Waqf: ರೈತರ ಭೂಮಿ ಕಬಳಿಸಲು ವಕ್ಫ್ ಗೆ ಕಾಂಗ್ರೆಸ್ ಕುಮ್ಮಕ್ಕು: ಅರವಿಂದ್ ಬೆಲ್ಲದ
ದೇಶದ ಎಲ್ಲ ಆಸ್ತಿ ವಕ್ಫ್ ಕಬಳಿಸುತ್ತಿದ್ದರೆ, ಖರ್ಗೆಯವರ ಕುಟುಂಬ ವಕ್ಫ್ ಆಸ್ತಿಯನ್ನೇ ನುಂಗಿ ಹಾಕಿದೆ
Team Udayavani, Oct 27, 2024, 3:49 AM IST
ಧಾರವಾಡ: ರೈತರ ಭೂಮಿ ಕಿತ್ತುಕೊಂಡು, ವಕ್ಫ್ ಬೋರ್ಡ್ಗೆ ನೀಡಲು ಹೊರಟಿರುವ ಕಾಂಗ್ರೆಸ್ ಸರ್ಕಾರ ಒಂದು ವಿಷಯ ನೆನಪಿಟ್ಟುಕೊಳ್ಳಬೇಕು. ದೇಶದಲ್ಲಿರುವುದು ಅಂಬೇಡ್ಕರ್ ವಿರಚಿತ ಸಂವಿಧಾನವೇ ಹೊರತು, ಷರಿಯಾ ಕಾನೂನಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ್ ಬೆಲ್ಲದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕನ್ನಡನಾಡನ್ನೇ ಒಂದು ಸಮುದಾಯಕ್ಕೆ ಮಾರಲು ಹೊರಟಿರುವ ಕಾಂಗ್ರೆಸ್ ಸರ್ಕಾರಕ್ಕೆ, ಕನ್ನಡಿಗರು ಮತ್ತು ನಾಡಿನ ಅನ್ನದಾತರೇ ತಕ್ಕ ಪಾಠ ಕಲಿಸುವ ದಿನಗಳು ದೂರವಿಲ್ಲ ಎಂದು ಎಚ್ಚರಿಸಿದ್ದಾರೆ. ವಿಜಯಪುರಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದ ಸಚಿವ ಜಮೀರ್ ಅಹ್ಮದ್ಖಾನ್ 15 ದಿನಗಳೊಳಗೆ ವಕ್ಫ್ ಆಸ್ತಿ ನೋಂದಣಿಗೆ ಜಿಲ್ಲಾಡಳಿತವನ್ನು ಒತ್ತಾಯಿಸಿರುವುದರ ಉದ್ದೇಶ ಹಿಂದೂ ರೈತರ ಭೂಮಿ ಕಿತ್ತುಕೊಂಡು ಅವರನ್ನು ಬೀದಿಪಾಲು ಮಾಡುವುದೇ ಆಗಿದೆ.
ಸಚಿವರ ಈ ನಡೆಯಿಂದ ಕೃಷಿ ಕಾರ್ಯ ಮಾಡಿಕೊಂಡು ಬಂದಿರುವ ವಿಜಯಪುರ, ಕಲಬುರಗಿ, ಯಾದಗಿರಿ ಜಿಲ್ಲೆಗಳ ರೈತರು ತಮ್ಮ ಜಮೀನನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ವಕ್ಫ್ ಮಂಡಳಿ ವಿಜಯಪುರ ಜಿಲ್ಲೆಯೊಂದರಲ್ಲೇ 15,000 ಎಕರೆಗೂ ಅಧಿಕ ಕೃಷಿಭೂಮಿಯನ್ನು ಅಕ್ರಮವಾಗಿ ತನ್ನದೆಂದು ಘೋಷಣೆ ಮಾಡುತ್ತಿದೆ ಎಂದು ದೂರಿದ್ದಾರೆ.
