Udupi: ಜಿಲ್ಲೆಯ ಬ್ಲ್ಯಾಕ್‌ ಸ್ಪಾಟ್‌ 30ರಿಂದ 20ಕ್ಕೆ ಇಳಿಕೆ

ಕೆಲವು ಕಡೆ ರಸ್ತೆ ಸಂಚಾರ ಬದಲಾವಣೆಗೂ ಸೂಚನೆ

Team Udayavani, Nov 5, 2024, 3:41 PM IST

5
ಉಡುಪಿ: ಜಿಲ್ಲೆಯ ವಿವಿಧೆಡೆ ನಿರಂತರ ಅಪಘಾತವಾಗುತ್ತಿರುವ (ಬ್ಲ್ಯಾಕ್‌ ಸ್ಪಾಟ್‌) ಪ್ರದೇಶಗಳನ್ನು ಜಿಲ್ಲಾಡಳಿತ ಗುರುತಿಸಿದ್ದು, ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಹೆದ್ದಾರಿ ಇಲಾಖೆಗೆ ನಿರ್ದೇಶನ ನೀಡಲಾಗಿದೆ. ಈ ಹಿಂದೆ ಸುಮಾರು 30 ಬ್ಲ್ಯಾಕ್‌ ಸ್ಪಾಟ್‌ಗಳ ಸಂಖ್ಯೆ ಈಗ 20ಕ್ಕೆ ಇಳಿದಿದೆ. ನಿರಂತರ ಅಪಘಾತದ ಜತೆಗೆ ಸಣ್ಣಪುಟ್ಟ ಅಪಘಾತ ನಡೆಯುವ ಜಂಕ್ಷನ್‌ಗಳನ್ನೂ ಗುರುತಿಸಲಾಗಿದ್ದು, ಅಲ್ಲಿಯೂ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ.
ಪ್ರಮುಖ ಅಪಘಾತ ವಲಯಗಳು
ಪಡುಬಿದ್ರಿ ಜಂಕ್ಷನ್‌, ಉಚ್ಚಿಲ, ಬ್ರಹ್ಮಾವರದ ಮಹೇಶ್‌ ಆಸ್ಪತ್ರೆ ಜಂಕ್ಷನ್‌, ಬ್ರಹ್ಮಾವರ ಪೆಟ್ರೋಲ್‌ ಪಂಪ್‌, ಕುಮ್ರಗೋಡು ಕ್ರಾಸ್‌, ಕೋಟ ಜಂಕ್ಷನ್‌, ತೆಕ್ಕಟ್ಟೆ ಜಂಕ್ಷನ್‌, ಕುಂಭಾಶಿ ಸ್ವಾಗತ ಗೋಪುರ, ಮೂಳೂರು, ಕಾಪು ವಿದ್ಯಾನಿಕೇತನ ಜಂಕ್ಷನ್‌, ಪಾಂಗಳ, ಅಂಬಲಪಾಡಿ ಜಂಕ್ಷನ್‌, ನಿಟ್ಟೂರು ಜಂಕ್ಷನ್‌, ಅಂಬಾಗಿಲು ಜಂಕ್ಷನ್‌ಗಳನ್ನು ಅಪಘಾತ ವಲಯ ಎಂದು ಗುರುತಿಸಲಾಗಿದೆ. ಈ ಜಂಕ್ಷನ್‌ಗಳಲ್ಲಿ ಸ್ಟಡ್‌ಗಳ ಅಳವಡಿಕೆ, ಪಾದಚಾರಿ ಕ್ರಾಸಿಂಗ್‌ ಹಾಗೂ ಜೀಬ್ರಾ ಕ್ರಾಸಿಂಗ್‌, ಸೂಚನಾ ಫ‌ಲಕಗಳು, ಹೈ ಮಾಸ್ಟ್‌ ದೀಪ, ಬ್ಲಿಂಕರ್ಗಳು, ರಸ್ತೆ ಬದಿಯಲ್ಲಿ ಮೆಟಲ್‌ ಕ್ರ್ಯಾಶ್‌ ಬ್ಯಾರಿಯರ್‌, ಹೆದ್ದಾರಿ ಸಂಪರ್ಕಿಸುವ ರಸ್ತೆಗಳಿಗೆ ಹಂಪ್ಸ್‌, ಟ್ರಾಫಿಕ್‌ ಐಸ್‌ಲ್ಯಾಂಡ್‌, ಎಂಎಸ್‌ ರೈಲಿಂಗ್‌ ಸಹಿತ ಹಲವಾರು ಸೂಚನಾ ಫ‌ಲಕಗಳನ್ನು ಅಳವಡಿಸುವ ಅಗತ್ಯವಿದೆ.
ಅಪಘಾತ ವಲಯ ಗುರುತು ಹೇಗೆ?
ಯಾವುದೇ ಒಂದು ಸ್ಥಳದಲ್ಲಿ ಇಂತಿಷ್ಟೇ ಅಪಘಾತಗಳು ನಡೆಯಬೇಕೆಂದಿಲ್ಲ. ಆದರೆ ಪದೇ ಪದೇ ಸಣ್ಣಪುಟ್ಟ ಹಾಗೂ ಗಂಭೀರ ಅಪಘಾತಗಳು ನಡೆಯುತ್ತಿದ್ದರೆ ಪೊಲೀಸ್‌ ಇಲಾಖೆ, ಹೆದ್ದಾರಿ ಇಲಾಖೆ ಹಾಗೂ ಜಿಲ್ಲಾಡಳಿತದ ರಸ್ತೆ ಸುರಕ್ಷಾ ಸಮಿತಿ ಸೇರಿ ಅದನ್ನು ಬ್ಲ್ಯಾಕ್‌ ಸ್ಪಾಟ್‌ ಎಂದು ಗುರುತಿಸುತ್ತಾರೆ.

