Daily Horoscope: ಈ ರಾಶಿಯ ಗೃಹಿಣಿಯರಿಗೆ ನೆಮ್ಮದಿಯ ಅನುಭವ
Team Udayavani, Oct 27, 2024, 7:00 AM IST
26-10-2024
ಮೇಷ: ಇಂದು ಕೆಲಸಕ್ಕೆ ವಿರಾಮ, ಆದರೆ ಶಕ್ತಿ ಸಂಚಯನದ ದಿನ. ಗೃಹದ ಆವಶ್ಯಕತೆಗಳ ಕಡೆಗೆ ಗಮನ. ದೇವಾಲಯ, ಅನಾಥಾಲಯಕ್ಕೆ ಭೇಟಿ. ಹಿರಿಯರಿಗೆ, ಗೃಹಿಣಿಯರಿಗೆ ಸಮಾಧಾನದ ದಿನ. ಕೆಲವು ವರ್ಗದ ವ್ಯಾಪಾರಿಗಳಿಗೆ ಅನುಕೂಲ.
ವೃಷಭ: ಮುಂದಿನ ಸಪ್ತಾಹದ ಕೆಲಸಗಳು ಹಾಗೂ ಯೋಜನೆಗಳ ಚಿಂತನೆ. ದೂರದಲ್ಲಿರುವ ಮಕ್ಕಳ ಆಗಮನ. ವೃದ್ಧಾಶ್ರಮಗಳಿಗೆ ಭೇಟಿ. ಗೃಹಿಣಿಯರಿಗೆ ನೆಮ್ಮದಿಯ ಅನುಭವ. ಕುಟುಂಬದಲ್ಲಿ ವಿವಾಹದ ಸಿದ್ಧತೆ.
ಮಿಥುನ: ಮನೆ ಹಾಗೂ ಮನದಲ್ಲಿ ವಿರಾಮದ ಭಾವ. ಉದ್ಯೋಗಸ್ಥರಿಗೆ ನಾಳೆ ಆಗಬೇಕಾದ ಕೆಲಸಗಳ ಚಿಂತೆ. ವ್ಯವಹಾರಸ್ಥರಿಗೆ ನಿರಾಳ ಮನೋಭಾವ. ಸಾಹಿತ್ಯ ಗೋಷ್ಠಿ, ಸಂಗೀತ ಶ್ರವಣಕ್ಕೆ ಸಮಯ ನೀಡಿಕೆ.
ಕರ್ಕಾಟಕ: ವ್ಯವಹಾರ ಕ್ಷೇತ್ರದ ಮಿತ್ರರೊಂದಿಗೆ ಭೇಟಿ. ಉದ್ಯೋಗಾಸಕ್ತರಿಗೆ ಶುಭಸೂಚನೆ. ಸಂಸಾರದ ಆವಶ್ಯಕತೆಗಳ ಕಡೆಗೆ ಗಮನ. ವ್ಯವಹಾರ ಸಂಬಂಧ ಪಾಲುದಾರರೊಂದಿಗೆ ಮಾತುಕತೆ. ದುಬಾರಿ ವಸ್ತುಗಳಿಗಾಗಿ ಹಣ ವ್ಯಯ.
ಸಿಂಹ: ವಸ್ತ್ರ, ಆಭರಣ ವ್ಯಾಪಾರಿಗಳಿಗೆ ದೊಡ್ಡ ಮೊತ್ತದ ಲಾಭ. ವೈದ್ಯರು, ಎಂಜಿನಿಯರರು ಮೊದಲಾದ ವೃತ್ತಿಪರರಿಗೆ ಕೆಲಸದ ಒತ್ತಡ. ಸಮಾಜ ಸೇವಾಸಕ್ತರಿಗೆ ಮಾರ್ಗದರ್ಶನ. ಪರಿಸರಕ್ಕೆ ಹಾನಿಯಾಗದ ಅಭಿವೃದ್ಧಿ ಕಾರ್ಯಗಳ ಕುರಿತು ಚಿಂತನೆ.
ಕನ್ಯಾ: ಎಲ್ಲರ ದೇಹಾರೋಗ್ಯ ಉತ್ತಮ. ಆಯ್ದ ವರ್ಗಗಳ ವ್ಯಾಪಾರಿಗಳಿಗೆ ಉತ್ತಮ ಲಾಭ. ಉದ್ಯೋಗ ಅರಸುತ್ತಿರುವವರಿಗೆ ಶುಭ ಸಮಾಚಾರ.ಮಕ್ಕಳಿಗೆ ಸಂಭ್ರಮದ ದಿನ. ಕಿರಿಯರಿಗೆ ಧಾರ್ಮಿಕ ಶಿಕ್ಷಣ ಒದಗಿಸುವ ಹೊಣೆಗಾರಿಕೆ.
ತುಲಾ: ಭಗವಂತನ ಕೃಪೆಯಿಂದ ಎಲ್ಲ ಕಷ್ಟಗಳು ದೂರ. ಬಂಧುಗಳ ಕಡೆಯಿಂದ ಶುಭ ಸಮಾಚಾರ. ಲೇವಾದೇವಿ ವ್ಯವಹಾರದಲ್ಲಿ ಹಿನ್ನಡೆ. ಬೌದ್ಧಿಕ ಕಾರ್ಯ ಮಾಡುವವರ ಆರೋಗ್ಯದ ಬಗ್ಗೆ ಎಚ್ಚರ. ಮಕ್ಕಳ ಶಾಲಾ ಭವಿಷ್ಯದ ಚಿಂತನೆ.
