MUDA Case: ಸಿಎಂ ಸಿದ್ದರಾಮಯ್ಯ ಪತ್ನಿ 3 ತಾಸು ಲೋಕಾ ವಿಚಾರಣೆ
ಅಗತ್ಯ ಮಾಹಿತಿ ಜತೆಗೆ ವೀಡಿಯೋ ಆಧಾರಿತ ಹೇಳಿಕೆ ದಾಖಲಿಸಿದ ಮೈಸೂರು ಲೋಕಾಯುಕ್ತ ಪೊಲೀಸ್
Team Udayavani, Oct 26, 2024, 6:45 AM IST
ಮೈಸೂರು: ಮುಡಾದ 50:50 ಅನುಪಾತದಡಿ ನಿವೇಶನ ಹಂಚಿಕೆ ಹಗರಣ ಸಂಬಂಧ 2ನೇ ಆರೋಪಿಯಾಗಿರುವ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರನ್ನು ಶುಕ್ರವಾರ ಮೈಸೂರು ಲೋಕಾಯುಕ್ತ ಪೊಲೀಸರು ಸತತ 3 ತಾಸು ವಿಚಾರಣೆ ನಡೆಸಿ, ಅಗತ್ಯ ಮಾಹಿತಿ ಕಲೆ ಹಾಕಿದ್ದಾರೆ.
ಕೆಸರೆಯ ಸರ್ವೆ ನಂ.462 ಮತ್ತು 464ರ 3.16 ಎಕ್ರೆ ಭೂಮಿಗೆ ಬದಲಿಯಾಗಿ ಬಿ.ಎಂ. ಪಾರ್ವತಿ ಅವರು 50:50ರ ಅನುಪಾತದಲ್ಲಿ ಮುಡಾದಿಂದ ನಗರದ ಪ್ರತಿಷ್ಠಿತ ಬಡಾವಣೆಯಲ್ಲಿ 14 ನಿವೇಶನಗಳನ್ನು ಪಡೆದಿದ್ದ ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿರುವ ಲೋಕಾಯುಕ್ತ ಅಧಿಕಾರಿಗಳು ಶುಕ್ರವಾರ ಪಾರ್ವತಿಯವರನ್ನು ವಿಚಾರಣೆಗೆ ಒಳಪಡಿಸಿ ಅಗತ್ಯ ಮಾಹಿತಿ ಕಲೆ ಹಾಕಿರುವುದಲ್ಲದೆ, ವೀಡಿಯೋ ಆಧಾರಿತ ಹೇಳಿಕೆಯನ್ನೂ ದಾಖಲು ಮಾಡಿಕೊಂಡಿದ್ದಾರೆ.
ವಿಚಾರಣೆ ವೇಳೆ ವಿವಾದಿತ ಭೂಮಿಗೆ ಸಂಬಂಧಿಸಿ ಹಲವು ಪ್ರಶ್ನೆ ಕೇಳಿದ್ದು, ಪಾರ್ವತಿ ಅವರು ಸಮರ್ಪಕ ಉತ್ತರ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೈಸೂರು ಲೋಕಾಯುಕ್ತ ಎಸ್ಪಿ ಟಿ.ಜೆ. ಉದೇಶ್ ನೇತೃತ್ವದಲ್ಲಿ ವಿಚಾರಣೆ ನಡೆದಿದೆ. ಈಗಾಗಲೇ ಎ4, ಎ3 ಆರೋಪಿಗಳ ಸಹಿತ ಹಲವರನ್ನು ಕಚೇರಿಗೆ ಕರೆಸಿಕೊಂಡು ವಿಚಾರಣೆ ನಡೆಸಿರುವ ಲೋಕಾಯುಕ್ತ ಪೊಲೀಸರು, ಗುರುವಾರ ಮಾಜಿ ಸಚಿವ ಬಚ್ಚೇಗೌಡ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಸುಬ್ರಹ್ಮಣ್ಯ ರಾವ್ ಅವರನ್ನು ಕೂಡ ವಿಚಾರಣೆಗೆ ಒಳಪಡಿಸಿದ್ದರು.
ಅ. 24ರ ಗುರುವಾರ ಸಂಜೆ ಪಾರ್ವತಿ ಅವರಿಗೆ ಶುಕ್ರವಾರವೇ ಖುದ್ದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಲೋಕಾಯುಕ್ತ ಕಚೇರಿಗೆ ಆಗಮಿಸಿದ ಪಾರ್ವತಿ ಅವರನ್ನು ಮಧ್ಯಾಹ್ನ 1ರ ವರೆಗೆ ವಿಚಾರಣೆ ನಡೆಸಲಾಯಿತು.
