Allu Arjun: ʼಪುಷ್ಪ-2ʼಗಾಗಿ ಇದುವರೆಗೆ ಯಾರು ಕೇಳದ್ದಷ್ಟು ಸಂಭಾವನೆ ಕೇಳಿದ ಅಲ್ಲು ಅರ್ಜುನ್?


Team Udayavani, Oct 27, 2024, 4:25 PM IST

Allu Arjun: ʼಪುಷ್ಪ-2ʼಗಾಗಿ ಇದುವರೆಗೆ ಯಾರು ಕೇಳದ್ದಷ್ಟು ಸಂಭಾವನೆ ಕೇಳಿದ ಅಲ್ಲು ಅರ್ಜುನ್?

ಹೈದರಾಬಾದ್: ಕಾಲಿವುಡ್‌ನಲ್ಲಿದಳಪತಿ ವಿಜಯ್‌ ((Thalapathy Vijay) ಹಾಗೂ ಟಾಲಿವುಡ್‌ನಲ್ಲಿ ಅಲ್ಲು ಅರ್ಜುನ್‌ (Allu Arjun) ಇಬ್ಬರಿಗೂ ದೊಡ್ಡ ಫ್ಯಾನ್‌ ಫಾಲೋವರ್ಸ್‌ ಗಳಿದ್ದಾರೆ.

ಈ ಸೂಪರ್‌ ಸ್ಟಾರ್‌ಗಳ ಸಿನಿಮಾಗಳು ಬಾಕ್ಸಾಫೀಸ್‌ ನಲ್ಲಿ ಚಿನ್ನದ ಮೊಟ್ಟಯಿಡುವ ಕೋಳಿಯಂತೆ ಆರಾಮವಾಗಿ ಕೋಟಿ ಕೋಟಿ ಗಳಿಸುತ್ತವೆ. ಫ್ಯಾನ್‌ ಫಾಲೋವರ್ಸ ಗಳ ಜತೆ ಇಬ್ಬರ ಮಾರ್ಕೆಟ್‌ ವ್ಯಾಲ್ಯೂ ಅಷ್ಟೇ ದೊಡ್ಡದಾಗಿದೆ.

ಇತ್ತೀಚೆಗಿನ ವರ್ಷದಲ್ಲಿ ಅಲ್ಲು ಅರ್ಜುನ್‌ – ವಿಜಯ್‌ ಅವರ ಸಿನಿಮಾಗಳು ಪ್ಯಾನ್‌ ಇಂಡಿಯಾದಲ್ಲಿ ರಿಲೀಸ್‌ ಆಗಿ ಸದ್ದು ಮಾಡುತ್ತಿವೆ. ಅಲ್ಲು , ವಿಜಯ್‌ ಅವರ ಸಂಭಾವನೆ ವಿಚಾರ ಸೌತ್‌ ಸಿನಿ ಗಲ್ಲಿಯಲ್ಲಿ ಸದ್ದು ಮಾಡಿದೆ.

ದಳಪತಿ ವಿಜಯ್‌ 2026ರ ತಮಿಳುನಾಡು ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಇದಕ್ಕೂ ಮುನ್ನ ಅವರು ಒಂದು ಸಿನಿಮಾ ಮಾಡಲಿದ್ದಾರೆ. ಈ ಸಿನಿಮಾಕ್ಕೆ ಕನ್ನಡದ ಪ್ರತಿಷ್ಠಿತ ‘ಕೆವಿಎನ್ ಪ್ರೊಡಕ್ಷನ್ಸ್’‌ (Kvn Productions) ಬಂಡವಾಳ ಹಾಕಲಿದೆ.

ಈ ಸಿನಿಮಾಕ್ಕೆ ʼThalapathy 69’ ಎಂದು ಟೈಟಲ್‌ ಇಡಲಾಗಿದೆ. ಸಿನಿಮಾವನ್ನು ಎಚ್ ವಿನೋದ್ (H. Vinoth) ಅವರು ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾಕ್ಕೆ ವಿಜಯ್ ಬರೋಬ್ಬರಿ 275 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ ಎನ್ನಲಾಗಿದೆ. ಆ ಮೂಲಕ ಅವರು ಅತೀ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ನಟ ಆಗಲಿದ್ದಾರೆ. ಶಾರುಖ್‌ ಖಾನ್‌, ರಜಿನಿಕಾಂತ್‌ ಅವರನ್ನೂ ಮೀರಿಸಲಿದ್ದಾರೆ ಎಂದು ವರದಿಯಾಗಿತ್ತು.

