![1-mofdd](https://www.udayavani.com/wp-content/uploads/2024/07/1-mofdd-415x270.jpg)
ಈಡೇರದ ಉಪನಗರ ರೈಲಿನ ಆಸೆ
Team Udayavani, Feb 4, 2017, 12:15 PM IST
![railway-station.jpg](https://www.udayavani.com/wp-content/uploads/2017/02/4/railway-station-495x465.jpg)
ಬೆಂಗಳೂರು: ಉಪನಗರ ರೈಲು ಎದುರುನೋಡುತ್ತಿದ್ದ ನಗರದ ಜನರಿಗೆ ಕೇಂದ್ರ ಬಜೆಟ್ ನಿರಾಸೆ ಮೂಡಿಸಿದೆ. ಈ ಮೂಲಕ ಉಪನಗರ ರೈಲು ಯೋಜನೆಗೆ ಮತ್ತೂಂದು ವರ್ಷ ಕಾಯುವುದು ಅನಿವಾರ್ಯವಾಗಿದೆ.
ಉಪನಗರ ಯೋಜನೆಗಾಗಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು ಚೆನ್ನೈಗೆ 14 ಕೋಟಿ ಮತ್ತು ಹೈದರಾಬಾದ್ಗೆ 116 ಕೋಟಿ ರೂ. ನೀಡಿದ್ದಾರೆ. ಆದರೆ, ಬೆಂಗಳೂರನ್ನು ಮರೆತಿದ್ದಾರೆ. ಇಡೀ ಬಜೆಟ್ನಲ್ಲಿ ಬೆಂಗಳೂರು ಉಪನಗರ ರೈಲಿನ ಪ್ರಸ್ತಾಪವೇ ಆಗಲಿಲ್ಲ. ಇದರಿಂದ ಭರವಸೆಗಳು ಮತ್ತೆ ಹುಸಿಯಾಗಿವೆ.
ಈ ಹಿಂದಿನ ರೈಲ್ವೆ ಬಜೆಟ್ನಲ್ಲಿ ಸಚಿವ ಸುರೇಶ್ ಪ್ರಭು, ಉಪನಗರ ರೈಲುಗಳ ಬಗ್ಗೆ ಪ್ರಸ್ತಾಪಿಸಿದ್ದರು. ಇದಾದ ನಂತರ ಹಲವು ಬಾರಿ ರಾಜ್ಯಕ್ಕೆ ಭೇಟಿ ನೀಡಿದ್ದ ಸಚಿವರು, ಉಪನಗರ ರೈಲು ಯೋಜನೆ ಭರವಸೆ ನೀಡಿದ್ದರು. ಆದರೆ, ಬಜೆಟ್ನಲ್ಲಿ ಈ ಬಗ್ಗೆ ಪ್ರಸ್ತಾಪ ಆಗಲೇ ಇಲ್ಲ.
“ಲೆವೆಲ್ ಕ್ರಾಸಿಂಗ್’ನಲ್ಲೂ ನಿರಾಸೆ: ನಗರದ ವಿವಿಧೆಡೆ ಸುಮಾರು 50 ಲೆವೆಲ್ ಕ್ರಾಸಿಂಗ್ಗಳಿವೆ. ಈ ಪೈಕಿ ಕೇವಲ ಒಂದಕ್ಕೆ ಹಣಕಾಸು ಸಚಿವರು ಅನುಮೋದನೆ ನೀಡಿದ್ದಾರೆ. ಈ ನಿಟ್ಟಿನಲ್ಲೂ ನಗರದ ಜನರಿಗೆ ನಿರಾಸೆಯಾಗಿದೆ.
