ವಿವಿಧ ಸಂಘಟನೆಗಳಿಂದ ಡಿಸಿ ಕಚೇರಿ ಬಳಿ ಧರಣಿ


Team Udayavani, Feb 1, 2017, 12:26 PM IST

dvg1].jpg

ದಾವಣಗೆರೆ: ಪ್ರಧಾನ ಮಂತ್ರಿಯವರ ಹೊಸ 15 ಅಂಶಗಳ ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನ ಹಾಗೂ ಪ್ರತಿ 3 ತಿಂಗಳಿಗೊಮ್ಮೆ ಜಿಲ್ಲಾ ಸಮಿತಿ ಸಭೆ ಆಯೋಜಿಸಲು ಒತ್ತಾಯಿಸಿ ಮಂಗಳವಾರ ಮುಸ್ಲಿಂ ಮಹಿಳಾ ಒಕ್ಕೂಟ, ನೆರಳು ಬೀಡಿ ಕಾರ್ಮಿಕರ ಯೂನಿಯನ್‌ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು. 

ಹಲವಾರು ಅಧ್ಯಯನದ ಪ್ರಕಾರ ಮುಸ್ಲಿಂ ಸಮಾಜ ಶಿಕ್ಷಣ, ಸರ್ಕಾರಿ, ಸ್ವಯಂ ಉದ್ಯೋಗ, ಆರ್ಥಿಕ ಒಳಗೊಂಡಂತೆ ವಿವಿಧ ಕ್ಷೇತ್ರದಲ್ಲಿ ಗಣನೀಯ ಪ್ರಮಾಣದಲ್ಲಿ ಹಿಂದುಳಿದಿದೆ. ಸಾಚಾರ್‌ ಸಮಿತಿ ಮುಸ್ಲಿಂ ಸಮಾಜದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ ಕ್ಷೇತ್ರದಲ್ಲಿ ಹಿಂದುಳಿದಿರುವ ಬಗ್ಗೆ ಅಧ್ಯಯನ ನಡೆಸಿ, ಕೇಂದ್ರ ಸರ್ಕಾರಕ್ಕೆ 2006 ನ. 30ರಂದು ವರದಿ ಸಲ್ಲಿಸಿತ್ತು. 

10 ವರ್ಷವಾದರೂ ಸಾಚಾರ್‌ ಸಮಿತಿ ವರದಿ ಸಮರ್ಪಕವಾಗಿ ಜಾರಿಗೊಳಿಸಿಲ್ಲ. ಪ್ರಧಾನ ಮಂತ್ರಿಯವರ ಹೊಸ 15 ಅಂಶಗಳ ಕಾರ್ಯಕ್ರಮದ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು. ಮುಸ್ಲಿಂ ಸಮಾಜವನ್ನು ಮುಖ್ಯವಾಹಿನಿಗೆ ಕರೆ ತರುವ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಹಲವಾರು ಕಲ್ಯಾಣ ಕಾರ್ಯಕ್ರಮ ಜಾರಿಗೊಳಿಸಿವೆ. 

ಒಟ್ಟು ಯೋಜನೆಗಳು ಮತ್ತು ಅನುದಾನದಲ್ಲಿ ಭೌತಿಕ ಮತ್ತು ಆರ್ಥಿಕವಾಗಿ ಮುಸ್ಲಿಂ ಸಮಾಜಕ್ಕೆ ಶೇ. 15 ರಷ್ಟು ಮೀಸಲಿಡುವಂತಾಗಬೇಕು ಎಂಬುದು ಸರ್ಕಾರದ ಆಶಯ. ಹಾಗಾಗಿ ಪ್ರತಿ 3 ತಿಂಗಳಿಗೊಮ್ಮೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಕಾರ್ಯಕ್ರಮ ಅನುಷ್ಠಾನದ ಅವಲೋಕನ ಮಾಡಬೇಕಿದೆ. ಇನ್ನು ಮುಂದೆ ಕಡ್ಡಾಯವಾಗಿ 3 ತಿಂಗಳಿಗೊಮ್ಮೆ ಸಭೆ ನಡೆಸಬೇಕು ಎಂದು ಒತ್ತಾಯಿಸಿದರು. 

