Bajpe ಪೇಟೆ ಚರಂಡಿಗೆ ಹೊಸ ಸ್ಲ್ಯಾಬ್‌

ಬಿರುಕು ಬಿಟ್ಟ ಸ್ಲ್ಯಾಬ್‌ನಲ್ಲಿ ವಾಹನಗಳ ಚಕ್ರ ಸಿಲುಕಿ ಸಂಚಾರಕ್ಕೆ ಅಡಚಣೆ

Team Udayavani, Oct 27, 2024, 4:24 PM IST

6

ಬಜಪೆ: ಬಜಪೆ ಪೇಟೆಯ ಚರಂಡಿಯ ಸ್ಲ್ಯಾಬ್ ಬಿರುಕು ಬಿಟ್ಟ ಕಾರಣ ಬಸ್‌ ನಿಲ್ದಾಣದಿಂದ ಹೊರಗೆ ಬರುವ ಬಸ್‌ ಹಾಗೂ ಇತರ ವಾಹನಗಳಿಗೆ ಅಪಾಯದ ಬಗ್ಗೆ ‘ಉದಯವಾಣಿ’ ಸುದಿನ ವರದಿಗೆ ಲೋಕೋಪಯೋಗಿ ಇಲಾಖೆ ಸ್ಪಂದಿಸಿದ್ದು, ಬಿರುಕುಬಿಟ್ಟ ಸ್ಲ್ಯಾಬ್ನ್ನು ಸರಿಪಡಿಸಿದೆ.

ಬಜಪೆ ಪೇಟೆಯ ಚರಂಡಿಯಲ್ಲಿ ಸ್ಲ್ಯಾಬ್ ಬಿರುಕು ದಿನದಿಂದ ದಿನಕ್ಕೆ ದೊಡ್ಡದಾಗಿ ವಾಹನಗಳ ಚಕ್ರಗಳು ಸಿಲುಕುವ ಕಾರಣ ಅಪಾಯಕ್ಕೆ ಕಾರಣವಾಗುತ್ತಿರುವ ಬಗ್ಗೆ ಸೆ. 14ರಂದು ವರದಿ ಮಾಡಿತ್ತು. ಈ ಪ್ರದೇಶದಲ್ಲಿ ಬಸ್‌ಗಳು ಹಾಗೂ ಇತರ ವಾಹನಗಳು ಹೆಚ್ಚು ಸಂಚಾರಿಸುತ್ತಿವೆ. ಲಘು ವಾಹನಗಳ ಚಕ್ರವೂ ಹಲವು ಬಾರಿ ಸಿಲುಕಿಕೊಂಡಿ ರುವುದು ಕಂಡು ಬಂದಿತ್ತು. ಲೋಕೋಪಯೋಗಿ ಇಲಾಖೆ ಸ್ಲ್ಯಾಬ್ ಬಿರುಕು ಬಿಟ್ಟ ಜಾಗದಲ್ಲಿ ಹೊಸ ಸ್ಲ್ಯಾಬ್ನ್ನು ಹಾಕಿದೆ. ಇದರಿಂದ ವಾಹನ ಸಂಚಾರ ಸುಮಗವಾಗಿದೆ. ಇಲ್ಲದ್ದಿದ್ದಲ್ಲಿ ಬಿರುಕು ಬಿಟ್ಟ ಸ್ಲ್ಯಾಬ್ನ ಬಿಟ್ಟು ಇತ್ತ ಒಂದೇ ಬದಿ ವಾಹನ ಸಂಚಾರ ಮಾಡಬೇಕಾಗಿತ್ತು.

ಬಜಪೆ ಪೇಟೆ ರಸ್ತೆ ಕಾಂಕ್ರೀಟ್‌, ವಿಸ್ತರಣೆ ಕಾಮಗಾರಿ ಮುಗಿದಿಲ್ಲ
ಬಜಪೆ ಪೇಟೆಯಲ್ಲಿ ಬಸ್‌ ನಿಲ್ದಾಣದ ಸಮೀಪದ ಚರಂಡಿ ಇರುವ ಪ್ರದೇಶದಲ್ಲಿ ಕಾಮಗಾರಿ ಬಾಕಿ ಇದೆ. ಲೋಕೋಪಯೋಗಿ ಇಲಾಖೆಯು ಬಜಪೆ ಪಟ್ಟಣ ಪಂಚಾಯತ್‌ಗೆ ಅದ್ಯಪಾಡಿ ಬಸ್‌ ತಂಗುದಾಣ ಹಾಗೂ ಮಂಗಳೂರು ಕಡೆ ಸಾಗುವ ರಸ್ತೆಯ ಬದಿಯ ಬಸ್‌ ತಂಗುದಾಣವನ್ನು ತೆಗೆದು ಜಾಗವನ್ನು ಸಮತಟ್ಟು ಮಾಡಿ ಕೊಡಬೇಕೆಂದು ಮನವಿ ಮಾಡಿಕೊಂಡಿದೆ. ಇದರಿಂದ ರಸ್ತೆ ವಿಸ್ತರಣೆ ಕಾಮಗಾರಿ ಬಳಿಕ ನಡೆಯುವ ಬಗ್ಗೆ ಮುನ್ಸೂಚನೆ ದೊರೆತಿದೆ. ಬಸ್‌ ನಿಲ್ದಾಣ ತೆರವಿನ ಅನಂತರವೇ ಈ ಕಾಮಗಾರಿ ಆರಂಭವಾಗಲಿದೆ. ಇದರಿಂದ ರಸ್ತೆ ವಿಸ್ತರಣೆ ಜತೆ ಪಾರ್ಕಿಂಗ್‌ಗೂ ಹೆಚ್ಚು ಜಾಗ ಸಿಗಲಿದೆ.

