ಶೋಭಿತಾ ಜತೆ ಮದುವೆ ಹಿನ್ನೆಲೆ ಮಾಜಿ ಪತ್ನಿ ಜತೆಗಿನ ಕೊನೆಯ ಫೋಟೋ ಡಿಲೀಟ್ ಮಾಡಿದ ನಾಗಚೈತನ್ಯ
Team Udayavani, Oct 27, 2024, 5:08 PM IST
ಹೈದರಾಬಾದ್: ನಟ ನಾಗಚೈತನ್ಯ (Naga Chaitanya) – ಶೋಭಿತಾ ಧೂಳಿಪಾಲ (Sobhita Dhulipala) ಮದುವೆಯ ಸಿದ್ಧತೆಯಲ್ಲಿದ್ದಾರೆ.
8 ವರ್ಷಗಳಿಂದ ಡೇಟಿಂಗ್ ನಲ್ಲಿದ್ದ ನಾಗಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಆ.8ರಂದು ಹೈದರಾಬಾದ್ನಲ್ಲಿರುವ ನಾಗಚೈತನ್ಯ ಅವರ ನಿವಾಸದಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಬಳಿಕ ಎಂಗೇಜ್ ಮೆಂಟ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ನಾಗಚೈತನ್ಯ ಎಂಗೇಜ್ ಆದ ಬಳಿಕ ಅವರ ಮಾಜಿ ಪತ್ನಿ ಸಮಂತಾ (Samantha Ruth Prabhu) ಅವರ ಹೆಸರು ಕೆಲ ದಿನ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ನಲ್ಲಿತ್ತು. ಇದಕ್ಕೆ ಪ್ರಧಾನ ಕಾರಣ ನಾಗಚೈತನ್ಯ ಅವರ ಇನ್ಸ್ಟಾ ಖಾತೆಯಲ್ಲಿದ್ದ ಆ ಒಂದು ಫೋಟೋ.
ಇದನ್ನೂ ಓದಿ: Allu Arjun: ʼಪುಷ್ಪ-2ʼಗಾಗಿ ಇದುವರೆಗೆ ಯಾರು ಕೇಳದ್ದಷ್ಟು ಸಂಭಾವನೆ ಕೇಳಿದ ಅಲ್ಲು ಅರ್ಜುನ್?
ವಿಚ್ಚೇದನದ ಬಳಿಕ ಸಮಂತಾ ಅವರೊಂದಿಗೆ ಎಲ್ಲ ಫೋಟೋಗಳನ್ನು ಡಿಲೀಟ್ ಮಾಡಿ, ಅವರನ್ನು ʼಎಕ್ಸ್ʼ ನಲ್ಲಿ ಅನ್ ಫಾಲೋ ಮಾಡಿದ್ದ ನಾಗಚೈತನ್ಯ ಒಂದು ಫೋಟೋವನ್ನು ಮಾತ್ರ ಡಿಲೀಟ್ ಮಾಡದೆ ಹಾಗೆಯೇ ಇಟ್ಟಿದ್ದರು.
ಇದನ್ನು ಗಮನಿಸಿದ ನಾಗಚೈತನ್ಯ ಅವರ ಅಭಿಮಾನಿಗಳು ಫೋಟೋ ಕೆಳಗೆ ಯಾಕೆ ಈ ಫೋಟೋ ಡಿಲೀಟ್ ಮಾಡಿಲ್ಲ ಎಂದು ಅನೇಕ ಸಲಿ ಕಮೆಂಟ್ ಮಾಡಿ ಕೇಳಿದ್ದರು.
ಫಾರ್ಮುಲಾ 1 ರೇಸ್ ಟ್ರ್ಯಾಕ್ನಲ್ಲಿ ನಾಗಚೈತನ್ಯ ಹಾಗೂ ಸಮಂತಾ ನಿಂತಿರುವ ಫೋಟೋ ಇದಾಗಿತ್ತು. ಇಬ್ಬರು ಮುಖ ಆಚೆ ಮಾಡಿ ಕಾರಿನ ಬದಿಯಲ್ಲಿ ನಿಂತಿದ್ದರು. ಇದರ ಕೆಳಗೆ ʼಥ್ರೂ ಬ್ಯಾಕ್ ಮಿಸ್ಟರ್ & ದಿ ಗರ್ಲ್ ಫ್ರೆಂಡ್ʼ ಎಂದು ಬರೆಯಲಾಗಿತು. ಇದು 2018ರಲ್ಲಿ ಕ್ಲಿಕ್ಕಿಸಿದ್ದ ಫೋಟೋ ಆಗಿತ್ತು.
