ಶಿಶು ಆರೈಕೆ ಕೇಂದ್ರಗಳಿಗೆ ಎತ್ತಂಗಡಿ ಭೀತಿ


Team Udayavani, Jan 23, 2017, 11:44 AM IST

kids-home.jpg

ಬೆಂಗಳೂರು: ರಾಜಧಾನಿಯಲ್ಲಿ ನಾಯಿಕೊಡೆಗಳಂತೆ ತಲೆಎತ್ತುತ್ತಿರುವ ಖಾಸಗಿ ಶಿಶು ಆರೈಕೆ ಕೇಂದ್ರಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ಬಿಬಿಎಂಪಿ, ವಸತಿ ಪ್ರದೇಶಗಳಲ್ಲಿ ನೆಲೆಯೂರಿರುವ ಕೇಂದ್ರಗಳ ಎತ್ತಂಗಡಿಗೆ ಮುಂದಾಗಿ ನೋಟಿಸ್‌ ಜಾರಿ ಮಾಡಿದೆ. ಈಗಾಗಲೇ ವಸತಿ ಪ್ರದೇಶಗಳಲ್ಲಿರುವ ಶಿಶು ಹಾರೈಕೆ ಕೇಂದ್ರಗಳಿಗೆ ನೋಟಿಸ್‌ ಜಾರಿ ಮಾಡುತ್ತಿರುವ ಪಾಲಿಕೆ, ಖಾಸಗಿ ಶಿಶು ಹಾರೈಕೆ ಕೇಂದ್ರಗಳು ವಾಣಿಜ್ಯ ಉದ್ಯಮಗಳ ವ್ಯಾಪ್ತಿಗೆ ಬರುವುದರಿಂದ ಅವುಗಳ ತೆರವಿಗೆ ಏಕೆ ಕಾನೂನು ಕ್ರಮ ಕೈಗೊಳ್ಳಬಾರದು ಎಂದು ಪ್ರಶ್ನಿಸಿದೆ.

ಹೈಕೋರ್ಟ್‌ ಆದೇಶದಂತೆ ಜನವಸತಿ ಪ್ರದೇಶಗಳಲ್ಲಿರುವ ಕಾನೂನು ಬಾಹಿರ ವಾಣಿಜ್ಯ ಉದ್ಯಮಗಳ ತೆರವಿಗೆ ಬಿಬಿಎಂಪಿ ನೋಟಿಸ್‌ ಜಾರಿ ಮಾಡುತ್ತಿದ್ದು, ಮಾಸ್ಟರ್‌ಪ್ಲಾನ್‌ 2015ರ ಅನುಸಾರ ಮಾಂಟೆಸ್ಸರಿಗಳು, ಚೈಲ್ಡ್‌ ಡೇ ಕೇರ್‌ ಕೇಂದ್ರಗಳು, ಪ್ರೀ ಸ್ಕೂಲ್‌, ಕಿಡ್ಸ್‌ ಕ್ಯಾಂಪ್‌ಗ್ಳು ಸೇರಿದಂತೆ ಇತರೆ ಖಾಸಗಿ ಶಿಶು ಹಾರೈಕೆ ಕೇಂದ್ರಗಳು ವಾಣಿಜ್ಯ ಉದ್ಯಮಗಳ ವ್ಯಾಪ್ತಿಗೆ ಬರುತ್ತವೆ. ಹಾಗಾಗಿ ಈ ಕೇಂದ್ರಗಳನ್ನೂ ಜನವಸತಿ ಪ್ರದೇಶದಿಂದ ತೆರವು ಮಾಡುವಂತೆ ನೋಟಿಸ್‌ ನೀಡಲಾಗುತ್ತಿದೆ ಎನ್ನುತ್ತಾರೆ ಬಿಬಿಎಂಪಿ ಅಧಿಕಾರಿಗಳು. 

ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು ಐದು ಸಾವಿರದಷ್ಟು ಖಾಸಗಿ ಶಿಶು ಆರೈಕೆ ಕೇಂದ್ರಗಳಿದ್ದು, ಇವುಗಳಲ್ಲಿ ಸುಮಾರು 3.5 ಲಕ್ಷಕ್ಕೂ ಹೆಚ್ಚು ಮಕ್ಕಳ ದಾಖಲಾತಿ ಮಾಡಲಾಗಿದೆ. 7,000ಕ್ಕೂ ಹೆಚ್ಚು ಸಿಬ್ಬಂದಿ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಹಳಷ್ಟು ಕೇಂದ್ರಗಳು ಜನವಸತಿ ಪ್ರದೇಶಗಳಲ್ಲೇ ತಲೆ ಎತ್ತಿವೆ. ಹಾಗಾಗಿ ನಿಯಮ ಬಾಹಿರವಾದ ಎಲ್ಲ ಶಿಶು ಹಾರೈಕೆ ಕೇಂದ್ರಗಳಿಗೂ ನೋಟಿಸ್‌ ಜಾರಿ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಮಾಹಿತಿ ಪ್ರಕಾರ ಈ ಶಿಶು ಹಾರೈಕೆ ಕೇಂದ್ರಗಳು ಪ್ರತಿ ಮಗುವಿಗೆ ಮಾಸಿಕ 1,000 ರೂ.ನಿಂದ 5,000 ರೂ. ವರೆಗೂ ಶುಲ್ಕ ಪಡೆಯುತ್ತಿವೆ. ಕುಟುಂಬದ ಎಲ್ಲ ಸದಸ್ಯರೂ ಉದ್ಯೋಗದಲ್ಲಿರುವವರು, ಕೆಲ ಶ್ರೀಮಂತ ಕುಟುಂಬಗಳು, ಇನ್ನು ಕೆಲವರು ಚಿಕ್ಕ ವಯಸ್ಸಿನಲ್ಲೇ ತಮ್ಮ ಮಗುವಿಗೆ ವಿಶೇಷ ತರಬೇತಿ, ಶಿಕ್ಷಣ ಕೊಡಿಸುವ ಉದ್ದೇಶಕ್ಕಾಗಿ ಇಂತರ ಕೇಂದ್ರಗಳಿಗೆ ತಮ್ಮ ಮಕ್ಕಳನ್ನು ದಾಖಲಿಸುತ್ತಿದ್ದಾರೆ. ನಿಗದಿತ ಅವಧಿಯಲ್ಲಿ ಮಕ್ಕಳ ಆರೈಕೆ, ಆಟ-ಪಾಠದ ಜವಾಬ್ದಾರಿಯನ್ನು ಈ ಕೇಂದ್ರಗಳು ನಿರ್ವಹಿಸಿ ಪೋಷಕರಿಂದ ನಿಗದಿತ ಸಂಭಾವನೆ ಪಡೆಯುತ್ತವೆ.  

ಬಿಬಿಎಂಪಿ ಶಿಕ್ಷಣ ಇಲಾಖೆ ಅಧಿಕಾರಿ ಶಿವಣ್ಣ ಅವರು ಹೇಳುವ ಪ್ರಕಾರ, ಮಾಸ್ಟರ್‌ ಪ್ಲಾನ್‌ 2015ರ ಪ್ರಕಾರ ಮಾಂಟೆಸ್ಸರಿ, ಪ್ರೀ ಸ್ಕೂಲ್‌, ಕಿಡ್ಸ್‌ ಕ್ಯಾಂಪ್‌, ಚೈಲ್ಡ್‌ ಕೇರ್‌ ಸೆಂಟರ್‌ಗಳು ಸೇರಿದಂತೆ ಬಹುತೇಕ ಖಾಸಗಿ ಶಿಶು ಹಾರೈಕೆ ಕೇಂದ್ರಗಳು ವಾಣಿಜ್ಯ ಉದ್ಯಮಗಳ ವ್ಯಾಪ್ತಿಯಲ್ಲಿ ಬರುತ್ತವೆ. ಕೆಲವು ಕೇಂದ್ರಗಳು ಪ್ರತಿ ಮಗುವಿಗೆ ವಾರ್ಷಿಕ 50 ಸಾವಿರ ರೂ. ವರೆಗೂ ಸಂಭಾವನೆ ಪಡೆಯುತ್ತಿವೆ. ಇದು ಉದ್ಯಮವಲ್ಲದೆ ಇನ್ನೇನು ಎಂದು ಅಧಿಕಾರಿಯೊಬ್ಬರು ಪ್ರಶ್ನಿಸುತ್ತಾರೆ.

