ಉಪನ್ಯಾಸಕಿಯರಿಗೆ ಪ್ರೇಮ ಸಂದೇಶ ಕಳಿಸಿದವನ ಸೆರೆ
Team Udayavani, Jan 28, 2017, 11:25 AM IST
ಬೆಂಗಳೂರು: ಕಾಲೇಜಿನ ವಿದ್ಯಾರ್ಥಿಯೊಬ್ಬನಿಂದ ಮೊಬೈಲ್ ಪಡೆದು ನಾಲ್ವರು ಉಪನ್ಯಾಸಕಯರಿಗೆ ಪ್ರೇಮ ಸಂದೇಶ ರವಾನಿಸಿ, ತಲೆಮರೆಸಿಕೊಂಡಿದ್ದ ಅದೇ ಕಾಲೇಜಿನ ಸೆಕ್ಯುರಿಟಿ ಗಾರ್ಡ್ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಮಲ್ಲೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಭದ್ರತಾ ಸಿಬ್ಬಂದಿ ಮಹೇಂದ್ರ ಬಂಧಿತ ಆರೋಪಿ.
ಆರೋಪಿ ಮಹೇಂದ್ರನಿಗೆ ಮೊಬೈಲ್ ಕೊಟ್ಟ ತಪ್ಪಿಗೆ ವಿದ್ಯಾರ್ಥಿಯನ್ನೂ ಪೊಲೀಸರು ಬಂಧಿಸಿದ್ದಾರೆ. ಬಳಿಕ ಆತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಮಲ್ಲೇಶ್ವರದ ಕಾಲೇಜಿನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿರುವ ಮಹೇಂದ್ರ, ಇಂಟರ್ನೆಟ್ ಬಳಸುವುದಾಗಿ ವಿದ್ಯಾರ್ಥಿಯಿಂದ ಮೊಬೈಲ್ಅನ್ನು ಕೇಳಿ ಪಡೆದುಕೊಂಡಿದ್ದ.
ಬಳಿಕ ಅದರಿಂದ ನಾಲ್ವರು ಉಪನ್ಯಾಸಕಿಯರಿಗೆ “ಐ ಲವ್ ಯು, ಐ ಮಿಸ್ ಯು, ಫ್ರೀ ಇದ್ದರೆ ಸಿಗುತ್ತೀರಾ…?” ಎಂದು ಸಂದೇಶ ರವಾನಿಸಿದ್ದ. ಈ ಸಂದೇಶದಿಂದ ಗಾಭರಿಗೊಂಡ ಉಪನ್ಯಾಸಕಿಯರು ಜ.13 ರಂದು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ಮೊಬೈಲ್ ಸಿಮ್ ಕಾರ್ಡ್ ಪರಿಶೀಲಿಸಿದ ಪೊಲೀಸರಿಗೆ ವಿದ್ಯಾರ್ಥಿಯೋಬ್ಬನ ಮೊಬೈಲ್ನಿಂದ ಸಂದೇಶ ರವಾನೆಯಾಗಿರುವುದು ತಿಳಿಯಿತು.
ಅದರಂತೆ ಜ.14 ರಂದೇ ವಿದ್ಯಾರ್ಥಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ವಿದ್ಯಾರ್ಥಿಯನ್ನು ವಿಚಾರಣೆ ನಡೆಸಿದಾಗ ಮೊಬೈಲ್ನ್ನು ಕಾಲೇಜು ಭದ್ರತಾ ಸಿಬ್ಬಂದಿ ಮಹೇಂದ್ರನಿಗೆ ಕೊಟ್ಟಿರುವುದಾಗಿ ಹೇಳಿದ್ದ ಆ ಸಿಮ್ ಹೊಸಕೋಟೆ ವ್ಯಾಪ್ತಿಯ ಟವರ್ನಿಂದ ಸಂಪರ್ಕ ಪಡೆಯುತ್ತಿತ್ತು. ಈ ಸುಳಿವು ಆಧರಿಸಿ ಮಹೇಂದ್ರನನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jharkhand Election; ಹರಿಪ್ರಸಾದ್ ಎಐಸಿಸಿ ಸಮನ್ವಯಕಾರ
MAHE-Mangalore University ಒಡಂಬಡಿಕೆ : ಮೂಳೆ ಅಲೋಗ್ರಾಫ್ಟ್ಗಳ ಗಾಮಾ ವಿಕಿರಣ
Share Market: ಸೆನ್ಸೆಕ್ಸ್ ಸತತ ಪತನ: 2 ತಿಂಗಳ ಕನಿಷ್ಠ ಕುಸಿತ ದಾಖಲಿಸಿದ ಷೇರುಪೇಟೆ
Mumbai: ಅರಬಿ ಸಮುದ್ರದಲ್ಲಿ ರತನ್ ಟಾಟಾ ಚಿತಾ ಭಸ್ಮ ವಿಸರ್ಜನೆ
Bollywood Actor: ಸಲ್ಮಾನ್ ಹತ್ಯೆಗೆ 25 ಲಕ್ಷ ಸುಪಾರಿ ಕೊಟ್ಟ ಬಿಷ್ಣೋಯ್: ಪೊಲೀಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.