Movie: 45 ಕೋಟಿ ಬಜೆಟ್‌, 60 ಸಾವಿರ ಗಳಿಕೆ; ಇದು ಭಾರತದ ಬಿಗೆಸ್ಟ್ ಫ್ಲಾಪ್ ಸಿನಿಮಾ

ಸ್ಟಾರ್‌ಗಳಿದ್ದರೂ ಸಿನಿಮಾ ಇಷ್ಟು ಹೀನಾಯವಾಗಿ ಸೋಲಲು ಕಾರಣವೇನು?

Team Udayavani, Oct 27, 2024, 7:20 PM IST

15

ಮುಂಬಯಿ: ಒಂದು ಸಿನಿಮಾ ನಿರ್ಮಾಣ ಮಾಡುವುದು ಅಷ್ಟು ಸುಲಭದ ಮಾತಲ್ಲ. ಕೋಟಿ ಕೋಟಿ ಬಂಡವಾಳ ಹಾಕಿದರೆ  ಹೆಚ್ಚಿನ ಲಾಭದ ನಿರೀಕ್ಷೆ ನಿರ್ಮಾಪಕರಲ್ಲಿ ಇರುತ್ತದೆ.

ಕೆಲವೊಮ್ಮೆ ಯಾವ ದೊಡ್ಡ ಸ್ಟಾರ್‌ಗಳಿದ್ದರೂ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋಲು ಕಾಣುತ್ತದೆ. ಆದರೆ ಸೋಲು ಕಂಡರೂ ಕೋಟಿ ಗಳಿಕೆಯನ್ನಾದರೂ ಸಿನಿಮಾ ಕಾಣುತ್ತದೆ. ಇಲ್ಲೊಂದು ಸಿನಿಮಾ ಹೀನಾಯ ಸೋಲು ಕಂಡಿದ್ದು ಮಾತ್ರವಲ್ಲದೆ ಹಾಕಿದ ಹಣಕ್ಕೆ ವಾಪಾಸ್‌ ಆಗಿ ನಯಾಪೈಸೆಯೂ ಸಿಕ್ಕಿಲ್ಲ.!

ಇದನ್ನೂ ಓದಿ: BBK11: ಶಾಕಿಂಗ್.! ಫಿನಾಲೆವರೆಗೂ ಬರ್ತಾರೆ ಅನ್ಕೊಂಡಿದ್ದ‌ ಆ ಸ್ಪರ್ಧಿ ಇವತ್ತೇ ಮನೆಯಿಂದ ಔಟ್?

2023ರಲ್ಲಿ ʼದಿ ಲೇಡಿ ಕಿಲ್ಲರ್‌ʼ (The Lady Killer) ಎನ್ನುವ ಸಿನಿಮಾವೊಂದು ಬಂದಿತ್ತು. ಈ ಸಿನಿಮಾವನ್ನು ಅಜಯ್ ಬಹ್ಲ್ ನಿರ್ದೇಶನ ಮಾಡಿದ್ದರು. ಪ್ರಧಾನ ಪಾತ್ರದಲ್ಲಿ ಭೂಮಿ ಪೆಡ್ನೇಕರ್ (Bhumi Pednekar) ,ಅರ್ಜುನ್ ಕಪೂರ್ (Arjun Kapoor) ನಟಿಸಿದ್ದರು. ಸಿನಿಮಾಕ್ಕೆ ಭೂಷಣ್ ಕುಮಾರ್ ಅವರ ಟಿ-ಸೀರೀಸ್ ಬಂಡವಾಳ ಹಾಕಿತ್ತು.

ಸುಮಾರು 45 ಕೋಟಿ ಬಜೆಟ್‌ನಲ್ಲಿ ಬಂದ ಈ ಕ್ರೈಮ್‌ ಥ್ರಿಲ್ಲರ್‌ ಸಿನಿಮಾದಲ್ಲಿ ಅರ್ಜುನ್‌, ಭೂಮಿ ಪಡ್ನೇಕರ್‌ನಂತಹ ಸ್ಟಾರ್‌ ಕಾಸ್ಟ್‌ ಇದ್ದೂ ಸಿನಿಮಾ ಗಳಿಸಿದ್ದು ಕೇವಲ 60 ಸಾವಿರ ರೂಪಾಯಿನಷ್ಟೇ.!

ರಿಲೀಸ್‌ ಆದ ಮೊದಲ ದಿನ ಭಾರತದಾದ್ಯಂತ 293 ಟಿಕೆಟ್‌ಗಳಷ್ಟೇ ಸೇಲ್‌ ಆಗಿತ್ತು. ಕೊನೆಯವರೆಗೂ ಸಿನಿಮಾದ ಒಟ್ಟು 500 ಟಿಕೆಟ್‌ಗಳಷ್ಟೇ ಸೇಲ್‌ ಆಗಿತ್ತು. ಲೈಫ್‌ ಟೈಮ್‌ ಸಿನಿಮಾ ಗಳಿಸಿದ್ದು 60 ಸಾವಿರ ರೂಪಾಯಿನ್ನಷ್ಟೇ.

