![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Oct 30, 2024, 6:30 AM IST
ಶಿವಮೊಗ್ಗ: ಭಾರೀ ಆತಂಕ ಸೃಷ್ಟಿಸಿದ್ದ “ಚೀನಾ ಬೆಳ್ಳುಳ್ಳಿ’ಯ ಪ್ರಯೋಗಾಲಯ (ಲ್ಯಾಬ್) ವರದಿ ಬಹಿರಂಗಗೊಂಡಿದ್ದು, ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ. ಬೆಳ್ಳುಳ್ಳಿಯಲ್ಲಿ ರಾಸಾಯನಿಕ ಅಂಶಗಳು ನಿಗದಿತ ಮಾನದಂಡಕ್ಕಿಂತ ಒಳಗೆ ಇವೆ ಎಂದು ವರದಿ ಹೇಳಿದೆ.
ಚೀನದಿಂದ ದೊಡ್ಡ ಗಾತ್ರದ ಬೆಳ್ಳುಳ್ಳಿ ಬರುತ್ತಿದ್ದು, ಅದಕ್ಕೆ ಅತಿ ಹೆಚ್ಚು ರಾಸಾಯನಿಕ ಬಳಕೆ ಮಾಡಲಾಗುತ್ತದೆ. ದೀರ್ಘ ಕಾಲದವರೆಗೆ ಕೆಡುವುದಿಲ್ಲ. ಇದನ್ನು ತಿಂದರೆ ಕಿಡ್ನಿ, ಲಿವರ್ಗೆ ತೊಂದರೆಯಾಗುತ್ತದೆ ಎಂಬ ಆರೋಪಗಳು ಇದ್ದವು. ಆರೋಪದ ಬೆನ್ನಲ್ಲೇ ಕೇಂದ್ರ ಸರಕಾರ ಬೆಳ್ಳುಳ್ಳಿ ನಿಷೇಧ ಮಾಡಿತ್ತು. ಶಿವಮೊಗ್ಗದ ಭಾರತ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು, ಶಿವಮೊಗ್ಗದ 8 ಕಡೆ ದಾಳಿ ನಡೆಸಿದ್ದರು. ಅನುಮಾನ ಬಂದ ಮೂರು ಕಡೆ ಸ್ಯಾಂಪಲ್ ಪಡೆದು ಬೆಂಗಳೂರಿನ ಎಫ್ಎಸ್ಎಸ್ಐ ಲ್ಯಾಬ್ಗೆ ಕಳುಹಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಆಹಾರ ಸುರಕ್ಷೆ ಮತ್ತು ಗುಣಮಟ್ಟದ ಪ್ರಾಧಿಕಾರದ ಅಧಿಕಾರಿ ಡಾ|ಹರೀಶ್, ಲ್ಯಾಬ್ ವರದಿಯಲ್ಲಿ ರಾಸಾಯನಿಕ ಅಂಶಗಳು ನಿಗದಿತ ಮಾನದಂಡಕ್ಕಿಂತ ಒಳಗಿದೆ ಎಂದು ಹೇಳಿದೆ. ಜಪ್ತಿ ಮಾಡಿದ ಬೆಳ್ಳುಳ್ಳಿಯನ್ನು ಮಾರಾಟ ಮಾಡಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
Water Resource: ನನ್ನ ಜೀವಿತಾವಧಿಯಲ್ಲೇ ನೀರಿನ ಸಮಸ್ಯೆ ಬಗೆಹರಿಯಬೇಕು: ಎಚ್.ಡಿ.ದೇವೇಗೌಡ
Congress Siddu Team: ಸಿದ್ದರಾಮಯ್ಯ ಆಪ್ತರಿಂದ ಈಗ ʼಮಾಸ್ ಲೀಡರ್ʼ ಅಸ್ತ್ರ
You seem to have an Ad Blocker on.
To continue reading, please turn it off or whitelist Udayavani.