ಮಾಲೀಕರ ಆಕ್ಷೇಪ: ಈಗಾಗಲೇ ನೋಟಿಸ್‌ ತಲುಪಿರುವ ಕೆಲ ಶಿಶು ಹಾರೈಕೆ ಕೇಂದ್ರಗಳ ಮಾಲೀಕರು ಬಿಬಿಎಂಪಿ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಾಣಿಜ್ಯ ಪ್ರದೇಶಗಳಲ್ಲಿ ಶಿಶು ಆರೈಕೆ ಕೇಂದ್ರಗಳನ್ನು ಆರಂಭಿಸಿದೆ ಅಲ್ಲಿ ಮಕ್ಕಳಿಗೆ ಒಳ್ಳೆಯ ವಾತಾವರಣ ಸಿಗಲು ಹೇಗೆ ಸಾಧ್ಯ? ಯಾವ ಪೋಷಕರು ತಾನೆ ಅಂತಹ ಕೇಂದ್ರಗಳಿಗೆ ಮಕ್ಕಳನ್ನು ದಾಖಲಿಸುತ್ತಾರೆ? ಹಾಗಾಗಿ ಶಿಶು ಹಾರೈಕೆ ಕೇಂದ್ರಗಳನ್ನು ವಾಣಿಜ್ಯ ಉದ್ಯಮಗಳ ವ್ಯಾಪ್ತಿಯಿಂದ ಹೊರಗಿಡಬೇಕು. ಬಿಬಿಎಂಪಿ ಕ್ರಮದ ಬಗ್ಗೆ ಶಿಕ್ಷಣ ಇಲಾಖೆ ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಾಜರಾಜೇಶ್ವರಿ ನಗರದ ಕಿಡ್ಸ್‌ ಕ್ಯಾಂಪ್‌ ಮಾಲೀಕ ರಘು ಆಗ್ರಹಿಸಿದ್ದಾರೆ.

ಏನಿದು ಮಾಸ್ಟರ್‌ಪ್ಲಾನ್‌?
2015ರ ಮಾಸ್ಟರ್‌ಪ್ಲಾನ್‌ ಪ್ರಕಾರ 40 ಅಡಿಗಿಂತ ಕಡಿಮೆ ವಿಸ್ತೀರ್ಣದ ರಸ್ತೆಗಳಲ್ಲಿನ ಕಟ್ಟಡಗಳಲ್ಲಿ ವಾಣಿಜ್ಯ ಚಟುವಟಿಕೆಗೆ ಅವಕಾಶವಿಲ್ಲ. 40 ಅಡಿ ರಸ್ತೆ ಇದ್ದಲ್ಲಿ ನಿವೇಶನದ ಶೇ.20 ರಷ್ಟು ವಾಣಿಜ್ಯ ಬಳಕೆ ಮಾಡಿಕೊಳ್ಳಬಹುದು. 100 ಅಡಿ ರಸ್ತೆ ಇದ್ದರೆ ಸಂಪೂರ್ಣ ಕಟ್ಟಡ ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡಬಹುದು. ಆದರೆ, ಬಹುತೇಕ ವಸತಿ ಪ್ರದೇಶಗಳಲ್ಲಿ ಸಣ್ಣ ರಸ್ತೆಗಳಿರುವುದರಿಂದ ಸಂಚಾರದಟ್ಟಣೆ ಉಂಟಾಗಿ ಜನಜೀವನದ ನೆಮ್ಮದಿ ಹಾಳಾಗುತ್ತಿದೆ. ಇಂತಹ ಪ್ರದೇಶಗಳಲ್ಲೇ ವಾಣಿಜ್ಯೋದ್ಯಮ ನಡೆಸಲಾಗುತ್ತಿದೆ ಎಂಬುದು ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳ ಆರೋಪ. 

ಮಾಸ್ಟರ್‌ ಪ್ಲಾನ್‌ ಪ್ರಕಾರ ಜನವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಇಲ್ಲ. ಕೆಲ ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳು ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳಿಂದ ನೆಮ್ಮದಿಗೆ ಭಂಗವಾಗಿದೆ ಎಂದು ನ್ಯಾಯಾಲಯದ ಮೊರೆ ಹೋಗಿದ್ದವು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್‌ ನೀಡಿರುವ ಆದೇಶದ ಅನುಸಾರ ಖಾಸಗಿ ಶಿಶು ಹಾರೈಕೆ ಕೇಂದ್ರಗಳೂ ಸೇರಿದಂತೆ ನಿಯಮ ಬಾಹಿರ ವಾಣಿಜ್ಯ ಉದ್ಯಮಗಳಿಗೆ ನೋಟಿಸ್‌ ಜಾರಿ ಮಾಡುತ್ತಿದ್ದೇವೆ. 
-ಮಂಜುನಾಥ್‌ ಪ್ರಸಾದ್‌, ಬಿಬಿಎಂಪಿ ಆಯುಕ್ತ