ಸಚಿವ ಡಿ.ವಿ. ಸದಾನಂದಗೌಡ ಅವರು ರೈಲ್ವೆ ಸಚಿವರಾಗಿದ್ದಾಗ, ಅಂದಾಜು 10-15 ಲೆವೆಲ್ ಕ್ರಾಸಿಂಗ್ಗಳನ್ನು ತೆಗೆದುಹಾಕಲು ಅನುಮೋದನೆ ನೀಡಿದ್ದರು. ನಗರದ ಸಂಚಾರದಟ್ಟಣೆ ತಗ್ಗಿಸಲು ಈ ಲೆವೆಲ್ ಕ್ರಾಸಿಂಗ್ಗಳನ್ನು ತೆಗೆದುಹಾಕಿ, ವಾಹನಗಳ ಸಂಚಾರ ಮತ್ತು ರೈಲು ಸಂಚಾರಕ್ಕೆ ಒಟ್ಟಿಗೆ ಅವಕಾಶ ನೀಡುವುದು ಅತ್ಯಗತ್ಯವಾಗಿದೆ ಎಂದು ರೈಲ್ವೆ ತಜ್ಞ ಹಾಗೂ ಪ್ರಜಾ ಸಂಸ್ಥೆಯ ಸಂಜೀವ್ ದ್ಯಾಮಣ್ಣವರ ತಿಳಿಸಿದ್ದಾರೆ.
ಟರ್ಮಿನಲ್ಗೆ 32 ಕೋಟಿ: ಬೈಯಪ್ಪನಹಳ್ಳಿ ಕೋಚಿಂಗ್ ಟರ್ಮಿನಲ್ಗೆ 32 ಕೋಟಿ ರೂ. ನೀಡಿದ್ದು ಸಮಾಧಾನ ತಂದಿದೆ. ಅದೇ ರೀತಿ, ಎಚ್ಎಎಲ್ ಬಳಿ ಸಿಬ್ಬಂದಿಗೆ ತರಬೇತಿ ನೀಡುವ “ರೈಲ್ವೆ ಸುರಕ್ಷತಾ ಗ್ರಾಮ’ಕ್ಕೆ 3 ಕೋಟಿ ನೀಡಲಾಗಿದೆ. ಬೆಂಗಳೂರು-ಹೊಸೂರು, ಚಿಕ್ಕಮಗ ಳೂರು-ಹುಬ್ಬಳ್ಳಿ ವಿದ್ಯುದ್ದೀಕರಣಕ್ಕೆ ಅನುಮೋದನೆ ದೊರಕಿದೆ. ಯಲಹಂಕ-ಗುಂದಕಲ್ ಡಬ್ಲಿಂಗ್ಗೆ 120 ಕೋಟಿ ರೂ. ನೀಡಿರುವುದು ಸ್ವಾಗತಾರ್ಹ ಎಂದು ತಜ್ಞರು ಹೇಳುತ್ತಾರೆ.
ಆದರೆ, ರೈಲ್ವೆ ಮೂಲಸೌಕರ್ಯ ಕಲ್ಪಿಸಲು ಇಡೀ ರಾಜ್ಯಕ್ಕೆ ಕೇವಲ 40 ಕೋಟಿ ರೂ. ನೀಡಲಾಗಿದೆ. ತಮಿಳುನಾಡು ಮತ್ತು ಅವಿಭಜಿತ ಆಂಧ್ರಪ್ರದೇಶಕ್ಕೆ ಕ್ರಮವಾಗಿ 80 ಮತ್ತು 70 ಕೋಟಿ ರೂ. ಕೊಡಲಾಗಿದೆ.
