ಕೊತ್ತಂಬರಿ ಸೌಂದರ್ಯ ಲಹರಿ, ಜಾಣಮರಿ ಕೊತ್ತಂಬರಿ ಅರಿ! 


Team Udayavani, Jan 4, 2017, 3:45 AM IST

kottambari.jpg

ಸೌಂದರ್ಯ ಹಾಗೂ ಆರೋಗ್ಯ-ಒಂದಕ್ಕೊಂದು ಪೂರಕ. ಅಂತೆಯೇ ಆರೋಗ್ಯ ವರ್ಧಕವಾಗಿರುವ ಕೊತ್ತಂಬರಿಯು
ಸೌಂದರ್ಯವರ್ಧಕವೂ ಹೌದು. ಕೊತ್ತಂಬರಿಯನ್ನು ಮನೆಯಲ್ಲಿ ಬಳಸಿ ಸುಲಭದಲ್ಲಿಯೇ ತಯಾರಿಸಬಹುದಾದ ಸೌಂದರ್ಯ ಪ್ರಸಾದನಗಳ ಕುರಿತಾಗಿ ಅರಿಯೋಣ. 

1. ಫೇಸ್‌ ಮಾಸ್ಕ್
ತಾಜಾ ಕೊತ್ತಂಬರಿ ಸೊಪ್ಪನ್ನು ಐದು ಚಮಚ ತೆಗೆದುಕೊಂಡು ಅದಕ್ಕೆ 2 ಚಮಚ ದಪ್ಪ ಮೊಸರು, 2 ಚಮಚ ಕುಮಾರೀಗಿಡದ  ಎಲೆಯ ತಿರುಳು ಬೆರೆಸಿ ಚೆನ್ನಾಗಿ ಅರೆಯಬೇಕು. ತದನಂತರ ಮುಖಕ್ಕೆ ಲೇಪಿಸುವ ಮೊದಲು ಮೂರು ಚಮಚ ತೆಂಗಿನಕಾಯಿಯ ಹಾಲು ಬೆರೆಸಬೇಕು. ಇದನ್ನು ಮುಖಕ್ಕೆ ಲೇಪಿಸಿ 20 ನಿಮಿಷದ ಬಳಿಕ ಮುಖ ತೊಳೆದರೆ ಮೊಗದ ಕಾಂತಿ ವರ್ಧಿಸುತ್ತದೆ. ಹಾಗೂ ಚರ್ಮದ ತಾಜಾತನ ಹಾಗೂ ಮೃದುತ್ವ ಹೆಚ್ಚುತ್ತದೆ. ಚಳಿಗಾಲದಲ್ಲಿ ಬಹಳ ಉಪಯುಕ್ತ. 

2. ಜಿಡ್ಡು ನಿವಾರಕ ಕೊತ್ತಂಬರಿ ಮಾಸ್ಕ್
ಕೊತ್ತಂಬರಿ ಸೊಪ್ಪು 5 ಚಮಚ, ಅಕ್ಕಿಹಿಟ್ಟು 3 ಚಮಚ, ಮೊಸರು 2 ಚಮಚ, ಶುದ್ಧ ಜೇನು 2 ಚಮಚ – ಇವೆಲ್ಲವುಗಳನ್ನು
ಬೆರೆಸಿ ಬ್ಲೆಂಡರ್‌ ಅಥವಾ ಮಿಕ್ಸರ್‌ನಲ್ಲಿ ಸ್ವಲ್ಪ ಗುಲಾಬಿ ಜಲ ಬೆರೆಸಿ ತಿರುವಬೇಕು. ಇದನ್ನು ಲೇಪದಂತೆ ಇಡೀ ಮುಖಕ್ಕೆ ಲೇಪಿಸಿ ಹದಿನೈದು ನಿಮಿಷಗಳ ಬಳಿಕ ತೊಳೆಯಬೇಕು. ಇದರಿಂದ ಅಧಿಕ ತೈಲಯುಕ್ತ ತ್ವಚೆಯುಳ್ಳವರಲ್ಲಿ ತೈಲಾಂಶ (ಜಿಡ್ಡು) ಕೊಳೆ-ಧೂಳು ನಿವಾರಣೆಯಾಗಿ ಮೊಗ ಶುಭ್ರವಾಗುತ್ತದೆ. 