ಇಷ್ಟು ಹೀನಾಯವಾಗಿ ಸೋಲಲು ಕಾರಣವೇನು? :

ಈ ಸಿನಿಮಾದ ಚಿತ್ರೀಕರಣ ಪೂರ್ಣವಾಗಿ ಶೂಟ್‌ ಆಗಿರಲಿಲ್ಲ. ಕ್ಲೈಮ್ಯಾಕ್ಸ್‌ ಸಂಪೂರ್ಣವಾಗಿರಲಿಲ್ಲ. ಹೀಗಾಗಿ ಸಿನಿಮಾ ಯಾವುದೇ ಪ್ರಚಾರವಿಲ್ಲದೆಯೇ ರಿಲೀಸ್‌ ಆಗಿತ್ತು. ಪರಿಣಾಮ ಸಿನಿಮಾ ನೋಡಿದ ಪ್ರೇಕ್ಷಕರು ನೆಗಟಿವ್‌ ರೆಸ್ಪಾನ್ಸ್‌ ನೀಡಿದ್ದರು. ಇದೇ ಕಾರಣದಿಂದ ಓಟಿಟಿಯ ಯಾವ ಫ್ಲಾಟ್‌ ಫಾರ್ಮ್‌ ಕೂಡ ಸಿನಿಮಾ ಖರೀದಿಗೆ ಮುಂದೆ ಬಂದಿಲ್ಲ. ಇದೇ ವರ್ಷದ ಸೆಪ್ಟಂಬರ್‌ ತಿಂಗಳಿನಲ್ಲಿ ಸಿನಿಮಾ ಯೂಟ್ಯೂಬ್‌ನಲ್ಲಿ ಉಚಿತವಾಗಿ ನೋಡಲು ಅಪ್ಲೋಡ್‌ ಮಾಡಲಾಗಿದೆ. 2.4 ಮಿಲಿಯನ್‌ ವೀಕ್ಷಣೆ ಕಂಡಿದೆ. ಅರ್ಜುನ್‌, ಭೂಮಿ ಅವರ ನಟನೆ ಬಗ್ಗೆ ಪ್ರಶಂಸಿಸಿ ಸಿನಿಮಾದ ಬಗ್ಗೆ ಭಾರೀ ಟೀಕೆಯ ಮಾತುಗಳನ್ನು ವೀಕ್ಷಕರು ಆಡಿದ್ದಾರೆ. ಈ ಸಿನಿಮಾ ಭಾರತೀಯ ಚಿತ್ರರಂಗದ ದೊಡ್ಡ ಫ್ಲಾಪ್ ಸಿನಿಮಾವಾಗಿದೆ.

 

ಟಾಪ್ ನ್ಯೂಸ್

BBK11: ನಾಲ್ಕನೇ ವಾರದಲ್ಲಿ ಬಿಗ್ ಬಾಸ್ ಮನೆಯಿಂದ ಆಚೆ ಬರುವುದು ಯಾರು?

BBK11: ನಾಲ್ಕನೇ ವಾರದಲ್ಲಿ ಬಿಗ್ ಬಾಸ್ ಮನೆಯಿಂದ ಆಚೆ ಬರುವುದು ಯಾರು?

DKsuresh–CPY

By Election: ಎಚ್‌ಡಿಕೆ ಯಾವ ಒಕ್ಕಲಿಗ ನಾಯಕ ಬೆಳೆಯುವುದನ್ನೂ ಸಹಿಸಲ್ಲ: ಡಿ.ಕೆ.ಸುರೇಶ್‌

Ganapathi-Sangha

Udupi: ಗಣಪತಿ ಸಹಕಾರಿ ವ್ಯವಸಾಯಕ ಸಂಸ್ಥೆ ಸ್ಥಾಪಿಸಿದರ ಹಿಂದಿನ ಪರಿಶ್ರಮ ದೊಡ್ಡದು: ವೆರೋನಿಕಾ

1-eqw-ewq

BBK11: ಬಿಗ್ ಬಾಸ್ ಮನೆಗೆ ತಿಳಿಯಿತು ಸುದೀಪ್ ಮಾತೃ ವಿಯೋಗದ ಸುದ್ದಿ

kejriwal 3

Maharashtra Polls; ನಮಗೆ ಸ್ಪರ್ಧಿಸಬಹುದಿತ್ತು, ಆದರೆ..: ಆಪ್ ಹೇಳಿದ್ದೇನು?

