![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Oct 26, 2024, 9:31 PM IST
ಹೊಸದಿಲ್ಲಿ: ಶಬರಿಮಲೆ ದೇವಸ್ಥಾನಕ್ಕೆ ತೆರಳುವ ಯಾತ್ರಾರ್ಥಿಗಳಿಗೆ 2025 ರ ಜನವರಿ 20 ರವರೆಗೆ ವಿಮಾನಗಳ ಕ್ಯಾಬಿನ್ ಬ್ಯಾಗೇಜ್ನಲ್ಲಿ ತೆಂಗಿನಕಾಯಿಯನ್ನು ಸಾಗಿಸಲು ಅನುಮತಿಸಲಾಗುವುದು ಎಂದು ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಶನಿವಾರ ಹೇಳಿದ್ದಾರೆ.
ಎರಡು ತಿಂಗಳ ಅವಧಿಯ ಶಬರಿಮಲೆ ಯಾತ್ರೆಯು ನವೆಂಬರ್ ಮಧ್ಯಭಾಗದಲ್ಲಿ ಆರಂಭವಾಗಲಿದ್ದು, ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ (BCAS) ಯಾತ್ರಿಕರು ತಮ್ಮ ಕ್ಯಾಬಿನ್ ಸಾಮಾನುಗಳಲ್ಲಿ ತೆಂಗಿನಕಾಯಿಯನ್ನು ಸೀಮಿತ ಅವಧಿಗೆ ಸಾಗಿಸಲು ಅನುಮತಿ ನೀಡಿದೆ.
ಅಸ್ತಿತ್ವದಲ್ಲಿರುವ ನಿಯಮಗಳ ಅಡಿಯಲ್ಲಿ, ತೆಂಗಿನಕಾಯಿಗಳು ಸುಡುವ ಗುಣಲಕ್ಷಣ ಹೊಂದಿರುವ ಕಾರಣದಿಂದ ಕ್ಯಾಬಿನ್ ಸಾಮಾನುಗಳಲ್ಲಿ ಅನುಮತಿಸಲಾಗುವುದಿಲ್ಲ.
ಶಬರಿಮಲೆ ಯಾತ್ರಾರ್ಥಿಗಳ ಪ್ರಯಾಣವನ್ನು ಸುಲಭಗೊಳಿಸಲು, ಮಂಡಲಂ-ಮಕರವಿಳಕ್ಕು ತೀರ್ಥಯಾತ್ರೆಯ ಅವಧಿಯಲ್ಲಿ ಕ್ಯಾಬಿನ್ ಸಾಮಾನುಗಳಾಗಿ ‘ಇರುಮುಡಿ’ಯಲ್ಲಿ ತೆಂಗಿನಕಾಯಿಗಳನ್ನು ಸಾಗಿಸಲು ವಿನಾಯಿತಿ ನೀಡಲಾಗಿದೆ’ ಎಂದು ಸಚಿವ ನಾಯ್ಡು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
In a move to facilitate the ease of travel for Sabarimala pilgrims, we have issued a special exemption allowing the carrying of coconuts in ‘Irumudi’ as cabin baggage during the Mandalam-Makaravilakku pilgrimage period. This order will be in effect until January 20, 2025, with… pic.twitter.com/OZcmSMhXa4
— Ram Mohan Naidu Kinjarapu (@RamMNK) October 26, 2024
ಅಗತ್ಯವಿರುವ ಎಕ್ಸ್-ರೇ, ಇಟಿಡಿ (ಎಕ್ಸ್ಪ್ಲೋಸಿವ್ ಟ್ರೇಸ್ ಡಿಟೆಕ್ಟರ್) ಮತ್ತು ಭೌತಿಕ ತಪಾಸಣೆಗಳ ನಂತರ ಮಾತ್ರ ತೆಂಗಿನಕಾಯಿಯನ್ನು ಕ್ಯಾಬಿನ್ನಲ್ಲಿ ಸಾಗಿಸಲು ಅನುಮತಿಸಲಾಗುತ್ತದೆ.
ವ್ರತ ಆಚರಣೆಯ ಸಮಯದಲ್ಲಿ, ಇರುಮುಡಿ ಕಟ್ಟುವ ವೇಳೆ ತೆಂಗಿನಕಾಯಿಯೊಳಗೆ ತುಪ್ಪವನ್ನು ತುಂಬಿಸಲಾಗುತ್ತದೆ, ನಂತರ ಅದನ್ನು ಇತರ ನೈವೇದ್ಯಗಳೊಂದಿಗೆ ಚೀಲದಲ್ಲಿ ಇರಿಸಲಾಗುತ್ತದೆ. ಸಾಮಾನ್ಯ ತೆಂಗಿನಕಾಯಿಗಳನ್ನು ಒಯ್ಯಬೇಕಾಗುತ್ತದೆ. ಶಬರಿಮಲೆಯಲ್ಲಿ ಇರುಮುಡಿ ಕಟ್ಟನ್ನು ತಲೆಯ ಮೇಲೆ ಹೊತ್ತ ಯಾತ್ರಾರ್ಥಿಗಳಿಗೆ ಮಾತ್ರ 18 ಪವಿತ್ರ ಮೆಟ್ಟಿಲುಗಳನ್ನು ಹತ್ತಿ ದೇವಾಲಯದ ಗರ್ಭಗುಡಿಯನ್ನು ಪ್ರವೇಶಿಸಲು ಅನುಮತಿಸಲಾಗುತ್ತದೆ. ಇರುಮುಡಿ ಹೊತ್ತುಕೊಳ್ಳದ ಭಕ್ತರು ಬೇರೆ ಮಾರ್ಗದಲ್ಲಿ ಗರ್ಭಗುಡಿ ಪ್ರವೇಶಿಸಬೇಕಾಗುತ್ತದೆ.
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.