ.

ಹಿಂದೆ 2 ವೃತ್ತಾಕಾರದ ಶಿಲೆಗಳಿದ್ದವು
ಪುರಾಣ ಪ್ರಸಿದ್ಧ ಕಂಬಿಕಲ್ಲು (ಕಕ್ಕುಂಜೆ) ಶ್ರೀ ಮಹಾ ಗಣಪತಿ ದೇಗುಲಕ್ಕೂ ಈ ಶಿಲೆಗೆ ಅವಿನಾಭಾವ ಸಂಬಂಧಗಳಿವೆ. ದೇಗುಲಕ್ಕೆ ಆಗಮಿಸುವ ಭಕ್ತರು ಪ್ರಕೃತಿಯಲ್ಲಿ ಬೆರೆತಿರುವ ವಿಸ್ಮಯಕಾರಿ ಈ ಶಿಲೆಗೆ ನಮಿಸುತ್ತಾರೆ. ಹಿಂದೆ ಈ ಬೃಹದಾಕಾರದ ಬಂಡೆಯ ಮೇಲೆ 2 ವೃತ್ತಾಕಾರದ ಶಿಲೆಗಳಿದ್ದವು. ಯಾರೋ ಒಬ್ಬರು ಹಣದ ಆಸೆಗಾಗಿ ಒಂದು ಶಿಲೆಯನ್ನು ಒಡೆದು ಗಣಿಗಾರಿಕೆಗೆ ಮುಂದಾಗಿದ್ದರು. ಆಗ ಅವರ ಕುಟುಂಬಕ್ಕೆ ಸಂಕಷ್ಟ ಎದುರಾಗಿತ್ತು ಎನ್ನಲಾಗಿದೆ. ಹೀಗಾಗಿ ಗಣಿಗಾರಿಕೆ ನಿಲ್ಲಿಸಲಾಯಿತು ಎನ್ನಲಾಗುತ್ತಿದೆ.

ಗಣಿಗಾರಿಕೆ ನಿಂತಿದೆ…
ಶತಮಾನಗಳ ಹಿಂದೆ ಬೃಹದಾಕಾರದ ಬಂಡೆಯ ಮೇಲೆ ದೇವರ ಕಣ್ಣಿನ ಗುಡ್ಡೆಯಂತಿದ್ದ ಎರಡು ಬಂಡೆಗಳಿದ್ದವು. ಇವುಗಳಲ್ಲಿ ಒಂದನ್ನು ಒಡೆಯಲು ಯತ್ನಿಸಿದಾಗ ಸಮಸ್ಯೆಗಳು ಕಾಣಿಸಿದವಂತೆ. ಹೀಗಾಗಿ ಆ ದಿನಗಳಿಂದ ಈ ದೇಗುಲದ ಸುತ್ತಮುತ್ತಲಿನ ಪರಿಸರದಲ್ಲಿ ಶಿಲೆಕಲ್ಲು ಗಣಿಗಾರಿಕೆ ಸಂಪೂರ್ಣ ನಿಂತಿದೆ. ಜಾರುವ ಸ್ಥಿತಿಯಲ್ಲಿರುವ ಈ ಶಿಲೆ ಯಾವುದೇ ಕಾಲದ ಹೊಡೆತಕ್ಕೆ ಜಗ್ಗದೇ ಸ್ಥಿರವಾಗಿ ನಿಂತಿರುವುದು ವಿಶೇಷ.
-ವೇ|ಮೂ| ಶ್ರೀಪತಿ ಭಟ್‌ ಕಕ್ಕುಂಜೆ, ಪ್ರಧಾನ ಅರ್ಚಕರು, ಕಂಬಿಕಲ್ಲು ಶ್ರೀ ಮಹಾಗಣಪತಿ ದೇಗುಲ

