![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Nov 22, 2024, 6:35 AM IST
ಅರಂತೋಡು: ಹೊಟೇಲೊಂದಕ್ಕೆ ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬರು ಹೊಟೇಲ್ ಮಾಲಕರಿಂದ ಹಣ ಪಡೆದು, ಸಮೀಪದ ಮೀನು ಮಾರುಕಟ್ಟೆ ವ್ಯಾಪಾರಿಯಿಂದಲೂ ಹಣ ಪಡೆದು ಗೂಗಲ್ ಪೇ ಮಾಡಿದೆ ಎಂದು ಹೇಳಿ ವಂಚನೆ ಮಾಡಿದ್ದು, ಮತ್ತೋರ್ವ ಯುವಕ ಕಲ್ಲುಗುಂಡಿಯ ಮೆಡಿಕಲ್ ಶಾಪೊಂದಕ್ಕೆ ತೆರಳಿ ತನಗೆ ಒಂದು ಸಾವಿರ ರೂ. ನಗದು ಹಣ ಬೇಕು ಗೂಗಲ್ ಪೇ ಮಾಡುವುದಾಗಿ ಹೇಳಿದಾಗ ಮೆಡಿಕಲ್ ಶಾಪ್ನವರಿಗೆ ಹಾಗೂ ಸ್ಥಳೀಯರಿಗೆ ಅನುಮಾನಗೊಂಡಾಗ ಆತ ಪರಾರಿಯಾದ ಘಟನೆ ದ.ಕ. ಸಂಪಾಜೆ ಗ್ರಾಮದ ಕಲ್ಲುಗುಂಡಿಯಲ್ಲಿ ನ. 20ರಂದು ಸಂಭವಿಸಿದೆ.
ನ. 19ರಂದು ಬಿಳಿ ಬಣ್ಣದ ಕಾರಿನಲ್ಲಿ ಬಂದ ಐವರು ವ್ಯಕ್ತಿಗಳಲ್ಲಿ ಒಬ್ಟಾತ ಕಲ್ಲುಗುಂಡಿಯ ಕರಾವಳಿ ಹೊಟೇಲಿಗೆ ಬಂದು ತನಗೆ ಮೂರು ಸಾವಿರ ರೂ. ನಗದು ಹಣ ಬೇಕು. ನಾನು ಗೂಗಲ್ ಪೇ ಮಾಡುವುದಾಗಿ ಹೇಳಿದ್ದರೆನ್ನಲಾಗಿದೆ.
ಆಗ ಹೊಟೇಲ್ ಮಾಲಕ ರಫೀಕ್ ಅವರು ತನ್ನ ಬಳಿ ಇಲ್ಲ ಎಂದಿದ್ದಾರೆ. ಈ ಸಂದರ್ಭ ಹೊಟೇಲಿನಲ್ಲಿದ್ದ ಕನಕಮಜಲಿನ ಸುರೇಶ್ ಮೂರು ಸಾವಿರ ನಗದು ಹಣ ನೀಡಿದರೆನ್ನಲಾಗಿದೆ. ಆ ವ್ಯಕ್ತಿ ಹಣ ಪಡೆದು ಗೂಗಲ್ ಪೇ ಮಾಡಿದೆ ಎಂದು ತನ್ನ ಮೊಬೈಲ್ ಸುರೇಶ್ ಅವರಿಗೆ ತೋರಿಸಿದರು. ಆಗ ಮೊಬೈಲಲ್ಲಿ ರೈಟ್ ಮಾರ್ಕ್ ಬಂದದ್ದು ಗಮನಿಸಿ, ಸುರೇಶ್ ಅವರು ಅಲ್ಲಿಂದ ತೆರಳಿದರೆನ್ನಲಾಗಿದೆ. ಮೀನು ವ್ಯಾಪಾರಿ ಅರುಣ್ ಕಾಯರ್ತೋಡಿ ಅವರಿಗೂ ಗೂಗಲ್ ಪೇ ಮಾಡಿರುವುದಾಗಿ ಹೇಳಿ 3 ಸಾವಿರ ರೂ. ವಂಚಿಸಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.