ಎಲ್ಲ ಫೋಟೋವನ್ನು ಡಿಲೀಟ್ ಮಾಡಿದ್ದ ನಾಗಚೈತನ್ಯ ಈ ಒಂದು ಫೋಟೋವನ್ನು ಹಾಗೆಯೇ ಇಟ್ಟಿದ್ದರು. ಇದೀಗ ಮಾಜಿ ಪತ್ನಿಯೊಂದಿಗೆ ಇದ್ದ ಕೊನೆಯ ಪೋಟೋವನ್ನು ಸಹ ನಾಗಚೈತನ್ಯ ಡಿಲೀಟ್ ಮಾಡಿದ್ದಾರೆ.
ಶೋಭಿತಾ ಧೂಳಿಪಾಲ ಅವರೊಂದಿಗೆ ನಾಗಚೈತನ್ಯ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ. ಪ್ರೀ ವೆಡ್ಡಿಂಗ್ ತಯಾರಿ ಜೋರಾಗಿ ನಡೆಯುತ್ತಿದೆ. ಮದುವೆ ಸಮೀಪಕ್ಕೆ ಬರುತ್ತಿರುವಂತೆಯೇ ನಾಗಚೈತನ್ಯ ಮಾಜಿ ಪತ್ನಿಯೊಂದಿಗಿದ್ದ ಕೊನೆಯ ಫೋಟೋವನ್ನು ಡಿಲೀಟ್ ಮಾಡಿದ್ದಾರೆ.
ನಾಗಚೈತನ್ಯ ಅವರ ಇನ್ಸ್ಟಾ ಖಾತೆಯಲ್ಲಿ ಸಮಂತಾ ಅವರ ಜತೆ ನಟಿಸಿದ್ದ ಸಿನಿಮಾದ ಪೋಸ್ಟರ್ ಮಾತ್ರ ಇದೆ.
2017 ರಲ್ಲಿ ನಾಗಚೈತನ್ಯ ಸಮಂತಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 2021ರಲ್ಲಿ ಇಬ್ಬರು ಪರಸ್ಪರ ಒಪ್ಪಿಗೆಯ ಮೇರೆ ವಿಚ್ಚೇದನ ಪಡೆದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun: ʼಪುಷ್ಪ-2ʼಗಾಗಿ ಇದುವರೆಗೆ ಯಾರು ಕೇಳದ್ದಷ್ಟು ಸಂಭಾವನೆ ಕೇಳಿದ ಅಲ್ಲು ಅರ್ಜುನ್?
Jani Master: ಜೈಲಿನಿಂದ ಹೊರಬಂದು ʼಸತ್ಯʼ ಎಂದಿಗೂ ನಶಿಸುವುದಿಲ್ಲ ಎಂದ ಜಾನಿ ಮಾಸ್ಟರ್
Telugu; ಪಾತ್ರದ ಕುರಿತು ಆಕ್ರೋಶ: ನಟನಿಗೆ ಮಹಿಳೆಯಿಂದ ಚಿತ್ರ ಮಂದಿರದಲ್ಲೇ ಹಲ್ಲೆ!!
Movies: ದೀಪಾವಳಿಗೆ ಭರ್ತಿ ಆಗಲಿದೆ ಥಿಯೇಟರ್; ಇಲ್ಲಿದೆ ರಿಲೀಸ್ ಆಗಲಿರುವ ಸಿನಿಮಾಗಳ ಪಟ್ಟಿ
Tollywood: ʼಪುಷ್ಪ-3 ಬರುವುದು ಕನ್ಫರ್ಮ್.. ನಿರ್ಮಾಪಕರೇ ಬಿಟ್ಟು ಕೊಟ್ರು ಗುಟ್ಟು
MUST WATCH
ಹೊಸ ಸೇರ್ಪಡೆ
Udupi: ಗಣಪತಿ ಸಹಕಾರಿ ವ್ಯವಸಾಯಕ ಸಂಸ್ಥೆ ಸ್ಥಾಪಿಸಿದರ ಹಿಂದಿನ ಪರಿಶ್ರಮ ದೊಡ್ಡದು: ವೆರೋನಿಕಾ
BBK11: ಬಿಗ್ ಬಾಸ್ ಮನೆಗೆ ತಿಳಿಯಿತು ಸುದೀಪ್ ಮಾತೃ ವಿಯೋಗದ ಸುದ್ದಿ
Maharashtra Polls; ನಮಗೆ ಸ್ಪರ್ಧಿಸಬಹುದಿತ್ತು, ಆದರೆ..: ಆಪ್ ಹೇಳಿದ್ದೇನು?
Kelarkalabettu: ವ್ಯಕ್ತಿ ನಾಪತ್ತೆಯಾಗಿ 22 ವರ್ಷದ ಬಳಿಕ ದೂರು ದಾಖಲು
Udupi: ದೀಪಾವಳಿ ಪ್ರಯುಕ್ತ ಗೂಡುದೀಪ ಸ್ಪರ್ಧೆ ಉದ್ಘಾಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.