-ಲೋಕೇಶ್‌ ಆಚಾರ್ಯ ತೆಕ್ಕಟ್ಟೆ

ಟಾಪ್ ನ್ಯೂಸ್

Sirwara: ಮರಳು ತುಂಬಿದ ಲಾರಿ ಪಲ್ಟಿ : ಇಬ್ಬರಿಗೆ ಗಾಯ

Sirwara: ಮರಳು ತುಂಬಿದ ಲಾರಿ ಪಲ್ಟಿ : ಇಬ್ಬರಿಗೆ ಗಾಯ

Ajekar: ಮಧ್ಯರಾತ್ರಿ ಪ್ರತಿಮಾ ಮನೆಗೆ ಬಂದಿದ್ದ ಪ್ರಿಯಕರ; ಇನ್ಸ್ಟಾ ಲವ್‌ ಗೆ ಗಂಡ ಬಲಿಯಾದ

Ajekar: ಮಧ್ಯರಾತ್ರಿ ಪ್ರತಿಮಾ ಮನೆಗೆ ಬಂದಿದ್ದ ಪ್ರಿಯಕರ; ಇನ್ಸ್ಟಾ ಲವ್‌ ಗೆ ಗಂಡ ಬಲಿಯಾದ

Mangaluru: ಸೈಟ್‌ ತೋರಿಸುವ ನೆಪದಲ್ಲಿ ಲೈಂಗಿಕ ಕಿರುಕುಳ: ಬಿಲ್ಡರ್‌ ವಿರುದ್ಧ ಮಹಿಳೆ ದೂರು

Mangaluru: ಸೈಟ್‌ ತೋರಿಸುವ ನೆಪದಲ್ಲಿ ಲೈಂಗಿಕ ಕಿರುಕುಳ: ಬಿಲ್ಡರ್‌ ವಿರುದ್ಧ ಮಹಿಳೆ ದೂರು

Road Mishap: ಆನಂದಪುರ ಬಳಿ ಭೀಕರ ಅಪಘಾತ… ಇಬ್ಬರು ಸ್ಥಳದಲ್ಲೇ ಮೃತ್ಯು

Road Mishap: ಆನಂದಪುರ ಬಳಿ ಭೀಕರ ಅಪಘಾತ… ಇಬ್ಬರು ಸ್ಥಳದಲ್ಲೇ ಮೃತ್ಯು

Bengaluru: ನಿರ್ಮಾಣ ಹಂತದ ಕಟ್ಟಡ ಕುಸಿತ; ಮೃತರ ಸಂಖ್ಯೆ 9ಕ್ಕೆ ಏರಿಕೆ

Bengaluru: ನಿರ್ಮಾಣ ಹಂತದ ಕಟ್ಟಡ ಕುಸಿತ ಪ್ರಕರಣ; ಮೃತರ ಸಂಖ್ಯೆ 9ಕ್ಕೆ ಏರಿಕೆ

Actor Sushant Singh Case: ನಟಿ ರಿಯಾ ಚಕ್ರವರ್ತಿ ವಿರುದ್ಧ ಸಿಬಿಐ ಸಲ್ಲಿಸಿದ್ದ ಅರ್ಜಿ ವಜಾ

Actor Sushant Singh Case: ನಟಿ ರಿಯಾ ಚಕ್ರವರ್ತಿ ವಿರುದ್ಧ ಸಿಬಿಐ ಸಲ್ಲಿಸಿದ್ದ ಅರ್ಜಿ ವಜಾ

One Day Cup: Western Australia lost 8 wickets by just 1 run

One Day Cup: ಕೇವಲ 1 ರನ್‌ ಅಂತರದಲ್ಲಿ 8 ವಿಕೆಟ್‌ ಕಳೆದುಕೊಂಡ ವೆಸ್ಟರ್ನ್‌ ಆಸ್ಟ್ರೇಲಿಯಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ajekar: ಮಧ್ಯರಾತ್ರಿ ಪ್ರತಿಮಾ ಮನೆಗೆ ಬಂದಿದ್ದ ಪ್ರಿಯಕರ; ಇನ್ಸ್ಟಾ ಲವ್‌ ಗೆ ಗಂಡ ಬಲಿಯಾದ