3. ಕೊತ್ತಂಬರಿಯ ಫೇಸ್‌ಲಿಫ್ಟ್
2 ಮುಷ್ಠಿಯಷ್ಟು ಕೊತ್ತಂಬರಿಯ ಎಲೆಗಳು, 2 ಮೊಟ್ಟೆಯ ಬಿಳಿಭಾಗ, 1/2 ಕಪ್‌ ಬೇಯಿಸದ (ಹಸಿ) ಓಟ್ಸ್‌ ಹಾಗೂ 2 ಚಮಚ ಜೇನುತುಪ್ಪ , 3 ಚಮಚ ತಾಜಾ ಎಳೆ ಸೌತೆಕಾಯಿಯ ರಸ- ಇವೆಲ್ಲವನ್ನೂ ಮಿಕ್ಸರ್‌ ಅಥವಾ ಬ್ಲೆಂಡರ್‌ನಲ್ಲಿ ತಿರುವಿ ಪೇಸ್ಟ್‌ ತಯಾರಿಸಬೇಕು. ಇದನ್ನು ಇಡೀ ಮುಖಕ್ಕೆ ಲೇಪಿಸಿ ತುದಿಬೆರಳುಗಳಿಂದ ಮಾಲೀಶು ಮಾಡಬೇಕು. 20 ನಿಮಿಷಗಳ ಬಳಿಕ ಬೆಚ್ಚಗಿನ ನೀರಲ್ಲಿ ತೊಳೆಯಬೇಕು.

ಇದನ್ನು ನಿತ್ಯ ಅಥವಾ ಎರಡು ದಿನಗಳಿಗೊಮ್ಮೆ ಲೇಪಿಸಿದರೆ ಮೊಗದ ನೆರಿಗೆ ಕಲೆಗಳು ನಿವಾರಣೆಯಾಗಿ ಮುಖ ಮೃದು ಹಾಗೂ ಕಾಂತಿಯುತವಾಗುತ್ತದೆ.

4. ಕೊತ್ತಂಬರಿಯ ಸಾಲ್ಟ್
2 ಚಮಚ ಕೊತ್ತಂಬರಿ ಬೀಜಗಳನ್ನು ಒಂದು ಗಂಟೆ ನೀರಿನಲ್ಲಿ ಅದ್ದಿ ಇಡಬೇಕು. ಬಳಿಕ ನುಣುಪಾಗಿ ಅರೆಯಬೇಕು. ಇದಕ್ಕೆ ಸ್ವಲ್ಪ ಅರಸಿನ ಹುಡಿ, ಸ್ವಲ್ಪ ಜೇನು ಬೆರೆಸಿ ಕಪ್ಪು ಮಚ್ಚೆ ಹಾಗೂ ಕಲೆ ಇರುವ ಭಾಗದಲ್ಲಿ ದಪ್ಪಗೆ ಪೇಸ್ಟ್‌ನಂತೆ ಲೇಪಿಸಬೇಕು. ರಾತ್ರಿ ಹಚ್ಚಿ ಬೆಳಿಗ್ಗೆ ತೆಗೆಯಬೇಕು. ಹೀಗೆ ನಿತ್ಯವೂ ಲೇಪಿಸುವುದರಿಂದ ಕಪ್ಪು ಮಚ್ಚೆ ಕಪ್ಪು ಕಲೆ ಇತ್ಯಾದಿಗಳು ತಿಳಿಯಾಗಿ ನಿವಾರಣೆಯಾಗುತ್ತವೆ.

5. ಕೊತ್ತಂಬರಿಯ ಸ್ಪಾಟ್‌ ಟ್ರೀಟ್‌ಮೆಂಟ್‌
ಬ್ಲ್ಯಾಕ್‌ಹೆಡ್ಸ್‌ ಹಾಗೂ ವೈಟ್‌ಹೆಡ್ಸ್‌ ನಿವಾರಣೆಗೆ ಈ ವಿಧಾನ ಪರಿಣಾಮಕಾರಿ. ತಾಜಾ ಕೊತ್ತಂಬರಿ ಎಲೆ 2 ಚಮಚ, ಪುದೀನಾ ಎಲೆ 2 ಚಮಚ ಚೆನ್ನಾಗಿ ಅರೆದು, ಈ ಮಿಶ್ರಣಕ್ಕೆ 2 ಚಮಚ ನಿಂಬೆರಸ ಬೆರೆಸಬೇಕು. ಇದನ್ನು ಬ್ಲ್ಯಾಕ್‌ ಹೆಡ್ಸ್‌ ಹಾಗೂ ವೈಟ್‌ಹೆಡ್ಸ್‌ ಇರುವ ಭಾಗದಲ್ಲಿ ಲೇಪಿಸಿ ಒಂದು ಗಂಟೆಯ ಬಳಿಕ ತೊಳೆಯಬೇಕು. ನಿತ್ಯ ಇದನ್ನು ಲೇಪಿಸಿದರೆ ಶೀಘ್ರ ಪರಿಣಾಮಕಾರಿ.

