Shocking: 50 ರಿಂದ 500 ರೂ.ಗೆ ಹುಡುಗಿಯರ ಮೊಬೈಲ್ ನಂಬರ್ ಮಾರಾಟ
Team Udayavani, Feb 3, 2017, 4:35 PM IST
ಹೊಸದಿಲ್ಲಿ : ಹುಡುಗಿಯರ ಅಂದಚಂದಕ್ಕೆ ಅನುಗುಣವಾಗಿ ಅವರ ಮೊಬೈಲ್ ನಂಬರ್ಗಳನ್ನು ರೀಚಾರ್ಜ್ ಶಾಪ್ ಗಳು ಮಾರುತ್ತಿರುವುದನ್ನು ಉತ್ತರ ಪ್ರದೇಶ ಪೊಲೀಸರು ಪತ್ತೆ ಹಚ್ಚಿದ್ದಾರೆ.
50 ರೂ.ಗಳಿಂದ 500 ರೂ. ವರೆಗೆ ದುಡ್ಡು ತೆತ್ತು ಹುಡುಗಿಯರ ಮೊಬೈಲ್ ನಂಬರ್ಗಳನ್ನು ಪಡೆಯುವ ಪುರುಷರು, ಆ ಹುಡುಗಿಯರಿಗೆ ಫೋನ್ ಕಿರುಕುಳ ನೀಡುವುದು ರಾಜ್ಯದಲ್ಲೀಗ ವ್ಯಾಪಕವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮುಖ್ಯ ಮಂತ್ರಿ ಅಖೀಲೇಶ್ ಯಾದವ್ ಅವರು ಅಹೋರಾತ್ರಿ ಸೇವೆಗಾಗಿ ಆರಂಭಿಸಿರುವ 1090 ಹೆಲ್ಪ್ ಲೈನ್ ಸಂಖ್ಯೆಯ ಪೋನಿಗೆ ಅಸಂಖ್ಯಾತ ದೂರುಗಳು ಬರುತ್ತಿರುವುದನ್ನು ಅನುಲಕ್ಷಿಸಿ ತನಿಖೆ ನಡೆಸಿರುವ ಪೊಲೀಸರಿಗೆ, ರೀಚಾರ್ಜ್ ಶಾಪ್ ಗಳು ಹುಡುಗಿಯರ ಮೊಬೈಲ್ ಫೋನ್ ನಂಬರ್ಗಳನ್ನು ಹಣಕ್ಕೆ ಮಾರುತ್ತಿರುವ ವಿಷಯ ಗೊತ್ತಾಯಿತು.
ಕಳೆದ ನಾಲ್ಕು ವರ್ಷಗಳಿಂದ ತೀವ್ರವಾಗುತ್ತಲೇ ಬಂದಿರುವ ಈ ಪಿಡುಗಿಗೆ ಸಂಬಂಧಿಸಿದಂತೆ ಈ ತನಕ ಆರು ಲಕ್ಷ ದೂರುಗಳು ಬಂದಿವೆ. ಇವುಗಳಲ್ಲಿ ಶೇ.90ರಷ್ಟು ದೂರುಗಳು ಹುಡುಗಿಯರಿಗೆ ಮೊಬೈಲ್ ಮೂಲಕ ಬರುತ್ತಿರುವ ಲೈಂಗಿಕ ಕಿರುಕುಳ ಬೆದರಿಕೆಗೆ ಸಂಬಂಧಿಸಿದ್ದವಾಗಿವೆ ಎಂದು ಪೊಲೀಸರು ಹೇಳಿದ್ದಾರೆ.
ಹುಡುಗಿಯರು ತಮ್ಮ ಮೊಬೈಲ್ ಫೋನ್ಗಳನ್ನು ರೀಚಾರ್ಜ್ ಮಾಡಿಸಿಕೊಳ್ಳಲು ಶಾಪ್ಗ್ಳಿಗೆ ಹೋದಾಗ ಅವರ ನಂಬರ್ಗಳನ್ನು ಆ ಅಂಗಡಿಯವರು ಅವರ ಅಂದಚಂದಕ್ಕೆ ಅನುಗುಣವಾಗಿ ಗುರುತಿಸಿಟ್ಟುಕೊಂಡು ಬಳಿಕ ಅವುಗಳನ್ನು 50 ರೂ.ಗಳಿಂದ 500 ರೂ. ಬೆಲೆಗೆ ಮಾರುತ್ತಾರೆ. ಆ ಬಳಿಕ ಹುಡುಗಿಯರಿಗೆ ಕಿರುಕುಳ ಆರಂಭವಾಗುತ್ತದೆ ಎಂಬುದನ್ನು ಪೊಲೀಸರು ಕಂಡುಕೊಂಡಿದ್ದಾರೆ.
ಲಕ್ನೋ, ಕಾನ್ಪುರ ನಗರ, ಅಲಹಾಬಾದ್, ವಾರಾಣಸಿ ಮತ್ತು ಆಗ್ರಾ – ಈ ಐದು ಜಿಲ್ಲೆಗಳಲ್ಲಿ ಗರಿಷ್ಠ ಸಂಖ್ಯೆಯ ದೂರುಗಳು ದಾಖಲಾಗಿವೆ. ಶ್ರಾವಸ್ತಿ, ಕಶಾಂಗಿ, ಲಲಿತ್ಪುರ, ಚಿತ್ರಕೂಟ ಮತ್ತು ಕೌಶಾಂಬಿ ಜಿಲ್ಲೆಗಳು ದೂರಿನ ಪ್ರಮಾಣ ಕಡಿಮೆ ಇದೆ ಎಂದು ಪೊಲೀಸರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Recommendation: ನ್ಯಾ. ಸಂಜೀವ್ ಖನ್ನಾ ಸುಪ್ರೀಂಕೋರ್ಟ್ ಮುಂದಿನ ಮುಖ್ಯ ನ್ಯಾಯಮೂರ್ತಿ
MUST WATCH
ಹೊಸ ಸೇರ್ಪಡೆ
Aranthodu: ಅರಮನೆಗಯ ಶಿಥಿಲಗೊಂಡ ತೂಗು ಸೇತುವೆಯಿಂದ ಕೆಳಗೆ ಬಿದ್ದು ಮೂವರಿಗೆ ಗಾಯ
Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.