ಟಾಪ್ ನ್ಯೂಸ್
![1-mofdd](https://www.udayavani.com/wp-content/uploads/2024/07/1-mofdd-415x270.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Tragic: ಸೊಸೆ ಮನೆ ಬಿಟ್ಟು ಹೋಗಿದ್ದಕ್ಕೆ ಅತ್ತೆ, ಮಾವ ನೇಣಿಗೆ ಶರಣು](https://www.udayavani.com/wp-content/uploads/2024/07/6-2-150x90.jpg)
Tragic: ಸೊಸೆ ಮನೆ ಬಿಟ್ಟು ಹೋಗಿದ್ದಕ್ಕೆ ಅತ್ತೆ, ಮಾವ ನೇಣಿಗೆ ಶರಣು
![Assault Case: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ](https://www.udayavani.com/wp-content/uploads/2024/07/5-2-150x90.jpg)
Assault Case: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ
![Arrested: ಕಂಪನಿಗಳ ಹೆಸರಿನಲ್ಲಿ ಬಟ್ಟೆ ಮಾರಾಟ; ಆರೋಪಿ ಬಂಧನ](https://www.udayavani.com/wp-content/uploads/2024/07/4-2-150x90.jpg)
Arrested: ಕಂಪನಿಗಳ ಹೆಸರಿನಲ್ಲಿ ಬಟ್ಟೆ ಮಾರಾಟ; ಆರೋಪಿ ಬಂಧನ
![3](https://www.udayavani.com/wp-content/uploads/2024/07/3-3-150x90.jpg)
Supplier: ಬೇಗ ಊಟ ತನ್ನಿ ಎಂದಿದ್ದಕ್ಕೆ ಆಶ್ಲೀಲ ಸನ್ನೆ ತೋರಿದ ಸಪ್ಲ್ಯೈಯರ್; ವೈರಲ್
![ನಾಪತ್ತೆಯಾಗಿದ್ದ ಕಾನ್ಸ್ಟೇಬಲ್ ಪತ್ತೆಗಾಗಿ 250 ಸಿಸಿ ಕ್ಯಾಮೆರಾ ಶೋಧಿಸಿದ್ದ ಪೊಲೀಸರು](https://www.udayavani.com/wp-content/uploads/2024/07/2-2-150x90.jpg)
ನಾಪತ್ತೆಯಾಗಿದ್ದ ಕಾನ್ಸ್ಟೇಬಲ್ ಪತ್ತೆಗಾಗಿ 250 ಸಿಸಿ ಕ್ಯಾಮೆರಾ ಶೋಧಿಸಿದ್ದ ಪೊಲೀಸರು
MUST WATCH
ಹೊಸ ಸೇರ್ಪಡೆ
![1-mofdd](https://www.udayavani.com/wp-content/uploads/2024/07/1-mofdd-150x98.jpg)
NEET ವಿಚಾರ; ಯುವಕರ ಭವಿಷ್ಯದ ಜತೆ ಆಟವಾಡುವವರನ್ನು ನಾವು ಬಿಡುವುದಿಲ್ಲ ಎಂದ ಪ್ರಧಾನಿ
![SSMB29: ರಾಜಮೌಳಿ – ಮಹೇಶ್ ಬಾಬು ಚಿತ್ರದಲ್ಲಿ ವಿಲನ್ ಆಗಲಿದ್ದಾರೆ ಪೃಥ್ವಿರಾಜ್](https://www.udayavani.com/wp-content/uploads/2024/07/11-2-150x90.jpg)
SSMB29: ರಾಜಮೌಳಿ – ಮಹೇಶ್ ಬಾಬು ಚಿತ್ರದಲ್ಲಿ ವಿಲನ್ ಆಗಲಿದ್ದಾರೆ ಪೃಥ್ವಿರಾಜ್
![1-mangaluru](https://www.udayavani.com/wp-content/uploads/2024/07/1-mangaluru-150x97.jpg)
Mangaluru; ನಿರ್ಮಾಣ ಹಂತದ ಕಟ್ಟಡದ ಬಳಿ ಭೂಕುಸಿತ: ಸಿಲುಕಿದ ಕಾರ್ಮಿಕರು
![10](https://www.udayavani.com/wp-content/uploads/2024/07/10-2-150x90.jpg)
ದೇವಮಾನವರ ದರ್ಶನ..ಧಾರ್ಮಿಕ ಕಾರ್ಯಕ್ರಮದ ವೇಳೆ ನಡೆದ ದೇಶದ ಪ್ರಮುಖ ಕಾಲ್ತುಳಿತ ಘಟನೆಗಳಿವು
![Rajya Sabha: ಪ್ರಧಾನಿ ರಿಮೋಟ್ ಹೇಳಿಕೆಗೆ ರೊಚ್ಚಿಗೆದ್ದ ವಿಪಕ್ಷಗಳು!…ಕಲಾಪಕ್ಕೆ ಬಹಿಷ್ಕಾರ](https://www.udayavani.com/wp-content/uploads/2024/07/Modi-4-150x92.jpg)
Rajya Sabha: ಪ್ರಧಾನಿ ರಿಮೋಟ್ ಹೇಳಿಕೆಗೆ ರೊಚ್ಚಿಗೆದ್ದ ವಿಪಕ್ಷಗಳು!…ಕಲಾಪಕ್ಕೆ ಬಹಿಷ್ಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.