ಟಾಪ್ ನ್ಯೂಸ್

7-mng

Mumtaz Ali; ಮೊಯ್ದೀನ್ ಬಾವ ಸೋದರ ನಾಪತ್ತೆ; ಸೇತುವೆಯಲ್ಲಿ ಕಾರು ಬಿಟ್ಟು ಆತ್ಮಹತ್ಯೆ ಶಂಕೆ !

Bigg Boss Kannada11: ಬಿಗ್‌ ಬಾಸ್‌ ಮನೆಯಿಂದ ಈ ವಾರ ಹೊರಗೆ ಬರುವುದು ಇವರೇ..?

Bigg Boss Kannada11: ಬಿಗ್‌ ಬಾಸ್‌ ಮನೆಯಿಂದ ಈ ವಾರ ಹೊರಗೆ ಬರುವುದು ಇವರೇ..?

6-ucchila

Udupi ಉಚ್ಚಿಲ ದಸರಾ 2024: ಉಡುಪಿ ಮತ್ತು ದ.ಕ. ಜಿಲ್ಲಾಮಟ್ಟದ ಕುಸ್ತಿ ಸ್ಪರ್ಧೆ ಉದ್ಘಾಟನೆ

Hindalga Jail: Inmate assaulted by four undertrials

Hindalga Jail: ಕೈದಿ ಮೇಲೆ ನಾಲ್ವರು ವಿಚಾರಣಾಧೀನ ಕೈದಿಗಳಿಂದ ಹಲ್ಲೆ

Mangaluru: ಮುಮ್ತಾಜ್‌ ಅಲಿ ನಾಪತ್ತೆ; ಮುಂಜಾನೆ ವೇಳೆ ಆಗಿದ್ದೇನು?

Mangaluru: ಮುಮ್ತಾಜ್‌ ಅಲಿ ನಾಪತ್ತೆ; ಮುಂಜಾನೆ ವೇಳೆ ಆಗಿದ್ದೇನು?

Dasara elephants: ದಸರಾ ಆನೆಗಳ ದಾದಾಗಿರಿ ದಿನಗಳು!

Dasara elephants: ದಸರಾ ಆನೆಗಳ ದಾದಾಗಿರಿ ದಿನಗಳು!

4-health

Childhood: ಬಾಲ್ಯಕಾಲದ ಆಘಾತಗಳು ಮತ್ತು ಆರೋಗ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

2(1)

Mangaluru: ಕಲೆಗೆ ಜೀವ ತಳೆವ ನವದುರ್ಗೆಯರು!

8-shirva

ಕನ್ನಡ ಜ್ಯೋತಿ ರಥ; ಕಾಪು ತಾಲೂಕಿಗೆ ಸ್ವಾಗತ; ಕನ್ನಡ ಅಮೃತ ಭಾಷೆಯಾಗಿ ಬೆಳಗಲಿ: ತಹಶೀಲ್ದಾರ್‌

7-mng

Mumtaz Ali; ಮೊಯ್ದೀನ್ ಬಾವ ಸೋದರ ನಾಪತ್ತೆ; ಸೇತುವೆಯಲ್ಲಿ ಕಾರು ಬಿಟ್ಟು ಆತ್ಮಹತ್ಯೆ ಶಂಕೆ !

Bigg Boss Kannada11: ಬಿಗ್‌ ಬಾಸ್‌ ಮನೆಯಿಂದ ಈ ವಾರ ಹೊರಗೆ ಬರುವುದು ಇವರೇ..?

Bigg Boss Kannada11: ಬಿಗ್‌ ಬಾಸ್‌ ಮನೆಯಿಂದ ಈ ವಾರ ಹೊರಗೆ ಬರುವುದು ಇವರೇ..?

6-ucchila

Udupi ಉಚ್ಚಿಲ ದಸರಾ 2024: ಉಡುಪಿ ಮತ್ತು ದ.ಕ. ಜಿಲ್ಲಾಮಟ್ಟದ ಕುಸ್ತಿ ಸ್ಪರ್ಧೆ ಉದ್ಘಾಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.