Ajekar: ಮಧ್ಯರಾತ್ರಿ ಪ್ರತಿಮಾ ಮನೆಗೆ ಬಂದಿದ್ದ ಪ್ರಿಯಕರ; ಇನ್ಸ್ಟಾ ಲವ್‌ ಗೆ ಗಂಡ ಬಲಿಯಾದ

18(1)

Kaup ಪೇಟೆ ಕೊಳಚೆಗೆ ಕೃಷಿ ಭೂಮಿಗಳೇ ಬಲಿ!; 80ಕ್ಕೂ ಅಧಿಕ ಮನೆಗಳಿಗೆ ನಿತ್ಯ ಯಾತನೆ

karkala

Karkala: ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಹತ್ಯೆ ಮಾಡಿದ ಪತ್ನಿ – ದೂರು ದಾಖಲು

14

Beejadi-ಗೋಪಾಡಿ ನಡುವಿನ ರಾಷ್ಟ್ರೀಯ ಹೆದ್ದಾರಿ: ಬೆಳಗದ ದಾರಿದೀಪ, ಸಂಚಾರಕ್ಕೆ ಸಂಚಕಾರ

13

Basroor: ಎರಡು ದಶಕಗಳಿಂದ ಪಾಳು ಬಿದ್ದ ಮಾರ್ಗೋಳಿ ಸಮಾಜ ಮಂದಿರ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Sirwara: ಮರಳು ತುಂಬಿದ ಲಾರಿ ಪಲ್ಟಿ : ಇಬ್ಬರಿಗೆ ಗಾಯ

Sirwara: ಮರಳು ತುಂಬಿದ ಲಾರಿ ಪಲ್ಟಿ : ಇಬ್ಬರಿಗೆ ಗಾಯ

Ajekar: ಮಧ್ಯರಾತ್ರಿ ಪ್ರತಿಮಾ ಮನೆಗೆ ಬಂದಿದ್ದ ಪ್ರಿಯಕರ; ಇನ್ಸ್ಟಾ ಲವ್‌ ಗೆ ಗಂಡ ಬಲಿಯಾದ

Ajekar: ಮಧ್ಯರಾತ್ರಿ ಪ್ರತಿಮಾ ಮನೆಗೆ ಬಂದಿದ್ದ ಪ್ರಿಯಕರ; ಇನ್ಸ್ಟಾ ಲವ್‌ ಗೆ ಗಂಡ ಬಲಿಯಾದ

Mangaluru: ಸೈಟ್‌ ತೋರಿಸುವ ನೆಪದಲ್ಲಿ ಲೈಂಗಿಕ ಕಿರುಕುಳ: ಬಿಲ್ಡರ್‌ ವಿರುದ್ಧ ಮಹಿಳೆ ದೂರು

Mangaluru: ಸೈಟ್‌ ತೋರಿಸುವ ನೆಪದಲ್ಲಿ ಲೈಂಗಿಕ ಕಿರುಕುಳ: ಬಿಲ್ಡರ್‌ ವಿರುದ್ಧ ಮಹಿಳೆ ದೂರು

Road Mishap: ಆನಂದಪುರ ಬಳಿ ಭೀಕರ ಅಪಘಾತ… ಇಬ್ಬರು ಸ್ಥಳದಲ್ಲೇ ಮೃತ್ಯು

Road Mishap: ಆನಂದಪುರ ಬಳಿ ಭೀಕರ ಅಪಘಾತ… ಇಬ್ಬರು ಸ್ಥಳದಲ್ಲೇ ಮೃತ್ಯು

Bengaluru: ನಿರ್ಮಾಣ ಹಂತದ ಕಟ್ಟಡ ಕುಸಿತ; ಮೃತರ ಸಂಖ್ಯೆ 9ಕ್ಕೆ ಏರಿಕೆ

Bengaluru: ನಿರ್ಮಾಣ ಹಂತದ ಕಟ್ಟಡ ಕುಸಿತ ಪ್ರಕರಣ; ಮೃತರ ಸಂಖ್ಯೆ 9ಕ್ಕೆ ಏರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.