ಗೌಪ್ಯತೆ ಕಾಪಾಡಿಕೊಂಡ ಪಾರ್ವತಿ
ಪಾರ್ವತಿಯವರು 14 ನಿವೇಶನ ವಾಪಸ್ ನೀಡಿದ ಸಂದರ್ಭ, ಅವುಗಳ ಖಾತೆ ರದ್ದು ಮಾಡುವ ಸಂದರ್ಭ ಗೌಪ್ಯತೆ ಕಾಪಾಡಿಕೊಂಡಿದ್ದರು. ಅಷ್ಟೇ ಅಲ್ಲದೆ ಉಪನೋಂದಣಾಧಿಕಾರಿಯೇ ಪಾರ್ವತಿ ಅವರು ಇರುವಲ್ಲಿಗೆ ಹೋಗಿ ರದ್ದತಿ ಪ್ರಕ್ರಿಯೆ ನಡೆಸಿದ್ದರು. ಈಗ ಲೋಕಾಯುಕ್ತ ವಿಚಾರಣೆ ಸಂದರ್ಭವೂ ಪಾರ್ವತಿಯವರು ಗೌಪ್ಯತೆ ಕಾಪಾಡಿಕೊಂಡಿದ್ದಾರೆ.
ಲೋಕಾಯುಕ್ತ ಪ್ರಶ್ನೆಗಳು
ನಿಮ್ಮ ಆದಾಯದ ಮೂಲ ಯಾವುದು? ನಿಮ್ಮ ಸಹೋದರ ನೀಡಿದ ಭೂಮಿ ಹಿನ್ನೆಲೆ ಗೊತ್ತೇ?
ನಿಮಗೆ ಕೆಸರೆಯ ಸರ್ವೆ ನಂ. 462, 464ರ 3.14 ಎಕ್ರೆ ಭೂಮಿಯ ಬಗ್ಗೆ ಗೊತ್ತಿದೆಯೇ?
ಭೂಮಿಯನ್ನು ಮುಡಾ ವಶಕ್ಕೆ ತೆಗೆದುಕೊಂಡದ್ದು ತಿಳಿದಿತ್ತೇ? ಬೇರೆಡೆ ಬದಲಿ ಭೂಮಿ ಕೇಳಿದ್ದಿರೇ?
ಆ ಭೂಮಿ ಬದಲಿಗೆ ನಿವೇಶನ ತೆಗೆದುಕೊಳ್ಳಿ ಎಂದವರು ಯಾರು? 14 ನಿವೇಶನಗಳಿಗೆ ಅರ್ಜಿ ಹಾಕಿದ್ದಿರಾ?
14 ನಿವೇಶನಗಳ ಅಸಲಿ ದಾಖಲೆಗಳು ನಿಮ್ಮ ಬಳಿ ಇವೆಯೇ? ನಿವೇಶನ ವಾಪಸ್ ನೀಡಿದ್ದೇಕೆ?
ಅರ್ಜಿಯಲ್ಲಿ ಹಾಕಿರುವ ಸಹಿ ನಿಮ್ಮದೇ? ನಿಮ್ಮ ಪರ ಬೇರೆಯವರು ಸಹಿ ಹಾಕಿದ್ದಾರೆಯೇ?
ದಾನಪತ್ರದ ಅಸಲಿ ದಾಖಲೆಗಳು ನಿಮ್ಮ ಬಳಿ ಇವೆಯೇ? ಈ ಎಲ್ಲ ವಿಚಾರ ನಿಮ್ಮ ಪತಿ ಸಿದ್ದರಾಮಯ್ಯ, ಪುತ್ರ ಯತೀಂದ್ರ ಅವರಿಗೆ ಗೊತ್ತಿದೆಯೇ?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madikeri: ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಯನ್ನು ಗಾಯಗೊಳಿಸಿದ ಬಂಟ್ವಾಳ ಮೂಲದ ಚಾಲಕನ ಬಂಧನ
Karnataka: ಬೇಲೆಕೇರಿ ಅದಿರು; ಸತೀಶ್ ಸೈಲ್ ಸೇರಿ 7 ಮಂದಿಗೆ ಇಂದು ಶಿಕ್ಷೆ ಪ್ರಕಟ
By election; 3 ಕ್ಷೇತ್ರ 83 ನಾಮಪತ್ರ
Rain ;ಹಿಂಗಾರು ಮಳೆಗೆ ರಾಜ್ಯದ 1 ಲಕ್ಷ ಹೆಕ್ಟೇರ್ ಬೆಳೆ ನಾಶ
BY-Election: ನಿಖಿಲ್ ಕುಮಾರಸ್ವಾಮಿಗೆ ಟಿಕೆಟ್ ಕೊಡಿಸಲು ಚದುರಂಗದಾಟ: ಡಿ.ಕೆ. ಸುರೇಶ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.