ಟಾಪ್ ನ್ಯೂಸ್

1-qwe

Reliance Foundation; ನೂತನ ಆರೋಗ್ಯ ಸೇವಾ ಯೋಜನೆ ಘೋಷಿಸಿದ ನೀತಾ ಅಂಬಾನಿ

Beer

Karnataka govt; ಅಧಿಸೂಚನೆ ಹಿಂತೆಗೆದುಕೊಳ್ಳುವಂತೆ ಬಿಯರ್ ತಯಾರಕರ ಒತ್ತಾಯ

BJP-Team

Waqf Property: ವಕ್ಫ್ ವಿವಾದ: ವಿಜಯಪುರ ರೈತರ ಅಹವಾಲು ಆಲಿಸಲು ಬಿಜೆಪಿಯಿಂದ ತಂಡ ರಚನೆ

15

Movie: 45 ಕೋಟಿ ಬಜೆಟ್‌, 60 ಸಾವಿರ ಗಳಿಕೆ; ಇದು ಭಾರತದ ಬಿಗೆಸ್ಟ್ ಫ್ಲಾಪ್ ಸಿನಿಮಾ

1-a-PK

Pakistan; ನಾಯಕತ್ವ ತೊರೆದ ಬಾಬರ್ ಅಜಂ: ವೈಟ್ ಬಾಲ್ ಕಪ್ತಾನನಾಗಿ ರಿಜ್ವಾನ್

Sharanagowda-Kandakura

JDS: ದೇವೇಗೌಡರ ಕುಟುಂಬ ಬಲಿ ಪಡೆಯೋದಾದ್ರೆ ಶಿವರಾಮೇಗೌಡ್ರು ಸಂಸದರಾಗ್ತಿದ್ರಾ?: ಕಂದಕೂರ

1-mp-lungi

Video Viral; ಲುಂಗಿಯಲ್ಲಿ ಡ್ಯೂಟಿ ಮಾಡಿದ ಎಸ್ ಐ!: ಮಹಿಳೆಯೊಂದಿಗೆ ಅಸಭ್ಯ ವರ್ತನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5(1)

Mangaluru: ಪ್ಲಾಸ್ಟಿಕ್‌ ನಿಯಂತ್ರಣ: ಸಂಘ-ಸಂಸ್ಥೆಗಳ ಪಣ

Frud

Mangaluru: ಪೊಲೀಸ್‌ ಅಧಿಕಾರಿ ಹೆಸರಲ್ಲಿ ಕರೆ ಮಾಡಿ 50 ಲ.ರೂ. ವಂಚನೆ

Mangaluru: ಸಿ.ಟಿ. ರವಿ, ಯತ್ನಾಳ್‌, ಸೂಲಿಬೆಲೆ ವಿರುದ್ದ ದೂರು

Mangaluru: ಸಿ.ಟಿ. ರವಿ, ಯತ್ನಾಳ್‌, ಸೂಲಿಬೆಲೆ ವಿರುದ್ದ ದೂರು

Mangaluru: ಜೈನಮಂದಿರದ ಮೂರ್ತಿಗಳ ಚಿನ್ನದ ಸರ ಕಳವು

Mangaluru: ಜೈನಮಂದಿರದ ಮೂರ್ತಿಗಳ ಚಿನ್ನದ ಸರ ಕಳವು

Surathkal:ಯುವಕನಿಂದ ಬೆದರಿಕೆ,ಆಶ್ಲೀಲ ಮೆಸೇಜ್‌:ಯುವತಿ ಆತ್ಮಹ*ತ್ಯೆಗೆ ಯತ್ನ;ಅಪಾಯದಿಂದ ಪಾರು

Surathkal:ಯುವಕನಿಂದ ಬೆದರಿಕೆ,ಆಶ್ಲೀಲ ಮೆಸೇಜ್‌:ಯುವತಿ ಆತ್ಮಹ*ತ್ಯೆಗೆ ಯತ್ನ;ಅಪಾಯದಿಂದ ಪಾರು

MUST WATCH

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

ಹೊಸ ಸೇರ್ಪಡೆ

1-qwe

Reliance Foundation; ನೂತನ ಆರೋಗ್ಯ ಸೇವಾ ಯೋಜನೆ ಘೋಷಿಸಿದ ನೀತಾ ಅಂಬಾನಿ

road-mishap-11

Puttur: ಬೈಕ್‌-ಸ್ಕೂಟರ್‌ ಅಪಘಾತ; ಗಾಯ

Beer

Karnataka govt; ಅಧಿಸೂಚನೆ ಹಿಂತೆಗೆದುಕೊಳ್ಳುವಂತೆ ಬಿಯರ್ ತಯಾರಕರ ಒತ್ತಾಯ

2

Kasaragod: ಕುಖ್ಯಾತ ಆರೋಪಿ ಕಾರಾಟ್‌ ನೌಶಾದ್‌ ಬಂಧನ

14

Dandeli:ಮನೆಯಿಂದ ಹೊರ ಹಾಕಲ್ಪಟ್ಟ ವೃದ್ಧ; ಆಶ್ರಯ ನೀಡಲು ಮುಂದಾದ ಚಿನ್ನಯ್ಯ ಆಶೀರ್ವಾದಂ ಗಜ್ಜ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.