![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Oct 26, 2024, 9:47 PM IST
ಪಾಟ್ನಾ: ಶನಿವಾರ ಮೊದಲ್ಗೊಂಡ ರಣಜಿ ಟ್ರೋಫಿ 3ನೇ ಹಂತದ ಎಲೈಟ್ ಗ್ರೂಪ್ “ಸಿ’ ಪಂದ್ಯದಲ್ಲಿ ಕರ್ನಾಟಕದ ಬೌಲಿಂಗ್ ದಾಳಿಗೆ ತತ್ತರಿಸಿದ ಆತಿಥೇಯ ಬಿಹಾರ ಮೊದಲ ಇನಿಂಗ್ಸ್ನಲ್ಲಿ 143ಕ್ಕೆ ಆಲೌಟ್ ಆಗಿದೆ. ಶ್ರೇಯಸ್ ಗೋಪಾಲ್ 4 ಮತ್ತು ಮೊಹ್ಸಿನ್ ಖಾನ್ 3 ವಿಕೆಟ್ ಉರುಳಿಸಿ ಎದುರಾಳಿಯನ್ನು ಕಾಡಿದರು.
ಬ್ಯಾಟಿಂಗ್ ಆರಂಭಿಸಿರುವ ಕರ್ನಾಟಕ ವಿಕೆಟ್ ನಷ್ಟವಿಲ್ಲದೆ 16 ರನ್ ಮಾಡಿದೆ. ನಿಕಿನ್ ಜೋಸ್ (11), ಸುಜಯ್ ಸತೇರಿ (4) ಕ್ರೀಸ್ನಲ್ಲಿ ಉಳಿದಿದ್ದಾರೆ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಬಿಹಾರ ತಂಡ, ಕರ್ನಾಟಕದ ಸ್ಪಿನ್ ದಾಳಿಯನ್ನು ಎದುರಿಸಿ ನಿಲ್ಲಲು ವಿಫಲವಾಯಿತು. ಆರಂಭಕಾರ ಶರ್ಮನ್ ನಿಗ್ರೋಧ್ ಸರ್ವಾಧಿಕ 60, ಬಿಪಿನ್ ಸೌರಭ್ 31 ರನ್ ಮಾಡಿದರು.
ಮುಂಬಯಿಗೆ ಸೂರ್ಯಾಂಶ್ ಆಸರೆ
ಅಗರ್ತಲಾ: ತ್ರಿಪುರ ವಿರುದ್ಧದ ರಣಜಿ ಪಂದ್ಯದಲ್ಲಿ ಮುಂಬಯಿ 6 ವಿಕೆಟಿಗೆ 248 ರನ್ ಗಳಿಸಿದೆ. ಕೆಳ ಸರದಿಯ ಆಟಗಾರ ಸೂರ್ಯಾಂಶ್ ಶೆಡ್ಜೆ 99 ರನ್ ಮಾಡಿ ತಂಡಕ್ಕೆ ಆಸರೆಯಾದರು. ಬಿರುಸಿನ ಆಟಕ್ಕಿಳಿದ ಶೆಡ್ಜೆ 93 ಎಸೆತಗಳನ್ನೆದುರಿಸಿ 10 ಬೌಂಡರಿ, 4 ಸಿಕ್ಸರ್ ಸಿಡಿಸಿದರು. ಆದರೆ ಒಂದೇ ರನ್ನಿನಿಂದ ಶತಕ ವಂಚಿತರಾಗಬೇಕಾಯಿತು.
ನಾಯಕ ಅಜಿಂಕ್ಯ ರಹಾನೆ 35 ರನ್ ಹೊಡೆದರು. 38 ರನ್ ಮಾಡಿರುವ ಶಮ್ಸ್ ಮುಲಾನಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಒದ್ದೆ ಅಂಗಳದಿಂದಾಗಿ ದಿನದಾಟ ವಿಳಂಬಗೊಂಡಿತ್ತು.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.