ಹೊಸತನಕ್ಕೆ ಸಾಕ್ಷಿಯಾದ ಅಭಿವೃದ್ಧಿ ಸಂವಾದ
Team Udayavani, Jan 30, 2017, 12:42 PM IST
ಹುಬ್ಬಳ್ಳಿ: ದೇಶಪಾಂಡೆ ಪ್ರತಿಷ್ಠಾನದ ಅಭಿವೃದ್ಧಿ ಸಂವಾದಕ್ಕೆ ರವಿವಾರ ತೆರೆ ಬಿದ್ದಿತು. ಎರಡು ದಿನ ನಡೆದ ಅಭಿವೃದ್ಧಿ ಸಂವಾದಕ್ಕೆ ದೇಶ-ವಿದೇಶಗಳ ಉದ್ಯಮ ಸಾಧಕರು, ವಿವಿಧ ಕ್ಷೇತ್ರಗಳ ತಜ್ಞರು, ನೂರಾರು ವಿದ್ಯಾರ್ಥಿ-ಯುವ ನಾಯಕರು, ಸರಕಾರಿ ಹಿರಿಯ ಅಧಿಕಾರಿಗಳು, ಅನೇಕ ಗಣ್ಯರು ಸಾಕ್ಷಿಯಾದರು.
ದೇಶಪಾಂಡೆ ಪ್ರತಿಷ್ಠಾನ ಹುಬ್ಬಳ್ಳಿಯಲ್ಲಿ ಆರಂಭಗೊಂಡು 10 ವರ್ಷ ಪೂರೈಸಿದಹಿನ್ನೆಲೆಯಲ್ಲಿ ಈ ಬಾರಿಯ ಅಭಿವೃದ್ಧಿ ಸಂವಾದ ವಿಶೇಷತೆ ಪಡೆದಿತ್ತು. ಇದಕ್ಕೆ ಪೂರಕ ಎನ್ನುವಂತೆ ಪ್ರತಿಷ್ಠಾನ ಹಲವು ಹೊಸತನಗಳಿಗೆ ನಾಂದಿಯಾಯಿತು.
ಪ್ರತಿಷ್ಠಾನದ ಹತ್ತು ವರ್ಷದ ಸವಿನೆನಪಲ್ಲಿ ದೇಶಕ್ಕೆ ಅತಿ ದೊಡ್ಡ ಕೌಶಲ ಅಭಿವೃದ್ಧಿ ಕೇಂದ್ರ ಹಾಗೂ ಇನ್ಕುಬೇಷನ್ ಕೇಂದ್ರ ಸಿದ್ಧತೆಗೊಂಡಿದ್ದರ ಬಗ್ಗೆ ಮಾಹಿತಿ ನೀಡಲಾಯಿತಲ್ಲದೆ, ಸೆಪ್ಟಂಬರ್ ನಲ್ಲಿ ಇನ್ಕುಬೇಷನ್ ಕೇಂದ್ರ ಕಾರ್ಯಾರಂಭವಾಗಲಿದೆ ಎಂದು ಘೋಷಿಸಲಾಯಿತು.
ನವೋದ್ಯಮಿಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇನ್ಫೋಸಿಸ್ ಕ್ಯಾಂಪಸ್ ನಲ್ಲಿ ಪ್ರತ್ಯೇಕವಾಗಿ ಎರಡು ದಿನಗಳ ನವೋದ್ಯಮ ಅಭಿವೃದ್ಧಿ ಸಂವಾದ ನಡೆಸಲಾಯಿತು. ದೇಶ-ವಿದೇಶಗಳ ಅನೇಕ ನವೋದ್ಯಮಿಗಳು, ಹೂಡಿಕೆದಾರರು, ತಜ್ಞರು ಇದರಲ್ಲಿ ಭಾಗಿಯಾಗಿ ಪರಸ್ಪರ ಅನಿಸಿಕೆ ವಿನಿಮಯ ಮಾಡಿಕೊಂಡರು.
ಪ್ರತಿ ವರ್ಷದಂತೆ ಈ ವರ್ಷವೂ ಅಭಿವೃದ್ಧಿ ಸಂವಾದ, ಕೃಷಿಮೇಳ, ಲೀಡ್ ಪಯಣ ಹಾಗೂ ಸಾಧಕ ಕಾಲೇಜು, ಉಪನ್ಯಾಸಕರು, ವಿದ್ಯಾರ್ಥಿಗಳಿಗೆ ಲೀಡ್ ಪ್ರಶಸ್ತಿ ಪ್ರದಾನ, ನವೋದ್ಯಮಿ ಸಮಾವೇಶ, ಶಿಕ್ಷಣ ಹಾಗೂ ಆರೋಗ್ಯ, ಸಣ್ಣ ಉದ್ಯಮದಾರರ ಸಮಾವೇಶಗಳು ನಡೆದವು.
