Hoax calls; ಹುಸಿ ಬೆದರಿಕೆ ಸಂದೇಶ ಅಳಿಸಿರಿ: ಜಾಲತಾಣಗಳಿಗೆ ಕೇಂದ್ರ ಸರಕಾರ ತಾಕೀತು
ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ
Team Udayavani, Oct 27, 2024, 6:40 AM IST
ಹೊಸದಿಲ್ಲಿ: ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಹುಸಿ ಬಾಂಬ್ ಬೆದರಿಕೆ ಒಡ್ಡುತ್ತಿರುವ ಪ್ರಕರಣಗಳು 275ಕ್ಕೆ ಏರಿದ ಬೆನ್ನಲ್ಲೇ ವದಂತಿಗಳು ಹಬ್ಬ ದಂತೆ ತಡೆ ಯುವ ನಿಟ್ಟಿ ನಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ನಿಯಂತ್ರಣವನ್ನು ಬಿಗಿಗೊಳಿಸಲು ಕೇಂದ್ರ ಸರಕಾರ ಮುಂದಾ ಗಿದೆ. ಹುಸಿ ಬಾಂಬ್ ಬೆದರಿಕೆ ಸಂಬಂಧಿ ಪೋಸ್ಟ್ಗಳನ್ನು ನಿಗದಿತ ಕಾಲ ಮಿತಿಯೊಳಗೆ ತೆಗೆದುಹಾಕುವಂತೆ ಸಾಮಾಜಿಕ ಜಾಲತಾಣ ಗಳಿಗೆ ಸರಕಾರ ತಾಕೀತು ಮಾಡಿದೆ.
ಈ ಸಂಬಂಧ ಶನಿವಾರ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು ಸಾಮಾಜಿಕ ಜಾಲತಾಣಗಳಿಗೆ ಸೂಚನೆ ನೀಡಿದೆ. ಆ ಪ್ರಕಾರ ತನ್ನ ಬಳಕೆದಾರರು ಯಾವುದೇ ಹುಸಿ ಬೆದರಿಕೆ ಸಂಬಂಧಿ ಪೋಸ್ಟ್ಗಳನ್ನು ಮಾಡದಂತೆ ಜಾಲತಾಣ ಸಂಸ್ಥೆಗಳು ಎಚ್ಚರ ವಹಿಸಬೇಕಿದೆ. ಒಂದು ವೇಳೆ ಪೋಸ್ಟ್ ಮಾಡಿದರೂ ಅವುಗಳನ್ನು ಕೂಡಲೇ ಅಳಿಸಿ, 72 ತಾಸುಗಳ ಒಳಗೆ ಆ ಪೋಸ್ಟ್ಗೆ ಸಂಬಂಧಿಸಿದ ಎಲ್ಲ ಮಾಹಿತಿ ಗಳನ್ನು ಸರಕಾರದ ತನಿಖಾ ಸಂಸ್ಥೆಗಳಿಗೆ ಒದಗಿಸಬೇಕಿದೆ.
ಜಾಲತಾಣ ಸಂಸ್ಥೆಗಳು ಈ ನಿಯಮಗಳನ್ನು ಅನುಸರಿಸದೆ ಇದ್ದಲ್ಲಿ ಐಟಿ ಕಾಯ್ದೆಯ ಸೆಕ್ಷನ್ 79 ಹಾಗೂ ಬಿಎನ್ಎಸ್ ಅನ್ವಯ ಜಾಲತಾಣ ಸಂಸ್ಥೆಗಳ ವಿರುದ್ಧ ಕ್ರಮ ಜರುಗಿಸುವುದಾಗಿ ಎಚ್ಚರಿಸಿದೆ. ಐಟಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಸಂಕೇತ್ ಎಸ್ ಬೋಂಡ್ವೇ ಮತ್ತು ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಟ್ವೀಟರ್, ಫೇಸ್ಬುಕ್ ಮತ್ತಿತರ ಸಾಮಾಜಿಕ ಜಾಲತಾಣ ಸಂಸ್ಥೆಗಳ ಪ್ರತಿನಿಧಿಗಳ ನಡುವೆ ನಡೆದ ವರ್ಚುವಲ್ ಸಭೆಯಲ್ಲಿ ಈ ಸೂಚನೆ ನೀಡಲಾಗಿದೆ.
