Air pollution; ಅತ್ಯಂತ ಕಳಪೆಗೆ ಕುಸಿದ ದಿಲ್ಲಿ ವಾಯು ಗುಣಮಟ್ಟ
Team Udayavani, Oct 28, 2024, 6:48 AM IST
ಹೊಸದಿಲ್ಲಿ: ದೀಪಾವಳಿ ಸಮೀಪಿಸುತ್ತಿರುವಂತೆ ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿದ್ದು, ರವಿವಾರ ವಾಯು ಗುಣಮಟ್ಟ ಅತ್ಯಂತ ಕಳಪೆ ಮಟ್ಟಕ್ಕೆ ಕುಸಿದಿದೆ. ಪಂಜಾಬ್, ಹರಿಯಾಣ ಭಾಗದಲ್ಲಿನ ರೈತರು ಕೂಳೆ ಸುಡುತ್ತಿರುವುದರಿಂದ 2 ದಿನಗಳ ಬಳಿಕ ರವಿವಾರ ಮತ್ತೆ ದಿಲ್ಲಿಯ ವಾಯು ಗುಣಮಟ್ಟ ಇಳಿದಿದೆ.
ಅ.30ರಂದು ದೀಪಾವಳಿ ಆರಂಭವಾಗಲಿದ್ದು, ಪಟಾಕಿ ಹಚ್ಚುವಿಕೆ ಸಹ ಸೇರ್ಪಡೆಯಾಗಿ ಅ.30ರ ವೇಳೆಗೆ ಮಾಲಿನ್ಯ ಗಂಭೀರ ಮಟ್ಟ ತಲುಪುವ ಸಾಧ್ಯತೆ ಇದೆ ಎಂದು ಅಂದಾಜಿಸಲಾ ಗಿದೆ. ಇದಲ್ಲದೇ ದಿಲ್ಲಿಯಲ್ಲಿನ ಹವಾ ಮಾನ ಪರಿಸ್ಥಿತಿಯೂ ಪ್ರತಿಕೂಲವಾ ಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ದಿಲ್ಲಿ ನಿವಾಸಿಗಳಿಗೆ ಮುಂಜಾಗ್ರತ ಕ್ರಮಗ ಳನ್ನು ಕೈಗೊಳ್ಳಲು ಸಲಹೆ ನೀಡಿದ್ದಾರೆ.
ಪಟಾಕಿ ಹಚ್ತೀವಿ ಎಂದ ಶೇ.18 ಮಂದಿ: ಸಮೀಕ್ಷೆ
ದೀಪಾವಳಿ ಹಿನ್ನೆಲೆಯಲ್ಲಿ ದಿಲ್ಲಿ ಭಾಗದಲ್ಲಿ ಪಟಾಕಿ ಹಚ್ಚುವವರ ಬಗ್ಗೆ ಸಮೀಕ್ಷೆಯೊಂದನ್ನು ನಡೆಸಲಾಗಿದೆ. ಶೇ.18ರಷ್ಟು ಮಂದಿ ಹಬ್ಬದ ವೇಳೆ ಪಟಾಕಿ ಹಚ್ಚುವುದಾಗಿ ಹೇಳಿದ್ದಾರೆ. ಶೇ.9 ರಷ್ಟು ಮಂದಿ ಹೇಗಾದರೂ ಪಟಾಕಿ ಹಚ್ಚಿಯೇ ಹಚ್ಚುವುದಾಗಿ ಹೇಳಿದ್ದಾರೆ. ಇನ್ನು ಶೇ.8ರಷ್ಟು ಮಂದಿ ಉತ್ತರ ನೀಡಿಲ್ಲ. ಶೇ.55 ರಷ್ಟು ಮಂದಿ ಪಟಾಕಿ ಹಚ್ಚುವುದಿಲ್ಲ ಎಂದಿದ್ದಾರೆ. ಒಟ್ಟು 10,526 ಮಂದಿಯನ್ನೊಳಗೊಂಡಂತೆ ಈ ಸಮೀಕ್ಷೆ ನಡೆಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Threat: ಇಮೇಲ್ ಮೂಲಕ ಇಸ್ಕಾನ್ ದೇವಸ್ಥಾನಕ್ಕೆ ಬಾಂಬ್ ಬೆದರಿಕೆ… ಪೊಲೀಸ್, ಶ್ವಾನ ದಳ ದೌಡು
Tata-Airbus: ಗುಜರಾತ್ ಗೆ ಆಗಮಿಸಿದ ಸ್ಪೇನ್ ಪ್ರಧಾನಿ: ಟಾಟಾ-ಏರ್ಬಸ್ ಸ್ಥಾವರ ಉದ್ಘಾಟನೆ
German company; ಖಾಸಗಿತನ ರಕ್ಷಣೆಗಾಗಿ ಡಿಜಿಟಲ್ ಕಾಂಡೋಮ್
Dravidian model ಹೆಸರಲ್ಲಿ ಲೂಟಿ; ಮೊದಲ ಬೃಹತ್ ರ್ಯಾಲಿಯಲ್ಲಿ ಅಬ್ಬರಿಸಿದ ವಿಜಯ್
Maharashtra election: ವರ್ಲಿ ಕ್ಷೇತ್ರದಲ್ಲಿ ಆದಿತ್ಯ vs ಮಿಲಿಂದ್
MUST WATCH
ಹೊಸ ಸೇರ್ಪಡೆ
Goodudeepa Competition: ಪರ್ಯಾಯ ಶ್ರೀಕೃಷ್ಣ ಮಠ… ಗೂಡುದೀಪ ಸ್ಪರ್ಧೆ ಉದ್ಘಾಟನೆ
ಕೆಮ್ಮಣ್ಣು ಗಣಪತಿ ಸಹಕಾರಿ ವ್ಯವಸಾಯಕ ಸಂಘ: ಅವಿಭಜಿತ ಜಿಲ್ಲೆಯ ಸಹಕಾರಿ ಸಂಘ ದೇಶಕ್ಕೆ ಮಾದರಿ
Nayanthara: ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ್ರಾ ಲೇಡಿ ಸೂಪರ್ ಸ್ಟಾರ್?
Threat: ಇಮೇಲ್ ಮೂಲಕ ಇಸ್ಕಾನ್ ದೇವಸ್ಥಾನಕ್ಕೆ ಬಾಂಬ್ ಬೆದರಿಕೆ… ಪೊಲೀಸ್, ಶ್ವಾನ ದಳ ದೌಡು
Mudhol: ನೂರು ಮೀಟರ್ ರಸ್ತೆ ದುರಸ್ಥಿಗೆ ಅಧಿಕಾರಿಗಳ ಕುಂಟು ನೆಪ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.