Bangladesh;ಸಿಡಿದೆದ್ದ ಹಿಂದೂಗಳು: ಮಧ್ಯಾಂತರ ಸರಕಾರದ ವಿರುದ್ಧ ಬೃಹತ್ ರ್ಯಾಲಿ
ಐತಿಹಾಸಿಕ ಲಾಲ್ ದೀ ಮೈದಾನದಲ್ಲಿ ಜನಸಾಗರ...ಬೇಡಿಕೆಗಳೇನು?
Team Udayavani, Oct 27, 2024, 7:00 AM IST
ಢಾಕಾ: ಮಾಜಿ ಪ್ರಧಾನಿ ಹಸೀನಾರನ್ನು ಹುದ್ದೆ ಯಿಂದ ಕೆಳಗಿಳಿಸುವ ಸಂದರ್ಭದಲ್ಲಿ ಅತೀದೊಡ್ಡ ದಂಗೆಗೆ ಸಾಕ್ಷಿಯಾಗಿದ್ದ ಬಾಂಗ್ಲಾ ದಲ್ಲಿ ಇದೀಗ ಹಿಂದೂ ಅಲ್ಪ ಸಂಖ್ಯಾಕ ಸಮುದಾಯವು ರಣಕಹಳೆ ಮೊಳಗಿಸುತ್ತಿದೆ. ಛತ್ತೋಗ್ರಾಮ್ನ (ಹಿಂದಿನ ಚಿತ್ತಗಾಂಗ್) ಐತಿಹಾಸಿಕ ಲಾಲ್ ದೀ ಮೈದಾನದಲ್ಲಿ ಶುಕ್ರವಾರ ಸಾವಿರಾರು ಹಿಂದೂಗಳು ಒಟ್ಟಾಗಿ ಅಲ್ಪಸಂಖ್ಯಾಕರ ರಕ್ಷಣೆಗೆ ಆಗ್ರಹಿಸಿ ಬೃಹತ್ ರ್ಯಾಲಿ ನಡೆಸಿದ್ದಾರೆ.
ಸನಾತನ ಜಾಗರಣ್ ಮಂಚ್ ಈ ರ್ಯಾಲಿ ಆಯೋಜಿಸಿದ್ದು, ಬಾಂಗ್ಲಾ ದಂಗೆ ಸಂದರ್ಭದಲ್ಲಿ ಹಿಂದೂಗಳು, ಕ್ರಿಶ್ಚಿಯ ನ್ನರು, ಬೌದ್ಧರು ಸೇರಿದಂತೆ ಅಲ್ಪಸಂಖ್ಯಾಕ ಸಮುದಾಯಗಳ ಮೇಲಾದ ದಾಳಿ ಯನ್ನು ಈ ಪ್ರತಿಭಟನೆ ಮೂಲಕ ಖಂಡಿಸಲಾಗಿದೆ. ಜತೆಗೆ ಅಲ್ಪಸಂಖ್ಯಾಕರೂ ಬಾಂಗ್ಲಾದೇಶಿಗರೇ ಆಗಿದ್ದೇವೆ, ನಮಗೂ ಹಕ್ಕಿದೆ ಎನ್ನುವಂಥ ಘೋಷಣೆಗಳನ್ನು ಮೊಳಗಿಸಿ, ಮೊಹಮ್ಮದ್ ಯೂನುಸ್ ನೇತೃತ್ವದ ಮಧ್ಯಾಂತರ ಸರಕಾರದ ಎದುರು 8 ಬೇಡಿಕೆಗಳನ್ನು ಪ್ರತಿಭಟನಕಾ ರರು ಇಟ್ಟಿದ್ದಾರೆ. ಈ ಬೇಡಿಕೆಗಳ ಪೈಕಿ ದುರ್ಗಾ ಪೂಜೆಗೆ 5 ದಿನ ರಜೆ, ದಂಗೆಯ ಸಂತ್ರಸ್ತರಿಗೆ ಪರಿಹಾರ- ಪುನರ್ವಸತಿ, ಅಲ್ಪಸಂಖ್ಯಾಕರ ರಕ್ಷಣೆಗೆ ಕಾನೂನು ರಚನೆಯ ಪ್ರಸ್ತಾವವೂ ಇವೆ.