ಪ್ರಗತಿ ಸಂವಾದ: ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ದೇಶಪಾಂಡೆ ಪ್ರತಿಷ್ಠಾನದ ಸಂಸ್ಥಾಪಕ ಡಾ| ಗುರುರಾಜ ದೇಶಪಾಂಡೆ, ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಸಂವಾದ ಪ್ರಬುದ್ಧತೆ ಪಡೆಯುತ್ತಿದೆ. ಇದೊಂದು ಪ್ರಗತಿ ಸಂವಾದವಾಗಿದೆ. ಅಭಿವೃದ್ಧಿ ಸಂವಾದವನ್ನು ಹುಬ್ಬಳ್ಳಿಯೇ ಆಯೋಜಿಸುತ್ತಿರುವುದು ಈ ಭಾಗದ ಬಗ್ಗೆ ಅನೇಕರ ಗಮನ ಸೆಳೆಯಲು ಹಾಗೂ ಅಭಿವೃದ್ಧಿಗೆ ಪೂರಕವಾಗುವ ಉದ್ದೇಶದಿಂದಾಗಿದೆ.
ದೇಶದ ಬೇರೆ ಕಡೆ ನಡೆಸಬೇಕೆಂಬ ಚಿಂತನೆ ಇದೆಯಾದರೂ, ಸದ್ಯ ಕಂತು ಆ ನಿಟ್ಟಿನಲ್ಲಿ ಯಾವುದೇ ಕ್ರಮ ಇಲ್ಲ ಎಂದರು. ಸಂವಾದದಲ್ಲಿ ಪಾಲ್ಗೊಂಡವರುಅಭಿಪ್ರಾಯ ವ್ಯಕ್ತಪಡಿಸಿದರಲ್ಲದೆ, ಹಲವು ಸಲಹೆ ನೀಡಿದರು. ಜಯಶ್ರೀ ದೇಶಪಾಂಡೆ, ಡಾ| ನೀಲಂ ಮಹೇಶ್ವರಿ, ನವೀನ ಝಾ, ಸುನಿಲ ಎಸ್ಕೆ, ಸಿ.ಎಂ.ಪಾಟೀಲ ಸೇರಿದಂತೆ ದೇಶಪಾಂಡೆ ಪ್ರತಿಷ್ಠಾನದ ವಿವಿಧವಿಭಾಗಗಳ ಮುಖ್ಯಸ್ಥರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad; ಸಿದ್ದರಾಮಯ್ಯ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು: ಪ್ರಹ್ಲಾದ ಜೋಶಿ
Hubli: ರಾಡ್ ಬಿದ್ದು ಎಎಸ್ಐ ಸಾವು ಪ್ರಕರಣದಲ್ಲಿ ಮತ್ತೋರ್ವನ ಬಂಧನ
MUDA Case: ಸಿದ್ದರಾಮಯ್ಯ ಅಧಿಕಾರದಲ್ಲಿದ್ರೆ ತನಿಖೆ ಮೇಲೆ ಪ್ರಭಾವ ಖಚಿತ: ಶಾಸಕ ಯತ್ನಾಳ್
Hubli; ಕೋರ್ಟ್ ಆದೇಶಕ್ಕೆ ತಲೆಬಾಗಿ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಪ್ರಮೋದ ಮುತಾಲಿಕ್
Hubli: ಗೌರವ ಉಳಿಯಬೇಕೆಂದರೆ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು: ಬಸವರಾಜ ಬೊಮ್ಮಾಯಿ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ
Daily Horoscope: ಅನವಶ್ಯ ಮಾತುಗಳಿಂದ ದೂರವಿರಿ, ಉದ್ಯೋಗಸ್ಥರ ಸಮಸ್ಯೆ ನಿವಾರಣೆ
KSOU: ಪರೀಕ್ಷೆ ಸಮೀಪಿಸುತ್ತಿದ್ದರೂ ಮುದ್ರಿತ ಪಠ್ಯ ಸಿಗಲಿಲ್ಲ
Israel ಸರ್ಜಿಕಲ್ ಸ್ಟ್ರೈಕ್: ಹೆಜ್ಬುಲ್ಲಾ ಮುಖ್ಯಸ್ಥನ ಅಂತ್ಯಕ್ಕೆ 80 ಟನ್ ಬಾಂಬ್!
BCCI: ಇಂದು ಬಿಸಿಸಿಐ ವಾರ್ಷಿಕ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.