BBK11: 11 ವರ್ಷದ ಬಿಗ್ಬಾಸ್ ಜರ್ನಿಯಲ್ಲಿ ಕಿಚ್ಚ ಗೈರಾಗಿದ್ದು ಎಷ್ಟು ಬಾರಿ, ಯಾಕೆ?
Team Udayavani, Oct 28, 2024, 4:32 PM IST
ಬೆಂಗಳೂರು: ಬಿಗ್ ಬಾಸ್ ಕನ್ನಡ-11 (Bigg Boss Kannada-11) ದ ವೀಕೆಂಡ್ ಸಂಚಿಕೆಯಲ್ಲಿ ಕಳೆದ ವಾರ ಕಿಚ್ಚ ಸುದೀಪ್ ಕಾಣಿಸಿಕೊಂಡಿಲ್ಲ. ಅವರ ತಾಯಿಯ ನಿಧನದಿಂದ ದುಃಖದಲ್ಲಿರುವ ಕಿಚ್ಚ ಸುದೀಪ್ (Kiccha Sudeep) ಬಿಗ್ ಬಾಸ್ ಶೂಟಿಂಗ್ನಲ್ಲಿ ಭಾಗಿಯಾಗಿಲ್ಲ.
ಕಿಚ್ಚನ ಅನುಪಸ್ಥಿತಿಯಲ್ಲಿ ಕಳೆದ ವಾರ ಯೋಗರಾಜ್ ಹಾಗೂ ಸೃಜನ್ ಲೋಕೇಶ್ ಬಿಗ್ ಬಾಸ್ ಶೋ ನಡೆಸಿಕೊಟ್ಟಿದ್ದರು.
ಬಿಗ್ ಬಾಸ್ ಸೀಸನ್ -11 ನನ್ನ ಕೊನೆಯ ಸೀಸನ್ ಎಂದು ಕಿಚ್ಚ ಸುದೀಪ್ ಅವರು ಘೋಷಿಸಿದ್ದಾರೆ. ಕಳೆದ 10 ವರ್ಷಗಳಿಂದ ಯಶಸ್ವಿಯಾಗಿ ಶೋ ನಡೆಸಿಕೊಟ್ಟಿರುವ ಸುದೀಪ್ ಎಷ್ಟೇ ಕೆಲಸದ ಸವಾಲುಗಳು ಬಂದರೂ ಅನ್ ಟೈಮ್ನಲ್ಲಿ ಬಿಗ್ ಬಾಸ್ ವೀಕೆಂಡ್ ನಡೆಸಿಕೊಟ್ಟಿದ್ದಾರೆ.
ಇದನ್ನೂ ಓದಿ: BBK11: ಯಾರದೋ ಮನೆಯಲ್ಲಿ ಪಾತ್ರೆ ತಿಕ್ಕುತ್ತಿದ್ದೆ.. ದೊಡ್ಮನೆಯಲ್ಲಿ ಕಣ್ಣೀರಿಟ್ಟ ಚೈತ್ರಾ
ತಾಯಿ ಐಸಿಯೂನಲ್ಲಿದ್ದರೂ, ಅವರ ನಿಧನದ ಸುದ್ದಿ ತಮಗೆ ಬಂದು ತಲುಪಿದರೂ ಕಿಚ್ಚ ಸುದೀಪ್ ಅವರು ಅರ್ಧದಲ್ಲಿ ಕಾರ್ಯಕ್ರಮವನ್ನು ನಿಲ್ಲಿಸದೆ ಸಂಪೂರ್ಣ ಶೂಟ್ ಮುಗಿಸಿ ಆಸ್ಪತ್ರೆಗೆ ಹೋಗಿದ್ದರು.
ಹಾಗಾಗಿ ಅವರು ಕಳೆದ ವಾರ ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸಿಕೊಟ್ಟಿಲ್ಲ. ಇದು ಬಿಟ್ಟರೆ ಸುದೀಪ್ ಅವರು ಹಿಂದೆ ಯಾವೆಲ್ಲ ಸಂದರ್ಭದಲ್ಲಿ ಬಿಗ್ ಬಾಸ್ ವೀಕೆಂಡ್ ಮಿಸ್ ಮಾಡಿಕೊಂಡಿದ್ದರು ಮತ್ತು ಅದಕ್ಕೆ ಕಾರಣಗಳೇನು ಎನ್ನುವುದರ ಬಗೆಗಿನ ಒಂದು ವರದಿ ಇಲ್ಲಿದೆ.
ಸೀಸನ್ -10ರ ಸಂದರ್ಭದಲ್ಲಿ ಕಿಚ್ಚ ಸುದೀಪ್ ತುಂಬಾ ಬ್ಯುಸಿ ಶೆಡ್ಯೂಲ್ನಲ್ಲಿದ್ದರು. ʼಮ್ಯಾಕ್ಸ್ʼ ಸಿನಿಮಾ ಶೂಟಿಂಗ್ ಗಾಗಿ ಅವರು ಚೆನ್ನೈಗೆ ಹೋಗಿ ಬರಬೇಕಿತ್ತು. ಇಷ್ಟೆಲ್ಲ ಆದರೂ ಸುದೀಪ್ ಬಿಗ್ಬಾಸ್ ವೀಕೆಂಡ್ ನಡೆಸಿಕೊಡುವುದನ್ನು ಮಾತ್ರ ಬಿಟ್ಟಿರಲಿಲ್ಲ. ಚೆನ್ನೈ- ಬೆಂಗಳೂರು ವಿಮಾನವೇರಿ ಬಿಗ್ ಬಾಸ್ ಸೆಟ್ಗೆ ಬಂದು ಅಲ್ಲಿ ಶೋ ನಡೆಸಿ ಮತ್ತೆ ಶೂಟಿಂಗ್ ಚೆನ್ನೈ ಹೋಗುತ್ತಿದ್ದರು.
