ಯವಿ-ಧೋನಿ ಅಬ್ಬರ : ಭಾರತಕ್ಕೆ ಸರಣಿ ವಿಕ್ರಮ


Team Udayavani, Jan 19, 2017, 4:06 PM IST

Team-India-600.jpg

ಕಟಕ್‌: ಏಕದಿನ ತಂಡಕ್ಕೆ ಭರ್ಜರಿ ಕಮ್‌-ಬ್ಯಾಕ್‌ ಮಾಡಿದ ನ್ಪೊಟಕ ಬ್ಯಾಟ್ಸ್‌ ಮನ್‌ ಯುವರಾಜ್‌ ಸಿಂಗ್‌ (150) ಅವರ ಭರ್ಜರಿ ಶತಕ ಹಾಗೂ ಮಾಜೀ ಕ್ಯಾಪ್ಟನ್‌ ಎಂ.ಎಸ್‌. ಧೋನಿ (134) ಅವರ ಹೊಡೆಬಡಿಯ ಶತಕದಾಟದ ನೆರವಿನಿಂದ 381 ರನ್ನುಗಳ ಭರ್ಜರಿ ರನ್‌ ಕಲೆಹಾಕಿ ಅಂಗ್ಲರ ಮೇಲೆ ಒತ್ತಡ ಹಾಕುವಲ್ಲಿ ಸಫ‌ಲವಾದ ಟೀಂ ಇಂಡಿಯಾ ಗುರುವಾರ ಭುವನೇಶ್ವರದ ಕಟಕ್‌ ನಲ್ಲಿರುವ ಬಾರಾಮತಿ ಮೈದಾನದಲ್ಲಿ ನಡೆದ ದ್ವೀತಿಯ ಏಕದಿನ ಪಂದ್ಯವನ್ನು 15 ರನ್‌ಗಳಿಂದ ಜಯಿಸುವ ಮೂಲಕ ಏಕದಿನ ಸರಣಿಯನ್ನು ವಶಪಡಿಸಿಕೊಂಡಿದೆ.

ಭಾರತ ನೀಡಿದ 381 ರನ್ನುಗಳ ಗುರಿಯನ್ನು ಭರ್ಜರಿಯಾಗಿ ಬೆನ್ನಟ್ಟಿದ ಆಂಗ್ಲರ ಪಡೆ ಅಂತಿಮವಾಗಿ 50 ಓವರುಗಳಲ್ಲಿ 8 ವಿಕೆಟ್ ನಷ್ಟಕ್ಕೆ 366 ರನ್ನುಗಳಷ್ಟನ್ನೇ ಕಲೆಹಾಕುವಲ್ಲಿ ಸಫ‌ಲವಾಗಿ 15 ರನ್ನುಗಳಿಂದ ಸೋಲುಂಡಿತು.

ಇಂಗ್ಲೆಂಡ್‌ ಪರ ಆರಂಭಿಕ ಆಟಗಾರ ಜಾಸನ್‌ ರಾಯ್‌ 82 ರನ್ನುಗಳನ್ನು ಬಾರಿಸಿ ಉತ್ತಮ ಆರಂಭ ಒದಗಿಸಿದರು. ಬಳಿಕ ಮಧ್ಯಮ ಕ್ರಮಾಂಕದಲ್ಲಿ ಮೋರ್ಗನ್‌ ಅವರ ವೇಗದ ಶತಕ ಆಂಗ್ಲರ ಪಡೆಯಲ್ಲಿ ಗೆಲುವಿನ ಭರವಸೆಯನ್ನು ಮೂಡಿಸಿತ್ತು ಆದರೆ ನಿರ್ಣಾಯಕ ಹಂತದಲ್ಲಿ ಮೋರ್ಗನ್‌ ರನೌಟ್‌ ಆಗುವ ಮೂಲಕ ಜಯದ ಆಸೆಯನ್ನು ಕಮರಿಸಿದರು. ಭರ್ಜರಿ ಶತಕದಾಟವಾಡಿದ ಮೋರ್ಗನ್‌ 105 ರನ್ನುಗಳನ್ನು ಬಾರಿಸಿದರು. ಇನ್ನೋರ್ವ ಆಟಗಾರ ಮೊಯಿನ್‌ ಆಲಿ 55 ರನ್ನು ಗಳಿಸುವ ಮೂಲಕ ಆಂಗ್ಲರ ಬ್ಯಾಟಿಂಗ್‌ ಪಡೆಗ ಆಕ್ಸಿಜನ್‌ ನೀಡುವ ಪ್ರಯತ್ನ ಮಾಡಿದರು.

ಯುವಿ, ಧೋನಿ ಸೂಪರ್‌ ಶತಕ: ಇಂಗ್ಲಂಡ್‌ ವಿಜಯಕ್ಕೆ 382 Run ಟಾರ್ಗೆಟ್
ಇಲ್ಲಿನ ಬಾರಾಮತಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರವಾಸೀ ಇಂಗ್ಲಂಡ್‌ ತಂಡದೆದುರಿನ ಎರಡನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಯುವರಾಜ್‌ ಸಿಂಗ್‌ ಅವರ ಅಮೋಘ 150 ರನ್‌ ಹಾಗೂ ಮಹೇಂದ್ರ ಸಿಂಗ್‌ ಧೋನಿ ಅವರ 134 ರನ್‌ ಗಳ ನೆರವಿನೊಂದಿಗೆ 381 ರನ್‌ಗಳ ಉತ್ತಮ ಮೊತ್ತವನ್ನು ಭಾರತ ಕಲೆ ಹಾಕಿದೆ. ಆ ಮೂಲಕ ಇಂಗ್ಲಂಡ್‌ಗೆ ಈ ಪಂದ್ಯಗೆಲ್ಲಲು 382 ರನ್‌ಗಳ ಗುರಿಯನ್ನು ನಿಗಿದಿಸಿದೆ. 