ಸರ್ಕಾರಿ ಯೋಜನೆಗಳು ಮತ್ತು ಅನುದಾನದಲ್ಲಿ ಶೇ.15ರಷ್ಟು ಮೀಸಲು ಅನುದಾನವನ್ನು ಮುಸ್ಲಿಂ ಸಮಾಜದ ಅಭಿವೃದ್ಧಿಗೆ ಕಡ್ಡಾಯ ಹಾಗೂ ಪರಿಣಾಮಕಾರಿಯಾಗಿ ಬಳಸಬೇಕು. ಎಲ್ಲಾ ಇಲಾಖೆ ಅನುದಾನ ಬಳಕೆ ಮಾಡಿರುವ ಬಗ್ಗೆ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಬೇಕು. 2017-18ನೇ ಸಾಲಿನಲ್ಲಿ ಖರ್ಚು ಮಾಡುವ ಅನುದಾನದ ಬಗ್ಗೆ ಕ್ರಿಯಾ ಯೋಜನೆ ರೂಪಿಸಬೇಕು.

ಪ್ರತಿ 3 ತಿಂಗಳಿಧಿ ಗೊಮ್ಮೆ ನಡೆಸುವ ಸಭೆಯಲ್ಲಿ ಮುಸ್ಲಿಂ ಮಹಿಳಾ ಒಕ್ಕೂಟದ ಪ್ರತಿನಿಧಿಗಳು ಭಾಗವಹಿಸುವ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಮುಸ್ಲಿಂ ಮಹಿಳಾ ಒಕ್ಕೂಟದ ಜಿಲ್ಲಾ ಸಂಚಾಲಕಿ ಜಬೀನಾಖಾನಂ, ಸಹ ಸಂಚಾಲಕಿ ಶಿರೀನ್‌ಬಾನು, ಸಬೀನ್‌ತಾಜ್‌, ಹಸೀನಾಬಾನು, ನಗೀನಾಬಾನು, ಗುಲ್ಜಾರ್‌ಬಾನು, ನಾಹೇರ್‌ ಜಾನ್‌, ನಾಜೀಮಾಬಾನು, ಯಾಸೀನ್‌ಬಾನು, ನೂರ್‌ಫಾತಿಮಾ, ಗುಲ್ಜಾರ್‌, ರಮೀಜಾಬಿ, ದಿಲ್‌ ಷಾದ್‌ ಬೀ, ಎಂ. ಕರಿಬಸಪ್ಪ ಇತರರು ಇದ್ದರು.   

ಟಾಪ್ ನ್ಯೂಸ್

Karkala ಕೋರ್ಟ್‌ಗೆ ನಕ್ಸಲ್‌ ಕನ್ಯಾಕುಮಾರಿ, ರಮೇಶ್‌

Karkala ಕೋರ್ಟ್‌ಗೆ ನಕ್ಸಲ್‌ ಕನ್ಯಾಕುಮಾರಿ, ರಮೇಶ್‌

Kundapura 3ದಿನ ಕಳೆದರೂ ಸಿಗದ ರುಂಡ; ಮುಂದುವರಿದ ಶೋಧ

Kundapura 3ದಿನ ಕಳೆದರೂ ಸಿಗದ ರುಂಡ; ಮುಂದುವರಿದ ಶೋಧ

1-reess

Modi USA tour; ಭಾರತದ ಸೆಮಿಕಂಡಕ್ಟರ್‌ ಕನಸಿಗೆ ಈಗ ಹೊಸ ‘ಶಕ್ತಿ’