* ಲಿಂಗರಾಜು ಕೋರಾ

ಟಾಪ್ ನ್ಯೂಸ್

Brics Summit 2024:ಬ್ರಿಕ್ಸ್ ಸಮಾವೇಶಕ್ಕೆ ಮುನ್ನುಡಿ ಬರೆದ ಭಾರತ -ಚೀನಾ ಸಂಘರ್ಷ ಶಮನ

Brics Summit 2024:ಬ್ರಿಕ್ಸ್ ಸಮಾವೇಶಕ್ಕೆ ಮುನ್ನುಡಿ ಬರೆದ ಭಾರತ -ಚೀನಾ ಸಂಘರ್ಷ ಶಮನ

Sandalwood: ತಾತ್ಕಾಲಿಕ ಪಯಣದತ್ತ ಸೂಚನ್‌

Sandalwood: ತಾತ್ಕಾಲಿಕ ಪಯಣದತ್ತ ಸೂಚನ್‌

Uttara Pradesh:ಸಿಎಂ ಯೋಗಿ ಸರ್ಕಾರದ ಬುಲ್ಡೋಜರ್‌ ಕ್ರಮಕ್ಕೆ ಸುಪ್ರೀಂ ತಡೆ, ನಾಳೆ ವಿಚಾರಣೆ

Uttara Pradesh:ಸಿಎಂ ಯೋಗಿ ಸರ್ಕಾರದ ಬುಲ್ಡೋಜರ್‌ ಕ್ರಮಕ್ಕೆ ಸುಪ್ರೀಂ ತಡೆ, ನಾಳೆ ವಿಚಾರಣೆ

77

Tollywood: ‘ಪುಷ್ಪ-2ʼ ಐಟಂ ಸಾಂಗ್‌ನಲ್ಲಿ ಸೊಂಟ ಬಳುಕಿಸಲಿದ್ದಾರೆ ʼಸ್ತ್ರೀ-2ʼ ನಟಿ

Kollegala: ಬೆಂಗಳೂರಿನಿಂದ ತಮಿಳುನಾಡಿಗೆ ತಿಮಿಂಗಿಲದ ವಾಂತಿ ಸಾಗಾಟ… ಇಬ್ಬರ ಬಂಧನ

Kollegala: ಬೆಂಗಳೂರಿನಿಂದ ತಮಿಳುನಾಡಿಗೆ ತಿಮಿಂಗಿಲದ ವಾಂತಿ ಸಾಗಾಟ… ಇಬ್ಬರ ಬಂಧನ

Udupi: ಕತ್ತು ಸೀಳಿ ಸ್ನೇಹಿತನನ್ನೇ ಹತ್ಯೆಗೈದು ಪೊಲೀಸರಿಗೆ ಕರೆ ಮಾಡಿದ ವ್ಯಕ್ತಿ

Udupi: ಕತ್ತು ಸೀಳಿ ಸ್ನೇಹಿತನನ್ನೇ ಹತ್ಯೆಗೈದು ಪೊಲೀಸರಿಗೆ ಕರೆ ಮಾಡಿದ ವ್ಯಕ್ತಿ

Madhya Pradesh: ಕಾರ್ಖಾನೆಯಲ್ಲಿ ಸ್ಫೋಟ… 10 ಮಂದಿ ಗಂಭೀರ, ಹಲವರು ಸಿಲುಕಿರುವ ಶಂಕೆ

Madhya Pradesh: ಕಾರ್ಖಾನೆಯಲ್ಲಿ ಸ್ಫೋಟ… 10 ಮಂದಿ ಗಂಭೀರ, ಹಲವರು ಸಿಲುಕಿರುವ ಶಂಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Crime: ನಿಧಾನವಾಗಿ ಮಾತನಾಡಿ ಎಂದಿದ್ದಕ್ಕೆ  ಗಲಾಟೆ; ಪಾನಿಪೂರಿ ವ್ಯಾಪಾರಿ ಹತ್ಯೆ