ಜಿಲ್ಲಾಡಳಿತದ ಸೂಚನೆಗಳು
– ಉಚ್ಚಿಲ ಮಸೀದಿಯ ಜಂಕ್ಷನ್‌ ತಿರುವು ಕಿರಿದಾಗಿದ್ದು, ವಿಸ್ತರಣೆ ಮಾಡಬೇಕು.
– ಪಾಂಗಾಳದಲ್ಲಿ ಮಳೆಗಾಲದಲ್ಲಿ ನೀರಿನ ಸರಾಗ ಹರಿವಿಗೆ ಒಳಚರಂಡಿ ವ್ಯವಸ್ಥೆ
– ಉಚ್ಚಿಲ ದೇವಸ್ಥಾನದ ಬಳಿ ಫ‌ುಟ್‌ಓವರ್‌ ಬ್ರಿಡ್ಜ್ ಕಲ್ಪಿಸುವುದು.
– ಬ್ರಹ್ಮಾವರದ ಪೆಟ್ರೋಲ್‌ ಪಂಪ್‌ ಬಳಿ ಇರುವ ಮಿಡಿಯನ್‌ ಓಪನಿಂಗ್‌ ಅನ್ನು ಫ್ಲೈಓವರ್‌ನ ಕೊನೆಗೆ ಸ್ಥಳಾಂತರ
– ಕೋಟದಲ್ಲಿ ಅಮೃತೇಶ್ವರೀ ದೇವಸ್ಥಾನದ ಕಡೆಯಿಂದ ಬರುವ ವಾಹನಗಳು 50 ಮೀ.ದೂರದಲ್ಲಿರುವ ಅಂಡರ್‌ ಪಾಸ್‌ನಲ್ಲಿ ಹೋಗಬೇಕು.
– ಅಮೃತೇಶ್ವರಿ ದೇವಸ್ಥಾನದ ತಿರುವಿನಲ್ಲಿರುವ ಓಪನಿಂಗ್‌ ಅನ್ನು ಮುಚ್ಚಬೇಕು.
– ಕುಂಭಾಶಿ ಸ್ವಾಗತಗೋಪುರದ ಬಳಿ ಇರುವ ಓಪನಿಂಗ್‌ ಅನ್ನು ಮುಚ್ಚಿ 100 ಮೀ.ಮುಂದೆ ಅಥವಾ ಹಿಂದೆ ತೆರವುಗೊಳಿಸಬೇಕು.
– ಸಂತೆಕಟ್ಟೆ, ಆಶೀರ್ವಾದ್‌ ಚಿತ್ರಮಂದಿರದ ಬಳಿಯ ಕಾಮಗಾರಿ ಆದಷ್ಟು ಬೇಗನೆ ಮುಗಿಸಬೇಕು.
ಮುಂಜಾಗ್ರತೆ ಕ್ರಮ
ಈಗಾಗಲೇ ರಸ್ತೆ ಸುರಕ್ಷಾ ಸಮಿತಿಯ ಸಭೆ ನಡೆಸಿ ಹೆದ್ದಾರಿ ಇಲಾಖೆಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ. ಈ ಹಿಂದೆ ಇದ್ದ ಕೆಲವು ಪ್ರದೇಶಗಳಲ್ಲಿ ಸೂಕ್ತ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಂಡ ಪರಿಣಾಮ ಅವುಗಳು ಅಪಘಾತ ಮುಕ್ತ ವಲಯಗಳಾಗಿವೆ.
-ಡಾ| ಕೆ.ವಿದ್ಯಾಕುಮಾರಿ, ಜಿಲ್ಲಾಧಿಕಾರಿ 

ಠಾಣಾ ವ್ಯಾಪ್ತಿ

ಬ್ಲ್ಯಾಕ್‌ ಸ್ಪಾಟ್‌

ಪಡುಬಿದ್ರಿ

2

ಕಾಪು

3

ಉಡುಪಿ ಸಂಚಾರ

5

ಬ್ರಹ್ಮಾವರ

3

ಕೋಟ

2

ಕುಂದಾಪುರ ಸಂಚಾರ

3

ಬೈಂದೂರು

2

 

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

1-neyge-1

Udayavani-MIC ನಮ್ಮ ಸಂತೆ:ಗಮನ ಸೆಳೆದ ನೇಯ್ಗೆ ಯಂತ್ರ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.