Wenlock Hospital: ಸಮಸ್ಯೆ ನಿವಾರಣೆಗೆ ಗುಳಿಗ ಪುನರ್‌ ಪ್ರತಿಷ್ಠೆ

Wenlock Hospital: ಸಮಸ್ಯೆ ನಿವಾರಣೆಗೆ ಗುಳಿಗ ಪುನರ್‌ ಪ್ರತಿಷ್ಠೆ

Ambulance

Vahical Riders: ಸಂಚಾರ ನಿಯಮ ಉಲ್ಲಂಘಿಸಿದರೆ ಲೈಸನ್ಸ್‌ ರದ್ದು: ಸಿಎಂ ಸಿದ್ದರಾಮಯ್ಯ

Chandra

Mini Moon!;ಇದೇ 29ರಿಂದ ಭೂಮಿಗೆ ಬರಲಿದೆ ಹೊಸ ಅತಿಥಿ

nitin-gadkari

4th term ಅಧಿಕಾರ ಗ್ಯಾರಂಟಿ ಇಲ್ಲ, ಆದರೆ…: ಕೇಂದ್ರ ಸಚಿವ ಗಡ್ಕರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Davanagere; ಪ್ರಚೋದನಾತ್ಮಕ ಹೇಳಿಕೆ; ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಬಂಧನ

Davanagere; ಪ್ರಚೋದನಾತ್ಮಕ ಹೇಳಿಕೆ; ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಬಂಧನ

police

Davanagere; ಏಕಾಏಕಿ ಬಾರ್ ಗೆ ನುಗ್ಗಿ ಮದ್ಯ ಸೇವಿಸುತ್ತಿದ್ದ ವ್ಯಕ್ತಿಯ ಇರಿದು ಹ*ತ್ಯೆ

Davanagere: Judicial custody of 14 accused in Ganesh procession stone pelting case

Davanagere: ಗಣೇಶ ಮೆರವಣಿಗೆ ಕಲ್ಲು ತೂರಾಟ ಪ್ರಕರಣದಲ್ಲಿ 14 ಆರೋಪಿಗಳಿಗೆ ನ್ಯಾಯಾಂಗ ಬಂಧನ

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

police crime

Nyamathi;ಕೊ*ಲೆ,ಇರಿ*ತ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಬಂಧನ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Karkala ಕೋರ್ಟ್‌ಗೆ ನಕ್ಸಲ್‌ ಕನ್ಯಾಕುಮಾರಿ, ರಮೇಶ್‌

Karkala ಕೋರ್ಟ್‌ಗೆ ನಕ್ಸಲ್‌ ಕನ್ಯಾಕುಮಾರಿ, ರಮೇಶ್‌

Kundapura 3ದಿನ ಕಳೆದರೂ ಸಿಗದ ರುಂಡ; ಮುಂದುವರಿದ ಶೋಧ

Kundapura 3ದಿನ ಕಳೆದರೂ ಸಿಗದ ರುಂಡ; ಮುಂದುವರಿದ ಶೋಧ

1-reess

Modi USA tour; ಭಾರತದ ಸೆಮಿಕಂಡಕ್ಟರ್‌ ಕನಸಿಗೆ ಈಗ ಹೊಸ ‘ಶಕ್ತಿ’

Wenlock Hospital: ಸಮಸ್ಯೆ ನಿವಾರಣೆಗೆ ಗುಳಿಗ ಪುನರ್‌ ಪ್ರತಿಷ್ಠೆ

Wenlock Hospital: ಸಮಸ್ಯೆ ನಿವಾರಣೆಗೆ ಗುಳಿಗ ಪುನರ್‌ ಪ್ರತಿಷ್ಠೆ

Ambulance

Vahical Riders: ಸಂಚಾರ ನಿಯಮ ಉಲ್ಲಂಘಿಸಿದರೆ ಲೈಸನ್ಸ್‌ ರದ್ದು: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.