ದೇಶದ ಸಂಸತ್ ಭವನವೇ ತಮ್ಮದೆಂದು ಹೇಳಿಕೊಂಡು ತಿರುಗುವ ವಕ್ಫ್ ಮಂಡಳಿ, ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ ಬಡ ರೈತರ ಜಮೀನಿನ ಮೇಲೂ ವಕ್ರದೃಷ್ಟಿ ಬೀರಿದೆ. ದೇಶದ ಎಲ್ಲ ಆಸ್ತಿಯನ್ನು ವಕ್ಫ್ ಕಬಳಿಸುತ್ತಿದ್ದರೆ, ಖರ್ಗೆಯವರ ಕುಟುಂಬ ವಕ್ಫ್ ಆಸ್ತಿಯನ್ನೇ ನುಂಗಿ ಹಾಕಿದೆ. ಅಂತವರಿಗೆ ನೋಟಿಸ್ ನೀಡದ ರಾಜ್ಯ ಸರ್ಕಾರ, ಬಡ ರೈತರ ಮೇಲೆ ಏಕಾಏಕಿ ನೋಟಿಸ್ ನೀಡಿ ದೌರ್ಜನ್ಯ ಎಸಗುತ್ತಿರುವುದು ಖಂಡನೀಯ ಎಂದು ಕಿಡಿಕಾರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Assembly By Election: ನಿಖಿಲ್ ಗೆಲುವಿಗೆ ಬಿಜೆಪಿ-ಜೆಡಿಎಸ್ ಜಂಟಿ ಕಾರ್ಯತಂತ್ರ
By election ಹೊಸ್ತಿಲಲ್ಲಿ ಕಾಂಗ್ರೆಸ್ಗೆ ಮುಜುಗರ ತಂದ ಸೈಲ್ ಪ್ರಕರಣ
Belagavi; ಬಿಮ್ಸ್ ಆಸ್ಪತ್ರೆಯಲ್ಲಿ ಮೂರು ತಿಂಗಳಲ್ಲಿ 41 ನವಜಾತ ಶಿಶುಗಳ ಸಾ*ವು
Deepavali, ರಾಜ್ಯೋತ್ಸವ ಪ್ರಯುಕ್ತ ಸಾಲು ಸಾಲು ರಜೆ : ಖಾಸಗಿ ಬಸ್ ಯಾನ ದರ ದುಪ್ಪಟ್ಟು!
Justice Santosh Hegde; ಅದಿರು ಕೇಸಲ್ಲಿ ಶಿಕ್ಷೆ ಸಮಾಧಾನ ತಂದಿದೆ, ಇತರರಿಗೂ ಶಿಕ್ಷೆಯಾಗಲಿ
MUST WATCH
ಹೊಸ ಸೇರ್ಪಡೆ
IND-W vs NZ-W: ಇಂದು ದ್ವಿತೀಯ ಏಕದಿನ: ಸರಣಿ ಗೆಲ್ಲಲು ವನಿತೆಯರ ಸ್ಕೆಚ್
JioHotstar domain: ಜಿಯೋ ಹಾಟ್ಸ್ಟಾರ್ ಡೊಮೈನ್ ನಮ್ಮದು: ದುಬೈ ಮಕ್ಕಳ ವಾದ!
ಲಾಡೆನ್ ಅಡಗಿದ್ದ ಪಾಕ್ನ ಜಾಗದಲ್ಲೇ “ಉಗ್ರ’ ತರಬೇತಿ!
BBK11: ಎಲ್ಲರೂ ಊಹಿಸಿದಂತೆ ಈ ವಾರ ಬಿಗ್ ಬಾಸ್ ಮನೆಯಿಂದ ಆಚೆ ಬಂದೇ ಬಿಟ್ರು ಆ ಸ್ಪರ್ಧಿ..
Assembly By Election: ನಿಖಿಲ್ ಗೆಲುವಿಗೆ ಬಿಜೆಪಿ-ಜೆಡಿಎಸ್ ಜಂಟಿ ಕಾರ್ಯತಂತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.