Krishna-27

Udupi: ದೀಪಾವಳಿ ಪ್ರಯುಕ್ತ ಗೂಡುದೀಪ ಸ್ಪರ್ಧೆ ಉದ್ಘಾಟನೆ

1-qwe

Reliance Foundation; ನೂತನ ಆರೋಗ್ಯ ಸೇವಾ ಯೋಜನೆ ಘೋಷಿಸಿದ ನೀತಾ ಅಂಬಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮದುವೆ,ಪಾರ್ಟಿಗಳ ಡ್ಯಾನ್ಸ್ ಪರ್ಫಾರ್ಮೆನ್ಸ್‌ಗೆ ಬಿಟೌನ್ ಸ್ಟಾರ್ಸ್‌ ಪಡೆಯುವ ಸಂಭಾವನೆ ಎಷ್ಟು?

B’town: ಮದುವೆ, ಪಾರ್ಟಿಗಳ ಪರ್ಫಾರ್ಮೆನ್ಸ್‌ಗೆ ಬಿಟೌನ್ ಸ್ಟಾರ್ಸ್‌ ಪಡೆಯುವ ಸಂಭಾವನೆ ಎಷ್ಟು?

Actor Sushant Singh Case: ನಟಿ ರಿಯಾ ಚಕ್ರವರ್ತಿ ವಿರುದ್ಧ ಸಿಬಿಐ ಸಲ್ಲಿಸಿದ್ದ ಅರ್ಜಿ ವಜಾ

Actor Sushant Singh Case: ನಟಿ ರಿಯಾ ಚಕ್ರವರ್ತಿ ವಿರುದ್ಧ ಸಿಬಿಐ ಸಲ್ಲಿಸಿದ್ದ ಅರ್ಜಿ ವಜಾ

1-prr

Piracy;ಕಳೆದ ವರ್ಷ 22,400 ಕೋಟಿ ರೂ. ನಷ್ಟ!

Arrested: ನಟ ಸಲ್ಮಾನ್ ಖಾನ್‌ಗೆ ಬೆದರಿಕೆ ಹಾಕಿ 5ಕೋಟಿಗೆ ಬೇಡಿಕೆ ಇಟ್ಟಿದ್ದ ಆರೋಪಿ ಅರೆಸ್ಟ್

Arrested: ನಟ ಸಲ್ಮಾನ್ ಖಾನ್‌ಗೆ ಬೆದರಿಕೆ ಹಾಕಿ 5ಕೋಟಿಗೆ ಬೇಡಿಕೆ ಇಟ್ಟಿದ್ದ ಆರೋಪಿ ಅರೆಸ್ಟ್

Wedding Day: ಶಬಾನಾ ಆಜ್ಮಿ ವರಿಸುವಾಗ ಜಾವೇದ್‌ ನಶೆಯಲ್ಲಿದ್ದರು… ಅನ್ನು ಕಪೂರ್‌

Wedding Day: ಶಬಾನಾ ಆಜ್ಮಿ ವರಿಸುವಾಗ ಜಾವೇದ್‌ ನಶೆಯಲ್ಲಿದ್ದರು… ಅನ್ನು ಕಪೂರ್‌

MUST WATCH

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

BBK11: ನಾಲ್ಕನೇ ವಾರದಲ್ಲಿ ಬಿಗ್ ಬಾಸ್ ಮನೆಯಿಂದ ಆಚೆ ಬರುವುದು ಯಾರು?

BBK11: ನಾಲ್ಕನೇ ವಾರದಲ್ಲಿ ಬಿಗ್ ಬಾಸ್ ಮನೆಯಿಂದ ಆಚೆ ಬರುವುದು ಯಾರು?

DKsuresh–CPY

By Election: ಎಚ್‌ಡಿಕೆ ಯಾವ ಒಕ್ಕಲಿಗ ನಾಯಕ ಬೆಳೆಯುವುದನ್ನೂ ಸಹಿಸಲ್ಲ: ಡಿ.ಕೆ.ಸುರೇಶ್‌

2

Puttur: ಬೀಡಿ ಕಳವು; ಆರೋಪಿ ಬಂಧನ

fraudd

Mangaluru: ನಕಲಿ ಲೆಟರ್‌ಹೆಡ್‌, ಸೀಲ್‌ ಬಳಕೆ; ಪ್ರಕರಣ ದಾಖಲು

15

Ullal: ಬಾವಿಗೆ ಬಿದ್ದ ಹೋರಿ; ಅಗ್ನಿಶಾಮಕ ದಳದ ಸಿಬಂದಿಯಿಂದ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.