Kundapura: ಪ್ರತ್ಯೇಕ ಅಪಘಾತದಲ್ಲಿ ಮೂವರಿಗೆ ಗಾಯ
Team Udayavani, Oct 28, 2024, 9:00 PM IST
ಅಪಘಾತ
ಗಂಗೊಳ್ಳಿ: ಮರವಂತೆ ಗ್ರಾಮದ ಕೃಷ್ಣ ಪೈಪ್ ಹಾರ್ಡ್ವೇರ್ ಎದುರು ಹೆದ್ದಾರಿಯಲ್ಲಿ ಲಾರಿ ಚಾಲಕನಿಗೆ ಬೈಕ್ ಗುದ್ದಿದೆ.
ಬೈಕ್ ಬಿದ್ದ ಪರಿಣಾಮ ಮರವಂತೆಯ ಕಿರಣ್ (28) ಗಾಯಗೊಂಡಿದ್ದಾರೆ.
ಲಾರಿ ಚಾಲಕ ತನ್ನ ಲಾರಿಯನ್ನು ಬ್ರೇಕ್ಲೈಟ್ ಹಾಗೂ ಯಾವುದೇ ಸೂಚನೆ ಫಲಕಗಳನ್ನು ಹಾಕದೇ ಹೆದ್ದಾರಿಯಲ್ಲಿ ನಿಲ್ಲಿಸಿ ಲಾರಿಯ ಟಯರನ್ನು ಪರೀಶೀಲಿಸುತ್ತಿದ್ದ ಕಾರಣ ಅಪಘಾತವಾಗಿದೆ. ಪ್ರಕರಣ ದಾಖಲಾಗಿದೆ.
ಸ್ಕೂಟಿಗೆ ಬೈಕ್ ಢಿಕ್ಕಿ ; ಇಬ್ಬರಿಗೆ ಗಾಯ
ಕುಂದಾಪುರ: ನೇರಳಕಟ್ಟೆ – ತಲ್ಲೂರು ರಸ್ತೆಯ ತಲ್ಲೂರು ಗ್ರಾಮದ ಸಹದೇವಿ ಹಾಲ್ ಬಳಿ ಸ್ಕೂಟಿಗೆ ಬೈಕ್ ಢಿಕ್ಕಿಯಾಗಿ, ಸ್ಕೂಟಿ ಸವಾರ ರಾಮಚಂದ್ರ (67) ಗಂಭೀರ ಗಾಯಗೊಂಡಿದ್ದು, ಬೈಕ್ ಸವಾರ ಶಶಾಂಕ್ ಸಹ ಗಾಯಗೊಂಡ ಘಟನೆ ಅ.27 ರ ಬೆಳಗ್ಗೆ 7.05ರ ಸುಮಾರಿಗೆ ಸಂಭವಿಸಿದೆ.
ತಲೆ, ಮುಖ, ಕಾಲಿಗೆ ತೀವ್ರತರದ ಗಾಯಗೊಂಡ ರಾಮಚಂದ್ರ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ, ಬಳಿಕ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಶಾಂಕ್ರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.