“ಸಾಹಿತ್ಯ-ತತ್ವಜ್ಞಾನದ್ದು ಇಹ-ಪರ ಮಧ್ಯದ ನಂಟು’


Team Udayavani, Jan 23, 2017, 12:34 PM IST

hub1.jpg

ಧಾರವಾಡ: ಸಾಹಿತ್ಯ ಹಾಗೂ ತತ್ವಜ್ಞಾನ ಮಧ್ಯದ ನಂಟು ಇಹ-ಪರ ಮಧ್ಯದ ನಂಟಿದ್ದಂತೆ ಎಂದು ವೀಣಾ ಬನ್ನಂಜೆ ಹೇಳಿದರು. ಧಾರವಾಡ ಸಾಹಿತ್ಯ ಸಂಭ್ರಮದ ಕೊನೆಯ ದಿನ ನಡೆದ “ಸಾಹಿತ್ಯ ಮತ್ತು ತತ್ವಜ್ಞಾನ’ ಗೋಷ್ಠಿಯಲ್ಲಿ ತಮ್ಮ ವಿಚಾರ ಮಂಡಿಸಿದರು.ಮುಕ್ತ ಹೃದಯ ಇದ್ದರೆ ಸಾಕು ತತ್ವಜ್ಞಾನ ಅರ್ಥವಾಗುತ್ತದೆ ಅದಕ್ಕೆ ಓದು, ಪದವಿ ಬೇಕೆಂದೇನಿಲ್ಲ.

ಓದು-ಅಕ್ಷರ ಕಲಿಯದ ಎಷ್ಟೋ ಜನರು ತತ್ವಜ್ಞಾನ ತಿಳಿದುಕೊಂಡಿರುತ್ತಾರೆ. ಜೀವನ ಅನುಭವ  ಅವರಿಗೆ ಸಾಕಷ್ಟು ಸಂಗತಿಗಳನ್ನು ಕಲಿಸಿರುತ್ತದೆ. ಇತರರು ಹೇಳಿದ ಘಟನೆಗಳು, ಸ್ವಾನುಭವಗಳು ಅವರ ಅನುಭವವನ್ನು ವಿಸ್ತಾರಗೊಳಿಸಿರುತ್ತವೆ.ಸಮಾಜದ ಪ್ರಭಾವ ಅವರ ಮೇಲೆ ದಟ್ಟವಾಗಿ  ಆಗಿರುತ್ತದೆ ಎಂದರು. ಎಲ್ಲರಿಗೂ ಸಾಹಿತ್ಯ ಅರ್ಥವಾಗುವುದಿಲ್ಲ. 

ಅದೇ ರೀತಿ ಎಲ್ಲರಿಗೂ ತತ್ವಶಾಸ್ತ್ರ ಅರಿಯಲಾಗುವುದಿಲ್ಲ. ಅದಕ್ಕೆ ಆಸಕ್ತಿ ಇರಬೇಕು ಎಂದು ಅಭಿಪ್ರಾಯಪಟ್ಟರು. ಸಾಹಿತಿ ತನ್ನ ಮನಸಿಗೆ ತೋಚಿದಂತೆ ಮಾತನಾಡಬಹುದು, ಬರೆಯಬಹುದು. ಒಬ್ಬ ಗಾಯಕ ಅಪಸ್ವರದಲ್ಲಿ ಹಾಡಬಹುದು, ಒಬ್ಬ ನಟ ಅಬದ್ಧ ಮಾತನಾಡಬಹುದು ಆದರೆ ಒಬ್ಬ ತತ್ವಜ್ಞಾನಿ ಹಾಗೆ ಮಾಡಲು ಆಗುವುದಿಲ್ಲ. ಆತ ಆತ್ಮವಂಚನೆ ಮಾಡಿಕೊಳ್ಳುವುದಿಲ್ಲ.

ಅವನಿಗೆ ಅವನದೇ ಆದ ಮಾನದಂಡಗಳಿವೆ. ಪ್ರಾಮಾಣಿಕತೆ ತತ್ವಶಾಸ್ತ್ರದ ಮುಖ್ಯ ಮಾನದಂಡವಾಗಿದೆ. ಇಲ್ಲಿ ಸಾಹಿತ್ಯದಂತೆ ನಡೆ-ನುಡಿಗಳಲ್ಲಿ ವ್ಯತ್ಯಾಸವಿಲ್ಲ. ನಮ್ಮ ತತ್ವಶಾಸ್ತ್ರಜ್ಞರು ನುಡಿದಂತೆ ನಡೆದಿದ್ದಾರೆ ಎಂದರು. ಲಕ್ಷ್ಮೀಶ ತೋಳ್ಪಾಡಿ ಮಾತನಾಡಿ, ಅತ್ಯುತ್ತಮ ಕಾವ್ಯ ಹಾಗೂ ಅತ್ಯುತ್ತಮ ತತ್ವಜ್ಞಾನ ಅವಳಿಗಳಿದ್ದಂತೆ. ಸಾಹಿತ್ಯ ಹಾಗೂತತ್ವಜ್ಞಾನದ ಸಂಬಂಧ ವಾಗರ್ಥಗಳ  ಮೂಲಕ ಪ್ರತೀಕವಾಗುವಂಥ ಸಂಬಂಧ. 