ಹುಸಿ ಬೆದರಿಕೆ ಕುರಿತ ಎಲ್ಲ ಪೋಸ್ಟ್ ಅಳಿಸಲು ಸೂಚನೆ
ವದಂತಿ ಪೋಸ್ಟ್ಗಳ ಬಗ್ಗೆ ಸರಕಾರಕ್ಕೆ 72 ತಾಸುಗಳಲ್ಲಿ ಮಾಹಿತಿ ನೀಡಿ ತಪ್ಪಿದರೆ ಐಟಿ ಕಾಯ್ದೆಯ ಸೆಕ್ಷನ್ 79, ಬಿಎನ್ಎಸ್ ಅನ್ವಯ ಶಿಕ್ಷೆ ಕಟ್ಟಿಟ್ಟ ಬುತ್ತಿ
ನಿರ್ದಿಷ್ಟಕಾಲ ಮಿತಿಯೊಳಗೆ ಪೋಸ್ಟ್ ಅಳಿಸಲು ಸೂಚನೆ
ಹುಸಿ ಬಾಂಬ್ ಬೆದರಿಕೆ ಪ್ರಕರಣ ಹೆಚ್ಚಳ ಹಿನ್ನೆಲೆಯಲ್ಲಿ ಕ್ರಮ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai: ಬಾಂದ್ರಾ ಟರ್ಮಿನಸ್ ರೈಲು ನಿಲ್ದಾಣದಲ್ಲಿ ಕಾಲ್ತುಳಿತ; ಹಲವರಿಗೆ ಗಾಯ
New Delhi: ವಿಮಾನ ನಿಲ್ದಾಣಕ್ಕೆ ನಕಲಿ ಬಾಂಬ್ ಬೆದರಿಕೆ ಹಾಕಿದ್ದ ನಿರುದ್ಯೋಗಿ ಯುವಕನ ಬಂಧನ
Sabarimala;ಯಾತ್ರಾರ್ಥಿಗಳು ವಿಮಾನ ಕ್ಯಾಬಿನ್ ಬ್ಯಾಗೇಜ್ನಲ್ಲಿ ತೆಂಗಿನಕಾಯಿ ಒಯ್ಯಬಹುದು
India ನಮ್ಮ ಆತ್ಮರಕ್ಷಣೆ ಹಕ್ಕನ್ನು ಬೆಂಬಲಿಸಿದೆ: ಇಸ್ರೇಲ್ ರಾಯಭಾರಿ ರುವೆನ್ ಅಜರ್
Jharkhand; ಬಿಜೆಪಿ ನಾಯಕಿ ವಿರುದ್ಧ ನಾಲಗೆ ಹರಿ ಬಿಟ್ಟ ಕಾಂಗ್ರೆಸ್ ಶಾಸಕ ಅನ್ಸಾರಿ
MUST WATCH
ಹೊಸ ಸೇರ್ಪಡೆ
Mumbai: ಬಾಂದ್ರಾ ಟರ್ಮಿನಸ್ ರೈಲು ನಿಲ್ದಾಣದಲ್ಲಿ ಕಾಲ್ತುಳಿತ; ಹಲವರಿಗೆ ಗಾಯ
WTC 25: ಸತತ ಎರಡು ಪಂದ್ಯ ಸೋತರೂ ಭಾರತಕ್ಕಿದೆ ಫೈನಲ್ ತಲುಪುವ ಅವಕಾಶ; ಹೀಗಿದೆ ಲೆಕ್ಕಾಚಾರ
MUDA Case: ದೀಪಾವಳಿ ಬಳಿಕ ಸಿಎಂ ಸಿದ್ದರಾಮಯ್ಯಗೆ ಲೋಕಾ ನೋಟಿಸ್?
Manipal: ಬೆಳ್ಳಂಬೆಳಗ್ಗೆ ಕಾರು ಅಪಘಾತ
New Delhi: ವಿಮಾನ ನಿಲ್ದಾಣಕ್ಕೆ ನಕಲಿ ಬಾಂಬ್ ಬೆದರಿಕೆ ಹಾಕಿದ್ದ ನಿರುದ್ಯೋಗಿ ಯುವಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.