Crime: ನಿಧಾನವಾಗಿ ಮಾತನಾಡಿ ಎಂದಿದ್ದಕ್ಕೆ  ಗಲಾಟೆ; ಪಾನಿಪೂರಿ ವ್ಯಾಪಾರಿ ಹತ್ಯೆ

Bengaluru Rain: ಪರಿಹಾರ ಕಾರ್ಯಕ್ಕೆ 1,000 ಕೋಟಿ ನೀಡಿ; ಅಶೋಕ್‌

Bengaluru Rain: ಪರಿಹಾರ ಕಾರ್ಯಕ್ಕೆ 1,000 ಕೋಟಿ ನೀಡಿ; ಅಶೋಕ್‌

Bengaluru: ಆಟವಾಡುವಾಗ ಕೆಂಗೇರಿ ಕೆರೆಗೆ ಬಿದ್ದ ಅಣ್ಣ- ತಂಗಿಗೆ ಹುಡುಕಾಟ

Bengaluru: ಆಟವಾಡುವಾಗ ಕೆಂಗೇರಿ ಕೆರೆಗೆ ಬಿದ್ದ ಅಣ್ಣ- ತಂಗಿಗೆ ಹುಡುಕಾಟ

Consumer Court: ದೋಷಪೂರಿತ ಇವಿ ದ್ವಿಚಕ್ರ ವಾಹನ ಕೊಟ್ಟ ಕಂಪನಿಗೆ ಕೋರ್ಟ್‌ನಿಂದ 2ಲಕ್ಷ ದಂಡ

Consumer Court: ದೋಷಪೂರಿತ ಇವಿ ದ್ವಿಚಕ್ರ ವಾಹನ ಕೊಟ್ಟ ಕಂಪನಿಗೆ ಕೋರ್ಟ್‌ನಿಂದ 2ಲಕ್ಷ ದಂಡ

Fraud: ವಿದೇಶದಲ್ಲಿ ಉದ್ಯೋಗ‌ ಕೊಡಿಸುವುದಾಗಿ 9 ಲಕ್ಷ ವಂಚನೆ: ಮೂವರ ವಿರುದ್ಧ ಕೇಸ್‌ 

Fraud: ವಿದೇಶದಲ್ಲಿ ಉದ್ಯೋಗ‌ ಕೊಡಿಸುವುದಾಗಿ 9 ಲಕ್ಷ ವಂಚನೆ: ಮೂವರ ವಿರುದ್ಧ ಕೇಸ್‌ 

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

3

Mangaluru: ಮೂಕ ಪ್ರಾಣಿಗಳ ಪ್ರಾಣ ಹಿಂಡುವ ಪ್ಲಾಸ್ಟಿಕ್‌!

2(2)

Vitla ಸಂಪರ್ಕದ ರಾಜ್ಯ, ಅಂತಾರಾಜ್ಯ ರಸ್ತೆಗಳಲ್ಲೆಲ್ಲ ಹೊಂಡ

Brics Summit 2024:ಬ್ರಿಕ್ಸ್ ಸಮಾವೇಶಕ್ಕೆ ಮುನ್ನುಡಿ ಬರೆದ ಭಾರತ -ಚೀನಾ ಸಂಘರ್ಷ ಶಮನ

Brics Summit 2024:ಬ್ರಿಕ್ಸ್ ಸಮಾವೇಶಕ್ಕೆ ಮುನ್ನುಡಿ ಬರೆದ ಭಾರತ -ಚೀನಾ ಸಂಘರ್ಷ ಶಮನ

Sandalwood: ತಾತ್ಕಾಲಿಕ ಪಯಣದತ್ತ ಸೂಚನ್‌

Sandalwood: ತಾತ್ಕಾಲಿಕ ಪಯಣದತ್ತ ಸೂಚನ್‌

Uttara Pradesh:ಸಿಎಂ ಯೋಗಿ ಸರ್ಕಾರದ ಬುಲ್ಡೋಜರ್‌ ಕ್ರಮಕ್ಕೆ ಸುಪ್ರೀಂ ತಡೆ, ನಾಳೆ ವಿಚಾರಣೆ

Uttara Pradesh:ಸಿಎಂ ಯೋಗಿ ಸರ್ಕಾರದ ಬುಲ್ಡೋಜರ್‌ ಕ್ರಮಕ್ಕೆ ಸುಪ್ರೀಂ ತಡೆ, ನಾಳೆ ವಿಚಾರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.