Ranji Trophy: ಕರ್ನಾಟಕದ ಬೌಲಿಂಗ್ ದಾಳಿಗೆ ಬಿಹಾರ ತತ್ತರ
Team Udayavani, Oct 26, 2024, 9:47 PM IST
ಪಾಟ್ನಾ: ಶನಿವಾರ ಮೊದಲ್ಗೊಂಡ ರಣಜಿ ಟ್ರೋಫಿ 3ನೇ ಹಂತದ ಎಲೈಟ್ ಗ್ರೂಪ್ “ಸಿ’ ಪಂದ್ಯದಲ್ಲಿ ಕರ್ನಾಟಕದ ಬೌಲಿಂಗ್ ದಾಳಿಗೆ ತತ್ತರಿಸಿದ ಆತಿಥೇಯ ಬಿಹಾರ ಮೊದಲ ಇನಿಂಗ್ಸ್ನಲ್ಲಿ 143ಕ್ಕೆ ಆಲೌಟ್ ಆಗಿದೆ. ಶ್ರೇಯಸ್ ಗೋಪಾಲ್ 4 ಮತ್ತು ಮೊಹ್ಸಿನ್ ಖಾನ್ 3 ವಿಕೆಟ್ ಉರುಳಿಸಿ ಎದುರಾಳಿಯನ್ನು ಕಾಡಿದರು.
ಬ್ಯಾಟಿಂಗ್ ಆರಂಭಿಸಿರುವ ಕರ್ನಾಟಕ ವಿಕೆಟ್ ನಷ್ಟವಿಲ್ಲದೆ 16 ರನ್ ಮಾಡಿದೆ. ನಿಕಿನ್ ಜೋಸ್ (11), ಸುಜಯ್ ಸತೇರಿ (4) ಕ್ರೀಸ್ನಲ್ಲಿ ಉಳಿದಿದ್ದಾರೆ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಬಿಹಾರ ತಂಡ, ಕರ್ನಾಟಕದ ಸ್ಪಿನ್ ದಾಳಿಯನ್ನು ಎದುರಿಸಿ ನಿಲ್ಲಲು ವಿಫಲವಾಯಿತು. ಆರಂಭಕಾರ ಶರ್ಮನ್ ನಿಗ್ರೋಧ್ ಸರ್ವಾಧಿಕ 60, ಬಿಪಿನ್ ಸೌರಭ್ 31 ರನ್ ಮಾಡಿದರು.
ಮುಂಬಯಿಗೆ ಸೂರ್ಯಾಂಶ್ ಆಸರೆ
ಅಗರ್ತಲಾ: ತ್ರಿಪುರ ವಿರುದ್ಧದ ರಣಜಿ ಪಂದ್ಯದಲ್ಲಿ ಮುಂಬಯಿ 6 ವಿಕೆಟಿಗೆ 248 ರನ್ ಗಳಿಸಿದೆ. ಕೆಳ ಸರದಿಯ ಆಟಗಾರ ಸೂರ್ಯಾಂಶ್ ಶೆಡ್ಜೆ 99 ರನ್ ಮಾಡಿ ತಂಡಕ್ಕೆ ಆಸರೆಯಾದರು. ಬಿರುಸಿನ ಆಟಕ್ಕಿಳಿದ ಶೆಡ್ಜೆ 93 ಎಸೆತಗಳನ್ನೆದುರಿಸಿ 10 ಬೌಂಡರಿ, 4 ಸಿಕ್ಸರ್ ಸಿಡಿಸಿದರು. ಆದರೆ ಒಂದೇ ರನ್ನಿನಿಂದ ಶತಕ ವಂಚಿತರಾಗಬೇಕಾಯಿತು.
ನಾಯಕ ಅಜಿಂಕ್ಯ ರಹಾನೆ 35 ರನ್ ಹೊಡೆದರು. 38 ರನ್ ಮಾಡಿರುವ ಶಮ್ಸ್ ಮುಲಾನಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಒದ್ದೆ ಅಂಗಳದಿಂದಾಗಿ ದಿನದಾಟ ವಿಳಂಬಗೊಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pro Kabaddi: ಮುಂಬಾ-ಬೆಂಗಾಲ್ ರೋಚಕ ಟೈ
Sultan of Johor Cup men’s hockey: ನ್ಯೂಜಿಲ್ಯಾಂಡ್ ಗೆ ಸೋಲುಣಿಸಿ ಕಂಚು ಗೆದ್ದ ಭಾರತ
PAK vs ENG: 2021ರ ಬಳಿಕ ತವರಲ್ಲಿ ಟೆಸ್ಟ್ ಸರಣಿ ಗೆದ್ದ ಪಾಕ್!
Test series defeat; ನಾನು ಯಾರ ಸಾಮರ್ಥ್ಯವನ್ನೂ ಅನುಮಾನಿಸುವುದಿಲ್ಲ: ರೋಹಿತ್ ಶರ್ಮ
INDvsNZ: ಪುಣೆಯಲ್ಲಿ ಸ್ಪಿನ್ ಬಲೆಗೆ ಬಿದ್ದ ಭಾರತ; 12 ವರ್ಷಗಳ ಬಳಿಕ ತವರಲ್ಲಿ ಸರಣಿ ಸೋಲು
MUST WATCH
ಹೊಸ ಸೇರ್ಪಡೆ
Deepavali Special: ಪ್ರಯಾಣಿಕರ ದಟ್ಟಣೆ ನಿರ್ವಹಣೆಗೆ ಹೆಚ್ಚುವರಿ ರೈಲು ಬೋಗಿ ಸೇರ್ಪಡೆ
Kukke Subhramanya: ಆಶ್ಲೇಷಾ ನಕ್ಷತ್ರ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಭಕ್ತ ಸಂದಣಿ
Agriculture: ಸಾವಯವ ಕೃಷಿಗೆ ಗಮನ ಕೊಡಿ: ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ
MUDA: ದೂರುದಾರ ಗಂಗರಾಜು ಅವರಿಗೆ ಇ.ಡಿ. ನೋಟಿಸ್
IMD; ರಾಜ್ಯದಲ್ಲಿ ಮಳೆಗೆ ವಿರಾಮ, ಒಣ ಹವೆ ಮುನ್ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.