ಈ ನಡುವೆ ಅಲ್ಲು ಅರ್ಜುನ್‌ ಸಂಭಾವನೆ ವಿಚಾರದಲ್ಲಿ ವಿಜಯ್‌ ಅವರನ್ನು ಮೀರಿಸಿದ್ದಾರೆ ಎಂದು ʼಟ್ರ್ಯಾಕ್‌ ಟಾಲಿವುಡ್‌ʼ ವರದಿ ತಿಳಿಸಿದೆ.

ʼಪುಷ್ಪ-2ʼಗೆ ಅಲ್ಲು ಅರ್ಜುನ್‌ ಪಡೆದ ಸಂಭಾವನೆ ಎಷ್ಟು? : ಈ ವರ್ಷದ ಬಹುನಿರೀಕ್ಷಿತ ಪ್ಯಾನ್‌ ಇಂಡಿಯಾ ಸಿನಿಮಾಗಳಲ್ಲಿ ಒಂದಾಗಿರುವ ʼಪುಷ್ಪ-2ʼ ಸಿನಿಮಾ ರಿಲೀಸ್‌ಗೆ ಸಿದ್ದವಾಗಿದೆ. ಮೊದಲ ಭಾಗಕ್ಕೆ ಸಿಕ್ಕ ದೊಡ್ಡ ಗೆಲುವು ಎರಡನೇ ಭಾಗದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

ʼಪುಷ್ಪರಾಜ್‌ʼ ಪಾತ್ರಕ್ಕಾಗಿ ಅಲ್ಲು ಅರ್ಜುನ್‌ ಬರೋಬ್ಬರಿ 300 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ ಎಂದು ವರದಿಯಾಗಿದೆ. ಆ ಮೂಲಕ ವಿಜಯ್‌ ಅವರ ಸಂಭಾವನೆ ದಾಖಲೆಯನ್ನು ಮುರಿಯಲಿದ್ದಾರೆ ಎನ್ನಲಾಗುತ್ತಿದೆ.

ಒಂದು ವೇಳೆ ಅಲ್ಲು ಅರ್ಜುನ್‌ ಈ ಸಂಭಾವನೆಯನ್ನು ಪಡೆದುಕೊಂಡರೆ ಭಾರತದ ಅತ್ಯಂತ ದುಬಾರಿ ಸಂಭಾವನೆ ಪಡೆಯುವ ನಟನಾಗಲಿದ್ದಾರೆ.

ಯಾವುದಕ್ಕೂ ಚಿತ್ರತಂಡವೇ ಮುಂದಿನ ದಿನಗಳಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ನೀಡಬೇಕಿದೆ.

ಸುಕುಮಾರ್‌ ನಿರ್ದೇಶನದ ʼಪುಷ್ಪ-2ʼ ಇದೇ ಡಿಸೆಂಬರ್‌ 5 ರಂದು ವರ್ಲ್ಡ್‌ ವೈಡ್‌ ರಿಲೀಸ್‌ ಆಗಲಿದೆ. ಸಿನಿಮಾದಲ್ಲಿ ಅಲ್ಲು ಅರ್ಜುನ್‌ ಜತೆ ರಶ್ಮಿಕಾ ಮಂದಣ್ಣ, ಫಾಹದ್ ಫಾಸಿಲ್‌ ಮುಂತಾವರು ನಟಿಸಿದ್ದಾರೆ.

