![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Oct 27, 2024, 7:50 AM IST
ಅಹ್ಮದಾಬಾದ್: ಭಾರತದ ಪುರುಷರ ತಂಡ ನ್ಯೂಜಿಲ್ಯಾಂಡ್ ವಿರುದ್ಧ ಸರಣಿ ಸೋತು ಮುಖಭಂಗ ಅನುಭವಿಸಿರುವಂತೆಯೇ, ಇತ್ತ ವನಿತೆಯರು ನ್ಯೂಜಿಲ್ಯಾಂಡ್ ವಿರುದ್ಧವೇ ಏಕದಿನ ಸರಣಿ ವಶಪಡಿಸಿ ಕೊಳ್ಳಲು ಸಿದ್ಧತೆ ಮಾಡಿಕೊಳ್ಳುವ ತರಾತುರಿಯಲ್ಲಿದ್ದಾರೆ.
ರವಿವಾರ ಅಹ್ಮದಾಬಾದ್ನಲ್ಲಿ ದ್ವಿತೀಯ ಪಂದ್ಯ ನಡೆಯಲಿದ್ದು, ಮೊದಲ ಮುಖಾಮುಖಿಯನ್ನು 59 ರನ್ನುಗಳಿಂದ ಗೆದ್ದ ಭಾರತ ಸಹಜವಾಗಿಯೇ ನಿರೀಕ್ಷೆ ಯನ್ನು ಹೆಚ್ಚಿಸಿಕೊಂಡಿದೆ.
ಗಾಯಾಳಾದ ಕಾರಣ ಮೊದಲ ಪಂದ್ಯವನ್ನು ತಪ್ಪಿಸಿಕೊಂಡಿದ್ದ ನಾಯಕಿ ಹರ್ಮನ್ಪ್ರೀತ್ ಕೌರ್ ರವಿವಾರ ಕಣಕ್ಕಿಳಿಯುವ ಸಾಧ್ಯತೆ ಇದೆ. ಇದ ರಿಂದ ಸ್ಮತಿ ಮಂಧನಾ ಒತ್ತಡ ಬಿಟ್ಟು ಆಡಬಹುದಾಗಿದೆ. ಮೊದಲ ಪಂದ್ಯದಲ್ಲಿ ಮಂಧನಾ ಕೇವಲ 5 ರನ್ ಮಾಡಿ ಔಟಾಗಿದ್ದರು. ಅವರು ದಕ್ಷಿಣ ಆಫ್ರಿಕಾ ಎದುರು ತೋರ್ಪಡಿಸಿದಂಥ ಫಾರ್ಮ್ ಪುನರಾವರ್ತಿಸಬೇಕಿದೆ. ಜುಲೈಯಲ್ಲಿ ನಡೆದ ಈ ಏಕದಿನ ಸರಣಿಯಲ್ಲಿ ಮಂಧನಾ 2 ಶತಕ ಬಾರಿಸಿ ಮಿಂಚಿದ್ದರು.
ಆಲ್ರೌಂಡರ್ ಕೆರ್ ಔಟ್:
ಸರಣಿಯನ್ನು ಸಮಬಲಗೊಳಿಸುವ ಯೋಜನೆಯಲ್ಲಿರುವ ನ್ಯೂಜಿ ಲ್ಯಾಂಡಿಗೆ ಬಲವಾದ ಆಘಾತವೊಂದು ಎದುರಾಗಿದೆ. ಅವರ ಪ್ರಧಾನ ಆಟ ಗಾರ್ತಿ, ಆಲ್ರೌಂಡರ್ ಅಮೇಲಿಯಾ ಕೆರ್ ಗಾಯಾಳಾಗಿ ಸರಣಿಯಿಂದ ಬೇರ್ಪಟ್ಟಿದ್ದಾರೆ. ಅವರು ರವಿವಾರ ತವರಿಗೆ ವಾಪಸಾಗಲಿದ್ದಾರೆ. ಭಾರತ ಅಮೇಲಿಯಾ ಗೈರಿನ ಲಾಭವನ್ನು ಎತ್ತಬೇಕಿದೆ.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.