ಆರಂಭಿಕ ಆಘಾತ 
ಟಾಸ್‌ ಗೆದ್ದು  ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್‌ ಭಾರತಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಯಶಸ್ವಿಯಾಯಿತು. 23 ರನ್‌ಗಳ ಒಳಗೆ 3 ವಿಕೆಟ್‌ ಪಡೆದು ಹಿಗ್ಗಿತ್ತು. ಆರಂಭಿಕರಾದ ಕೆ.ಎಲ್‌.ರಾಹುಲ್‌ 5 ರನ್‌, ಧವನ್‌ 11 ರನ್‌ಗಳಿಸಿ ಪೆವಿಲಿಯನ್‌ಗೆ ವಾಪಾಸಾದರೆ ನಾಯಕ ಕೊಹ್ಲಿ 8 ರನ್‌ಗೆ ಔಟಾಗುವ ಮೂಲಕ ತೀವ್ರ ನಿರಾಶರಾದರು. ಆ ಬಳಿಕ ಬ್ಯಾಟಿಂಗ್‌ಗಿಳಿದು ಕ್ರೀಸ್‌ ಆಕ್ರಮಿಸಿಕೊಂಡ ಯುವರಾಜ್‌ ಮತ್ತು ಧೋನಿ ನೆಲ ಕಚ್ಚಿ ಆಡುವ ಮೂಲಕ ಆಂಗ್ಲರ ಬೆವರಿಳಿಸಿದರು. ಯುವರಾಜ್‌ ನೋಡನೋಡುತ್ತಿದ್ದಂತೆ ಶತಕ ಸಿಡಿಸಿದರು. 98 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದರು. ಬರೋಬ್ಬರಿ 150 ರನ್‌ ಗಳಿಸಿ ಔಟಾದರು. 

6 ವರ್ಷಗಳ ಬಳಿಕ ಶತಕ 
ಯುವರಾಜ್‌ ಸಿಂಗ್‌ ಅವರು ಏಕದಿನ ಕ್ರಿಕೆಟ್‌ನಲ್ಲಿ ಕೊನೆಯದಾಗಿ 2011 ರ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಶತಕ ಸಿಡಿಸಿದ್ದರು. ಇದು ಅವರ ಏಕದಿನ ಕ್ರಿಕೆಟ್‌ನ 14 ನೇ ಶತಕ ಮತ್ತು ಗರಿಷ್ಠ ಸ್ಕೋರ್‌ ಆಗಿದೆ. 

ಟಾಪ್ ನ್ಯೂಸ್

Kolkata: ಶನಿವಾರದಿಂದ ತುರ್ತು ಸೇವೆ ಪುನರಾರಂಭಿಸಲು ಕಿರಿಯ ವೈದ್ಯರ ನಿರ್ಧಾರ

Kolkata: ಸೆ. 21 ರಿಂದ ತುರ್ತು ಸೇವೆ ಪುನರಾರಂಭಿಸಲು ಕಿರಿಯ ವೈದ್ಯರ ನಿರ್ಧಾರ

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

1-horoscope

Horoscope: ಆರಿಸಿದ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

canada

Canada ವಲಸಿಗರಿಗೆ ನಿಯಂತ್ರಣ: ಭಾರತೀಯರಿಗೆ ಸಂಕಷ್ಟ ಸಾಧ್ಯತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

chess

Chess Olympiad: ಚೀನ, ಜಾರ್ಜಿಯ ವಿರುದ್ಧ ಭಾರತಕ್ಕೆ ಜಯ

1-rrrr

15ನೇ ವಿಶ್ವ ಅಗ್ನಿಶಾಮಕ ಕ್ರೀಡಾಕೂಟ: 2 ಚಿನ್ನ ಗೆದ್ದ ಅಶ್ವಿ‌ನ್‌ ಸನಿಲ್‌ ಕುರ್ಕಾಲು

1-asdas

Commonwealth ಚಾಂಪಿಯನ್‌ಶಿಪ್‌ : ಅಲ್ಲುರಿ ಅಜಯ್‌ಗೆ ಬಂಗಾರ

1-malavika

China ಓಪನ್‌ ಬ್ಯಾಡ್ಮಿಂಟನ್‌:ಮಾಳವಿಕಾ ಕ್ವಾರ್ಟರ್‌ ಫೈನಲಿಗೆ

1-frrr

Duleep Trophy Cricket: ಸ್ಯಾಮ್ಸನ್‌ ಅರ್ಧಶತಕ; ಭಾರತ ‘ಡಿ’ 5ಕ್ಕೆ 306

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kolkata: ಶನಿವಾರದಿಂದ ತುರ್ತು ಸೇವೆ ಪುನರಾರಂಭಿಸಲು ಕಿರಿಯ ವೈದ್ಯರ ನಿರ್ಧಾರ

Kolkata: ಸೆ. 21 ರಿಂದ ತುರ್ತು ಸೇವೆ ಪುನರಾರಂಭಿಸಲು ಕಿರಿಯ ವೈದ್ಯರ ನಿರ್ಧಾರ

2-mudhola

ತಿಮ್ಮಾಪುರ ಮಾತಿಗೆ ಯತ್ನಾಳ‌ ಪರೋಕ್ಷ ಟಾಂಗ್;ನಾನು ಕಾನೂನಿಗೆ ಗೌರವ ನೀಡುವ ನಿಯತ್ತಿನ ನಾಯಿ

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.