ಟಾಪ್ ನ್ಯೂಸ್

Krishna-27

Udupi: ದೀಪಾವಳಿ ಪ್ರಯುಕ್ತ ಗೂಡುದೀಪ ಸ್ಪರ್ಧೆ ಉದ್ಘಾಟನೆ

1-qwe

Reliance Foundation; ನೂತನ ಆರೋಗ್ಯ ಸೇವಾ ಯೋಜನೆ ಘೋಷಿಸಿದ ನೀತಾ ಅಂಬಾನಿ

Beer

Karnataka govt; ಅಧಿಸೂಚನೆ ಹಿಂತೆಗೆದುಕೊಳ್ಳುವಂತೆ ಬಿಯರ್ ತಯಾರಕರ ಒತ್ತಾಯ

BJP-Team

Waqf Property: ವಕ್ಫ್ ವಿವಾದ: ವಿಜಯಪುರ ರೈತರ ಅಹವಾಲು ಆಲಿಸಲು ಬಿಜೆಪಿಯಿಂದ ತಂಡ ರಚನೆ

15

Movie: 45 ಕೋಟಿ ಬಜೆಟ್‌, 60 ಸಾವಿರ ಗಳಿಕೆ; ಇದು ಭಾರತದ ಬಿಗೆಸ್ಟ್ ಫ್ಲಾಪ್ ಸಿನಿಮಾ

1-a-PK

Pakistan; ನಾಯಕತ್ವ ತೊರೆದ ಬಾಬರ್ ಅಜಂ: ವೈಟ್ ಬಾಲ್ ಕಪ್ತಾನನಾಗಿ ರಿಜ್ವಾನ್

Sharanagowda-Kandakura

JDS: ದೇವೇಗೌಡರ ಕುಟುಂಬ ಬಲಿ ಪಡೆಯೋದಾದ್ರೆ ಶಿವರಾಮೇಗೌಡ್ರು ಸಂಸದರಾಗ್ತಿದ್ರಾ?: ಕಂದಕೂರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ಶೋಭಿತಾ ಜತೆ ಮದುವೆ ಹಿನ್ನೆಲೆ ಮಾಜಿ ಪತ್ನಿ ಜತೆಗಿನ ಕೊನೆಯ ಫೋಟೋ ಡಿಲೀಟ್‌ ಮಾಡಿದ ನಾಗಚೈತನ್ಯ

Jani Master: ಜೈಲಿನಿಂದ ಹೊರಬಂದು ʼಸತ್ಯʼ ಎಂದಿಗೂ ನಶಿಸುವುದಿಲ್ಲ ಎಂದ ಜಾನಿ ಮಾಸ್ಟರ್

Jani Master: ಜೈಲಿನಿಂದ ಹೊರಬಂದು ʼಸತ್ಯʼ ಎಂದಿಗೂ ನಶಿಸುವುದಿಲ್ಲ ಎಂದ ಜಾನಿ ಮಾಸ್ಟರ್

1-aa-teee

Telugu; ಪಾತ್ರದ ಕುರಿತು ಆಕ್ರೋಶ: ನಟನಿಗೆ ಮಹಿಳೆಯಿಂದ ಚಿತ್ರ ಮಂದಿರದಲ್ಲೇ ಹಲ್ಲೆ!!

Movies: ದೀಪಾವಳಿಗೆ ಭರ್ತಿ ಆಗಲಿದೆ ಥಿಯೇಟರ್; ಇಲ್ಲಿದೆ ರಿಲೀಸ್‌ ಆಗಲಿರುವ ಸಿನಿಮಾಗಳ ಪಟ್ಟಿ

Movies: ದೀಪಾವಳಿಗೆ ಭರ್ತಿ ಆಗಲಿದೆ ಥಿಯೇಟರ್; ಇಲ್ಲಿದೆ ರಿಲೀಸ್‌ ಆಗಲಿರುವ ಸಿನಿಮಾಗಳ ಪಟ್ಟಿ

10

Tollywood: ʼಪುಷ್ಪ-3 ಬರುವುದು ಕನ್ಫರ್ಮ್..‌ ನಿರ್ಮಾಪಕರೇ ಬಿಟ್ಟು ಕೊಟ್ರು ಗುಟ್ಟು

MUST WATCH

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

ಹೊಸ ಸೇರ್ಪಡೆ

Krishna-27

Udupi: ದೀಪಾವಳಿ ಪ್ರಯುಕ್ತ ಗೂಡುದೀಪ ಸ್ಪರ್ಧೆ ಉದ್ಘಾಟನೆ

1-qwe

Reliance Foundation; ನೂತನ ಆರೋಗ್ಯ ಸೇವಾ ಯೋಜನೆ ಘೋಷಿಸಿದ ನೀತಾ ಅಂಬಾನಿ

road-mishap-11

Puttur: ಬೈಕ್‌-ಸ್ಕೂಟರ್‌ ಅಪಘಾತ; ಗಾಯ

Beer

Karnataka govt; ಅಧಿಸೂಚನೆ ಹಿಂತೆಗೆದುಕೊಳ್ಳುವಂತೆ ಬಿಯರ್ ತಯಾರಕರ ಒತ್ತಾಯ

2

Kasaragod: ಕುಖ್ಯಾತ ಆರೋಪಿ ಕಾರಾಟ್‌ ನೌಶಾದ್‌ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.