ವೀಕೆಂಡ್ ಪಂಚಾಯ್ತಿ ತಪ್ಪಿಸಿಕೊಂಡದ್ದು ಯಾವಾಗ?: ಕಳೆದ 10 ಸೀಸನ್ನಲ್ಲಿ ಬಿಗ್ ಬಾಸ್ ವೀಕೆಂಡ್ ಪಂಚಾಯ್ತಿಯನ್ನು ಕಿಚ್ಚ ತಪ್ಪಿಸಿಕೊಂಡಿರುವುದು ಒಂದೆರೆಡು ಬಾರಿ ಮಾತ್ರ. ಎರಡು ವರ್ಷಗಳ ಹಿಂದೆ ಸುದೀಪ್ ಅವರಿಗೆ ಏಕಾಏಕಿ ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ವೈದ್ಯರು ವಿಶ್ರಾಂತಿಯ ಅಗತ್ಯವಿದೆ ಎಂದಾಗ ಆ ಸಮಯದಲ್ಲಿ ಸುದೀಪ್ ಬಿಗ್ ಬಾಸ್ ಶೋ ನಡೆಸಿಕೊಳ್ಳಲು ಆಗಿರಲಿಲ್ಲ.
ಇನ್ನು ಮುಖ್ಯವಾಗಿ ಸೀಸನ್ -6 ಸಮಯದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ನಿಧನರಾಗಿದ್ದರು. ಈ ಸಮಯದಲ್ಲಿ ಕಿಚ್ಚ ಬಿಗ್ ಬಾಸ್ ಸೆಟ್ ನಲ್ಲಿದ್ದರು. ಆದರೆ ಈ ಸುದ್ದಿಯನ್ನು ಕೇಳಿದ ಅವರು ಆಘಾತಕ್ಕೆ ಒಳಗಾಗಿ ಕ್ಯಾಮರಾ ಮುಂದೆ ಬಂದಿರಲಿಲ್ಲ. ಅಂದು ಅವರು ವೀಕೆಂಡ್ ನಡೆಸಿಕೊಟ್ಟಿರಲಿಲ್ಲ.
ಈ ಮೂರು ಸನ್ನಿವೇಶಗಳನ್ನು ಹೊರತುಪಡಿಸಿದರೆ ಕಿಚ್ಚ ಬಿಗ್ ಬಾಸ್ ವೀಕೆಂಡ್ ಕಾರ್ಯಕ್ರಮವನ್ನು ಎಂದೂ ಮಿಸ್ ಮಾಡಿಕೊಂಡಿಲ್ಲ ಎಂದು ʼಫಿಲ್ಮಿ ಬೀಟ್ ಕನ್ನಡʼ ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಯಾರದೋ ಮನೆಯಲ್ಲಿ ಪಾತ್ರೆ ತಿಕ್ಕುತ್ತಿದ್ದೆ.. ದೊಡ್ಮನೆಯಲ್ಲಿ ಕಣ್ಣೀರಿಟ್ಟ ಚೈತ್ರಾ
BBK11: ನಾಲ್ಕನೇ ವಾರದಲ್ಲಿ ಬಿಗ್ ಬಾಸ್ ಮನೆಯಿಂದ ಆಚೆ ಬರುವುದು ಯಾರು?
BBK11: ಶಾಕಿಂಗ್.! ಫಿನಾಲೆವರೆಗೂ ಬರ್ತಾರೆ ಅನ್ಕೊಂಡಿದ್ದ ಆ ಸ್ಪರ್ಧಿ ಇವತ್ತೇ ಮನೆಯಿಂದ ಔಟ್?
BBK11: ಎಲ್ಲರೂ ಊಹಿಸಿದಂತೆ ಈ ವಾರ ಬಿಗ್ ಬಾಸ್ ಮನೆಯಿಂದ ಆಚೆ ಬಂದೇ ಬಿಟ್ರು ಆ ಸ್ಪರ್ಧಿ..
BBK11: ಅಣ್ಣ ತಂಗಿಗೆ ಸಂಬಂಧ ಕಟ್ಟಿ ಮಾತನಾಡ್ತಾರೆ.. ಮಂಜು ವಿರುದ್ಧ ಭವ್ಯ ಗಂಭೀರ ಆರೋಪ
MUST WATCH
ಹೊಸ ಸೇರ್ಪಡೆ
MUDA case;ದೂರಿಗೆ ಪೂರಕವಾಗಿ ಇ.ಡಿ.ಗೆ ‘ವಿಡಿಯೋ ಸಾಕ್ಷ್ಯ’ ನೀಡಿದ ಸ್ನೇಹಮಯಿ ಕೃಷ್ಣ
Kundapura: ಪ್ರತ್ಯೇಕ ಅಪಘಾತದಲ್ಲಿ ಮೂವರಿಗೆ ಗಾಯ
Kasaragod: ಎಂಡೋಸಲ್ಫಾನ್ ಸಂತ್ರಸ್ತೆ ನೇಣು ಬಿಗಿದು ಆತ್ಮಹತ್ಯೆ
Sagara: ಶರಾವತಿ ಮುಳುಗಡೆ ಸಂತ್ರಸ್ತರಿಗೆ ಸರ್ಕಾರದಿಂದ ಶೀಘ್ರವೇ ಪರಿಹಾರ: ಶಾಸಕ ಬೇಳೂರು
Panambur: ಮಾದಕ ವಸ್ತು ಸಾಗಾಟ-ಮಾರಾಟ ಪ್ರಕರಣ; ವಿದೇಶಿ ಪ್ರಜೆ ಸೇರಿ 6 ಆರೋಪಿಗಳ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.