ಬೇಡಿಕೆಗಳೇನು?
ದುರ್ಗಾ ಪೂಜೆಗೆ 5 ದಿನ ರಜೆ
ದಂಗೆ ಸಂತ್ರಸ್ತರಿಗೆ ಪರಿಹಾರ
ಅಲ್ಪಸಂಖ್ಯಾಕರ ರಕ್ಷಣೆಗೆ ಹೊಸ ಕಾನೂನು ಜಾರಿ, ಸಚಿವಾಲಯದ ರಚನೆ
ಅಲ್ಪಸಂಖ್ಯಾಕರ ಮೇಲೆ ದಾಳಿ ನಡೆಸಿದವರ ವಿರುದ್ಧ ಕ್ರಮ
ಹಿಂದೂ, ಕ್ರಿಶ್ಚಿಯನ್ ಬೌದ್ಧರ ಕಲ್ಯಾಣಕ್ಕೆ ಟ್ರಸ್ಟ್ ಸ್ಥಾಪನೆ
ಬಾಂಗ್ಲಾ ಅಲ್ಪಸಂಖ್ಯಾಕರ ರಕ್ಷಣೆಗೆ ಬದ್ಧ ಎಂದು ಭಾರತ ಸರಕಾರ ಈ ಹಿಂದೆಯೇ ವಾಗ್ಧಾನ ನೀಡಿದೆ. ಅಲ್ಲಿನ ಹಿಂದೂಗಳು ದೇಶ ತೊರೆಯದೇ ಅಲ್ಲಿಯೇ ನೆಲೆಯಾಗಬೇಕು. ಅಲ್ಲಿ ಶಕ್ತಿಪೀಠವಿದೆ ಎಂದು ನಾವು ಭಾವಿಸಿದ್ದೇವೆ. ಅವರ ಮಾತೃಭೂಮಿಯ ಸ್ವಾತಂತ್ರ್ಯಕ್ಕೆ ಭಾರತ ಮಹತ್ತರ ಪಾತ್ರವಹಿಸಿದೆ.
ದತ್ತಾತ್ರೇಯ ಹೊಸಬಾಳೆ, ಆರ್ಎಸ್ಎಸ್ ಸರಕಾರ್ಯವಾಹ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mumbai: ಬಾಂದ್ರಾ ಟರ್ಮಿನಸ್ ರೈಲು ನಿಲ್ದಾಣದಲ್ಲಿ ಕಾಲ್ತುಳಿತ; ಹಲವರಿಗೆ ಗಾಯ
WTC 25: ಸತತ ಎರಡು ಪಂದ್ಯ ಸೋತರೂ ಭಾರತಕ್ಕಿದೆ ಫೈನಲ್ ತಲುಪುವ ಅವಕಾಶ; ಹೀಗಿದೆ ಲೆಕ್ಕಾಚಾರ
MUDA Case: ದೀಪಾವಳಿ ಬಳಿಕ ಸಿಎಂ ಸಿದ್ದರಾಮಯ್ಯಗೆ ಲೋಕಾ ನೋಟಿಸ್?
Manipal: ಬೆಳ್ಳಂಬೆಳಗ್ಗೆ ಕಾರು ಅಪಘಾತ
New Delhi: ವಿಮಾನ ನಿಲ್ದಾಣಕ್ಕೆ ನಕಲಿ ಬಾಂಬ್ ಬೆದರಿಕೆ ಹಾಕಿದ್ದ ನಿರುದ್ಯೋಗಿ ಯುವಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.