ನಮ್ಮನ್ನು ಅಭಿವ್ಯಕ್ತಿ ಮಾಡದೇ ವಿಚಾರ ಅಭಿವ್ಯಕ್ತಿ ಮಾಡಲು ಸಾಧ್ಯವಿಲ್ಲ. ಈ ಅಭಿವ್ಯಕ್ತಿಯೇ ತತ್ವಜ್ಞಾನ. ಅನುಭವವಿದ್ದರೆ ಬರೆಯಲು ಸಾಧ್ಯ, ಆದರೆ ಬರೆಯಬೇಕೆಂಬ ಕಾರಣಕ್ಕೆ ಅನುಭವ ಪಡೆಯಬೇಕೆನ್ನುವುದು ಮೂರ್ಖತನ. ಬರವಣಿಗೆ ಎಂಬುದು ತಾನಾಗೇ ಸಂಭವಿಸುವ ಗುಣ. ಅನುಭವ ಹೆಚ್ಚಾದಂತೆ ಮಾತು ಕಡಿಮೆಯಾಗುತ್ತದೆ ಎಂಬುದು ವಿಸ್ಮಯದ ಸಂಗತಿ ಎಂದರು.  

ಮಿಥ್ಯ ಎಂದರೆ ಸುಳ್ಳು ಎಂಬರ್ಥವಿಲ್ಲ. ಮಿಥ್ಯ ಎಂದರೆ ಅದರಲ್ಲಿ ಸತ್ಯವೂ ಇದೆ ಹಾಗೂ ಸುಳ್ಳೂ ಇದೆ ಎಂದು ಅರ್ಥ. ಸುಳ್ಳು ಎಂದರೆ ಸುಳಿವು ಎಂದರ್ಥ ಎಂದರು. ಸಾಹಿತ್ಯ ನೋವಿನ ಸಂಗತಿ. ಅದರಲ್ಲಿ ಸಂತೋಷಕ್ಕಿಂತ ನೋವು ಹೆಚ್ಚಾಗಿದೆ. ನೋವನ್ನು ಅನುಭವಿಸಲು ನಮ್ಮನ್ನು ಸಮರ್ಥರನ್ನಾಗಿ ಮಾಡುವುದೇ ತತ್ವಜ್ಞಾನ. ವಚನಕಾರರು ಹಾಗೂ ದಾಸರು ತಮ್ಮ ಪದಗಳ ಮೂಲಕ ತತ್ವಜ್ಞಾನದತ್ತ ನಮ್ಮನ್ನು ಕರೆದೊಯ್ಯುತ್ತಾರೆ ಎಂದು ಅಭಿಪ್ರಾಯಪಟ್ಟರು.

ಸುಂದರ ಸಾರುಕ್ಕೆ ಮಾತನಾಡಿ, ಸಾಹಿತ್ಯದ ಪರಿಕಲ್ಪನೆ ಅರ್ಥೈಸಿಕೊಳ್ಳಲು ತತ್ವಜ್ಞಾನ ತಿಳಿದುಕೊಳ್ಳುವುದು ಅವಶ್ಯ ಎಂದರು. ಗೋಷ್ಠಿಯ ನಿರ್ದೇಶಕ ಮಲ್ಲೇಪುರಂ ಜಿ.ವೆಂಕಟೇಶ ಮಾತನಾಡಿ, ವಚನಗಳಲ್ಲಿ ಹಲವು ಕಾವ್ಯಗಳಲ್ಲಿ ತತ್ವಜ್ಞಾನ ಅಂತರ್ಗತವಾಗಿದೆ. ಬೇಂದ್ರೆ ಹಾಗೂ ಕುವೆಂಪು ಕವಿತೆಗಳಲ್ಲಿ ಇದನ್ನು ನಾವು ಕಾಣಬಹುದಾಗಿದೆ ಎಂದರು.   