ವೃಶ್ಚಿಕ: ಮಹಿಳೆಯರಿಂದ ವಸ್ತ್ರಾಭರಣ ಖರೀದಿ. ವ್ಯವಹಾರಸ್ಥರಿಗೆ ನಿರೀಕ್ಷೆ ಮೀರಿದ ಲಾಭ. ಮಹಿಳೆಯರ, ಹಿರಿಯರ ಆರೋಗ್ಯ ಉತ್ತಮ. ಆಸ್ಪತ್ರೆಗೆ ಭೇಟಿಯಿತ್ತು ರೋಗಿಗಳಿಗೆ ಸಾಂತ್ವನ. ಕುಟುಂಬದ ಹಿರಿಯ ಮನೆಯಲ್ಲಿ ದೇವತಾಕಾರ್ಯ.
ಧನು: ಗೃಹದ ಆವಶ್ಯಕತೆಗಳ ಕಡೆಗೆ ಗಮನ. ಉದ್ಯಮಿಗಳಿಗೆ ತಾತ್ಕಾಲಿಕ ವಿರಾಮ. ಸಣ್ಣ ಪ್ರವಾಸದ ಸಾಧ್ಯತೆ. ಗೃಹಾಲಂಕಾರ, ತೋಟಗಾರಿಕೆಗೆ ಸಮಯ ನೀಡಿಕೆ. ಆಪ್ತಮಿತ್ರರ ಮನೆಗೆ ಸಂಸಾರಸಹಿತ ಭೇಟಿ. ಹಣದ ವ್ಯವಹಾರದಲ್ಲಿ ಜಾಗ್ರತೆ ಇರಲಿ.
ಮಕರ: ಪಟ್ಟುಹಿಡಿದು ಕಾರ್ಯ ಸಾಧಿಸಿದ ತೃಪ್ತಿ. ಬಾಲ್ಯದ ಒಡನಾಡಿಯ ಆಗಮನ. ಗೃಹಿಣಿಯರಿಗೆ ಅತಿಥಿ ಸತ್ಕಾರ ಯೋಗ. ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ಸಾಮಾನ್ಯ ಲಾಭ. ಪುಸ್ತಕ, ಸ್ಟೇಶನರಿ ವ್ಯಾಪಾರಿಗಳಿಗೆ ಉತ್ತಮ ಲಾಭ.
ಕುಂಭ: ಹೊಸ ಸೇವಾಕ್ಷೇತ್ರಗಳ ಅನ್ವೇಷಣೆ. ಪರಿಸರ ನೈರ್ಮಲ್ಯ ಯೋಜನೆಗಳ ಅನುಷ್ಠಾನದ ನೇತೃತ್ವ. ಗೃಹಿಣಿಯರಿಗೆ ಸ್ವ ಉದ್ಯೋಗದಲ್ಲಿ ಆಸಕ್ತಿ. ಆಪ್ತರೊಂದಿಗೆ ಪ್ರಸಿದ್ಧ ದೇವಾಲಯಕ್ಕೆ ಭೇಟಿ. ವ್ಯವಹಾರದ ಪಾಲುದಾರನ ಮನೆಯಲ್ಲಿ ದೇವತಾ ಕಾರ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಗಣೇಶ, ದುರ್ಗೆಯರ ಆರಾಧನೆಯಿಂದ ವಿಘ್ನ ನಿವಾರಣೆ,ಶುಭಕಾರ್ಯ ನಡೆಸುವ ಬಗ್ಗೆ ಚಿಂತನೆ
Horoscope: ಹೊಸ ಅವಕಾಶಗಳು ಅಯಾಚಿತವಾಗಿ ಲಭಿಸುವ ಸಾಧ್ಯತೆ, ವಧೂವರಾನ್ವೇಷಿಗಳಿಗೆ ಅನುಕೂಲ
Daily Horoscope: ಲಾಭ- ನಷ್ಟ ಎರಡನ್ನೂ ಸಮಾನವಾಗಿ ಸ್ವೀಕರಿಸಿ
Daily Horoscope; ಹೆಚ್ಚಿನವರಿಗೆ ಮಿಶ್ರಫಲ ಕೊಡುವ ದಿನ
Horoscope: ಉದ್ಯೋಗ ಸ್ಥಾನದಲ್ಲಿ ಅನುಕೂಲದ ವಾತಾವರಣ ಇರಲಿದೆ
MUST WATCH
ಹೊಸ ಸೇರ್ಪಡೆ
Mumbai: ಬಾಂದ್ರಾ ಟರ್ಮಿನಸ್ ರೈಲು ನಿಲ್ದಾಣದಲ್ಲಿ ಕಾಲ್ತುಳಿತ; ಹಲವರಿಗೆ ಗಾಯ
WTC 25: ಸತತ ಎರಡು ಪಂದ್ಯ ಸೋತರೂ ಭಾರತಕ್ಕಿದೆ ಫೈನಲ್ ತಲುಪುವ ಅವಕಾಶ; ಹೀಗಿದೆ ಲೆಕ್ಕಾಚಾರ
MUDA Case: ದೀಪಾವಳಿ ಬಳಿಕ ಸಿಎಂ ಸಿದ್ದರಾಮಯ್ಯಗೆ ಲೋಕಾ ನೋಟಿಸ್?
Manipal: ಬೆಳ್ಳಂಬೆಳಗ್ಗೆ ಕಾರು ಅಪಘಾತ
New Delhi: ವಿಮಾನ ನಿಲ್ದಾಣಕ್ಕೆ ನಕಲಿ ಬಾಂಬ್ ಬೆದರಿಕೆ ಹಾಕಿದ್ದ ನಿರುದ್ಯೋಗಿ ಯುವಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.