H. D. Kumaraswamy: ನಿಖಿಲ್ಗೆ ಅಭಿಮನ್ಯು ಪಾತ್ರ ಬೇಡ ಅರ್ಜುನನ ಪಾತ್ರ
Team Udayavani, Oct 28, 2024, 12:35 AM IST
ಹಾಸನ: “ಕುರುಕ್ಷೇತ್ರ’ ಚಿತ್ರದಲ್ಲಿ ನನ್ನ ಮಗ ನಿಖಿಲ್ಕುಮಾರಸ್ವಾಮಿ ಅಭಿಮನ್ಯುವಿನ ಪಾತ್ರ ಮಾಡಿದ್ದ. ಮಂಡ್ಯ ಮತ್ತು ರಾಮನಗರದ ಚುನಾವಣೆಯಲ್ಲಿ ಕಾಂಗ್ರೆಸ್ಸಿನವರ ಕುತಂತ್ರದಿಂದ ಸೋಲನುಭವಿಸಿದ. ಆದರೆ, ಈ ಬಾರಿ ಉಪ ಚುನಾವಣೆಯಲ್ಲಿ ಚನ್ನಪಟ್ಟಣದ ಜನತೆ ನಿಖೀಲ್ಗೆ ಅಭಿಮನ್ಯುವಿನ ಪಾತ್ರ ಬೇಡ ಎಂದು ಅರ್ಜುನನ ಪಾತ್ರ ನೀಡಿದ್ದಾರೆ.
ನಮ್ಮ ವಿರೋಧಿಗಳು ಎಷ್ಟೇ ಕುತಂತ್ರದ ರಾಜಕಾರಣ ಮಾಡಿದರೂ ಚನ್ನಪಟ್ಟಣದ ಜನತೆ ಮತ್ತು ಎನ್ಡಿಎ ಕಾರ್ಯಕರ್ತರು ನಿಖೀಲ್ಗೆ ಗೆಲುವು ನೀಡುತ್ತಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ವಿರೋಧಿಗಳಿಗೆ ಟಾಂಗ್ ನೀಡಿದರು.
ಹಾಸನಾಂಬೆ ದರ್ಶನ ಪಡೆದ ಅನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚನ್ನಪಟ್ಟಣ ಉಪ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮುಂದಿನ ದಿಕ್ಸೂಚಿಯಾಗಲಿದೆ. ವಿರೋಧಿಗಳ ಹೇಳಿಕೆ ಗಮನಿಸಿದ್ದೇನೆ, ಅವರ ಹೇಳಿಕೆಗೆ ಚನ್ನಪಟ್ಟಣದ ಜನತೆಯೇ ಉತ್ತರ ನೀಡುತ್ತಾರೆ ಎಂದು ಹೇಳಿದರು.
ಕಾಂಗ್ರೆಸ್ನಲ್ಲಿ ಅಭ್ಯರ್ಥಿ ಇರಲಿಲ್ಲವೋ ಏನೋ, ಬಿಜೆಪಿಯಲ್ಲಿದ್ದವರನ್ನು ಕನಕಪುರ ಸಹೋದರರು ಕರೆದೊಯ್ದು ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Goa: ದಿ ಐರನ್ ಮ್ಯಾನ್ ಸ್ಪರ್ಧೆಯಲ್ಲಿ ವಿಜೇತರಾದ ಮೊದಲ ಜನಪ್ರತಿನಿಧಿ ತೇಜಸ್ವಿ
Mangaluru: “ಕ್ಯಾಂಪ್ಕೊ’ದಿಂದ ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿಯ ಭೇಟಿ
Udupi: ಅವಿಭಜಿತ ಜಿಲ್ಲೆಯ ಸಹಕಾರಿ ಸಂಘ ದೇಶಕ್ಕೆ ಮಾದರಿ: ಡಾ.ಎಂ.ಎನ್.ರಾಜೇಂದ್ರ ಕುಮಾರ್
Mangaluru: ವಿಪತ್ತು ನಿರ್ವಹಣೆಗೆ ಸಮನ್ವಯ ಅಗತ್ಯ: ಡಿಐಜಿಪಿ ಅಮಿತ್ ಸಿಂಗ್
Coastal Karnataka: ಉಭಯ ಜಿಲ್ಲೆಯ 31 ಕೇಂದ್ರಗಳಲ್ಲಿ ಗ್ರಾಮ ಆಡಳಿತ ಅಧಿಕಾರಿ ಪರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.