ಟಾಪ್ ನ್ಯೂಸ್

bk-Hari

Jharkhand Election; ಹರಿಪ್ರಸಾದ್‌ ಎಐಸಿಸಿ ಸಮನ್ವಯಕಾರ

sensex-down

Share Market: ಸೆನ್ಸೆಕ್ಸ್‌ ಸತತ ಪತನ: 2 ತಿಂಗಳ ಕನಿಷ್ಠ ಕುಸಿತ ದಾಖಲಿಸಿದ ಷೇರುಪೇಟೆ

rathan-tata

Mumbai: ಅರಬಿ ಸಮುದ್ರದಲ್ಲಿ ರತನ್‌ ಟಾಟಾ ಚಿತಾ ಭಸ್ಮ ವಿಸರ್ಜನೆ

Salmana

Bollywood Actor: ಸಲ್ಮಾನ್‌ ಹತ್ಯೆಗೆ 25 ಲಕ್ಷ ಸುಪಾರಿ ಕೊಟ್ಟ ಬಿಷ್ಣೋಯ್‌: ಪೊಲೀಸ್‌

Priyanka-VA

By Poll: ಪ್ರಿಯಾಂಕಾ ವಾದ್ರಾ ವಿರುದ್ಧ ವಯನಾಡಿನಲ್ಲಿ ಸಿಪಿಐ ಅಭ್ಯರ್ಥಿ ಕಣಕ್ಕೆ

supreme-Court

Citizenship: ವಲಸಿಗರಿಗೆ ಪೌರತ್ವ ನೀಡುವ ಮಾನ್ಯತೆ ಎತ್ತಿಹಿಡಿದ ಸುಪ್ರೀಂಕೋರ್ಟ್‌

Udupi: ಗೀತಾರ್ಥ ಚಿಂತನೆ-67: ಅರ್ಜುನನ ಅಹಂ ನಾಶಕ್ಕೆ ಕೃಷ್ಣತಂತ್ರ

Udupi: ಗೀತಾರ್ಥ ಚಿಂತನೆ-67: ಅರ್ಜುನನ ಅಹಂ ನಾಶಕ್ಕೆ ಕೃಷ್ಣತಂತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rain: ಹಿಂಗಾರು ಮಳೆಯಬ್ಬರಕ್ಕೆ ಇಬ್ಬರು ಸಾವು, ಬೆಳೆ ಹಾನಿ

Rain: ಹಿಂಗಾರು ಮಳೆಯಬ್ಬರಕ್ಕೆ ಇಬ್ಬರು ಸಾವು, ಬೆಳೆ ಹಾನಿ

Flight: ಹುಬ್ಬಳ್ಳಿ-ಅಹ್ಮದಾಬಾದ್‌ ವಿಮಾನ ಸೇವೆ ಆರಂಭಕ್ಕೆ ಜೋಶಿ,ನಾಯ್ಡು ಚರ್ಚೆ

Flight: ಹುಬ್ಬಳ್ಳಿ-ಅಹ್ಮದಾಬಾದ್‌ ವಿಮಾನ ಸೇವೆ ಆರಂಭಕ್ಕೆ ಜೋಶಿ,ನಾಯ್ಡು ಚರ್ಚೆ

Pralhad Joshi: ಬೆಂಬಲ ಬೆಲೆ ಹೆಚ್ಚಳದೊಂದಿಗೆ ಅನ್ನದಾತರಿಗೆ ನೆರವು

Pralhad Joshi: ಬೆಂಬಲ ಬೆಲೆ ಹೆಚ್ಚಳದೊಂದಿಗೆ ಅನ್ನದಾತರಿಗೆ ನೆರವು

1-rss

Hubli; ಗಲಭೆ ಪ್ರಕರಣ ವಾಪಸ್ ಖಂಡಿಸಿ ಠಾಣೆ ಮುಂಭಾಗ ಶ್ರೀರಾಮ ಸೇನೆ ಪ್ರತಿಭಟನೆ

Madhu Bangarappa

Dharwad: ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ ಪಡೆದಿದ್ದು ಸರಿ ಇದೆ : ಸಚಿವ ಮಧು ಬಂಗಾರಪ್ಪ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

bk-Hari

Jharkhand Election; ಹರಿಪ್ರಸಾದ್‌ ಎಐಸಿಸಿ ಸಮನ್ವಯಕಾರ

1-mahe

MAHE-Mangalore University ಒಡಂಬಡಿಕೆ : ಮೂಳೆ ಅಲೋಗ್ರಾಫ್ಟ್‌ಗಳ ಗಾಮಾ ವಿಕಿರಣ

sensex-down

Share Market: ಸೆನ್ಸೆಕ್ಸ್‌ ಸತತ ಪತನ: 2 ತಿಂಗಳ ಕನಿಷ್ಠ ಕುಸಿತ ದಾಖಲಿಸಿದ ಷೇರುಪೇಟೆ

rathan-tata

Mumbai: ಅರಬಿ ಸಮುದ್ರದಲ್ಲಿ ರತನ್‌ ಟಾಟಾ ಚಿತಾ ಭಸ್ಮ ವಿಸರ್ಜನೆ

Salmana

Bollywood Actor: ಸಲ್ಮಾನ್‌ ಹತ್ಯೆಗೆ 25 ಲಕ್ಷ ಸುಪಾರಿ ಕೊಟ್ಟ ಬಿಷ್ಣೋಯ್‌: ಪೊಲೀಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.